ETV Bharat / sports

ದ.ಆಫ್ರಿಕಾ ಪ್ರವಾಸಕ್ಕೆ ತಂಡದ ಆಯ್ಕೆ: ಕೊಹ್ಲಿ ಏಕದಿನ ನಾಯಕತ್ವ, ರಹಾನೆ-ಇಶಾಂತ್ ಟೆಸ್ಟ್​​ ಭವಿಷ್ಯ ನಿರ್ಧಾರ

author img

By

Published : Dec 5, 2021, 9:25 PM IST

ಆಯ್ಕೆ ಸಮಿತಿ ಅಧ್ಯಕ್ಷ ಚೇತನ್​ ಶರ್ಮಾ, ಆಯ್ಕೆಗಾರರಾದ ಅಬೆ ಕುರುವಿಲ್ಲಾ ಮತ್ತು ಸುನಿಲ್ ಜೋಶಿ ಮುಂಬೈನಲ್ಲಿ ನಡೆಯುತ್ತಿರುವ ಭಾರತ ಮತ್ತು ನ್ಯೂಜಿಲ್ಯಾಂಡ್ ನಡುವಿನ 2ನೇ ಟೆಸ್ಟ್​ ಪಂದ್ಯವನ್ನು ವೀಕ್ಷಣೆ ಮಾಡಿದ್ದಾರೆ. ಅವರು ಈ ವಾರದಲ್ಲಿ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಮತ್ತು ಕಾರ್ಯದರ್ಶಿ ಜಯ್ ಶಾ ಅವರೊಂದಿಗೆ ಕುಳಿತು ಭಾರತೀಯ ಕ್ರಿಕೆಟ್‌ನ ಮೇಲೆ ಪರಿಣಾಮ ಬೀರಬಹುದಾದ ಕೆಲವು ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ ಎನ್ನಲಾಗುತ್ತಿದೆ.

SA Team Selection
ದಕ್ಷಿಣ ಆಫ್ರಿಕಾ ಪ್ರವಾಸಕ್ಕೆ ಭಾರತ ತಂಡ ಆಯ್ಕೆ

ಮುಂಬೈ: ಏಕದಿನ ತಂಡದಲ್ಲಿ ವಿರಾಟ್​ ಕೊಹ್ಲಿಯ ನಾಯಕತ್ವ, ಅವರ ಟೆಸ್ಟ್​ ತಂಡದ ಉಪನಾಯಕ ಅಜಿಂಕ್ಯ ರಹಾನೆ ಭವಿಷ್ಯ ಮತ್ತು ನೂರು ಟೆಸ್ಟ್​ ಪಂದ್ಯಗಳನ್ನಾಡಿರುವ ಇಶಾಂತ್​ ಶರ್ಮಾರ ಟೆಸ್ಟ್​ ತಂಡದ ಸ್ಥಾನದ ಬಗ್ಗೆ ಈ ವಾರದ ಕೊನೆಯಲ್ಲಿ ದಕ್ಷಿಣ ಆಫ್ರಿಕಾ ಪ್ರವಾಸಕ್ಕಾಗಿ ತಂಡ ಆಯ್ಕೆ ಮಾಡುವ ಸಂದರ್ಭದಲ್ಲಿ ನಿರ್ಧಾರವಾಗಲಿದೆ.

