ETV Bharat / sports

ಏಷ್ಯಾ ಕಪ್​ ದೊರೆಗಳ ಅದ್ಧೂರಿ ಮೆರವಣಿಗೆ.. ತಾಯ್ನಾಡಲ್ಲಿ ಅಭೂತಪೂರ್ವ ಸ್ವಾಗತ

author img

By

Published : Sep 13, 2022, 4:02 PM IST

ಏಷ್ಯಾ ಕಪ್​ ಜಯಿಸಿ ದುಬೈನಿಂದ ತಾಯ್ನಾಡಿಗೆ ಬಂದ ವಿಜಯಶಾಲಿ ತಂಡಕ್ಕೆ ಲಂಕನ್ನರು ಅದ್ಧೂರಿ ಸ್ವಾಗತ ನೀಡಿದ್ದಾರೆ. ತೆರೆದ ವಾಹನದಲ್ಲಿ ತಂಡವನ್ನು ಮೆರವಣಿಗೆ ನಡೆಸಿ, ಜಯಕಾರ ಹಾಕಿದರು.

sri-lanka-victory-parade-on-open-top-bus
ಏಷ್ಯಾ ಕಪ್​ ದೊರೆಗಳ ಅದ್ಧೂರಿ ಮೆರವಣಿಗೆ

ಕೊಲಂಬೊ: ಭಾರತ, ಪಾಕಿಸ್ತಾನದಂತಹ ಬಲಿಷ್ಠ ತಂಡಗಳನ್ನು ಬಗ್ಗುಬಡಿದು ಏಷ್ಯಾ ಕಪ್​ ಎತ್ತಿಹಿಡಿದ ಶ್ರೀಲಂಕಾ ತಂಡದ ಆಟಗಾರರಿಗೆ ತಾಯ್ನಾಡಿನಲ್ಲಿ ಅಭೂತಪೂರ್ವ ಸ್ವಾಗತ ದೊರೆತಿದೆ. ತೆರೆದ ವಾಹನದಲ್ಲಿ ನಡೆದ ವಿಜಯೋತ್ಸವದ ಮೆರವಣಿಗೆಯಲ್ಲಿ ರಸ್ತೆಯ ಇಕ್ಕೆಲಗಳಲ್ಲಿ ಅಭಿಮಾನಿಗಳು ಆಟಗಾರರ ಯಶಸ್ಸನ್ನು ಶ್ಲಾಘಿಸಿದರು.

ಫೈನಲ್​ ಪಂದ್ಯದಲ್ಲಿ ಪಾಕಿಸ್ತಾನವನ್ನು ಕಟ್ಟಿಹಾಕಿ 6ನೇ ಪ್ರಶಸ್ತಿ ಜಯಿಸಿದ ಶ್ರೀಲಂಕಾದ ಯುವಪಡೆ ದಾಖಲೆ ಬರೆಯಿತು. ಆಟಗಾರರ ಮೆರವಣಿಗೆ ನಡೆಸಿದ ಫೋಟೋಗಳನ್ನು ಶ್ರೀಲಂಕಾ ಕ್ರಿಕೆಟ್​ ಮಂಡಳಿ ಟ್ವಿಟರ್​ನಲ್ಲಿ ಹಂಚಿಕೊಂಡಿದೆ. ತೆರೆದ ಡಬಲ್ ಡೆಕ್ಕರ್ ಬಸ್‌ನಲ್ಲಿ ಆಟಗಾರರನ್ನು ಮೆರೆಸಲಾಗಿದೆ. ಅಭಿಮಾನಿಗಳು ಏಷ್ಯಾ ಕಪ್​ ದೊರೆಗಳ ಸಾಹಸವನ್ನು ಹೊಗಳಿ ಜೈಕಾರ ಹಾಕಿದರು.

