ETV Bharat / sports

ರಣಜಿ ಟ್ರೋಫಿ: ನಾಯಕ ಮಯಾಂಕ್​ ಅಗರ್​ವಾಲ್​​ ದ್ವಿಶತಕದ ಸೊಗಸು!

author img

By

Published : Feb 9, 2023, 4:33 PM IST

ರಣಜಿ ಟ್ರೋಫಿ ಸೆಮಿಫೈನಲ್​ ಪಂದ್ಯ ನಡೆಯುತ್ತಿದೆ. ಸೌರಾಷ್ಟ್ರ ವಿರುದ್ಧ ಮಯಾಂಕ್​ ಆಕರ್ಷಕ ದ್ವಿಶತಕ ಸಿಡಿಸಿದ್ದಾರೆ.

ranji-trophy
ರಣಜಿ ಟ್ರೋಫಿ

ಬೆಂಗಳೂರು: ಸೌರಾಷ್ಟ್ರ ವಿರುದ್ಧದ ರಣಜಿ ಟ್ರೋಫಿ 2ನೇ ಸೆಮಿಫೈನಲ್​​ ಪಂದ್ಯದಲ್ಲಿ ಕರ್ನಾಟಕ ತಂಡದ ನಾಯಕ ಮಯಾಂಕ್​ ಅಗರ್​ವಾಲ್​ ದ್ವಿಶತಕ ಸಾಧನೆ ಮಾಡಿದ್ದಾರೆ. ಏಕಾಂಗಿ ಹೋರಾಟ ನಡೆಸಿದ ಅವರು​ 249 ರನ್​ ಬಾರಿಸಿ ಕುಸಿಯುತ್ತಿದ್ದ ತಂಡಕ್ಕೆ ಆಸರೆಯಾದರು. ಕರ್ನಾಟಕ ಮೊದಲ ಇನಿಂಗ್ಸ್​ನಲ್ಲಿ 133.3 ಓವರ್​ಗಳಲ್ಲಿ ತನ್ನೆಲ್ಲಾ ವಿಕೆಟ್​ ಕಳೆದುಕೊಂಡು 407 ರನ್​ ಗಳಿಸಿತು.

ಮೊದಲ ದಿನದಾಟದಲ್ಲಿ 110 ರನ್​ ಕಲೆ ಹಾಕಿದ್ದ ಮಯಾಂಕ್​ ಎರಡನೇ ದಿನದಾಟದಲ್ಲೂ ಸೌರಾಷ್ಟ್ರ ಬೌಲರ್​ಗಳನ್ನು ದಂಡಿಸಿದರು. ವಿಕೆಟ್​ ಕೀಪರ್​ ಶರತ್​​ ಶ್ರೀನಿವಾಸ್​ ನಾಯಕನಿಗೆ ಸಾಥ್​ ನೀಡಿದರು. ಇಬ್ಬರೂ ಸೇರಿ 139 ರನ್​ಗಳ ಜೊತೆಯಾಟ ಕಟ್ಟಿದರು. ಅರ್ಧಶತಕ ಗಳಿಸಿ ಆಡುತ್ತಿದ್ದ ಶರತ್​(66) ಸಕಾರಿಯಾ ಎಸೆತದಲ್ಲಿ ವಿಕೆಟ್ ಒಪ್ಪಿಸಿದರು. ಬಳಿಕ ತಂಡ ಮತ್ತೆ ಕುಸಿತ ಕಂಡಿತು.

ಒಂದೆಡೆ ತಂಡದ ಆಟಗಾರರು ಸತತವಾಗಿ ವಿಕೆಟ್​ ಕಳೆದುಕೊಳ್ಳುತ್ತಾ ಸಾಗಿದರೆ ನೆಲಕಚ್ಚಿ ಆಡಿದ ಮಯಾಂಕ್​ 249 ರನ್​ ಸಿಡಿಸಿದರು. ಇದಕ್ಕವರು ತೆಗೆದುಕೊಂಡ ಎಸೆತಗಳ ಸಂಖ್ಯೆ 429. ಅಬ್ಬರದ ಬ್ಯಾಟ್ ಬೀಸದೇ ಒಂದೊಂದೇ ರನ್​ ಕಲೆ ಹಾಕಿದ ಮಯಾಂಕ್​ ನಾಯಕನ ಆಟವಾಡಿದರು. ಇವರ ಇನಿಂಗ್ಸ್​ನಲ್ಲಿ 28 ಬೌಂಡರಿ ಮತ್ತು 6 ಸಿಕ್ಸರ್​ಗಳಿದ್ದವು.