ಆಯ್ಕೆ ಸಮಿತಿ ಅಧ್ಯಕ್ಷ ಚೇತನ್​ ಶರ್ಮಾ, ಆಯ್ಕೆಗಾರರಾದ ಅಬೆ ಕುರುವಿಲ್ಲಾ ಮತ್ತು ಸುನಿಲ್ ಜೋಶಿ ಮುಂಬೈನಲ್ಲಿ ನಡೆಯುತ್ತಿರುವ ಭಾರತ ಮತ್ತು ನ್ಯೂಜಿಲ್ಯಾಂಡ್ ನಡುವಿನ 2ನೇ ಟೆಸ್ಟ್​ ಪಂದ್ಯವನ್ನು ವೀಕ್ಷಣೆ ಮಾಡಿದ್ದಾರೆ. ಅವರು ಈ ವಾರದಲ್ಲಿ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಮತ್ತು ಕಾರ್ಯದರ್ಶಿ ಜಯ್ ಶಾ ಅವರೊಂದಿಗೆ ಕುಳಿತು ಭಾರತೀಯ ಕ್ರಿಕೆಟ್‌ನ ಮೇಲೆ ಪರಿಣಾಮ ಬೀರಬಹುದಾದ ಕೆಲವು ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ ಎನ್ನಲಾಗುತ್ತಿದೆ.

ವಿರಾಟ್​ ಕೊಹ್ಲಿ ಏಕದಿನ ನಾಯಕತ್ವ ಭವಿಷ್ಯ:

ಭಾರತ ದಕ್ಷಿಣ ಆಫ್ರಿಕಾದಲ್ಲಿ 3 ಏಕದಿನ ಪಂದ್ಯಗಳನ್ನಾಡಿದ್ದೇ ಆದರೆ ಯಾರು ತಂಡವನ್ನು ಮುನ್ನಡೆಸಲಿದ್ದಾರೆ. ಸೀಮಿತ ಓವರ್​ಗಳ ಪಂದ್ಯದಲ್ಲಿ ದೇಶಕ್ಕೆ ಇಬ್ಬರು ನಾಯಕರ ಅಗತ್ಯವಿದೆಯೇ ಎನ್ನುವ ಗೊಂದಲಗಳ ಕುರಿತು ಚರ್ಚೆ ನಡೆಯಲಿದೆ. ಈಗಾಗಲೇ ರೋಹಿತ್ ಶರ್ಮಾ ಟಿ20 ತಂಡವನ್ನು ಮುನ್ನಡುಸುತ್ತಿದ್ದಾರೆ. 2023ಕ್ಕೆ 50 ಓವರ್​ಗಳ ವಿಶ್ವಕಪ್​ ಇರುವುದರಿಂದ ವೈಟ್​ಬಾಲ್​ ತಂಡಕ್ಕೆ ಇಬ್ಬರು ನಾಯಕರ ಅಗತ್ಯವಿಲ್ಲ ಎಂಬ ಕೂಗು ಬಿಸಿಸಿಐ ಕಾರಿಡಾರ್​ಗಳಲ್ಲಿ ಕೇಳಿಬರುತ್ತಿದೆ. ಹಾಗಾಗಿ ರೋಹಿತ್ ಏಕದಿನ ತಂಡಕ್ಕೂ ನಾಯಕನಾಗುವ ಸಾಧ್ಯತೆಯಿದೆ.

ಇದನ್ನೂ ಓದಿ:ಭಾರತದ ಬಿಗಿ ಹಿಡಿತದಲ್ಲಿ 2ನೇ ಟೆಸ್ಟ್​: ಸರಣಿ ಗೆಲ್ಲಲು ಕೊಹ್ಲಿಪಡೆಗೆ ಬೇಕು ಕಿವೀಸ್​ನ 5 ವಿಕೆಟ್​

