ETV Bharat / sports

Mushtaq Ali Trophy: ಬೆಂಗಾಲ್ ಮಣಿಸಿ ಸೆಮಿಫೈನಲ್ಸ್ ಪ್ರವೇಶಿಸಿದ ಕರ್ನಾಟಕದ ಆಟ 'ಸೂಪರ್‌'

author img

By

Published : Nov 18, 2021, 5:30 PM IST

ಕರ್ನಾಟಕ ತಂಡ ಶನಿವಾರ ನಡೆಯಲಿರುವ ಸೆಮಿಫೈನಲ್‌ನಲ್ಲಿ ವಿದರ್ಭ ತಂಡವನ್ನು ಎದುರಿಸಲಿದೆ. ಈ ಆವೃತ್ತಿಯಲ್ಲಿ ಪ್ಲೇಟ್​ ಗುಂಪಿಗೆ ಹಿಂಬಡ್ತಿ ಪಡೆದಿದ್ದ ವಿದರ್ಭ ಅಜೇಯವಾಗಿ ಸೆಮಿಫೈನಲ್ ಪ್ರವೇಶಿಸಿದೆ. ಮತ್ತೊಂದು ಸೆಮಿಫೈನಲ್​ ಪಂದ್ಯದಲ್ಲಿ ತಮಿಳುನಾಡು ಮತ್ತು ಹೈದರಾಬಾದ್​ ತಂಡಗಳು ಸೆಣಸಾಡಲಿವೆ.

Mushtaq Ali Trophy
Mushtaq Ali Trophy

ನವದೆಹಲಿ: ಸೈಯದ್​ ಮುಷ್ತಾಕ್ ಅಲಿ ಟಿ20 (Mushtaq Ali Trophy) ಟ್ರೋಫಿಯಲ್ಲಿ ಬೆಂಗಾಲ್ ವಿರುದ್ಧ ಕ್ವಾರ್ಟರ್​ ಫೈನಲ್ಸ್​ ಪಂದ್ಯದ ಸೂಪರ್​ ಓವರ್​ನಲ್ಲಿ ಗೆಲುವು ಸಾಧಿಸುವ ಮೂಲಕ ಕರ್ನಾಟಕ ತಂಡ ಸೆಮಿಫೈನಲ್​ ಪ್ರವೇಶಿಸಿತು.

ನವದೆಹಲಿಯ ಅರುಣ್‌​ ಜೇಟ್ಲಿ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಕರ್ನಾಟಕ ತಂಡದ ಕರುಣ್ ನಾಯರ್ (58), ಮನೀಶ್ ಪಾಂಡೆ (29) ಮತ್ತು ರೋಹನ್​ ಕದಮ್ (30) ರನ್​ಗಳ ನೆರವಿನಿಂದ 5 ವಿಕೆಟ್ ಕಳೆದುಕೊಂಡು 160 ರನ್​ಗಳಿಸಿತ್ತು.

ಬೆಂಗಾಲ್ ಪರ ಮುಕೇಶ್ ಕುಮಾರ್ 34/1, ಅಕಾಶ್ ದೀಪ್ 23/1, ಸಯಾನ್ ದೀಪ್ 27/1, ವೃತಿಕ್ ಚಟರ್ಜಿ 23/1 ಮತ್ತು ಶಹ್ಬಾಜ್ ಅಹ್ಮದ್​ 36/1 ವಿಕೆಟ್ ಪಡೆದರು.

161 ರನ್​ಗಳ ಸ್ಪರ್ಧಾತ್ಮಕ ಗುರಿ ಬೆನ್ನತ್ತಿದ ಬೆಂಗಾಲ್ ತಂಡ ಕೂಡ 20 ಓವರ್​ಗಳಲ್ಲಿ 8 ವಿಕೆಟ್ ಕಳೆದುಕೊಂಡು 160 ರನ್​ಳಿಸಿ ಪಂದ್ಯವನ್ನು ಟೈ ಮಾಡಿಕೊಂಡಿತು.