ಅಫ್ಘಾನಿಸ್ತಾನ ವಿರುದ್ಧ ಸೋಲಿನೊಂದಿಗೆ ಏಷ್ಯಾ ಕಪ್​ ಅಭಿಯಾನ ಆರಂಭಿಸಿದ್ದ ಶ್ರೀಲಂಕಾ ಟ್ರೋಫಿ ಗೆಲ್ಲುತ್ತದೆ ಎಂಬ ಯಾವ ನಿರೀಕ್ಷೆಯೂ ಇರಲಿಲ್ಲ. ಆರ್ಥಿಕ ಸಂಕಷ್ಟದಿಂದ ನಲುಗಿರುವ ರಾಷ್ಟ್ರದ ಆಟಗಾರರು ಟ್ರೋಫಿ ಗೆಲ್ಲೋದು ಇರಲಿ ಭಾರತ, ಪಾಕಿಸ್ತಾನವನ್ನು ದಾಟಿ ಫೈನಲ್​ ತಲುಪುವ ಬಗ್ಗೆಯೂ ಯಾರೂ ಯೋಚಿಸಿರಲಿಕ್ಕಿಲ್ಲ.

ಈ ಎಲ್ಲ ಉಡಾಫೆಗಳನ್ನು ಒಂದೊಂದಾಗಿ ಮೆಟ್ಟಿ ನಿಂತು ಬಂದ ಶ್ರೀಲಂಕಾ ಯುವಪಡೆ ಏಷ್ಯಾ ಮಾತ್ರವಲ್ಲ ವಿಶ್ವ ಕ್ರಿಕೆಟ್​ ಅಚ್ಚರಿಪಡುವ ರೀತಿ ಪ್ರದರ್ಶನ ನೀಡಿತು. ಗುಂಪು ಹಂತದಲ್ಲಿ ಬಾಂಗ್ಲಾದೇಶದ ವಿರುದ್ಧ ಜಯಿಸಿ ಸೂಪರ್​ 4 ಹಂತಕ್ಕೆ ಬಂದಿತು. ಬಳಿಕ ಸೂಪರ್​ ಹಂತದಲ್ಲಿ ಭಾರತ, ತನ್ನನ್ನು ಮೊದಲ ಪಂದ್ಯದಲ್ಲಿ ಸೋಲಿಸಿದ್ದ ಅಫ್ಘಾನಿಸ್ತಾನ, ಪಾಕಿಸ್ತಾನದ ಸವಾಲನ್ನು ಮೆಟ್ಟಿ ನಿಂತಿತು.

ವಿಶ್ವದ ಬಲಿಷ್ಠ ತಂಡಗಳಲ್ಲಿ ಒಂದಾದ ಭಾರತವನ್ನು ಸೋಲಿಸಿದ ಮೇಲೆ ತಂಡದ ಆಟಗಾರರ ಆತ್ಮವಿಶ್ವಾಸ ಶಿಖರಪ್ರಾಯವಾಯಿತು. ಫೈನಲ್​ ಕದನದಲ್ಲಿ ಪಾಕಿಸ್ತಾನದ ಆಟಗಾರರ ಮೇಲೆ ಎರಗಿದ ಲಂಕನ್ನರು ಗೆಲುವಿನ ಮಹಲು ಕಟ್ಟಿದರು. ಬ್ಯಾಟಿಂಗ್​ನಲ್ಲಿ ಮಿಂಚಿದ ಬನುಕಾ ರಾಜಪಕ್ಸೆ 70 ರನ್​ ಸಿಡಿಸಿದರೆ, ಬೌಲಿಂಗ್​ನಲ್ಲಿ ಸ್ಪಿನ್ನರ್​ ಹಸರಂಗ, ಮಹೇಶ್​, ತೀಕ್ಷನ, ಮಧುಶಂಕ ಸೇರಿದಂತೆ ತಂಡ ಸಾಂಘಿಕವಾಗಿ ಹೋರಾಡಿ ಏಷ್ಯಾದ ದೊರೆಯಾಗಿ ರಾರಾಜಿಸಿತು.

ಆರ್ಥಿಕ ಬಿಕ್ಕಟ್ಟಿಗೆ ಒಳಗಾಗಿರುವ ದೇಶಕ್ಕೆ ಆಟಗಾರರ ಟ್ರೋಫಿಯನ್ನು ಅರ್ಪಿಸಿದ್ದಾರೆ. ಇದು ತಂಡಕ್ಕೆ ದೇಶದ ಮೇಲಿರುವ ಕಾಳಜಿ, ಪ್ರೀತಿಯನ್ನು ತೋರಿಸುತ್ತದೆ. ಲಂಕನ್ನರ ಕ್ರಿಕೆಟ್​ ಯಶೋಗಾಥೆಯನ್ನು ಯುವಪಡೆ ಮತ್ತೆ ಬರೆಯಲಿ ಎಂಬುದು ಅಭಿಮಾನಿಗಳ ಆಸೆಯಾಗಿದೆ.

