ETV Bharat / sports

ದ್ವಿತೀಯ ಹಂತದ ಐಪಿಎಲ್​ಗಾಗಿ ಯುಎಇ ತಲುಪಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು

author img

By

Published : Aug 29, 2021, 8:52 PM IST

ಆರ್​ಸಿಬಿ ತನ್ನ ಟ್ವಿಟರ್​ ಖಾತೆಯಲ್ಲಿ ದೇವದತ್​ ಪಡಿಕ್ಕಲ್​, ಸಚಿನ್ ಬೇಬಿ, ಮೊಹಮ್ಮದ್ ಅಜರುದ್ದೀನ್, ಯುಜ್ವೇಂದ್ರ ಚಹಲ್​ ಸೇರಿದಂತೆ ಆರ್​ಸಿಬಿ ಬಳಗ ಬೆಂಗಳೂರಿನಿಂದ ದುಬೈ ಪ್ರಯಾಣ ಬೆಳೆಸಿತ್ತು. ಇದೀಗ ದುಬೈ ತಲುಪಿರುವ ಆರ್​ಸಿಬಿ ಬಳಗ, ತರಬೇತಿ ಆರಂಭಿಸುವ ಮುನ್ನ ದುಬೈನಲ್ಲಿ 6 ದಿನಗಳ ಕಾಲ ಕ್ವಾರಂಟೈನ್​ಗೆ ಒಳಗಾಗಲಿದೆ.

Royal Challengers Bangalorereach UAE for 2nd of leg IPL
ರಾಯಲ್ ಚಾಲೆಂಜರ್ಸ್ ಬೆಂಗಳೂರು

ದುಬೈ: 2ನೇ ಹಂತದ ಐಪಿಎಲ್​ಗಾಗಿ ರಾಯಲ್​ ಚಾಲೆಂಜರ್ಸ್ ಬೆಂಗಳೂರು ತಂಡ ಭಾನುವಾರ ಯುಎಇ ತಲುಪಿದೆ.

ಆರ್​ಸಿಬಿ ತನ್ನ ಟ್ವಿಟರ್​ ಖಾತೆಯಲ್ಲಿ ದೇವದತ್​ ಪಡಿಕ್ಕಲ್​, ಸಚಿನ್ ಬೇಬಿ, ಮೊಹಮ್ಮದ್ ಅಜರುದ್ದೀನ್, ಯುಜ್ವೇಂದ್ರ ಚಹಲ್​ ಸೇರಿದಂತೆ ಆರ್​ಸಿಬಿ ಬಳಗ ಬೆಂಗಳೂರಿನಿಂದ ದುಬೈ ಪ್ರಯಾಣ ಬೆಳೆಸಿತ್ತು. ಇದೀಗ ದುಬೈ ತಲುಪಿರುವ ಆರ್​ಸಿಬಿ ಬಳಗ, ತರಬೇತಿ ಆರಂಭಿಸುವ ಮುನ್ನ ದುಬೈನಲ್ಲಿ 6 ದಿನಗಳ ಕಾಲ ಕ್ವಾರಂಟೈನ್​ಗೆ ಒಳಗಾಗಲಿದೆ.

#TravelDay ft. Royal Challengers. 🇮🇳 ✈️ 🇦🇪

The team has reached UAE and will quarantine for 6️⃣ days before starting preparations for the second half of #IPL2021. 👊🏻#PlayBold #WeAreChallengers pic.twitter.com/QoJZXhNqbX

— Royal Challengers Bangalore (@RCBTweets) August 29, 2021

ಬೆಂಗಳೂರು ತಂಡ ಸೆಪ್ಟೆಂಬರ್​ 20ರಂದು ಕೋಲ್ಕತ್ತಾ ನೈಟ್​ ರೈಡರ್ಸ್ ವಿರುದ್ಧ ತನ್ನ ದ್ವಿತೀಯ ಹಂತದ ಲೀಗ್​ನಲ್ಲಿ ತನ್ನ ಅಭಿಯಾನ ಆರಂಭಿಸಲಿದೆ.

ಬದಲೀ ಆಟಗಾರರಾಗಿರುವ ಶ್ರೀಲಂಕಾದ ವನಿಂದು ಹಸರಂಗ ಹಾಗೂ ದುಷ್ಮಂತ ಚಮೀರ ಸೆಪ್ಟೆಂಬರ್ 20ರಂದು ಯುಎಇಗೆ ಪಯಣ ಬೆಳಸಲಿದ್ದಾರೆ. ನಾಯಕ ವಿರಾಟ್​ ಕೊಹ್ಲಿ, ಮೊಹಮ್ಮದ್ ಸಿರಾಜ್ ಇಂಗ್ಲೆಂಡ್ ವಿರುದ್ಧದ ಟೆಸ್ಟ್​ ಸರಣಿ ಮುಗಿಯುತ್ತಿದ್ದಂತೆ ಯುಎಇಯಲ್ಲಿರುವ ತಂಡವನ್ನು ಸೇರಿಕೊಳ್ಳಲಿದ್ದಾರೆ.