ವೃತಿಕ್ ಚಟರ್ಜಿ 40 ಎಸೆತಗಳಲ್ಲಿ 2 ಬೌಂಡರಿ ಮತ್ತು 3 ಸಿಕ್ಸರ್​ಗಳ ಸಹಿತ 51, ರಿತ್ವಿಕ್ ಚೌಧರಿ 18 ಎಸೆತಗಳಲ್ಲಿ 4 ಬೌಂಡರಿ ಮತ್ತು 2 ಸಿಕ್ಸರ್‌ಸಹಿತ 36 ರನ್​ಗಳಿಸಿದರು.

ಕೊನೆಯ ಓವರ್​ನಲ್ಲಿ ಬೆಂಗಾಲ್ ಗೆಲ್ಲಲು 20 ರನ್ ಅಗತ್ಯವಿತ್ತು. ವಿದ್ಯಾಧರ್ ಪಾಟೀಲ್ ಎಸೆದ ಆ ಓವರ್​ನಲ್ಲಿ ಮೊದಲ 5 ಎಸೆತಗಳಲ್ಲಿ ಚೌಧರಿ ಮತ್ತು ಆಕಾಶ್ ದೀಪ್​ ಜೋಡಿ 19 ರನ್​ಗಳಿಸಿದ್ದು, ಕೊನೆಯ ಎಸೆತದಲ್ಲಿ ಸಿಂಗಲ್ ಅಗತ್ಯವಿತ್ತು. ಆದರೆ ಮನೀಶ್ ಪಾಂಡೆ ಡೈರೆಕ್ಟ್ ಹಿಟ್​ ಮಾಡಿ ಅಕಾಶ್ ದೀಪ್​ರನ್ನು ರನ್​ಔಟ್ ಮಾಡಿ ಪಂದ್ಯವನ್ನು ಟೈ ಮಾಡಿದರು.

ಗೆಲುವಿಗಾಗಿ ನಡೆದ ಸೂಪರ್ ಓವರ್​ನಲ್ಲಿ ಕರ್ನಾಟಕ ಪರ ಕೆ.ಸಿ.ಕಾರಿಯಪ್ಪ ಕೇವಲ 5 ರನ್​ ಬಿಟ್ಟುಕೊಟ್ಟರು. ಬೆಂಗಾಲ್ ಕೇವಲ 4 ಎಸೆತಗಳನ್ನಾಡಿ 2 ವಿಕೆಟ್ ಕಳೆದುಕೊಂಡಿತು. ಕೇವಲ 6 ರನ್​ಗಳ ಗುರಿ ಪಡೆದ ಕರ್ನಾಟಕ ಕೇವಲ 2 ಎಸೆತಗಳಲ್ಲಿ ಜಯ ಸಾಧಿಸಿತು. ಮನೀಶ್ ಪಾಂಡೆ ಮೊದಲ ಎಸೆತದಲ್ಲಿ 2 ರನ್ ಮತ್ತು 2ನೇ ಎಸೆತದಲ್ಲಿ ಸಿಕ್ಸರ್​ ಬಾರಿಸಿ ತಂಡವನ್ನು ಸೆಮಿಫೈನಲ್​ಗೆ ಕೊಂಡೊಯ್ದರು.

ಕರ್ನಾಟಕ ಶನಿವಾರ ನಡೆಯಲಿರುವ ಸೆಮಿಫೈನಲ್ ಪಂದ್ಯದಲ್ಲಿ ವಿದರ್ಭ ತಂಡವನ್ನು ಎದುರಿಸಲಿದೆ. ಈ ಆವೃತ್ತಿಯಲ್ಲಿ ಪ್ಲೇಟ್​ ಗುಂಪಿಗೆ ಹಿಂಬಡ್ತಿ ಪಡೆದಿದ್ದ ವಿದರ್ಭ ಅಜೇಯವಾಗಿ ಸೆಮಿಫೈನಲ್ ಪ್ರವೇಶಿಸಿದೆ. ಮತ್ತೊಂದು ಸೆಮಿಫೈನಲ್​ ಪಂದ್ಯದಲ್ಲಿ ತಮಿಳುನಾಡು ಮತ್ತು ಹೈದರಾಬಾದ್​ ತಂಡಗಳು ಸೆಣಸಾಡಲಿವೆ.