ಓದಿ: 'ಹರ್ಷಲ್ ಪಟೇಲ್​ ಉತ್ತಮ ಬೌಲರ್​​, ಆದರೆ'.. ಈ ಪ್ಲೇಯರ್​ ಇರಬೇಕಾಗಿತ್ತು ಎಂದ ಮಾಜಿ ಕ್ರಿಕೆಟಿಗ

ಕೊಲಂಬೊ: ಭಾರತ, ಪಾಕಿಸ್ತಾನದಂತಹ ಬಲಿಷ್ಠ ತಂಡಗಳನ್ನು ಬಗ್ಗುಬಡಿದು ಏಷ್ಯಾ ಕಪ್​ ಎತ್ತಿಹಿಡಿದ ಶ್ರೀಲಂಕಾ ತಂಡದ ಆಟಗಾರರಿಗೆ ತಾಯ್ನಾಡಿನಲ್ಲಿ ಅಭೂತಪೂರ್ವ ಸ್ವಾಗತ ದೊರೆತಿದೆ. ತೆರೆದ ವಾಹನದಲ್ಲಿ ನಡೆದ ವಿಜಯೋತ್ಸವದ ಮೆರವಣಿಗೆಯಲ್ಲಿ ರಸ್ತೆಯ ಇಕ್ಕೆಲಗಳಲ್ಲಿ ಅಭಿಮಾನಿಗಳು ಆಟಗಾರರ ಯಶಸ್ಸನ್ನು ಶ್ಲಾಘಿಸಿದರು.

ಫೈನಲ್​ ಪಂದ್ಯದಲ್ಲಿ ಪಾಕಿಸ್ತಾನವನ್ನು ಕಟ್ಟಿಹಾಕಿ 6ನೇ ಪ್ರಶಸ್ತಿ ಜಯಿಸಿದ ಶ್ರೀಲಂಕಾದ ಯುವಪಡೆ ದಾಖಲೆ ಬರೆಯಿತು. ಆಟಗಾರರ ಮೆರವಣಿಗೆ ನಡೆಸಿದ ಫೋಟೋಗಳನ್ನು ಶ್ರೀಲಂಕಾ ಕ್ರಿಕೆಟ್​ ಮಂಡಳಿ ಟ್ವಿಟರ್​ನಲ್ಲಿ ಹಂಚಿಕೊಂಡಿದೆ. ತೆರೆದ ಡಬಲ್ ಡೆಕ್ಕರ್ ಬಸ್‌ನಲ್ಲಿ ಆಟಗಾರರನ್ನು ಮೆರೆಸಲಾಗಿದೆ. ಅಭಿಮಾನಿಗಳು ಏಷ್ಯಾ ಕಪ್​ ದೊರೆಗಳ ಸಾಹಸವನ್ನು ಹೊಗಳಿ ಜೈಕಾರ ಹಾಕಿದರು.

ಅಫ್ಘಾನಿಸ್ತಾನ ವಿರುದ್ಧ ಸೋಲಿನೊಂದಿಗೆ ಏಷ್ಯಾ ಕಪ್​ ಅಭಿಯಾನ ಆರಂಭಿಸಿದ್ದ ಶ್ರೀಲಂಕಾ ಟ್ರೋಫಿ ಗೆಲ್ಲುತ್ತದೆ ಎಂಬ ಯಾವ ನಿರೀಕ್ಷೆಯೂ ಇರಲಿಲ್ಲ. ಆರ್ಥಿಕ ಸಂಕಷ್ಟದಿಂದ ನಲುಗಿರುವ ರಾಷ್ಟ್ರದ ಆಟಗಾರರು ಟ್ರೋಫಿ ಗೆಲ್ಲೋದು ಇರಲಿ ಭಾರತ, ಪಾಕಿಸ್ತಾನವನ್ನು ದಾಟಿ ಫೈನಲ್​ ತಲುಪುವ ಬಗ್ಗೆಯೂ ಯಾರೂ ಯೋಚಿಸಿರಲಿಕ್ಕಿಲ್ಲ.