ಆರಂಭಿಕ ಆಟಗಾರ ಸಮರ್ಥ್‌ 3, ದೇವದತ್ತ್ ಪಡಿಕ್ಕಲ್​ 9, ನಿಕಿನ್​ ಜೋಶ್​ 18, ಮನೀಶ್​ ಪಾಂಡೆ 7, ಶ್ರೇಯಸ್​ ಗೋಪಾಲ್ 15, ಕೆ.ಗೌತಮ್​ 2, ವಿಜಯ್​ಕುಮಾರ್​ ವ್ಯಾಸಕ್​ 6, ವಿದ್ವತ್​ ಕಾವೇರಪ್ಪ 15 ರನ್​ ಗಳಿಸಿ ವೈಫಲ್ಯ ಅನುಭವಿಸಿದರು. ಕೊನೆಯಲ್ಲಿ ವಿ.ಕೌಶಿಕ್​ ಔಟಾಗದೇ ಉಳಿದರು.

ಮಯಾಂಕ್​ಗೆ ಶರತ್​ ಸಾಥ್​: ಮಯಾಂಕ್​ ಅಗರ್​ವಾಲ್​ ನಿಧಾನವಾಗಿ ರನ್​ ಪೇರಿಸುತ್ತಿದ್ದರೆ ವಿಕೆಟ್​ ಕೀಪರ್​​ ಶರತ್​ ಶ್ರೀನಿವಾಸ್​ ಮತ್ತೊಂದು ತುದಿಯಲ್ಲಿ ಇನಿಂಗ್ಸ್​ ಕಟ್ಟಿದರು. ತಂಡ ಸತತವಾಗಿ ವಿಕೆಟ್​ ಕಳೆದುಕೊಳ್ಳುತ್ತಿದ್ದುದನ್ನು ಅವರು ತಪ್ಪಿಸಿದರು. 153 ಎಸೆತಗಳಲ್ಲಿ 66 ರನ್​ ಗಳಿಸಿದ ಶರತ್​ 4 ಬೌಂಡರಿ ಗಳಿಸಿದರು. ತಾಳ್ಮೆಯ ಆಟವಾಡಿದ ಇಬ್ಬರೂ ಆಟಗಾರರು ಶತಕದ ಜೊತೆಯಾಟವಾಡಿದರು. ಶರತ್​ ಔಟಾದ ಬಳಿಕ ಉಳಿದ ಬ್ಯಾಟರ್​ಗಳಿಂದ ಉತ್ತಮ ಬ್ಯಾಟಿಂಗ್​ ಮೂಡದ ಕಾರಣ ಮಯಾಂಕ್​ ಅಗರ್​ವಾಲ್​ ಮತ್ತೆ ಒತ್ತಡಕ್ಕೆ ಸಿಲುಕಿದರು.

ಕೊನೆಯಲ್ಲಿ ತಾವೇ ಭರ್ಜರಿ ಬ್ಯಾಟ್​ ಬೀಸಿದರು. ರನ್​ ಗಳಿಸುವ ಆತುರದಲ್ಲಿ ರನೌಟ್​ಗೆ ಬಲಿಯಾದರು. ಈ ಮೂಲಕ ಕರ್ನಾಟಕದ ಇನಿಂಗ್ಸ್​ 407 ರನ್​ಗೆ ತೆರೆಬಿತ್ತು. 407 ರನ್​ಗಳ ಗುರಿ ಬೆನ್ನಟ್ಟಿರುವ ಸೌರಾಷ್ಟ್ರ ತಂಡ ಮೊದಲ ಇನಿಂಗ್ಸ್​ ಆರಂಭಿಸಿದೆ. ಸೌರಾಷ್ಟ್ರ ಪರವಾಗಿ ಚೇತನ್​ ಸಕಾರಿಯಾ, ಕೆ.ಪಟೇಲ್​ ತಲಾ 3, ಚಿರಾಗ್​ ಜಾನಿ, ಪ್ರೇರಕ್​ ಮಂಕಡ್​ ತಲಾ 1 ವಿಕೆಟ್​ ಪಡೆದರು.

