ETV Bharat / sports

ಗಾಯದಿಂದ ರವೀಂದ್ರ ಜಡೇಜಾ ಚೇತರಿಕೆ; ಫಿಟ್ನೆಸ್ ಸಾಬೀತಿಗೆ ರಣಜಿಯಲ್ಲಿ ಕಣಕ್ಕೆ

author img

By

Published : Jan 15, 2023, 2:03 PM IST

ಗಾಯದಿಂದ ಚೇತರಿಸಿಕೊಂಡಿರುವ ಭಾರತ ತಂಡದ ಆಲ್​ರೌಂಡರ್ ರವೀಂದ್ರ ಜಡೇಜಾ ಆಸೀಸ್​ ಸರಣಿಗೂ ಮೊದಲು ಫಿಟ್ನೆಸ್​ ಸಾಬೀತಿಗಾಗಿ ರಣಜಿ ಟೂರ್ನಿಯಲ್ಲಿ ಸೌರಾಷ್ಟ್ರ ಪರವಾಗಿ ಆಡಲಿದ್ದಾರೆ.

Ravindra Singh Jadeja
ರವೀಂದ್ರ ಜಡೇಜಾ

ನವದೆಹಲಿ: ಏಷ್ಯಾ ಕಪ್​ ವೇಳೆ ಮೊಣಕಾಲಿಗೆ ಗಾಯ ಮಾಡಿಕೊಂಡು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಭಾರತ ಕ್ರಿಕೆಟ್​ ತಂಡದ ಸ್ಟಾರ್ ಆಲ್​ರೌಂಡರ್ ರವೀಂದ್ರ ಜಡೇಜಾ, 5 ತಿಂಗಳ ಬಳಿಕ ಸಕ್ರಿಯ ಕ್ರಿಕೆಟ್​ಗೆ ಮರಳಲು ಸಜ್ಜಾಗಿದ್ದಾರೆ. ಆಸ್ಟ್ರೇಲಿಯಾ ವಿರುದ್ಧ ನಡೆಯಲಿರುವ ಟೆಸ್ಟ್​ ಸರಣಿಯ ಮೊದಲೆರಡು ಪಂದ್ಯಗಳಿಗೆ ಆಯ್ಕೆಯಾಗಿದ್ದರು. ಆದರೆ, ಇದಕ್ಕೂ ಮೊದಲು ಅವರು ಫಿಟ್ನೆಸ್​ ಸಾಬೀತುಪಡಿಸಲು ರಣಜಿ ಟೂರ್ನಿಯಲ್ಲಿ ಭಾಗವಹಿಸಲಿದ್ದಾರೆ.

ಕ್ರಿಕೆಟ್​ನಿಂದ ದೀರ್ಘ ದೂರ ಉಳಿದಿರುವ ಜಡೇಜಾರನ್ನು ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ (ಎನ್‌ಸಿಎ) ಸಂಪೂರ್ಣ ಫಿಟ್ ಎಂದು ಘೋಷಿಸಬೇಕು ಆಸೀಸ್​ ಸರಣಿಗೆ ಆಯ್ಕೆಯಾಗಿರುವ ಜಡೇಜಾ ಎನ್​ಸಿಎಯಲ್ಲಿ ಬೌಲಿಂಗ್ ಮತ್ತು ಬ್ಯಾಟಿಂಗ್ ಅಭ್ಯಾಸ ಆರಂಭಿಸಿದ್ದಾರೆ. ಅಂತರಾಷ್ಟ್ರೀಯ ಪಂದ್ಯಗಳನ್ನು ಆಡುವ ಮೊದಲು ಅವರು ಫಿಟ್ನೆಸ್ ಪರೀಕ್ಷೆಗೆ ಒಳಗಾಗಬೇಕಾಗಿದೆ.

ರಣಜಿಯಲ್ಲಿ ಫಿಟ್ನೆಸ್​ ಸಾಬೀತು: ಎನ್​ಸಿಎಯಲ್ಲಿ ಅಭ್ಯಾಸದ ಜೊತೆಗೆ ಕೆಲ ರಣಜಿ ಪಂದ್ಯಗಳಲ್ಲಿ ಭಾಗವಹಿಸಿ, ಅಲ್ಲಿ ಫಿಟ್ನೆಸ್​ ಸಾಬೀತು ಮಾಡಬೇಕಿದೆ. ಜಡೇಜಾ ರಣಜಿ ಪಂದ್ಯಗಳನ್ನು ಆಡಲು ಎನ್‌ಸಿಎ ಮತ್ತು ಬಿಸಿಸಿಐ ಒಪ್ಪಿಗೆ ನೀಡಿದೆ. ಸೌರಾಷ್ಟ್ರ ವಿರುದ್ಧ ಕೊನೆಯ ಲೀಗ್​ ಪಂದ್ಯ ಆಡಲು ಜಡೇಜಾ ಸಜ್ಜಾಗಿದ್ದಾರೆ ಎಂದು ತಿಳಿದು ಬಂದಿದೆ.