ರಹಾನೆ, ಪೂಜಾರಗೆ ಮತ್ತೊಂದು ಅವಕಾಶ, ಆದ್ರೆ ರೋಹಿತ್ ಹೆಗಲಿಗೆ ಉಪನಾಯಕ ಪಟ್ಟ

ಪ್ರಸ್ತುತ ಫಾರ್ಮ್​ ಸಮಸ್ಯೆ ಎದುರಿಸುತ್ತಿರುವ ಹಿರಿಯ ಬ್ಯಾಟರ್​ಗಳಾದ ಅಜಿಂಕ್ಯ ರಹಾನೆ ಮತ್ತು ಚೇತೇಶ್ವರ್ ಪೂಜಾರ ಭವಿಷ್ಯದ ಬಗ್ಗೆಯೂ ಸಭೆಯಲ್ಲಿ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆಯಿದೆ. ಆದರೆ ರಾಹುಲ್ ದ್ರಾವಿಡ್​ ಕೋಚಿಂಗ್​ನಲ್ಲಿ ಇದೇ ಮೊದಲ ವಿದೇಶಿ ಪ್ರವಾಸವಾಗಿದ್ದು, ಅನುಭವಿಗಳಾದ ರಹಾನೆ ಮತ್ತು ಪೂಜಾರರನ್ನು ಕಡೆಗಣಿಸುವ ಸಾಧ್ಯತೆ ಕಡಿಮೆಯಿದೆ. ಆದರೆ ರಹಾನೆ ತಂಡದಲ್ಲಿ ಅವಕಾಶ ಪಡೆಯಬಹುದೇ ಹೊರತು ತನ್ನ ಉಪನಾಯಕ ಸ್ಥಾನವನ್ನು ಉಳಿಸಿಕೊಳ್ಳುವ ಸಾಧ್ಯತೆಯಿಲ್ಲ ಎನ್ನಲಾಗುತ್ತಿದೆ. ಆಸ್ಟ್ರೇಲಿಯಾದಲ್ಲಿ ಉಪನಾಯಕನಾಗಿದ್ದ ರೋಹಿತ್ ಶರ್ಮಾ ಟೆಸ್ಟ್​ನಲ್ಲಿ ಕೊಹ್ಲಿಗೆ ಉಪನಾಯಕನಾಗಲಿದ್ದಾರೆ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.

ಅಲ್ಲದೆ ಅವರು ಭವಿಷ್ಯದಲ್ಲಿ ಆಡುವ 11ರ ಬಳಗ ಸ್ವಯಂ ಆಯ್ಕೆ ಕೂಡ ಆಗುವುದಿಲ್ಲ. ಈಗಾಗಲೇ ಶ್ರೇಯಸ್​ ಅಯ್ಯರ್​, ಶುಬ್ಮನ್​ ಗಿಲ್​, ಸೂರ್ಯಕುಮಾರ್ ಯಾದವ್​ ಮತ್ತು ಹನುಮ ವಿಹಾರಿಯಂತಹ ಯುವ ಆಟಗಾರರು ರಹಾನೆ ಸ್ಥಾನವನ್ನು ತುಂಬಲು ಲಿಸ್ಟ್​ನಲ್ಲಿದ್ದಾರೆ.

ಇಶಾಂತ್​ ಶರ್ಮಾ ಆಯ್ಕೆ ಅನುಮಾನ

ಇಂಗ್ಲೆಂಡ್​ ಪ್ರವಾಸದಿಂದ ಲಯ ಕಳೆದುಕೊಂಡಿರುವ 105 ಟೆಸ್ಟ್​​ ಪಂದ್ಯಗಳಿಂದ 311 ವಿಕೆಟ್ ಪಡೆದಿರುವ ಬೌಲರ್​ ಇಶಾಂತ್ ಶರ್ಮಾ ಮುಂಬರುವ ಪ್ರವಾಸದಲ್ಲಿ ಅವಕಾಶ ಪಡೆಯುವ ಸಾಧ್ಯತೆಯಿಲ್ಲ ಎಂದು ಹಲವಾರು ಕ್ರಿಕೆಟ್​ ತಜ್ಞರು ಅಭಿಪ್ರಾಯಪಡುತ್ತಿದ್ದಾರೆ.

ಸಿಕ್ಕ ಅವಕಾಶದಲ್ಲೆಲ್ಲಾ ಅದ್ಭುತ ಪ್ರದರ್ಶನ ತೋರುತ್ತಿರುವ ಮೊಹಮ್ಮದ್ ಸಿರಾಜ್​ರನ್ನು ಬೆಂಚ್​ ಕಾಯಿಸುವುದಕ್ಕೆ ಸಾಧ್ಯವಿಲ್ಲ. ಅದರಲ್ಲೂ ವಿದೇಶಿ ಪ್ರವಾಸದಲ್ಲಿ ಜಸ್​ಪ್ರೀತ್​ ಬುಮ್ರಾ ಮತ್ತು ಮೊಹಮ್ಮದ್ ಶಮಿ ಜೊತೆ ಸಿರಾಜ್​ ಪ್ರಮುಖ ಆಯ್ಕೆ ಎನ್ನಲಾಗುತ್ತಿದೆ.