ಈ ಎಲ್ಲ ಉಡಾಫೆಗಳನ್ನು ಒಂದೊಂದಾಗಿ ಮೆಟ್ಟಿ ನಿಂತು ಬಂದ ಶ್ರೀಲಂಕಾ ಯುವಪಡೆ ಏಷ್ಯಾ ಮಾತ್ರವಲ್ಲ ವಿಶ್ವ ಕ್ರಿಕೆಟ್​ ಅಚ್ಚರಿಪಡುವ ರೀತಿ ಪ್ರದರ್ಶನ ನೀಡಿತು. ಗುಂಪು ಹಂತದಲ್ಲಿ ಬಾಂಗ್ಲಾದೇಶದ ವಿರುದ್ಧ ಜಯಿಸಿ ಸೂಪರ್​ 4 ಹಂತಕ್ಕೆ ಬಂದಿತು. ಬಳಿಕ ಸೂಪರ್​ ಹಂತದಲ್ಲಿ ಭಾರತ, ತನ್ನನ್ನು ಮೊದಲ ಪಂದ್ಯದಲ್ಲಿ ಸೋಲಿಸಿದ್ದ ಅಫ್ಘಾನಿಸ್ತಾನ, ಪಾಕಿಸ್ತಾನದ ಸವಾಲನ್ನು ಮೆಟ್ಟಿ ನಿಂತಿತು.

ವಿಶ್ವದ ಬಲಿಷ್ಠ ತಂಡಗಳಲ್ಲಿ ಒಂದಾದ ಭಾರತವನ್ನು ಸೋಲಿಸಿದ ಮೇಲೆ ತಂಡದ ಆಟಗಾರರ ಆತ್ಮವಿಶ್ವಾಸ ಶಿಖರಪ್ರಾಯವಾಯಿತು. ಫೈನಲ್​ ಕದನದಲ್ಲಿ ಪಾಕಿಸ್ತಾನದ ಆಟಗಾರರ ಮೇಲೆ ಎರಗಿದ ಲಂಕನ್ನರು ಗೆಲುವಿನ ಮಹಲು ಕಟ್ಟಿದರು. ಬ್ಯಾಟಿಂಗ್​ನಲ್ಲಿ ಮಿಂಚಿದ ಬನುಕಾ ರಾಜಪಕ್ಸೆ 70 ರನ್​ ಸಿಡಿಸಿದರೆ, ಬೌಲಿಂಗ್​ನಲ್ಲಿ ಸ್ಪಿನ್ನರ್​ ಹಸರಂಗ, ಮಹೇಶ್​, ತೀಕ್ಷನ, ಮಧುಶಂಕ ಸೇರಿದಂತೆ ತಂಡ ಸಾಂಘಿಕವಾಗಿ ಹೋರಾಡಿ ಏಷ್ಯಾದ ದೊರೆಯಾಗಿ ರಾರಾಜಿಸಿತು.

ಆರ್ಥಿಕ ಬಿಕ್ಕಟ್ಟಿಗೆ ಒಳಗಾಗಿರುವ ದೇಶಕ್ಕೆ ಆಟಗಾರರ ಟ್ರೋಫಿಯನ್ನು ಅರ್ಪಿಸಿದ್ದಾರೆ. ಇದು ತಂಡಕ್ಕೆ ದೇಶದ ಮೇಲಿರುವ ಕಾಳಜಿ, ಪ್ರೀತಿಯನ್ನು ತೋರಿಸುತ್ತದೆ. ಲಂಕನ್ನರ ಕ್ರಿಕೆಟ್​ ಯಶೋಗಾಥೆಯನ್ನು ಯುವಪಡೆ ಮತ್ತೆ ಬರೆಯಲಿ ಎಂಬುದು ಅಭಿಮಾನಿಗಳ ಆಸೆಯಾಗಿದೆ.

ಓದಿ: 'ಹರ್ಷಲ್ ಪಟೇಲ್​ ಉತ್ತಮ ಬೌಲರ್​​, ಆದರೆ'.. ಈ ಪ್ಲೇಯರ್​ ಇರಬೇಕಾಗಿತ್ತು ಎಂದ ಮಾಜಿ ಕ್ರಿಕೆಟಿಗ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.