ಎಡಗೈ ಬ್ಯಾಟರ್, ಬೌಲರ್​ ಆಗಿರುವ ಜಡೇಜಾ, ರಸ್ತೆ ಅಪಘಾತದಲ್ಲಿ ಗಾಯಗೊಂಡಿರುವ ರಿಷಬ್ ಪಂತ್ ಅನುಪಸ್ಥಿತಿಯಲ್ಲಿ ತಂಡ ಸೇರಿಕೊಂಡಿದ್ದಾರೆ. ಜಡೇಜಾ ಮತ್ತು ಆರ್.ಅಶ್ವಿನ್ ಅವರು ಮಧ್ಯಮ ಕ್ರಮಾಂಕದಲ್ಲಿ ಬ್ಯಾಟಿಂಗ್​ಗೆ ಬಲ ನೀಡಿದರೆ, ಸ್ಪಿನ್ ದಾಳಿ ಕೂಡ ನಡೆಸಲಿದ್ದಾರೆ. 2016-17ರಲ್ಲಿ ತವರಿನಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧ ಟೆಸ್ಟ್ ಸರಣಿಯಲ್ಲಿ ಜಡೇಜಾ ಅದ್ಭುತ ಪ್ರದರ್ಶನ ನೀಡಿದ್ದರು. ದ್ವಿಪಕ್ಷೀಯ ಸರಣಿಯಲ್ಲಿ ಭಾರತ 2-1ರಲ್ಲಿ ಸರಣಿ ಜಯಿಸಿತ್ತು. ಧರ್ಮಶಾಲಾದಲ್ಲಿ ನಡೆದ ಕೊನೆಯ ಟೆಸ್ಟ್‌ನಲ್ಲಿ ಜಡೇಜಾ 63 ರನ್‌ಗಳ ಜೊತೆಗೆ ನಾಲ್ಕು ವಿಕೆಟ್‌ ಪಡೆದು ಆಲ್​ರೌಂಡರ್​ ಆಟ ಪ್ರದರ್ಶಿಸಿದ್ದರು.

ಆ ಸರಣಿಯಲ್ಲಿ ಜಡೇಜಾ ಒಟ್ಟಾರೆ 25 ವಿಕೆಟ್‌ಗಳನ್ನು ಪಡೆದರೆ, 127 ರನ್ ಗಳಿಸಿದರು. ಇದರಿಂದ ಸರಣಿ ಶ್ರೇಷ್ಠ ಪ್ರಶಸ್ತಿ ಬಾಚಿಕೊಂಡಿದ್ದರು. 2017 ರಿಂದ ಜಡೇಜಾ 19 ಟೆಸ್ಟ್‌ಗಳನ್ನು ಆಡಿದ್ದು, 21.46 ಸರಾಸರಿಯಲ್ಲಿ 82 ವಿಕೆಟ್‌ಗಳನ್ನು ಗಳಿಸಿದ್ದಾರೆ. ಇದಲ್ಲದೇ 2 ಶತಕ ಹಾಗೂ 7 ಅರ್ಧಶತಕಗಳ ಸಮೇತ 52.82 ಸರಾಸರಿಯಲ್ಲಿ 898 ರನ್ ಗಳಿಸಿದ್ದಾರೆ. ಬಾರ್ಡರ್ ಗವಾಸ್ಕರ್ ಟ್ರೋಫಿ ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳಿಗೆ ಮುಖ್ಯವಾಗಿದೆ.

ಜೂನ್‌ನಲ್ಲಿ ಓವಲ್‌ನಲ್ಲಿ ನಡೆಯಲಿರುವ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ನಲ್ಲಿ ಸ್ಪರ್ಧಿಸಲು ಭಾರತ ಸರಣಿಯನ್ನು 3-1 ರಲ್ಲಿ ಗೆಲ್ಲಲೇಬೇಕಿದೆ. ಆಸ್ಟ್ರೇಲಿಯಾ ಕೂಡ ಸರಣಿಯನ್ನು ಗೆಲ್ಲುವ ಮೂಲಕ ಫೈನಲ್​ ಟಿಕೆಟ್​ ಖಚಿತಡಿಸಿಕೊಳ್ಳಲು ಸಜ್ಜಾಗಿದೆ. ಒಂದು ವೇಳೆ ಸೋತರೂ ಆಸೀಸ್​ ತಂಡ ಫೈನಲ್​ಗೆ ಬರಲಿದೆ ಎಂದು ಅಂದಾಜಿಸಲಾಗಿದೆ.