ಮತ್ತೊಬ್ಬ ಅನುಭವಿ ಉಮೇಶ್ ಯಾದವ್​ ನಾಲ್ಕು ವೇಗಿಗಳೊಂದಿಗೆ ಕಣಕ್ಕಿಳಿಯುವ ಯೋಜನೆಯಲ್ಲಿ ಅತ್ಯುತ್ತಮ ಆಯ್ಕೆಯಲ್ಲದಿದ್ದರೂ ಇಶಾಂತ್ ಶರ್ಮಾ ಅವರಿಗಿಂತ ಉತ್ತಮ, ಅದರಲ್ಲೂ ಪ್ರಸ್ತುತ ಉತ್ತಮ ಫಾರ್ಮ್​ನಲ್ಲೂ ಇದ್ದಾರೆ. ಹಾಗಾಗಿ ಫಾರ್ಮ್​ನಲ್ಲಿಲ್ಲದ ಇಶಾಂತ್ ಬದಲು ಪ್ರಸಿಧ್ ಕೃಷ್ಣ, ಆವೇಶ್ ಖಾನ್ ಅಂತಹ ಯುವಕರಿಗೆ ಅವಕಾಶ ಸಿಗುವ ನಿರೀಕ್ಷೆಯಿದೆ.

ಇಷ್ಟೇ ಅಲ್ಲದೆ 3ನೇ ಕ್ರಮಾಂಕಕ್ಕೆ ಬ್ಯಾಕ್​ ಅಪ್​ ಆಟಗಾರರ ಆಯ್ಕೆ ಮತ್ತು ಹಿರಿಯ ಆರಂಭಿಕ ಶಿಖರ್​ ಧವನ್​ ಅವರ ಏಕದಿನ ತಂಡಕ್ಕೆ ಕಮ್​ಬ್ಯಾಕ್​ ಬಗ್ಗೆಯೂ ಮುಂದಿನ ವಾರದ ಬಿಸಿಸಿಐ ಮತ್ತು ಆಯ್ಕೆ ಸಮಿತಿ ಸಂಯೋಗದಲ್ಲಿ ನಡೆಯುವ ಸಭೆಯಲ್ಲಿ ಚರ್ಚೆಯಾಗಲಿದೆ.

ಇದನ್ನೂ ಓದಿ:ಇದು ನನ್ನ ಕನಸಿನ ವರ್ಷ, ಆದ್ರೂ ಮತ್ತಷ್ಟು ಸುಧಾರಣೆಯ ಗುರಿಯಿದೆ: ಅಕ್ಷರ್ ಪಟೇಲ್

ಮುಂಬೈ: ಏಕದಿನ ತಂಡದಲ್ಲಿ ವಿರಾಟ್​ ಕೊಹ್ಲಿಯ ನಾಯಕತ್ವ, ಅವರ ಟೆಸ್ಟ್​ ತಂಡದ ಉಪನಾಯಕ ಅಜಿಂಕ್ಯ ರಹಾನೆ ಭವಿಷ್ಯ ಮತ್ತು ನೂರು ಟೆಸ್ಟ್​ ಪಂದ್ಯಗಳನ್ನಾಡಿರುವ ಇಶಾಂತ್​ ಶರ್ಮಾರ ಟೆಸ್ಟ್​ ತಂಡದ ಸ್ಥಾನದ ಬಗ್ಗೆ ಈ ವಾರದ ಕೊನೆಯಲ್ಲಿ ದಕ್ಷಿಣ ಆಫ್ರಿಕಾ ಪ್ರವಾಸಕ್ಕಾಗಿ ತಂಡ ಆಯ್ಕೆ ಮಾಡುವ ಸಂದರ್ಭದಲ್ಲಿ ನಿರ್ಧಾರವಾಗಲಿದೆ.

