ETV Bharat / sports

ರೋಹಿತ್​ ನಾಯಕತ್ವ ಮಂತ್ರವೇ ಕೆಕೆಆರ್ ವಿರುದ್ಧದ ಗೆಲುವಿಗೆ ಕಾರಣ: ರಾಹುಲ್ ಚಹರ್

author img

By

Published : Apr 14, 2021, 8:39 PM IST

ಕೆಕೆಆರ್ ವಿರುದ್ಧ ಮೊದಲು ಬ್ಯಾಟಿಂಗ್ ನಡೆಸಿದ್ದ ಮುಂಬೈ 152 ರನ್​ಗಳಿಗೆ ಆಲೌಟ್ ಆಗಿತ್ತು. ಈ ಮೊತ್ತವನ್ನು ಬೆನ್ನಟ್ಟಿದ ಕೆಕೆಆರ್ ಒಂದು ಹಂತದಲ್ಲಿ 104ಕ್ಕೆ 2 ವಿಕೆಟ್ ಕಳೆದುಕೊಂಡು ಸುಸ್ಥಿತಿಯಲ್ಲಿತ್ತು. ಆದರೆ, ರಾಹುಲ್ ಚಹರ್ ದಾಳಿಗೆ ಸಿಲುಕಿ 122 ಆಗುವಷ್ಟರಲ್ಲಿ 5 ವಿಕೆಟ್ ಕಳೆದು ಕೊಂಡಿತು. ಕೊನೆಗೆ 20 ಓವರ್​ಗಳಲ್ಲಿ 142 ರನ್​ಗಳಿಸಷ್ಟೇ ಶಕ್ತವಾಗಿ 10 ರನ್​ಗಳ ಸೋಲು ಕಂಡಿತು.

ರೋಹಿತ್ -ರಾಹುಲ್ ಚಹರ್
ರೋಹಿತ್ -ರಾಹುಲ್ ಚಹರ್

ಚೆನ್ನೈ: ಮಂಗಳವಾರ ಕೋಲ್ಕತ್ತಾ ನೈಟ್​ ರೈಡರ್ಸ್ ವಿರುದ್ಧದ ಪಂದ್ಯವನ್ನು ಗೆಲ್ಲಲು ನನ್ನ ಪ್ರದರ್ಶನಕ್ಕಿಂತ ನಾಯಕ ರೋಹಿತ್ ಅವರ ನಾಯಕತ್ವ ಮಂತ್ರದಿಂದ ಸಾಧ್ಯವಾಯಿತು ಎಂದು 4 ವಿಕೆಟ್ ಪಡೆದು ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದಿದ್ದ ರಾಹುಲ್ ಚಹರ್ ಅಭಿಪ್ರಾಯಪಟ್ಟಿದ್ದಾರೆ.

ಕೆಕೆಆರ್ ವಿರುದ್ಧ ಮೊದಲು ಬ್ಯಾಟಿಂಗ್ ನಡೆಸಿದ್ದ ಮುಂಬೈ 152 ರನ್​ಗಳಿಗೆ ಆಲೌಟ್ ಆಗಿತ್ತು. ಈ ಮೊತ್ತವನ್ನು ಬೆನ್ನಟ್ಟಿದ ಕೆಕೆಆರ್ ಒಂದು ಹಂತದಲ್ಲಿ 104ಕ್ಕೆ 2 ವಿಕೆಟ್ ಕಳೆದುಕೊಂಡು ಸುಸ್ಥಿತಿಯಲ್ಲಿತ್ತು. ಆದರೆ, ರಾಹುಲ್ ಚಹರ್ ದಾಳಿಗೆ ಸಿಲುಕಿ 122 ಆಗುವಷ್ಟರಲ್ಲಿ 5 ವಿಕೆಟ್ ಕಳೆದುಕೊಂಡಿತು. ಕೊನೆಗೆ 20 ಓವರ್​ಗಳಲ್ಲಿ 142 ರನ್​ಗಳಿಸಲಷ್ಟೇ ಶಕ್ತವಾಗಿ 10 ರನ್​ಗಳ ಸೋಲು ಕಂಡಿತು.

27ರನ್​ಗಳಿಗೆ 4 ವಿಕೆಟ್ ಪಡೆದಿದ್ದ ರಾಹುಲ್ ಚಹರ್, ಗೆಲುವಿನ ಶ್ರೇಯವನ್ನು ನಾಯಕ ರೋಹಿತ್​ಗೆ ಅರ್ಪಿಸಿದ್ದಾರೆ. ರೋಹಿತ್​ ನನಗೆ ಆತ್ಮವಿಶ್ವಾಸದಿಂದ ಬೌಲಿಂಗ್ ಮಾಡಲು ಹೇಳಿದರು, ಒಮ್ಮೊಮ್ಮೆ(ನೆಟ್ಸ್​ನಲ್ಲಿ) ನಿನ್ನ ಎಸೆತಗಳನ್ನು ಎದುರಿಸಲು ನನಗೇ ಕಷ್ಟವಾಗುತ್ತಿತ್ತು. ಅವರೂ (ಕೆಕೆಆರ್​) ಕೂಡ ಅದೇ ಭಾವನೆಯಲ್ಲಿರುತ್ತಾರೆ. ನಿನ್ನ ಗಮನವನ್ನು ಅದರ ಕಡೆಗೆ ನೀಡು, ಉತ್ತಮ ಲೆಂತ್​ ಮತ್ತು ಹೆಚ್ಚು ತಿರುವು ಪಡೆಯುವುದಕ್ಕೆ ಪ್ರಯತ್ನಿಸು ಎಂದು ತಿಳಿಸಿದರು ಎಂದು ವರ್ಚುಯಲ್ ಮಾಧ್ಯಮ ಗೋಷ್ಠಿಯಲ್ಲಿ ಚಹರ್ ತಿಳಿಸಿದ್ದಾರೆ.