ಇದನ್ನೂ ಓದಿ:ಎರಡು ದೇಶಗಳ ಪರ ಆಡಿ ಅರ್ಧಶತಕ ಬಾರಿಸಿ ದಾಖಲೆ ನಿರ್ಮಿಸಿದ ಕಿವೀಸ್ ಬ್ಯಾಟರ್​

ನವದೆಹಲಿ: ಸೈಯದ್​ ಮುಷ್ತಾಕ್ ಅಲಿ ಟಿ20 (Mushtaq Ali Trophy) ಟ್ರೋಫಿಯಲ್ಲಿ ಬೆಂಗಾಲ್ ವಿರುದ್ಧ ಕ್ವಾರ್ಟರ್​ ಫೈನಲ್ಸ್​ ಪಂದ್ಯದ ಸೂಪರ್​ ಓವರ್​ನಲ್ಲಿ ಗೆಲುವು ಸಾಧಿಸುವ ಮೂಲಕ ಕರ್ನಾಟಕ ತಂಡ ಸೆಮಿಫೈನಲ್​ ಪ್ರವೇಶಿಸಿತು.

ನವದೆಹಲಿಯ ಅರುಣ್‌​ ಜೇಟ್ಲಿ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಕರ್ನಾಟಕ ತಂಡದ ಕರುಣ್ ನಾಯರ್ (58), ಮನೀಶ್ ಪಾಂಡೆ (29) ಮತ್ತು ರೋಹನ್​ ಕದಮ್ (30) ರನ್​ಗಳ ನೆರವಿನಿಂದ 5 ವಿಕೆಟ್ ಕಳೆದುಕೊಂಡು 160 ರನ್​ಗಳಿಸಿತ್ತು.

ಬೆಂಗಾಲ್ ಪರ ಮುಕೇಶ್ ಕುಮಾರ್ 34/1, ಅಕಾಶ್ ದೀಪ್ 23/1, ಸಯಾನ್ ದೀಪ್ 27/1, ವೃತಿಕ್ ಚಟರ್ಜಿ 23/1 ಮತ್ತು ಶಹ್ಬಾಜ್ ಅಹ್ಮದ್​ 36/1 ವಿಕೆಟ್ ಪಡೆದರು.

161 ರನ್​ಗಳ ಸ್ಪರ್ಧಾತ್ಮಕ ಗುರಿ ಬೆನ್ನತ್ತಿದ ಬೆಂಗಾಲ್ ತಂಡ ಕೂಡ 20 ಓವರ್​ಗಳಲ್ಲಿ 8 ವಿಕೆಟ್ ಕಳೆದುಕೊಂಡು 160 ರನ್​ಳಿಸಿ ಪಂದ್ಯವನ್ನು ಟೈ ಮಾಡಿಕೊಂಡಿತು.

ವೃತಿಕ್ ಚಟರ್ಜಿ 40 ಎಸೆತಗಳಲ್ಲಿ 2 ಬೌಂಡರಿ ಮತ್ತು 3 ಸಿಕ್ಸರ್​ಗಳ ಸಹಿತ 51, ರಿತ್ವಿಕ್ ಚೌಧರಿ 18 ಎಸೆತಗಳಲ್ಲಿ 4 ಬೌಂಡರಿ ಮತ್ತು 2 ಸಿಕ್ಸರ್‌ಸಹಿತ 36 ರನ್​ಗಳಿಸಿದರು.