ಆಯ್ಕೆ ಸಮಿತಿ ಅಧ್ಯಕ್ಷ ಚೇತನ್​ ಶರ್ಮಾ, ಆಯ್ಕೆಗಾರರಾದ ಅಬೆ ಕುರುವಿಲ್ಲಾ ಮತ್ತು ಸುನಿಲ್ ಜೋಶಿ ಮುಂಬೈನಲ್ಲಿ ನಡೆಯುತ್ತಿರುವ ಭಾರತ ಮತ್ತು ನ್ಯೂಜಿಲ್ಯಾಂಡ್ ನಡುವಿನ 2ನೇ ಟೆಸ್ಟ್​ ಪಂದ್ಯವನ್ನು ವೀಕ್ಷಣೆ ಮಾಡಿದ್ದಾರೆ. ಅವರು ಈ ವಾರದಲ್ಲಿ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಮತ್ತು ಕಾರ್ಯದರ್ಶಿ ಜಯ್ ಶಾ ಅವರೊಂದಿಗೆ ಕುಳಿತು ಭಾರತೀಯ ಕ್ರಿಕೆಟ್‌ನ ಮೇಲೆ ಪರಿಣಾಮ ಬೀರಬಹುದಾದ ಕೆಲವು ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ ಎನ್ನಲಾಗುತ್ತಿದೆ.

ವಿರಾಟ್​ ಕೊಹ್ಲಿ ಏಕದಿನ ನಾಯಕತ್ವ ಭವಿಷ್ಯ:

ಭಾರತ ದಕ್ಷಿಣ ಆಫ್ರಿಕಾದಲ್ಲಿ 3 ಏಕದಿನ ಪಂದ್ಯಗಳನ್ನಾಡಿದ್ದೇ ಆದರೆ ಯಾರು ತಂಡವನ್ನು ಮುನ್ನಡೆಸಲಿದ್ದಾರೆ. ಸೀಮಿತ ಓವರ್​ಗಳ ಪಂದ್ಯದಲ್ಲಿ ದೇಶಕ್ಕೆ ಇಬ್ಬರು ನಾಯಕರ ಅಗತ್ಯವಿದೆಯೇ ಎನ್ನುವ ಗೊಂದಲಗಳ ಕುರಿತು ಚರ್ಚೆ ನಡೆಯಲಿದೆ. ಈಗಾಗಲೇ ರೋಹಿತ್ ಶರ್ಮಾ ಟಿ20 ತಂಡವನ್ನು ಮುನ್ನಡುಸುತ್ತಿದ್ದಾರೆ. 2023ಕ್ಕೆ 50 ಓವರ್​ಗಳ ವಿಶ್ವಕಪ್​ ಇರುವುದರಿಂದ ವೈಟ್​ಬಾಲ್​ ತಂಡಕ್ಕೆ ಇಬ್ಬರು ನಾಯಕರ ಅಗತ್ಯವಿಲ್ಲ ಎಂಬ ಕೂಗು ಬಿಸಿಸಿಐ ಕಾರಿಡಾರ್​ಗಳಲ್ಲಿ ಕೇಳಿಬರುತ್ತಿದೆ. ಹಾಗಾಗಿ ರೋಹಿತ್ ಏಕದಿನ ತಂಡಕ್ಕೂ ನಾಯಕನಾಗುವ ಸಾಧ್ಯತೆಯಿದೆ.

