ETV Bharat / sports

ನಿರ್ಣಾಯಕ ಪಂದ್ಯದಲ್ಲಿ ಹೈದರಾಬಾದ್​ ತಂಡವನ್ನು ಕೇವಲ 115ಕ್ಕೆ ನಿಯಂತ್ರಿಸಿದ ಕೆಕೆಆರ್​

ನಿರ್ಣಾಯಕ ಪಂದ್ಯದಲ್ಲಿ ಅಮೋಘ ಬೌಲಿಂಗ್ ಪ್ರದರ್ಶನ ತೋರಿದ ಕೆಕೆಆರ್ ತಂಡದ ಬೌಲರ್​ಗಳಾದ ಟಿಮ್ ಸೌಥಿ 25ಕ್ಕೆ 2, ಶಿವಂ ಮಾವಿ 29ಕ್ಕೆ 2, ವರುಣ್ ಚಕ್ರವರ್ತಿ 26ಕ್ಕೆ 2 ಮತ್ತು ಶಕಿಬ್ ಅಲ್ ಹಸನ್ 20ಕ್ಕೆ 1 ವಿಕೆಟ್ ಪಡೆದು ಸನ್​ರೈಸರ್ಸ ತಂಡವನ್ನು ಅಲ್ಪಮೊತ್ತಕ್ಕೆ ಕುಸಿಯುವಲ್ಲಿ ಪ್ರಮುಖ ಪಾತ್ರವಹಿಸಿದರು.

author img

By

Published : Oct 3, 2021, 9:25 PM IST

ಹೈದರಾಬಾದ್​ ತಂಡವನ್ನು ಕೇವಲ 115ಕ್ಕೆ ನಿಯಂತ್ರಿಸಿದ ಕೆಕೆಆರ್​
ಹೈದರಾಬಾದ್​ ತಂಡವನ್ನು ಕೇವಲ 115ಕ್ಕೆ ನಿಯಂತ್ರಿಸಿದ ಕೆಕೆಆರ್​

ದುಬೈ: ಕೋಲ್ಕತ್ತಾ ನೈಟ್​ ರೈಡರ್ಸ್ ಸಂಘಟಿತ ಬೌಲಿಂಗ್ ದಾಳಿಗೆ ತತ್ತಿರಿಸಿದ ಸನ್​ರೈಸರ್ಸ್​ ಹೈದರಾಬಾದ್ ಹೀನಾಯ ಬ್ಯಾಟಿಂಗ್ ಪ್ರದರ್ಶನ ತೋರಿ ಕೇವಲ 5ರನ್​ಗಳಿಗೆ ಕುಸಿತ ಕಂಡಿದೆ.

ಟಾಸ್​ ಗೆದ್ದ ಹೈದರಾಬಾದ್​ ತಂಡದ ನಾಯಕ ಕೇನ್​ ವಿಲಿಯಮ್ಸನ್​ ಬ್ಯಾಟಿಂಗ್ ಮಾಡುವ ಅಚ್ಚರಿಯ ನಿರ್ಧಾರ ತೆಗೆದುಕೊಂಡರು. ಆದರೆ ಅವರ ಲೆಕ್ಕಾಚಾರನ್ನು ಕೆಕೆಆರ್​ ಬೌಲರ್​ಗಳು ಮೊದಲ ಓವರ್​ನಲ್ಲೇ ತಲೆಕೆಳಗಾಗುವಂತೆ ಮಾಡಿದರು.

ಆರಂಭಿಕ ಬ್ಯಾಟ್ಸ್​ಮನ್ ವೃದ್ದಿಮಾನ್ ಸಹಾ ಖಾತೆ ತೆರೆಯದೇ ಸೌಥಿ ಬೌಲಿಂಗ್​ನಲ್ಲಿ ಎಲ್​ಬಿ ಬಲೆಗೆ ಬಿದ್ದರು. ನಂತರ 4ನೇ ಓವರ್​ನಲ್ಲಿ ಜೇಸನ್​ ರಾಯಲ್​ ಶಿವಂ ಮಾವಿ ಬೌಲಿಂಗ್​ನಲ್ಲಿ ಸೌಥಿಗೆ ಕ್ಯಾಚ್ ನೀಡಿ ವಿಕೆಟ್ ಒಪ್ಪಿಸಿದರು.