ಆರ್​ಸಿಬಿ ಪ್ರಸ್ತುತ 7 ಪಂದ್ಯಗಳಿಂದ 5 ಗೆಲುವು ಮತ್ತು 2 ಸೋಲುಗಳಿಂದ 10 ಅಂಕ ಪಡೆದು ಮೂರನೇ ಸ್ಥಾನದಲ್ಲಿದೆ.

ಇದನ್ನು ಓದಿ:ಆರ್​ಸಿಬಿ ಅಭಿಮಾನಿಗಳಿಗೆ ಗುಡ್​ ನ್ಯೂಸ್: ಹಸರಂಗ, ಚಮೀರಾಗೆ NOC ನೀಡಿದ ಶ್ರೀಲಂಕಾ ಕ್ರಿಕೆಟ್​

ದುಬೈ: 2ನೇ ಹಂತದ ಐಪಿಎಲ್​ಗಾಗಿ ರಾಯಲ್​ ಚಾಲೆಂಜರ್ಸ್ ಬೆಂಗಳೂರು ತಂಡ ಭಾನುವಾರ ಯುಎಇ ತಲುಪಿದೆ.

ಆರ್​ಸಿಬಿ ತನ್ನ ಟ್ವಿಟರ್​ ಖಾತೆಯಲ್ಲಿ ದೇವದತ್​ ಪಡಿಕ್ಕಲ್​, ಸಚಿನ್ ಬೇಬಿ, ಮೊಹಮ್ಮದ್ ಅಜರುದ್ದೀನ್, ಯುಜ್ವೇಂದ್ರ ಚಹಲ್​ ಸೇರಿದಂತೆ ಆರ್​ಸಿಬಿ ಬಳಗ ಬೆಂಗಳೂರಿನಿಂದ ದುಬೈ ಪ್ರಯಾಣ ಬೆಳೆಸಿತ್ತು. ಇದೀಗ ದುಬೈ ತಲುಪಿರುವ ಆರ್​ಸಿಬಿ ಬಳಗ, ತರಬೇತಿ ಆರಂಭಿಸುವ ಮುನ್ನ ದುಬೈನಲ್ಲಿ 6 ದಿನಗಳ ಕಾಲ ಕ್ವಾರಂಟೈನ್​ಗೆ ಒಳಗಾಗಲಿದೆ.

ಬೆಂಗಳೂರು ತಂಡ ಸೆಪ್ಟೆಂಬರ್​ 20ರಂದು ಕೋಲ್ಕತ್ತಾ ನೈಟ್​ ರೈಡರ್ಸ್ ವಿರುದ್ಧ ತನ್ನ ದ್ವಿತೀಯ ಹಂತದ ಲೀಗ್​ನಲ್ಲಿ ತನ್ನ ಅಭಿಯಾನ ಆರಂಭಿಸಲಿದೆ.

ಬದಲೀ ಆಟಗಾರರಾಗಿರುವ ಶ್ರೀಲಂಕಾದ ವನಿಂದು ಹಸರಂಗ ಹಾಗೂ ದುಷ್ಮಂತ ಚಮೀರ ಸೆಪ್ಟೆಂಬರ್ 20ರಂದು ಯುಎಇಗೆ ಪಯಣ ಬೆಳಸಲಿದ್ದಾರೆ. ನಾಯಕ ವಿರಾಟ್​ ಕೊಹ್ಲಿ, ಮೊಹಮ್ಮದ್ ಸಿರಾಜ್ ಇಂಗ್ಲೆಂಡ್ ವಿರುದ್ಧದ ಟೆಸ್ಟ್​ ಸರಣಿ ಮುಗಿಯುತ್ತಿದ್ದಂತೆ ಯುಎಇಯಲ್ಲಿರುವ ತಂಡವನ್ನು ಸೇರಿಕೊಳ್ಳಲಿದ್ದಾರೆ.

ಆರ್​ಸಿಬಿ ಪ್ರಸ್ತುತ 7 ಪಂದ್ಯಗಳಿಂದ 5 ಗೆಲುವು ಮತ್ತು 2 ಸೋಲುಗಳಿಂದ 10 ಅಂಕ ಪಡೆದು ಮೂರನೇ ಸ್ಥಾನದಲ್ಲಿದೆ.

ಇದನ್ನು ಓದಿ:ಆರ್​ಸಿಬಿ ಅಭಿಮಾನಿಗಳಿಗೆ ಗುಡ್​ ನ್ಯೂಸ್: ಹಸರಂಗ, ಚಮೀರಾಗೆ NOC ನೀಡಿದ ಶ್ರೀಲಂಕಾ ಕ್ರಿಕೆಟ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.