ETV Bharat / sports

ಜಡೇಜಾ ಸಿಎಸ್‌ಕೆ ಮಾತ್ರವಲ್ಲ, ಭಾರತವನ್ನೂ ಮುನ್ನಡೆಸುವ ಸಾಮರ್ಥ್ಯ ಹೊಂದಿದ್ದಾರೆ: ರಾಯುಡು

author img

By

Published : Apr 25, 2022, 6:56 PM IST

ಆದರೆ, ಸಿಎಸ್​ಕೆ ತಂಡದ ಸ್ಟಾರ್ ಬ್ಯಾಟರ್ ಅಂಬಾಟಿ ರಾಯುಡು, ನಾಯಕನಾಗಿ ರವೀಂದ್ರ ಜಡೇಜಾ ದಿನದಿಂದ ದಿನಕ್ಕೆ ಉತ್ತಮವಾಗುತ್ತಿದ್ದಾರೆ. ಅವರಿಗೆ ತಂಡವನ್ನು ಮುನ್ನೆಸುವ ಸಾಮರ್ಥ್ಯವಿದೆ. ಕೇವಲ ಸಿಎಸ್​ಕೆ ಮಾತ್ರವಲ್ಲ ಮುಂದೊಂದು ದಿನ ಭಾರತ ತಂಡವನ್ನು ಮುನ್ನಡೆಸಲಿದ್ದಾರೆ ಎಂದು ಹೈದರಾಬಾದ್ ಬ್ಯಾಟರ್ ಹೇಳಿದ್ದಾರೆ.

Ravindra Jadeja
ರವೀಂದ್ರ ಜಡೇಜಾ

ಮುಂಬೈ: ಎಂಎಸ್ ಧೋನಿಯಿಂದ ತೆರವಾಗಿರುವ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕತ್ವವನ್ನು ಆಲ್​ರೌಂಡರ್​ ರವೀಂದ್ರ ಜಡೇಜಾ ವಹಿಸಿಕೊಂಡಿದ್ದಾರೆ. ಆದರೆ, ಮೊದಲ ಬಾರಿ ಐಪಿಎಲ್​ನಲ್ಲಿ ನಾಯಕನಾಗಿರುವ ಜಡೇಜಾ ಉತ್ತಮ ಆರಂಭ ಪಡೆಯುವಲ್ಲಿ ವಿಫಲರಾಗಿದ್ದಾರೆ. ಸಿಎಸ್​ಕೆ ತಂಡದ ಸ್ಟಾರ್ ಬ್ಯಾಟರ್ ಅಂಬಾಟಿ ರಾಯುಡು, ನಾಯಕನಾಗಿ ರವೀಂದ್ರ ಜಡೇಜಾ ದಿನದಿಂದ ದಿನಕ್ಕೆ ಉತ್ತಮವಾಗುತ್ತಿದ್ದಾರೆ.

ಅವರಿಗೆ ತಂಡವನ್ನು ಮುನ್ನೆಸುವ ಸಾಮರ್ಥ್ಯವಿದೆ, ಕೇವಲ ಸಿಎಸ್​ಕೆ ಮಾತ್ರವಲ್ಲ ಮುಂದೊಂದು ದಿನ ಭಾರತ ತಂಡವನ್ನು ಮುನ್ನಡೆಸಲಿದ್ದಾರೆ ಎಂದು ಸಿಎಸ್​ಕೆ ಯೂಟ್ಯೂಬ್ ಚಾನೆಲ್​ನಲ್ಲಿ ಹೈದರಾಬಾದ್ ಬ್ಯಾಟರ್ ಹೇಳಿದ್ದಾರೆ. ಎಂಎಸ್ ಧೋನಿ ಸ್ಥಾನವನ್ನು ತುಂಬುವುದಕ್ಕೆ ಸಾಧ್ಯವಿಲ್ಲ. ಆದರೆ ಜಡ್ಡು ಆ ಸಾಮರ್ಥ್ಯವನ್ನು ಹೊಂದಿದ್ದಾರೆ.