ಇಂತಹ ಪಂದ್ಯದಲ್ಲಿ ಪಂದ್ಯ ಗೆಲ್ಲಿಸುವವರು ಸ್ಪಿನ್ನರ್​ಗಳಾಗಿರುತ್ತಾರೆ ಎಂಬುದು ನನಗೆ ತಿಳಿದಿತ್ತು. ಹಾಗಾಗಿ ನಾನು ಆತ್ಮವಿಶ್ವಾಸದಿಂದ ಇದ್ದೆ, ಅಲ್ಲದೇ ನೆಟ್ಸ್‌ನಲ್ಲಿ ಹಾರ್ದಿಕ್ ಪಾಂಡ್ಯ, ಕೀರನ್ ಪೊಲಾರ್ಡ್ ಅಂತಹ ದಿಗ್ಗಜರಿಗೆ ಬೌಲಿಂಗ್ ಮಾಡಿದ್ದೆ. ಅಲ್ಲದೇ ಭಾರತದ ಟಾಪ್​ ಬ್ಯಾಟ್ಸ್​ಮನ್​ಗಳಿಗೂ ನೆಟ್ಸ್​ನಲ್ಲಿ ಬೌಲಿಂಗ್ ಮಾಡಿದ್ದೆ. ನೀವು ಈ ಕೆಲಸವನ್ನು ಮಾಡಿದ್ರೆ, ಪಂದ್ಯಗಳಲ್ಲಿ ಇಂತಹ ಪರಿಸ್ಥಿತಿಯಲ್ಲಿ ಹೆಚ್ಚು ಒತ್ತಡ ಇರುವುದಿಲ್ಲ ಎಂಬುದು ನನ್ನ ತಲೆಯಲ್ಲಿತ್ತು. ಜೊತೆಗೆ ರೋಹಿತ್ ಅವರ ಸ್ಫೂರ್ತಿದಾಯಕ ಮಾತುಗಳು ಕೂಡ ನನ್ನಲ್ಲಿ ಆತ್ಮವಿಶ್ವಾಸ ತುಂಬಿತು ಎಂದು ಪಂದ್ಯಶ್ರೇಷ್ಠ ವಿಜೇತ ಹೇಳಿದ್ದಾರೆ.

ಇದನ್ನು ಓದಿ:ಏಕದಿನ ರ‍್ಯಾಂಕಿಂಗ್: 1,258 ದಿನಗಳ ನಂತರ ಅಗ್ರಪಟ್ಟ ಕಳೆದುಕೊಂಡ ಕೊಹ್ಲಿ, ನಂ 1 ಸ್ಥಾನಕ್ಕೇರಿದ ಬಾಬರ್​

ಚೆನ್ನೈ: ಮಂಗಳವಾರ ಕೋಲ್ಕತ್ತಾ ನೈಟ್​ ರೈಡರ್ಸ್ ವಿರುದ್ಧದ ಪಂದ್ಯವನ್ನು ಗೆಲ್ಲಲು ನನ್ನ ಪ್ರದರ್ಶನಕ್ಕಿಂತ ನಾಯಕ ರೋಹಿತ್ ಅವರ ನಾಯಕತ್ವ ಮಂತ್ರದಿಂದ ಸಾಧ್ಯವಾಯಿತು ಎಂದು 4 ವಿಕೆಟ್ ಪಡೆದು ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದಿದ್ದ ರಾಹುಲ್ ಚಹರ್ ಅಭಿಪ್ರಾಯಪಟ್ಟಿದ್ದಾರೆ.

ಕೆಕೆಆರ್ ವಿರುದ್ಧ ಮೊದಲು ಬ್ಯಾಟಿಂಗ್ ನಡೆಸಿದ್ದ ಮುಂಬೈ 152 ರನ್​ಗಳಿಗೆ ಆಲೌಟ್ ಆಗಿತ್ತು. ಈ ಮೊತ್ತವನ್ನು ಬೆನ್ನಟ್ಟಿದ ಕೆಕೆಆರ್ ಒಂದು ಹಂತದಲ್ಲಿ 104ಕ್ಕೆ 2 ವಿಕೆಟ್ ಕಳೆದುಕೊಂಡು ಸುಸ್ಥಿತಿಯಲ್ಲಿತ್ತು. ಆದರೆ, ರಾಹುಲ್ ಚಹರ್ ದಾಳಿಗೆ ಸಿಲುಕಿ 122 ಆಗುವಷ್ಟರಲ್ಲಿ 5 ವಿಕೆಟ್ ಕಳೆದುಕೊಂಡಿತು. ಕೊನೆಗೆ 20 ಓವರ್​ಗಳಲ್ಲಿ 142 ರನ್​ಗಳಿಸಲಷ್ಟೇ ಶಕ್ತವಾಗಿ 10 ರನ್​ಗಳ ಸೋಲು ಕಂಡಿತು.