26 ರನ್​ ಉತ್ತಮವಾಗಿ ಆಡುತ್ತಿದ್ದ ನಾಯಕ ಕೇನ್​ ವಿಲಿಯಮ್ಸನ್​ ರನ್​ಔಟಾಗುತ್ತಿದ್ದಂತೆ ಹೈದರಾಬಾದ್​ ಪತನ ಆರಂಭವಾಯಿತು. ಕೆಕೆಆರ್​ ಬೌಲರ್​ಗಳು ಒಂದು ಕಡೆ ನಿರಂತರ ವಿಕೆಟ್​ ಪಡೆಯುವ ಜೊತೆಗೆ ರನ್​ಗತಿಗೂ ಕಡಿವಾಣ ಹಾಕಿದರು.

4ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಇಳಿದಿದ್ದ ಯುವ ಬ್ಯಾಟರ್​ ಪ್ರಿಯಂ ಗರ್ಗ್​ ರನ್​ಗಳಿಸಲು ಪರದಾಡಿದರು. ಬರೋಬ್ಬರಿ 31 ಎಸೆತಗಳನ್ನೆದುರಿಸಿ ಕೇವಲ 21 ರನ್​ಗಳಿಸಿ ಔಟಾದರು. ಓವರ್​ಗಳು ಅಂತ್ಯವಾಗುತ್ತಿದ್ದ ಕಾರಣ ಸ್ಫೋಟಕ ಬ್ಯಾಟಿಂಗ್​ಗೆ ಮುಂದಾದ ಅಬ್ದುಲ್ ಸಮದ್​ 18 ಎಸೆತಗಳಲ್ಲಿ 3 ಸಿಕ್ಸರ್​ಗಳ ನೆರವಿನಿಂದ 25 ರನ್​ಗಳಿಸಿ ಸೌತಿಗೆ ವಿಕೆಟ್​ ಒಪ್ಪಿಸಿದರು.

ಆಲ್​ರೌಂಡರ್​ಗಳಾದ ಅಭಿಷೇಕ್ ಶರ್ಮಾ(6), ಜೇಸನ್ ಹೋಲ್ಡರ್​(2), ರಶೀದ್ ಖಾನ್(8) ಕೂಡ ವೈಫಲ್ಯ ಅನುಭವಿಸಿದರು.

ನಿರ್ಣಾಯಕ ಪಂದ್ಯದಲ್ಲಿ ಅಮೋಘ ಬೌಲಿಂಗ್ ಪ್ರದರ್ಶನ ತೋರಿದ ಕೆಕೆಆರ್ ತಂಡದ ಬೌಲರ್​ಗಳಾದ ಟಿಮ್ ಸೌಥಿ 25ಕ್ಕೆ 2, ಶಿವಂ ಮಾವಿ 29ಕ್ಕೆ 2, ವರುಣ್ ಚಕ್ರವರ್ತಿ 26ಕ್ಕೆ 2 ಮತ್ತು ಶಕಿಬ್ ಅಲ್ ಹಸನ್ 20ಕ್ಕೆ 1 ವಿಕೆಟ್ ಪಡೆದು ಸನ್​ರೈಸರ್ಸ ತಂಡವನ್ನು ಅಲ್ಪಮೊತ್ತಕ್ಕೆ ಕುಸಿಯುವಲ್ಲಿ ಪ್ರಮುಖ ಪಾತ್ರವಹಿಸಿದರು.

ದುಬೈ: ಕೋಲ್ಕತ್ತಾ ನೈಟ್​ ರೈಡರ್ಸ್ ಸಂಘಟಿತ ಬೌಲಿಂಗ್ ದಾಳಿಗೆ ತತ್ತಿರಿಸಿದ ಸನ್​ರೈಸರ್ಸ್​ ಹೈದರಾಬಾದ್ ಹೀನಾಯ ಬ್ಯಾಟಿಂಗ್ ಪ್ರದರ್ಶನ ತೋರಿ ಕೇವಲ 5ರನ್​ಗಳಿಗೆ ಕುಸಿತ ಕಂಡಿದೆ.

ಟಾಸ್​ ಗೆದ್ದ ಹೈದರಾಬಾದ್​ ತಂಡದ ನಾಯಕ ಕೇನ್​ ವಿಲಿಯಮ್ಸನ್​ ಬ್ಯಾಟಿಂಗ್ ಮಾಡುವ ಅಚ್ಚರಿಯ ನಿರ್ಧಾರ ತೆಗೆದುಕೊಂಡರು. ಆದರೆ ಅವರ ಲೆಕ್ಕಾಚಾರನ್ನು ಕೆಕೆಆರ್​ ಬೌಲರ್​ಗಳು ಮೊದಲ ಓವರ್​ನಲ್ಲೇ ತಲೆಕೆಳಗಾಗುವಂತೆ ಮಾಡಿದರು.