ಧೋನಿ ಮಾರ್ಗದರ್ಶನದಲ್ಲಿ ಮತ್ತು ಮೈದಾನದಲ್ಲಿ ಅವರ ಉಪಸ್ಥಿತಿಯಲ್ಲಿ ಜಡೇಜಾ ಈ ದೊಡ್ಡ ಜವಾಬ್ದಾರಿಯನ್ನು ನಿರ್ವಹಿಸುವುದು ಸುಲಭವಾಗಲಿದೆ. ಅವರಿಗೆ ಕೇವಲ ಸಿಎಸ್​ಕೆ ಮುನ್ನಡೆಸುವ ಸಾಮರ್ಥ್ಯ ಮಾತ್ರವಲ್ಲ, ಮುಂದೊಂದು ದಿನ ಅವರು ಭಾರತವನ್ನು ಮುನ್ನಡೆಸುವ ಸಾಮರ್ಥ್ಯ ಅವರಲ್ಲಿದೆ ಎಂದು ಕಳೆದ 5 ಆವೃತ್ತಿಗಳಿಂದ ಸಿಎಸ್​ಕೆ ಪ್ರತಿನಿಧಿಸುತ್ತಿರುವ ರಾಯುಡು ಹೇಳಿದ್ದಾರೆ.

ಚೆನ್ನೈ ಸೂಪರ್ ಕಿಂಗ್ಸ್ ಆಡಿರುವ 7 ಪಂದ್ಯಗಳಲ್ಲಿ 5 ರಲ್ಲಿ ಸೋಲು ಕಂಡಿದೆ. ಆದರೆ, ಕಳೆದ ಮೂರು ಪಂದ್ಯಗಳಲ್ಲಿ 2 ರಲ್ಲಿ ಜಯಿಸಿದೆ. ಮತ್ತೊಂದು ಪಂದ್ಯವನ್ನು ಕಳಪೆ ಫೀಲ್ಡಿಂಗ್​ನಿಂದ ಕಳೆದುಕೊಂಡಿದ್ದ ಚೆನ್ನೈ ಸೋಮವಾರ ಪಂಜಾಬ್ ವಿರುದ್ಧ ಮತ್ತೊಂದು ಗೆಲುವಿನ ನಿರೀಕ್ಷೆಯಲ್ಲಿದೆ.

ಇದನ್ನೂ ಓದಿ:ಪ್ರತಿ ದಿಗ್ಗಜ ತಂಡವೂ ವೈಫಲ್ಯ ಅನುಭವಿಸಿವೆ: ರೋಹಿತ್ ಭಾವನಾತ್ಮಕ ಟ್ವೀಟ್

ಮುಂಬೈ: ಎಂಎಸ್ ಧೋನಿಯಿಂದ ತೆರವಾಗಿರುವ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕತ್ವವನ್ನು ಆಲ್​ರೌಂಡರ್​ ರವೀಂದ್ರ ಜಡೇಜಾ ವಹಿಸಿಕೊಂಡಿದ್ದಾರೆ. ಆದರೆ, ಮೊದಲ ಬಾರಿ ಐಪಿಎಲ್​ನಲ್ಲಿ ನಾಯಕನಾಗಿರುವ ಜಡೇಜಾ ಉತ್ತಮ ಆರಂಭ ಪಡೆಯುವಲ್ಲಿ ವಿಫಲರಾಗಿದ್ದಾರೆ. ಸಿಎಸ್​ಕೆ ತಂಡದ ಸ್ಟಾರ್ ಬ್ಯಾಟರ್ ಅಂಬಾಟಿ ರಾಯುಡು, ನಾಯಕನಾಗಿ ರವೀಂದ್ರ ಜಡೇಜಾ ದಿನದಿಂದ ದಿನಕ್ಕೆ ಉತ್ತಮವಾಗುತ್ತಿದ್ದಾರೆ.

