ETV Bharat / sports

'ಸಂಜು ಸ್ಯಾಮ್ಸನ್‌ ನಿಮ್‌ ಜೊತೆ ನಾವಿದ್ದೀವಿ..' ಕತಾರ್​ ಫಿಫಾ ವಿಶ್ವಕಪ್​ನಲ್ಲಿ ಅಭಿಮಾನಿಗಳ ಬೆಂಬಲ

ನ್ಯೂಜಿಲ್ಯಾಂಡ್ ವಿರುದ್ಧದ 2ನೇ ಏಕದಿನ ಪಂದ್ಯದಿಂದ ಸಂಜು ಸ್ಯಾಮ್ಸನ್​ರನ್ನು ಕೈಬಿಟ್ಟಿದ್ದು, ಅಭಿಮಾನಿಗಳಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ. ಇದು ಕತಾರ್​ನ ಫಿಫಾ ವಿಶ್ವಕಪ್​ನಲ್ಲೂ ಪ್ರತಿಧ್ವನಿಸಿದೆ.

author img

By

Published : Nov 28, 2022, 4:59 PM IST

sanju-samson-supporters-in-fifa-world-cup
ಕತಾರ್​ ಫಿಫಾ ವಿಶ್ವಕಪ್​ನಲ್ಲಿ ಸಂಜು ಸ್ಯಾಮ್ಸನ್​

ಭರವಸೆಯ ಯುವ ಕ್ರಿಕೆಟರ್​ ಸಂಜು ಸ್ಯಾಮ್ಸನ್​ರನ್ನು ನ್ಯೂಜಿಲ್ಯಾಂಡ್​ ವಿರುದ್ಧದ 2ನೇ ಏಕದಿನ ಪಂದ್ಯದಿಂದ ಕೈಬಿಟ್ಟಿದ್ದು ಅಭಿಮಾನಿಗಳಲ್ಲಿ ತೀವ್ರ ಅಸಮಾಧಾನ ಮೂಡಿಸಿದೆ. ನಾಯಕ ಶಿಖರ್​ ಧವನ್​ ಮತ್ತು ಹಂಗಾಮಿ ಕೋಚ್​​ ವಿವಿಎಸ್​ ಲಕ್ಷ್ಮಣ್​ ವಿರುದ್ಧವೂ ಆಕ್ರೋಶ ವ್ಯಕ್ತಪಡಿಸಿದ್ದರು. ಉತ್ತಮವಾಗಿ ಆಡುತ್ತಿದ್ದರೂ ಸ್ಯಾಮ್ಸನ್​ರನ್ನು ಕೈಬಿಟ್ಟಿದ್ದರ ವಿರುದ್ಧ ಕತಾರ್​ನಲ್ಲಿ ನಡೆಯುತ್ತಿರುವ ಫಿಫಾ ವಿಶ್ವಕಪ್​ನಲ್ಲಿ ಬ್ಯಾನರ್​ ಹಾಕಿ ಅಭಿಮಾನಿಗಳು ಬೆಂಬಲ ವ್ಯಕ್ತಪಡಿಸಿದ್ದಾರೆ.

ಕಿವೀಸ್​ ವಿರುದ್ಧದ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ಧವನ್​, ಶ್ರೇಯಸ್​ ಅಯ್ಯರ್​, ಶುಭಮನ್​ ಗಿಲ್​ ಅಬ್ಬರದ ನಡುವೆಯೂ ಸ್ಯಾಮ್ಸನ್​ 36 ರನ್​ ಬಾರಿಸಿ ತಂಡಕ್ಕೆ ನೆರವಾಗಿದ್ದರು. ಪಂದ್ಯದಲ್ಲಿ ಭಾರತ ಬೌಲಿಂಗ್​ ವೈಫಲ್ಯದಿಂದಾಗಿ ಹೀನಾಯ ಸೋಲು ಕಂಡಿತ್ತು.

2ನೇ ಪಂದ್ಯದಲ್ಲಿ ಹೆಚ್ಚುವರಿ ಬೌಲರ್​ಗಾಗಿ ಆಲ್​ರೌಂಡರ್​ ದೀಪಕ್​ ಹೂಡಾಗೆ ಅವಕಾಶ ನೀಡಿ ಸಂಜು ಸ್ಯಾಮ್ಸನ್​ರನ್ನು ಕೈಬಿಡಲಾಯಿತು. ಈ ನಿರ್ಧಾರ ಭಾರಿ ಟೀಕೆಗೆ ಗುರಿಯಾಗಿತ್ತು. ಬೌಲಿಂಗ್​ ಬಲಪಡಿಸುವ ಬದಲಾಗಿ ಬ್ಯಾಟಿಂಗ್​ ಲಯದಲ್ಲಿರುವ ಸ್ಯಾಮ್ಸನ್​ ಅವರನ್ನು ಬೆಂಚ್​ ಕಾಯಿಸಿದ್ದು, ಅಭಿಮಾನಿಗಳನ್ನು ಕೆರಳಿಸಿತ್ತು.