ಇದನ್ನೂ ಓದಿ: ಅಂಡರ್​-19 ಮಹಿಳಾ ಟಿ20 ವಿಶ್ವಕಪ್: ದ.ಆಫ್ರಿಕಾ ವಿರುದ್ಧ ಭಾರತಕ್ಕೆ ಭರ್ಜರಿ ಜಯ

ನವದೆಹಲಿ: ಏಷ್ಯಾ ಕಪ್​ ವೇಳೆ ಮೊಣಕಾಲಿಗೆ ಗಾಯ ಮಾಡಿಕೊಂಡು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಭಾರತ ಕ್ರಿಕೆಟ್​ ತಂಡದ ಸ್ಟಾರ್ ಆಲ್​ರೌಂಡರ್ ರವೀಂದ್ರ ಜಡೇಜಾ, 5 ತಿಂಗಳ ಬಳಿಕ ಸಕ್ರಿಯ ಕ್ರಿಕೆಟ್​ಗೆ ಮರಳಲು ಸಜ್ಜಾಗಿದ್ದಾರೆ. ಆಸ್ಟ್ರೇಲಿಯಾ ವಿರುದ್ಧ ನಡೆಯಲಿರುವ ಟೆಸ್ಟ್​ ಸರಣಿಯ ಮೊದಲೆರಡು ಪಂದ್ಯಗಳಿಗೆ ಆಯ್ಕೆಯಾಗಿದ್ದರು. ಆದರೆ, ಇದಕ್ಕೂ ಮೊದಲು ಅವರು ಫಿಟ್ನೆಸ್​ ಸಾಬೀತುಪಡಿಸಲು ರಣಜಿ ಟೂರ್ನಿಯಲ್ಲಿ ಭಾಗವಹಿಸಲಿದ್ದಾರೆ.

ಕ್ರಿಕೆಟ್​ನಿಂದ ದೀರ್ಘ ದೂರ ಉಳಿದಿರುವ ಜಡೇಜಾರನ್ನು ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ (ಎನ್‌ಸಿಎ) ಸಂಪೂರ್ಣ ಫಿಟ್ ಎಂದು ಘೋಷಿಸಬೇಕು ಆಸೀಸ್​ ಸರಣಿಗೆ ಆಯ್ಕೆಯಾಗಿರುವ ಜಡೇಜಾ ಎನ್​ಸಿಎಯಲ್ಲಿ ಬೌಲಿಂಗ್ ಮತ್ತು ಬ್ಯಾಟಿಂಗ್ ಅಭ್ಯಾಸ ಆರಂಭಿಸಿದ್ದಾರೆ. ಅಂತರಾಷ್ಟ್ರೀಯ ಪಂದ್ಯಗಳನ್ನು ಆಡುವ ಮೊದಲು ಅವರು ಫಿಟ್ನೆಸ್ ಪರೀಕ್ಷೆಗೆ ಒಳಗಾಗಬೇಕಾಗಿದೆ.

ರಣಜಿಯಲ್ಲಿ ಫಿಟ್ನೆಸ್​ ಸಾಬೀತು: ಎನ್​ಸಿಎಯಲ್ಲಿ ಅಭ್ಯಾಸದ ಜೊತೆಗೆ ಕೆಲ ರಣಜಿ ಪಂದ್ಯಗಳಲ್ಲಿ ಭಾಗವಹಿಸಿ, ಅಲ್ಲಿ ಫಿಟ್ನೆಸ್​ ಸಾಬೀತು ಮಾಡಬೇಕಿದೆ. ಜಡೇಜಾ ರಣಜಿ ಪಂದ್ಯಗಳನ್ನು ಆಡಲು ಎನ್‌ಸಿಎ ಮತ್ತು ಬಿಸಿಸಿಐ ಒಪ್ಪಿಗೆ ನೀಡಿದೆ. ಸೌರಾಷ್ಟ್ರ ವಿರುದ್ಧ ಕೊನೆಯ ಲೀಗ್​ ಪಂದ್ಯ ಆಡಲು ಜಡೇಜಾ ಸಜ್ಜಾಗಿದ್ದಾರೆ ಎಂದು ತಿಳಿದು ಬಂದಿದೆ.