ಕೊನೆಯ ಓವರ್​ನಲ್ಲಿ ಬೆಂಗಾಲ್ ಗೆಲ್ಲಲು 20 ರನ್ ಅಗತ್ಯವಿತ್ತು. ವಿದ್ಯಾಧರ್ ಪಾಟೀಲ್ ಎಸೆದ ಆ ಓವರ್​ನಲ್ಲಿ ಮೊದಲ 5 ಎಸೆತಗಳಲ್ಲಿ ಚೌಧರಿ ಮತ್ತು ಆಕಾಶ್ ದೀಪ್​ ಜೋಡಿ 19 ರನ್​ಗಳಿಸಿದ್ದು, ಕೊನೆಯ ಎಸೆತದಲ್ಲಿ ಸಿಂಗಲ್ ಅಗತ್ಯವಿತ್ತು. ಆದರೆ ಮನೀಶ್ ಪಾಂಡೆ ಡೈರೆಕ್ಟ್ ಹಿಟ್​ ಮಾಡಿ ಅಕಾಶ್ ದೀಪ್​ರನ್ನು ರನ್​ಔಟ್ ಮಾಡಿ ಪಂದ್ಯವನ್ನು ಟೈ ಮಾಡಿದರು.

ಗೆಲುವಿಗಾಗಿ ನಡೆದ ಸೂಪರ್ ಓವರ್​ನಲ್ಲಿ ಕರ್ನಾಟಕ ಪರ ಕೆ.ಸಿ.ಕಾರಿಯಪ್ಪ ಕೇವಲ 5 ರನ್​ ಬಿಟ್ಟುಕೊಟ್ಟರು. ಬೆಂಗಾಲ್ ಕೇವಲ 4 ಎಸೆತಗಳನ್ನಾಡಿ 2 ವಿಕೆಟ್ ಕಳೆದುಕೊಂಡಿತು. ಕೇವಲ 6 ರನ್​ಗಳ ಗುರಿ ಪಡೆದ ಕರ್ನಾಟಕ ಕೇವಲ 2 ಎಸೆತಗಳಲ್ಲಿ ಜಯ ಸಾಧಿಸಿತು. ಮನೀಶ್ ಪಾಂಡೆ ಮೊದಲ ಎಸೆತದಲ್ಲಿ 2 ರನ್ ಮತ್ತು 2ನೇ ಎಸೆತದಲ್ಲಿ ಸಿಕ್ಸರ್​ ಬಾರಿಸಿ ತಂಡವನ್ನು ಸೆಮಿಫೈನಲ್​ಗೆ ಕೊಂಡೊಯ್ದರು.

ಕರ್ನಾಟಕ ಶನಿವಾರ ನಡೆಯಲಿರುವ ಸೆಮಿಫೈನಲ್ ಪಂದ್ಯದಲ್ಲಿ ವಿದರ್ಭ ತಂಡವನ್ನು ಎದುರಿಸಲಿದೆ. ಈ ಆವೃತ್ತಿಯಲ್ಲಿ ಪ್ಲೇಟ್​ ಗುಂಪಿಗೆ ಹಿಂಬಡ್ತಿ ಪಡೆದಿದ್ದ ವಿದರ್ಭ ಅಜೇಯವಾಗಿ ಸೆಮಿಫೈನಲ್ ಪ್ರವೇಶಿಸಿದೆ. ಮತ್ತೊಂದು ಸೆಮಿಫೈನಲ್​ ಪಂದ್ಯದಲ್ಲಿ ತಮಿಳುನಾಡು ಮತ್ತು ಹೈದರಾಬಾದ್​ ತಂಡಗಳು ಸೆಣಸಾಡಲಿವೆ.

ಇದನ್ನೂ ಓದಿ:ಎರಡು ದೇಶಗಳ ಪರ ಆಡಿ ಅರ್ಧಶತಕ ಬಾರಿಸಿ ದಾಖಲೆ ನಿರ್ಮಿಸಿದ ಕಿವೀಸ್ ಬ್ಯಾಟರ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.