ಅರಬ್​ ರಾಷ್ಟ್ರ ಕತಾರ್​ನಲ್ಲಿ ಚಾಲ್ತಿಯಲ್ಲಿರುವ ಫಿಫಾ ವಿಶ್ವಕಪ್​ನ ಪಂದ್ಯವೊಂದರಲ್ಲಿ ಅಭಿಮಾನಿಗಳು ಸಂಜು ಸ್ಯಾಮ್ಸನ್​ ಫೋಟೋವುಳ್ಳ ಬ್ಯಾನರ್​ ಅಳವಡಿಸಿ "ಯಾರೇ ಕೈಬಿಟ್ಟಿರೂ ನಾವು ನಿಮ್ಮೊಂದಿಗಿದ್ದೇವೆ" ಎಂಬ ಘೋಷವಾಕ್ಯದ ಮೂಲಕ ಬೆಂಬಲ ನೀಡಿದ್ದಾರೆ. ಇದನ್ನು ರಾಜಸ್ಥಾನ್ ರಾಯಲ್ಸ್ ತಂಡ ತನ್ನ ಟ್ವಿಟರ್​ ಖಾತೆಯಲ್ಲಿ ಹಂಚಿಕೊಂಡಿದೆ. ಐಪಿಎಲ್‌ನಲ್ಲಿ ಸ್ಯಾಮ್ಸನ್ ರಾಯಲ್ಸ್​ ತಂಡವನ್ನು ಮುನ್ನಡೆಸುತ್ತಿದ್ದಾರೆ. ಇದಕ್ಕೂ ಮೊದಲು ನಡೆದ 3 ಪಂದ್ಯಗಳ ಟಿ20 ಸರಣಿ ವೇಳೆಯೂ ತಂಡದಲ್ಲಿದ್ದ ಸಂಜು ಆಡುವ ಹನ್ನೊಂದರಲ್ಲಿ ಅವಕಾಶ ಪಡೆದಿರಲಿಲ್ಲ. ಈಗ ಏಕದಿನದಿಂದಲೂ ಕೊಕ್ ನೀಡಲಾಗಿದೆ.

ಇದನ್ನೂ ಓದಿ: ಒಂದೇ ಓವರ್​ನಲ್ಲಿ 7 ಸಿಕ್ಸರ್ ಸಿಡಿಸಿ ಋತುರಾಜ್​ ಗಾಯಕ್ವಾಡ್​ ವಿಶ್ವದಾಖಲೆ

ಭರವಸೆಯ ಯುವ ಕ್ರಿಕೆಟರ್​ ಸಂಜು ಸ್ಯಾಮ್ಸನ್​ರನ್ನು ನ್ಯೂಜಿಲ್ಯಾಂಡ್​ ವಿರುದ್ಧದ 2ನೇ ಏಕದಿನ ಪಂದ್ಯದಿಂದ ಕೈಬಿಟ್ಟಿದ್ದು ಅಭಿಮಾನಿಗಳಲ್ಲಿ ತೀವ್ರ ಅಸಮಾಧಾನ ಮೂಡಿಸಿದೆ. ನಾಯಕ ಶಿಖರ್​ ಧವನ್​ ಮತ್ತು ಹಂಗಾಮಿ ಕೋಚ್​​ ವಿವಿಎಸ್​ ಲಕ್ಷ್ಮಣ್​ ವಿರುದ್ಧವೂ ಆಕ್ರೋಶ ವ್ಯಕ್ತಪಡಿಸಿದ್ದರು. ಉತ್ತಮವಾಗಿ ಆಡುತ್ತಿದ್ದರೂ ಸ್ಯಾಮ್ಸನ್​ರನ್ನು ಕೈಬಿಟ್ಟಿದ್ದರ ವಿರುದ್ಧ ಕತಾರ್​ನಲ್ಲಿ ನಡೆಯುತ್ತಿರುವ ಫಿಫಾ ವಿಶ್ವಕಪ್​ನಲ್ಲಿ ಬ್ಯಾನರ್​ ಹಾಕಿ ಅಭಿಮಾನಿಗಳು ಬೆಂಬಲ ವ್ಯಕ್ತಪಡಿಸಿದ್ದಾರೆ.