ಇದನ್ನೂ ಓದಿ:ಭಾರತದ ಬಿಗಿ ಹಿಡಿತದಲ್ಲಿ 2ನೇ ಟೆಸ್ಟ್​: ಸರಣಿ ಗೆಲ್ಲಲು ಕೊಹ್ಲಿಪಡೆಗೆ ಬೇಕು ಕಿವೀಸ್​ನ 5 ವಿಕೆಟ್​

ರಹಾನೆ, ಪೂಜಾರಗೆ ಮತ್ತೊಂದು ಅವಕಾಶ, ಆದ್ರೆ ರೋಹಿತ್ ಹೆಗಲಿಗೆ ಉಪನಾಯಕ ಪಟ್ಟ

ಪ್ರಸ್ತುತ ಫಾರ್ಮ್​ ಸಮಸ್ಯೆ ಎದುರಿಸುತ್ತಿರುವ ಹಿರಿಯ ಬ್ಯಾಟರ್​ಗಳಾದ ಅಜಿಂಕ್ಯ ರಹಾನೆ ಮತ್ತು ಚೇತೇಶ್ವರ್ ಪೂಜಾರ ಭವಿಷ್ಯದ ಬಗ್ಗೆಯೂ ಸಭೆಯಲ್ಲಿ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆಯಿದೆ. ಆದರೆ ರಾಹುಲ್ ದ್ರಾವಿಡ್​ ಕೋಚಿಂಗ್​ನಲ್ಲಿ ಇದೇ ಮೊದಲ ವಿದೇಶಿ ಪ್ರವಾಸವಾಗಿದ್ದು, ಅನುಭವಿಗಳಾದ ರಹಾನೆ ಮತ್ತು ಪೂಜಾರರನ್ನು ಕಡೆಗಣಿಸುವ ಸಾಧ್ಯತೆ ಕಡಿಮೆಯಿದೆ. ಆದರೆ ರಹಾನೆ ತಂಡದಲ್ಲಿ ಅವಕಾಶ ಪಡೆಯಬಹುದೇ ಹೊರತು ತನ್ನ ಉಪನಾಯಕ ಸ್ಥಾನವನ್ನು ಉಳಿಸಿಕೊಳ್ಳುವ ಸಾಧ್ಯತೆಯಿಲ್ಲ ಎನ್ನಲಾಗುತ್ತಿದೆ. ಆಸ್ಟ್ರೇಲಿಯಾದಲ್ಲಿ ಉಪನಾಯಕನಾಗಿದ್ದ ರೋಹಿತ್ ಶರ್ಮಾ ಟೆಸ್ಟ್​ನಲ್ಲಿ ಕೊಹ್ಲಿಗೆ ಉಪನಾಯಕನಾಗಲಿದ್ದಾರೆ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.

ಅಲ್ಲದೆ ಅವರು ಭವಿಷ್ಯದಲ್ಲಿ ಆಡುವ 11ರ ಬಳಗ ಸ್ವಯಂ ಆಯ್ಕೆ ಕೂಡ ಆಗುವುದಿಲ್ಲ. ಈಗಾಗಲೇ ಶ್ರೇಯಸ್​ ಅಯ್ಯರ್​, ಶುಬ್ಮನ್​ ಗಿಲ್​, ಸೂರ್ಯಕುಮಾರ್ ಯಾದವ್​ ಮತ್ತು ಹನುಮ ವಿಹಾರಿಯಂತಹ ಯುವ ಆಟಗಾರರು ರಹಾನೆ ಸ್ಥಾನವನ್ನು ತುಂಬಲು ಲಿಸ್ಟ್​ನಲ್ಲಿದ್ದಾರೆ.

ಇಶಾಂತ್​ ಶರ್ಮಾ ಆಯ್ಕೆ ಅನುಮಾನ

ಇಂಗ್ಲೆಂಡ್​ ಪ್ರವಾಸದಿಂದ ಲಯ ಕಳೆದುಕೊಂಡಿರುವ 105 ಟೆಸ್ಟ್​​ ಪಂದ್ಯಗಳಿಂದ 311 ವಿಕೆಟ್ ಪಡೆದಿರುವ ಬೌಲರ್​ ಇಶಾಂತ್ ಶರ್ಮಾ ಮುಂಬರುವ ಪ್ರವಾಸದಲ್ಲಿ ಅವಕಾಶ ಪಡೆಯುವ ಸಾಧ್ಯತೆಯಿಲ್ಲ ಎಂದು ಹಲವಾರು ಕ್ರಿಕೆಟ್​ ತಜ್ಞರು ಅಭಿಪ್ರಾಯಪಡುತ್ತಿದ್ದಾರೆ.