ಆರಂಭಿಕ ಬ್ಯಾಟ್ಸ್​ಮನ್ ವೃದ್ದಿಮಾನ್ ಸಹಾ ಖಾತೆ ತೆರೆಯದೇ ಸೌಥಿ ಬೌಲಿಂಗ್​ನಲ್ಲಿ ಎಲ್​ಬಿ ಬಲೆಗೆ ಬಿದ್ದರು. ನಂತರ 4ನೇ ಓವರ್​ನಲ್ಲಿ ಜೇಸನ್​ ರಾಯಲ್​ ಶಿವಂ ಮಾವಿ ಬೌಲಿಂಗ್​ನಲ್ಲಿ ಸೌಥಿಗೆ ಕ್ಯಾಚ್ ನೀಡಿ ವಿಕೆಟ್ ಒಪ್ಪಿಸಿದರು.

26 ರನ್​ ಉತ್ತಮವಾಗಿ ಆಡುತ್ತಿದ್ದ ನಾಯಕ ಕೇನ್​ ವಿಲಿಯಮ್ಸನ್​ ರನ್​ಔಟಾಗುತ್ತಿದ್ದಂತೆ ಹೈದರಾಬಾದ್​ ಪತನ ಆರಂಭವಾಯಿತು. ಕೆಕೆಆರ್​ ಬೌಲರ್​ಗಳು ಒಂದು ಕಡೆ ನಿರಂತರ ವಿಕೆಟ್​ ಪಡೆಯುವ ಜೊತೆಗೆ ರನ್​ಗತಿಗೂ ಕಡಿವಾಣ ಹಾಕಿದರು.

4ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಇಳಿದಿದ್ದ ಯುವ ಬ್ಯಾಟರ್​ ಪ್ರಿಯಂ ಗರ್ಗ್​ ರನ್​ಗಳಿಸಲು ಪರದಾಡಿದರು. ಬರೋಬ್ಬರಿ 31 ಎಸೆತಗಳನ್ನೆದುರಿಸಿ ಕೇವಲ 21 ರನ್​ಗಳಿಸಿ ಔಟಾದರು. ಓವರ್​ಗಳು ಅಂತ್ಯವಾಗುತ್ತಿದ್ದ ಕಾರಣ ಸ್ಫೋಟಕ ಬ್ಯಾಟಿಂಗ್​ಗೆ ಮುಂದಾದ ಅಬ್ದುಲ್ ಸಮದ್​ 18 ಎಸೆತಗಳಲ್ಲಿ 3 ಸಿಕ್ಸರ್​ಗಳ ನೆರವಿನಿಂದ 25 ರನ್​ಗಳಿಸಿ ಸೌತಿಗೆ ವಿಕೆಟ್​ ಒಪ್ಪಿಸಿದರು.

ಆಲ್​ರೌಂಡರ್​ಗಳಾದ ಅಭಿಷೇಕ್ ಶರ್ಮಾ(6), ಜೇಸನ್ ಹೋಲ್ಡರ್​(2), ರಶೀದ್ ಖಾನ್(8) ಕೂಡ ವೈಫಲ್ಯ ಅನುಭವಿಸಿದರು.

ನಿರ್ಣಾಯಕ ಪಂದ್ಯದಲ್ಲಿ ಅಮೋಘ ಬೌಲಿಂಗ್ ಪ್ರದರ್ಶನ ತೋರಿದ ಕೆಕೆಆರ್ ತಂಡದ ಬೌಲರ್​ಗಳಾದ ಟಿಮ್ ಸೌಥಿ 25ಕ್ಕೆ 2, ಶಿವಂ ಮಾವಿ 29ಕ್ಕೆ 2, ವರುಣ್ ಚಕ್ರವರ್ತಿ 26ಕ್ಕೆ 2 ಮತ್ತು ಶಕಿಬ್ ಅಲ್ ಹಸನ್ 20ಕ್ಕೆ 1 ವಿಕೆಟ್ ಪಡೆದು ಸನ್​ರೈಸರ್ಸ ತಂಡವನ್ನು ಅಲ್ಪಮೊತ್ತಕ್ಕೆ ಕುಸಿಯುವಲ್ಲಿ ಪ್ರಮುಖ ಪಾತ್ರವಹಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.