ಇದನ್ನೂ ಓದಿ: ಬಾರ್ಡರ್ - ಗವಾಸ್ಕರ್ ಟ್ರೋಫಿ: ಆಸ್ಟ್ರೇಲಿಯಾ ತಂಡಕ್ಕೆ ಆರಂಭದಲ್ಲೇ ಶಾಕ್​ ನೀಡಿದ ಟೀಂ ಇಂಡಿಯಾ

ಬೆಂಗಳೂರು: ಸೌರಾಷ್ಟ್ರ ವಿರುದ್ಧದ ರಣಜಿ ಟ್ರೋಫಿ 2ನೇ ಸೆಮಿಫೈನಲ್​​ ಪಂದ್ಯದಲ್ಲಿ ಕರ್ನಾಟಕ ತಂಡದ ನಾಯಕ ಮಯಾಂಕ್​ ಅಗರ್​ವಾಲ್​ ದ್ವಿಶತಕ ಸಾಧನೆ ಮಾಡಿದ್ದಾರೆ. ಏಕಾಂಗಿ ಹೋರಾಟ ನಡೆಸಿದ ಅವರು​ 249 ರನ್​ ಬಾರಿಸಿ ಕುಸಿಯುತ್ತಿದ್ದ ತಂಡಕ್ಕೆ ಆಸರೆಯಾದರು. ಕರ್ನಾಟಕ ಮೊದಲ ಇನಿಂಗ್ಸ್​ನಲ್ಲಿ 133.3 ಓವರ್​ಗಳಲ್ಲಿ ತನ್ನೆಲ್ಲಾ ವಿಕೆಟ್​ ಕಳೆದುಕೊಂಡು 407 ರನ್​ ಗಳಿಸಿತು.

ಮೊದಲ ದಿನದಾಟದಲ್ಲಿ 110 ರನ್​ ಕಲೆ ಹಾಕಿದ್ದ ಮಯಾಂಕ್​ ಎರಡನೇ ದಿನದಾಟದಲ್ಲೂ ಸೌರಾಷ್ಟ್ರ ಬೌಲರ್​ಗಳನ್ನು ದಂಡಿಸಿದರು. ವಿಕೆಟ್​ ಕೀಪರ್​ ಶರತ್​​ ಶ್ರೀನಿವಾಸ್​ ನಾಯಕನಿಗೆ ಸಾಥ್​ ನೀಡಿದರು. ಇಬ್ಬರೂ ಸೇರಿ 139 ರನ್​ಗಳ ಜೊತೆಯಾಟ ಕಟ್ಟಿದರು. ಅರ್ಧಶತಕ ಗಳಿಸಿ ಆಡುತ್ತಿದ್ದ ಶರತ್​(66) ಸಕಾರಿಯಾ ಎಸೆತದಲ್ಲಿ ವಿಕೆಟ್ ಒಪ್ಪಿಸಿದರು. ಬಳಿಕ ತಂಡ ಮತ್ತೆ ಕುಸಿತ ಕಂಡಿತು.

ಒಂದೆಡೆ ತಂಡದ ಆಟಗಾರರು ಸತತವಾಗಿ ವಿಕೆಟ್​ ಕಳೆದುಕೊಳ್ಳುತ್ತಾ ಸಾಗಿದರೆ ನೆಲಕಚ್ಚಿ ಆಡಿದ ಮಯಾಂಕ್​ 249 ರನ್​ ಸಿಡಿಸಿದರು. ಇದಕ್ಕವರು ತೆಗೆದುಕೊಂಡ ಎಸೆತಗಳ ಸಂಖ್ಯೆ 429. ಅಬ್ಬರದ ಬ್ಯಾಟ್ ಬೀಸದೇ ಒಂದೊಂದೇ ರನ್​ ಕಲೆ ಹಾಕಿದ ಮಯಾಂಕ್​ ನಾಯಕನ ಆಟವಾಡಿದರು. ಇವರ ಇನಿಂಗ್ಸ್​ನಲ್ಲಿ 28 ಬೌಂಡರಿ ಮತ್ತು 6 ಸಿಕ್ಸರ್​ಗಳಿದ್ದವು.

