ಮುಂಬೈ: ಐಪಿಎಲ್ನ 16ನೇ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧ ಟಾಸ್ ಗೆದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ವಿರಾಟ್ ಕೊಹ್ಲಿ ಬೌಲಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ. ಚೆನ್ನೈ ಲೆಗ್ನಲ್ಲಿ ಸತತ 3 ಪಂದ್ಯಗಳನ್ನು ಗೆದ್ದಿರುವ ಕೊಹ್ಲಿ ಬಳಗ ಇದೀಗ ಬ್ಯಾಟಿಂಗ್ ಸ್ನೇಹಿ ಪಿಚ್ನಲ್ಲಿ ಮೊದಲ ಗೆಲುವಿನ ವಿಶ್ವಾಸದಲ್ಲಿದೆ.
ಸತತ 3 ಪಂದ್ಯಗಳನ್ನು ಗೆದ್ದಿರುವ ಆರ್ಸಿಬಿ ಇಂದಿನ ಪಂದ್ಯದಲ್ಲಿ ಒಂದು ಬದಲಾವಣೆ ಮಾಡಿಕೊಂಡಿದೆ. ಬಿಗ್ಬ್ಯಾಶ್ನಲ್ಲಿ ಉತ್ತಮ ಬೌಲಿಂಗ್ ಪ್ರದರ್ಶನ ತೋರಿದ್ದ ಕೇನ್ ರಿಚರ್ಡ್ಸನ್ ರನ್ನು ತಂಡಕ್ಕೆ ಸೇರಿಸಿಕೊಂಡಿದ್ದು, ರಜತ್ ಪಾಟಿದಾರ್ ಹೊರಗುಳಿದಿದ್ದಾರೆ.
-
Match 16. Royal Challengers Bangalore win the toss and elect to field https://t.co/qQv53qdmXv #RCBvRR #VIVOIPL #IPL2021
— IndianPremierLeague (@IPL) April 22, 2021 " class="align-text-top noRightClick twitterSection" data="
">Match 16. Royal Challengers Bangalore win the toss and elect to field https://t.co/qQv53qdmXv #RCBvRR #VIVOIPL #IPL2021
— IndianPremierLeague (@IPL) April 22, 2021Match 16. Royal Challengers Bangalore win the toss and elect to field https://t.co/qQv53qdmXv #RCBvRR #VIVOIPL #IPL2021
— IndianPremierLeague (@IPL) April 22, 2021
ಇತ್ತ ರಾಜಸ್ಥಾನ್ ರಾಯಲ್ಸ್ ಕೂಡ ಒಂದು ಬದಲಾವಣೆ ಮಾಡಿಕೊಂಡಿದೆ. ವೇಗಿ ಜಯದೇವ್ ಉನಾದ್ಕಟ್ ಬದಲಿಗೆ ಸ್ಪಿನ್ನರ್ ಶ್ರೇಯಸ್ ಗೋಪಾಲ್ ಕಣಕ್ಕಿಳಿದಿದ್ದಾರೆ.