27ರನ್​ಗಳಿಗೆ 4 ವಿಕೆಟ್ ಪಡೆದಿದ್ದ ರಾಹುಲ್ ಚಹರ್, ಗೆಲುವಿನ ಶ್ರೇಯವನ್ನು ನಾಯಕ ರೋಹಿತ್​ಗೆ ಅರ್ಪಿಸಿದ್ದಾರೆ. ರೋಹಿತ್​ ನನಗೆ ಆತ್ಮವಿಶ್ವಾಸದಿಂದ ಬೌಲಿಂಗ್ ಮಾಡಲು ಹೇಳಿದರು, ಒಮ್ಮೊಮ್ಮೆ(ನೆಟ್ಸ್​ನಲ್ಲಿ) ನಿನ್ನ ಎಸೆತಗಳನ್ನು ಎದುರಿಸಲು ನನಗೇ ಕಷ್ಟವಾಗುತ್ತಿತ್ತು. ಅವರೂ (ಕೆಕೆಆರ್​) ಕೂಡ ಅದೇ ಭಾವನೆಯಲ್ಲಿರುತ್ತಾರೆ. ನಿನ್ನ ಗಮನವನ್ನು ಅದರ ಕಡೆಗೆ ನೀಡು, ಉತ್ತಮ ಲೆಂತ್​ ಮತ್ತು ಹೆಚ್ಚು ತಿರುವು ಪಡೆಯುವುದಕ್ಕೆ ಪ್ರಯತ್ನಿಸು ಎಂದು ತಿಳಿಸಿದರು ಎಂದು ವರ್ಚುಯಲ್ ಮಾಧ್ಯಮ ಗೋಷ್ಠಿಯಲ್ಲಿ ಚಹರ್ ತಿಳಿಸಿದ್ದಾರೆ.

ಇಂತಹ ಪಂದ್ಯದಲ್ಲಿ ಪಂದ್ಯ ಗೆಲ್ಲಿಸುವವರು ಸ್ಪಿನ್ನರ್​ಗಳಾಗಿರುತ್ತಾರೆ ಎಂಬುದು ನನಗೆ ತಿಳಿದಿತ್ತು. ಹಾಗಾಗಿ ನಾನು ಆತ್ಮವಿಶ್ವಾಸದಿಂದ ಇದ್ದೆ, ಅಲ್ಲದೇ ನೆಟ್ಸ್‌ನಲ್ಲಿ ಹಾರ್ದಿಕ್ ಪಾಂಡ್ಯ, ಕೀರನ್ ಪೊಲಾರ್ಡ್ ಅಂತಹ ದಿಗ್ಗಜರಿಗೆ ಬೌಲಿಂಗ್ ಮಾಡಿದ್ದೆ. ಅಲ್ಲದೇ ಭಾರತದ ಟಾಪ್​ ಬ್ಯಾಟ್ಸ್​ಮನ್​ಗಳಿಗೂ ನೆಟ್ಸ್​ನಲ್ಲಿ ಬೌಲಿಂಗ್ ಮಾಡಿದ್ದೆ. ನೀವು ಈ ಕೆಲಸವನ್ನು ಮಾಡಿದ್ರೆ, ಪಂದ್ಯಗಳಲ್ಲಿ ಇಂತಹ ಪರಿಸ್ಥಿತಿಯಲ್ಲಿ ಹೆಚ್ಚು ಒತ್ತಡ ಇರುವುದಿಲ್ಲ ಎಂಬುದು ನನ್ನ ತಲೆಯಲ್ಲಿತ್ತು. ಜೊತೆಗೆ ರೋಹಿತ್ ಅವರ ಸ್ಫೂರ್ತಿದಾಯಕ ಮಾತುಗಳು ಕೂಡ ನನ್ನಲ್ಲಿ ಆತ್ಮವಿಶ್ವಾಸ ತುಂಬಿತು ಎಂದು ಪಂದ್ಯಶ್ರೇಷ್ಠ ವಿಜೇತ ಹೇಳಿದ್ದಾರೆ.

ಇದನ್ನು ಓದಿ:ಏಕದಿನ ರ‍್ಯಾಂಕಿಂಗ್: 1,258 ದಿನಗಳ ನಂತರ ಅಗ್ರಪಟ್ಟ ಕಳೆದುಕೊಂಡ ಕೊಹ್ಲಿ, ನಂ 1 ಸ್ಥಾನಕ್ಕೇರಿದ ಬಾಬರ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.