ಅವರಿಗೆ ತಂಡವನ್ನು ಮುನ್ನೆಸುವ ಸಾಮರ್ಥ್ಯವಿದೆ, ಕೇವಲ ಸಿಎಸ್​ಕೆ ಮಾತ್ರವಲ್ಲ ಮುಂದೊಂದು ದಿನ ಭಾರತ ತಂಡವನ್ನು ಮುನ್ನಡೆಸಲಿದ್ದಾರೆ ಎಂದು ಸಿಎಸ್​ಕೆ ಯೂಟ್ಯೂಬ್ ಚಾನೆಲ್​ನಲ್ಲಿ ಹೈದರಾಬಾದ್ ಬ್ಯಾಟರ್ ಹೇಳಿದ್ದಾರೆ. ಎಂಎಸ್ ಧೋನಿ ಸ್ಥಾನವನ್ನು ತುಂಬುವುದಕ್ಕೆ ಸಾಧ್ಯವಿಲ್ಲ. ಆದರೆ ಜಡ್ಡು ಆ ಸಾಮರ್ಥ್ಯವನ್ನು ಹೊಂದಿದ್ದಾರೆ.

ಧೋನಿ ಮಾರ್ಗದರ್ಶನದಲ್ಲಿ ಮತ್ತು ಮೈದಾನದಲ್ಲಿ ಅವರ ಉಪಸ್ಥಿತಿಯಲ್ಲಿ ಜಡೇಜಾ ಈ ದೊಡ್ಡ ಜವಾಬ್ದಾರಿಯನ್ನು ನಿರ್ವಹಿಸುವುದು ಸುಲಭವಾಗಲಿದೆ. ಅವರಿಗೆ ಕೇವಲ ಸಿಎಸ್​ಕೆ ಮುನ್ನಡೆಸುವ ಸಾಮರ್ಥ್ಯ ಮಾತ್ರವಲ್ಲ, ಮುಂದೊಂದು ದಿನ ಅವರು ಭಾರತವನ್ನು ಮುನ್ನಡೆಸುವ ಸಾಮರ್ಥ್ಯ ಅವರಲ್ಲಿದೆ ಎಂದು ಕಳೆದ 5 ಆವೃತ್ತಿಗಳಿಂದ ಸಿಎಸ್​ಕೆ ಪ್ರತಿನಿಧಿಸುತ್ತಿರುವ ರಾಯುಡು ಹೇಳಿದ್ದಾರೆ.

ಚೆನ್ನೈ ಸೂಪರ್ ಕಿಂಗ್ಸ್ ಆಡಿರುವ 7 ಪಂದ್ಯಗಳಲ್ಲಿ 5 ರಲ್ಲಿ ಸೋಲು ಕಂಡಿದೆ. ಆದರೆ, ಕಳೆದ ಮೂರು ಪಂದ್ಯಗಳಲ್ಲಿ 2 ರಲ್ಲಿ ಜಯಿಸಿದೆ. ಮತ್ತೊಂದು ಪಂದ್ಯವನ್ನು ಕಳಪೆ ಫೀಲ್ಡಿಂಗ್​ನಿಂದ ಕಳೆದುಕೊಂಡಿದ್ದ ಚೆನ್ನೈ ಸೋಮವಾರ ಪಂಜಾಬ್ ವಿರುದ್ಧ ಮತ್ತೊಂದು ಗೆಲುವಿನ ನಿರೀಕ್ಷೆಯಲ್ಲಿದೆ.

ಇದನ್ನೂ ಓದಿ:ಪ್ರತಿ ದಿಗ್ಗಜ ತಂಡವೂ ವೈಫಲ್ಯ ಅನುಭವಿಸಿವೆ: ರೋಹಿತ್ ಭಾವನಾತ್ಮಕ ಟ್ವೀಟ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.