ಎಡಗೈ ಬ್ಯಾಟರ್, ಬೌಲರ್​ ಆಗಿರುವ ಜಡೇಜಾ, ರಸ್ತೆ ಅಪಘಾತದಲ್ಲಿ ಗಾಯಗೊಂಡಿರುವ ರಿಷಬ್ ಪಂತ್ ಅನುಪಸ್ಥಿತಿಯಲ್ಲಿ ತಂಡ ಸೇರಿಕೊಂಡಿದ್ದಾರೆ. ಜಡೇಜಾ ಮತ್ತು ಆರ್.ಅಶ್ವಿನ್ ಅವರು ಮಧ್ಯಮ ಕ್ರಮಾಂಕದಲ್ಲಿ ಬ್ಯಾಟಿಂಗ್​ಗೆ ಬಲ ನೀಡಿದರೆ, ಸ್ಪಿನ್ ದಾಳಿ ಕೂಡ ನಡೆಸಲಿದ್ದಾರೆ. 2016-17ರಲ್ಲಿ ತವರಿನಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧ ಟೆಸ್ಟ್ ಸರಣಿಯಲ್ಲಿ ಜಡೇಜಾ ಅದ್ಭುತ ಪ್ರದರ್ಶನ ನೀಡಿದ್ದರು. ದ್ವಿಪಕ್ಷೀಯ ಸರಣಿಯಲ್ಲಿ ಭಾರತ 2-1ರಲ್ಲಿ ಸರಣಿ ಜಯಿಸಿತ್ತು. ಧರ್ಮಶಾಲಾದಲ್ಲಿ ನಡೆದ ಕೊನೆಯ ಟೆಸ್ಟ್‌ನಲ್ಲಿ ಜಡೇಜಾ 63 ರನ್‌ಗಳ ಜೊತೆಗೆ ನಾಲ್ಕು ವಿಕೆಟ್‌ ಪಡೆದು ಆಲ್​ರೌಂಡರ್​ ಆಟ ಪ್ರದರ್ಶಿಸಿದ್ದರು.

ಆ ಸರಣಿಯಲ್ಲಿ ಜಡೇಜಾ ಒಟ್ಟಾರೆ 25 ವಿಕೆಟ್‌ಗಳನ್ನು ಪಡೆದರೆ, 127 ರನ್ ಗಳಿಸಿದರು. ಇದರಿಂದ ಸರಣಿ ಶ್ರೇಷ್ಠ ಪ್ರಶಸ್ತಿ ಬಾಚಿಕೊಂಡಿದ್ದರು. 2017 ರಿಂದ ಜಡೇಜಾ 19 ಟೆಸ್ಟ್‌ಗಳನ್ನು ಆಡಿದ್ದು, 21.46 ಸರಾಸರಿಯಲ್ಲಿ 82 ವಿಕೆಟ್‌ಗಳನ್ನು ಗಳಿಸಿದ್ದಾರೆ. ಇದಲ್ಲದೇ 2 ಶತಕ ಹಾಗೂ 7 ಅರ್ಧಶತಕಗಳ ಸಮೇತ 52.82 ಸರಾಸರಿಯಲ್ಲಿ 898 ರನ್ ಗಳಿಸಿದ್ದಾರೆ. ಬಾರ್ಡರ್ ಗವಾಸ್ಕರ್ ಟ್ರೋಫಿ ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳಿಗೆ ಮುಖ್ಯವಾಗಿದೆ.

ಜೂನ್‌ನಲ್ಲಿ ಓವಲ್‌ನಲ್ಲಿ ನಡೆಯಲಿರುವ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ನಲ್ಲಿ ಸ್ಪರ್ಧಿಸಲು ಭಾರತ ಸರಣಿಯನ್ನು 3-1 ರಲ್ಲಿ ಗೆಲ್ಲಲೇಬೇಕಿದೆ. ಆಸ್ಟ್ರೇಲಿಯಾ ಕೂಡ ಸರಣಿಯನ್ನು ಗೆಲ್ಲುವ ಮೂಲಕ ಫೈನಲ್​ ಟಿಕೆಟ್​ ಖಚಿತಡಿಸಿಕೊಳ್ಳಲು ಸಜ್ಜಾಗಿದೆ. ಒಂದು ವೇಳೆ ಸೋತರೂ ಆಸೀಸ್​ ತಂಡ ಫೈನಲ್​ಗೆ ಬರಲಿದೆ ಎಂದು ಅಂದಾಜಿಸಲಾಗಿದೆ.

ಇದನ್ನೂ ಓದಿ: ಅಂಡರ್​-19 ಮಹಿಳಾ ಟಿ20 ವಿಶ್ವಕಪ್: ದ.ಆಫ್ರಿಕಾ ವಿರುದ್ಧ ಭಾರತಕ್ಕೆ ಭರ್ಜರಿ ಜಯ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.