ಸಿಕ್ಕ ಅವಕಾಶದಲ್ಲೆಲ್ಲಾ ಅದ್ಭುತ ಪ್ರದರ್ಶನ ತೋರುತ್ತಿರುವ ಮೊಹಮ್ಮದ್ ಸಿರಾಜ್​ರನ್ನು ಬೆಂಚ್​ ಕಾಯಿಸುವುದಕ್ಕೆ ಸಾಧ್ಯವಿಲ್ಲ. ಅದರಲ್ಲೂ ವಿದೇಶಿ ಪ್ರವಾಸದಲ್ಲಿ ಜಸ್​ಪ್ರೀತ್​ ಬುಮ್ರಾ ಮತ್ತು ಮೊಹಮ್ಮದ್ ಶಮಿ ಜೊತೆ ಸಿರಾಜ್​ ಪ್ರಮುಖ ಆಯ್ಕೆ ಎನ್ನಲಾಗುತ್ತಿದೆ.

ಮತ್ತೊಬ್ಬ ಅನುಭವಿ ಉಮೇಶ್ ಯಾದವ್​ ನಾಲ್ಕು ವೇಗಿಗಳೊಂದಿಗೆ ಕಣಕ್ಕಿಳಿಯುವ ಯೋಜನೆಯಲ್ಲಿ ಅತ್ಯುತ್ತಮ ಆಯ್ಕೆಯಲ್ಲದಿದ್ದರೂ ಇಶಾಂತ್ ಶರ್ಮಾ ಅವರಿಗಿಂತ ಉತ್ತಮ, ಅದರಲ್ಲೂ ಪ್ರಸ್ತುತ ಉತ್ತಮ ಫಾರ್ಮ್​ನಲ್ಲೂ ಇದ್ದಾರೆ. ಹಾಗಾಗಿ ಫಾರ್ಮ್​ನಲ್ಲಿಲ್ಲದ ಇಶಾಂತ್ ಬದಲು ಪ್ರಸಿಧ್ ಕೃಷ್ಣ, ಆವೇಶ್ ಖಾನ್ ಅಂತಹ ಯುವಕರಿಗೆ ಅವಕಾಶ ಸಿಗುವ ನಿರೀಕ್ಷೆಯಿದೆ.

ಇಷ್ಟೇ ಅಲ್ಲದೆ 3ನೇ ಕ್ರಮಾಂಕಕ್ಕೆ ಬ್ಯಾಕ್​ ಅಪ್​ ಆಟಗಾರರ ಆಯ್ಕೆ ಮತ್ತು ಹಿರಿಯ ಆರಂಭಿಕ ಶಿಖರ್​ ಧವನ್​ ಅವರ ಏಕದಿನ ತಂಡಕ್ಕೆ ಕಮ್​ಬ್ಯಾಕ್​ ಬಗ್ಗೆಯೂ ಮುಂದಿನ ವಾರದ ಬಿಸಿಸಿಐ ಮತ್ತು ಆಯ್ಕೆ ಸಮಿತಿ ಸಂಯೋಗದಲ್ಲಿ ನಡೆಯುವ ಸಭೆಯಲ್ಲಿ ಚರ್ಚೆಯಾಗಲಿದೆ.

ಇದನ್ನೂ ಓದಿ:ಇದು ನನ್ನ ಕನಸಿನ ವರ್ಷ, ಆದ್ರೂ ಮತ್ತಷ್ಟು ಸುಧಾರಣೆಯ ಗುರಿಯಿದೆ: ಅಕ್ಷರ್ ಪಟೇಲ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.