ಕಿವೀಸ್​ ವಿರುದ್ಧದ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ಧವನ್​, ಶ್ರೇಯಸ್​ ಅಯ್ಯರ್​, ಶುಭಮನ್​ ಗಿಲ್​ ಅಬ್ಬರದ ನಡುವೆಯೂ ಸ್ಯಾಮ್ಸನ್​ 36 ರನ್​ ಬಾರಿಸಿ ತಂಡಕ್ಕೆ ನೆರವಾಗಿದ್ದರು. ಪಂದ್ಯದಲ್ಲಿ ಭಾರತ ಬೌಲಿಂಗ್​ ವೈಫಲ್ಯದಿಂದಾಗಿ ಹೀನಾಯ ಸೋಲು ಕಂಡಿತ್ತು.

2ನೇ ಪಂದ್ಯದಲ್ಲಿ ಹೆಚ್ಚುವರಿ ಬೌಲರ್​ಗಾಗಿ ಆಲ್​ರೌಂಡರ್​ ದೀಪಕ್​ ಹೂಡಾಗೆ ಅವಕಾಶ ನೀಡಿ ಸಂಜು ಸ್ಯಾಮ್ಸನ್​ರನ್ನು ಕೈಬಿಡಲಾಯಿತು. ಈ ನಿರ್ಧಾರ ಭಾರಿ ಟೀಕೆಗೆ ಗುರಿಯಾಗಿತ್ತು. ಬೌಲಿಂಗ್​ ಬಲಪಡಿಸುವ ಬದಲಾಗಿ ಬ್ಯಾಟಿಂಗ್​ ಲಯದಲ್ಲಿರುವ ಸ್ಯಾಮ್ಸನ್​ ಅವರನ್ನು ಬೆಂಚ್​ ಕಾಯಿಸಿದ್ದು, ಅಭಿಮಾನಿಗಳನ್ನು ಕೆರಳಿಸಿತ್ತು.

ಅರಬ್​ ರಾಷ್ಟ್ರ ಕತಾರ್​ನಲ್ಲಿ ಚಾಲ್ತಿಯಲ್ಲಿರುವ ಫಿಫಾ ವಿಶ್ವಕಪ್​ನ ಪಂದ್ಯವೊಂದರಲ್ಲಿ ಅಭಿಮಾನಿಗಳು ಸಂಜು ಸ್ಯಾಮ್ಸನ್​ ಫೋಟೋವುಳ್ಳ ಬ್ಯಾನರ್​ ಅಳವಡಿಸಿ "ಯಾರೇ ಕೈಬಿಟ್ಟಿರೂ ನಾವು ನಿಮ್ಮೊಂದಿಗಿದ್ದೇವೆ" ಎಂಬ ಘೋಷವಾಕ್ಯದ ಮೂಲಕ ಬೆಂಬಲ ನೀಡಿದ್ದಾರೆ. ಇದನ್ನು ರಾಜಸ್ಥಾನ್ ರಾಯಲ್ಸ್ ತಂಡ ತನ್ನ ಟ್ವಿಟರ್​ ಖಾತೆಯಲ್ಲಿ ಹಂಚಿಕೊಂಡಿದೆ. ಐಪಿಎಲ್‌ನಲ್ಲಿ ಸ್ಯಾಮ್ಸನ್ ರಾಯಲ್ಸ್​ ತಂಡವನ್ನು ಮುನ್ನಡೆಸುತ್ತಿದ್ದಾರೆ. ಇದಕ್ಕೂ ಮೊದಲು ನಡೆದ 3 ಪಂದ್ಯಗಳ ಟಿ20 ಸರಣಿ ವೇಳೆಯೂ ತಂಡದಲ್ಲಿದ್ದ ಸಂಜು ಆಡುವ ಹನ್ನೊಂದರಲ್ಲಿ ಅವಕಾಶ ಪಡೆದಿರಲಿಲ್ಲ. ಈಗ ಏಕದಿನದಿಂದಲೂ ಕೊಕ್ ನೀಡಲಾಗಿದೆ.

ಇದನ್ನೂ ಓದಿ: ಒಂದೇ ಓವರ್​ನಲ್ಲಿ 7 ಸಿಕ್ಸರ್ ಸಿಡಿಸಿ ಋತುರಾಜ್​ ಗಾಯಕ್ವಾಡ್​ ವಿಶ್ವದಾಖಲೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.