ಆರಂಭಿಕ ಆಟಗಾರ ಸಮರ್ಥ್‌ 3, ದೇವದತ್ತ್ ಪಡಿಕ್ಕಲ್​ 9, ನಿಕಿನ್​ ಜೋಶ್​ 18, ಮನೀಶ್​ ಪಾಂಡೆ 7, ಶ್ರೇಯಸ್​ ಗೋಪಾಲ್ 15, ಕೆ.ಗೌತಮ್​ 2, ವಿಜಯ್​ಕುಮಾರ್​ ವ್ಯಾಸಕ್​ 6, ವಿದ್ವತ್​ ಕಾವೇರಪ್ಪ 15 ರನ್​ ಗಳಿಸಿ ವೈಫಲ್ಯ ಅನುಭವಿಸಿದರು. ಕೊನೆಯಲ್ಲಿ ವಿ.ಕೌಶಿಕ್​ ಔಟಾಗದೇ ಉಳಿದರು.

ಮಯಾಂಕ್​ಗೆ ಶರತ್​ ಸಾಥ್​: ಮಯಾಂಕ್​ ಅಗರ್​ವಾಲ್​ ನಿಧಾನವಾಗಿ ರನ್​ ಪೇರಿಸುತ್ತಿದ್ದರೆ ವಿಕೆಟ್​ ಕೀಪರ್​​ ಶರತ್​ ಶ್ರೀನಿವಾಸ್​ ಮತ್ತೊಂದು ತುದಿಯಲ್ಲಿ ಇನಿಂಗ್ಸ್​ ಕಟ್ಟಿದರು. ತಂಡ ಸತತವಾಗಿ ವಿಕೆಟ್​ ಕಳೆದುಕೊಳ್ಳುತ್ತಿದ್ದುದನ್ನು ಅವರು ತಪ್ಪಿಸಿದರು. 153 ಎಸೆತಗಳಲ್ಲಿ 66 ರನ್​ ಗಳಿಸಿದ ಶರತ್​ 4 ಬೌಂಡರಿ ಗಳಿಸಿದರು. ತಾಳ್ಮೆಯ ಆಟವಾಡಿದ ಇಬ್ಬರೂ ಆಟಗಾರರು ಶತಕದ ಜೊತೆಯಾಟವಾಡಿದರು. ಶರತ್​ ಔಟಾದ ಬಳಿಕ ಉಳಿದ ಬ್ಯಾಟರ್​ಗಳಿಂದ ಉತ್ತಮ ಬ್ಯಾಟಿಂಗ್​ ಮೂಡದ ಕಾರಣ ಮಯಾಂಕ್​ ಅಗರ್​ವಾಲ್​ ಮತ್ತೆ ಒತ್ತಡಕ್ಕೆ ಸಿಲುಕಿದರು.

ಕೊನೆಯಲ್ಲಿ ತಾವೇ ಭರ್ಜರಿ ಬ್ಯಾಟ್​ ಬೀಸಿದರು. ರನ್​ ಗಳಿಸುವ ಆತುರದಲ್ಲಿ ರನೌಟ್​ಗೆ ಬಲಿಯಾದರು. ಈ ಮೂಲಕ ಕರ್ನಾಟಕದ ಇನಿಂಗ್ಸ್​ 407 ರನ್​ಗೆ ತೆರೆಬಿತ್ತು. 407 ರನ್​ಗಳ ಗುರಿ ಬೆನ್ನಟ್ಟಿರುವ ಸೌರಾಷ್ಟ್ರ ತಂಡ ಮೊದಲ ಇನಿಂಗ್ಸ್​ ಆರಂಭಿಸಿದೆ. ಸೌರಾಷ್ಟ್ರ ಪರವಾಗಿ ಚೇತನ್​ ಸಕಾರಿಯಾ, ಕೆ.ಪಟೇಲ್​ ತಲಾ 3, ಚಿರಾಗ್​ ಜಾನಿ, ಪ್ರೇರಕ್​ ಮಂಕಡ್​ ತಲಾ 1 ವಿಕೆಟ್​ ಪಡೆದರು.

ಇದನ್ನೂ ಓದಿ: ಬಾರ್ಡರ್ - ಗವಾಸ್ಕರ್ ಟ್ರೋಫಿ: ಆಸ್ಟ್ರೇಲಿಯಾ ತಂಡಕ್ಕೆ ಆರಂಭದಲ್ಲೇ ಶಾಕ್​ ನೀಡಿದ ಟೀಂ ಇಂಡಿಯಾ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.