ETV Bharat / sports

’ದಾದಾ'ಗಿರಿ ಆರಂಭವಾಗಿ ಇಂದಿಗೆ 18 ವರ್ಷ: ಮರೆಯಾಗದ ಕೈಫ್​ ಆಟ, ಗಂಗೂಲಿ ಆರ್ಭಟ

18 ವರ್ಷಗಳ ಹಿಂದೆ, ಜುಲೈ 13 2002ರಲ್ಲಿ ಗಂಗೂಲಿ ನೇತೃತ್ವದ ಭಾರತ ತಂಡ ಐತಿಹಾಸಿಕ ನಾಟ್​ವೆಸ್ಟ್​ ಸರಣಿ ಗೆದ್ದು ಲಾರ್ಡ್ಸ್​ ಮೈದಾನದಲ್ಲಿ ಸಂಭ್ರಮಿಸಿತ್ತು. ಕೊಹ್ಲಿ, ಯುವರಾಜ್​ ಆಟ ಭಾರತೀಯರ ಮನಗೆದ್ದಿತ್ತು. ಇಂಗ್ಲೆಂಡ್​ ನೆಲದಲ್ಲಿ ಪ್ರಶಸ್ತಿ ಎತ್ತಿ ಹಿಡಿದಿದ್ದ ಬಂಗಾಳದ ಹುಲಿ ಜರ್ಸಿ ಬಿಚ್ಚಿ ಸಂಭ್ರಮಿಸುವ ಮೂಲಕ ಇಂಗ್ಲೆಂಡ್​ ವಿರುದ್ಧ ಸೇಡು ತೀರಿಸಿ ಕೊಂಡಿದ್ದರು.

author img

By

Published : Jul 13, 2020, 1:13 PM IST

Updated : Jul 13, 2021, 4:56 PM IST

Natwest   final vs England
ಕ್ರಿಕೆಟ್​ನಲ್ಲಿ ದಾದಾ'ಗಿರಿಗೆ ಆರಂಭವಾಗಿ ಇಂದಿಗೆ 18 ವರ್ಷ

ಮುಂಬೈ: ಜುಲೈ 13 ಭಾರತ ಕ್ರಿಕೆಟ್​​ ಇತಿಹಾಸದಲ್ಲಿ ಅಭಿಮಾನಿಗಳು ಎಂದೂ ಮರೆಯಲಾಗದ ದಿನ. ಭಾರತದಲ್ಲಿ ಕ್ರಿಕೆಟ್​ ನೆಲೆ ನಿಲ್ಲುವಂತೆ ಮಾಡಿದ್ದ ಆ ಪಂದ್ಯ, ಲಾರ್ಡ್ಸ್​ ಮೈದಾನದಲ್ಲಿ ಗಂಗೂಲಿ ಜರ್ಸಿ ಬಿಚ್ಚಿ ಕುಣಿದಾಡಿದ್ದ ದಿನ, ಒಟ್ಟಿನಲ್ಲಿ ಭಾರತ ಕ್ರಿಕೆಟ್ ಬದಲಾದ ದಿನವಿದು.

ಹೌದು ಇಂದಿಗೆ 18 ವರ್ಷಗಳ ಹಿಂದೆ, ಜುಲೈ 13 2002ರಲ್ಲಿ ಗಂಗೂಲಿ ನೇತೃತ್ವದ ಭಾರತ ತಂಡ ಐತಿಹಾಸಿಕ ನಾಟ್​ವೆಸ್ಟ್​ ಸರಣಿ ಗೆದ್ದು ಲಾರ್ಡ್ಸ್​ ಮೈದಾನದಲ್ಲಿ ಸಂಭ್ರಮಿಸಿತ್ತು. ಕೈಫ್, ಯುವರಾಜ್​ ಆಟ ಭಾರತೀಯರ ಮನಗೆದ್ದಿತ್ತು. ಇಂಗ್ಲೆಂಡ್​ ನೆಲದಲ್ಲಿ ಪ್ರಶಸ್ತಿ ಎತ್ತಿ ಹಿಡಿದಿದ್ದ ಬಂಗಾಳದ ಹುಲಿ ಜರ್ಸಿ ಬಿಚ್ಚಿ ಸಂಭ್ರಮಿಸುವ ಮೂಲಕ ಇಂಗ್ಲೆಂಡ್​ ವಿರುದ್ಧ ಸೇಡು ತೀರಿಸಿಕೊಂಡಿದ್ದರು.

ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್​ ಮಾಡಿದ್ದ ಇಂಗ್ಲೆಂಡ್​ ತಂಡ ಟ್ರೆಸ್ಕೋತಿಕ್(109) ಹಾಗೂ ನಾಸಿರ್​ ಹುಸೇನ್​(115) ಶತಕಗಳ ನೆರವಿನಿಂದ​ ಭಾರತಕ್ಕೆ 326 ರನ್​ಗಳ ಟಾರ್ಗೆಟ್​ ನೀಡಿತ್ತು. ಈ ಮೊತ್ತವನ್ನು ಬೆನ್ನಟ್ಟಿದ್ದ ಭಾರತ ತಂಡ 8 ವಿಕೆಟ್​ ಕಳೆದುಕೊಂಡು 49.3 ಓವರ್​ಗಳಲ್ಲಿ ಗುರಿ ತಲುಪಿ ಇತಿಹಾಸ ನಿರ್ಮಿಸಿತ್ತು.

Natwest   final vs England
ಸೌರವ್​ ಗಂಗೂಲಿ

326 ರನ್​ಗಳ ಟಾರ್ಗೆಟ್​ ಪಡೆದಿದ್ದ ಭಾರತ ತಂಡ ಮೊದಲ ವಿಕೆಟ್​ಗೆ 106 ರನ್​ಗಳ ಜೊತೆಯಾಟ ನೀಡಿತ್ತು. ಗಂಗೂಲಿ 43 ಎಸೆತಗಳಲ್ಲಿ 60 ರನ್​ಗಳಿಸಿ ಭರ್ಜರಿ ಆರಂಭ ನೀಡಿದ್ದರು. ಆದರೆ, ನಂತರ ಇಂಗ್ಲೆಂಡ್ ಬೌಲಿಂಗ್​ ದಾಳಿಗೆ ದಿಢೀರ್​ ಕುಸಿತ ಕಂಡ ಟೀಮ್​ ಇಂಡಿಯಾ 146 ರನ್​ಗಳಾಗುವಷ್ಟರಲ್ಲಿ 5 ವಿಕೆಟ್​ ಕಳೆದುಕೊಂಡಿತು ಸೋಲಿನತ್ತ ಮುಖ ಮಾಡಿತ್ತು.

Natwest   final vs England
ಸೌರವ್​ ಗಂಗೂಲಿ

ಆದರೆ, 6ನೇ ವಿಕೆಟ್​ ಜೊತೆಯಾಟದಲ್ಲಿ ಒಂದಾದ ಮೊಹಮ್ಮದ್​ ಕೈಫ್ ​(ಔಟಾಗದೇ 87) ಹಾಗೂ ಯುವರಾಜ್​(69) 121 ರನ್​ಗಳ ಜೊತೆಯಾಟ ನಡೆಸಿ ಭಾರತದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಅದರಲ್ಲೂ ಕೊನೆಯವರೆಗೂ ಹೋರಾಡಿದ್ದ ಕೈಫ್​ 75 ಎಸೆತಗಳಲ್ಲಿ 2 ಸಿಕ್ಸರ್​ ಹಾಗೂ 6 ಬೌಂಡರಿಗಳ ನೆರವಿನಿಂದ 87 ರನ್​ಗಳಿಸಿ ಭಾರತಕ್ಕೆ ಟ್ರೋಫಿ ತಂದು ಕೊಟ್ಟಿದ್ದರು.

ಈ ಪಂದ್ಯ ಕೇವಲ ಪ್ರಶಸ್ತಿಯನ್ನು ಮಾತ್ರ ತಂದು ಕೊಡಲಿಲ್ಲ. ಮ್ಯಾಚ್​ ಫಿಕ್ಸಿಂಗ್​ನಿಂದ ಕ್ರಿಕೆಟ್​ ನೋಡುವುದನ್ನೇ ಬಿಟ್ಟಿದ್ದ ಭಾರತೀಯರನ್ನು ಮತ್ತೆ ಮೈದಾನಕ್ಕೆ ಬರುವಂತೆ ಮಾಡಿತು. ಏಕದಿನ ಕ್ರಿಕೆಟ್​ನಲ್ಲಿ ಭಾರತ ತಂಡ ಅಗ್ರ ರಾಷ್ಟ್ರಗಳ ಪಟ್ಟಿಗೆ ಸೇರಿತು. ವಿಶ್ವಕ್ರಿಕೆಟ್​ನಲ್ಲಿ 'ದಾದಾ'ಗಿರಿಗೆ ನಾಂದಿ ಹಾಡಿಸಿತ್ತು. ಈ ಸರಣಿಯ ನಂತರ ಭಾರತ ತಂಡ ದೇಶ ವಿದೇಶಗಳಲ್ಲಿ ದಿಗ್ವಿಜಯ ಸಾಧಿಸಿತು. 2003ರ ವಿಶ್ವಕಪ್​ ಟೂರ್ನಿಗೆ ಭಾರತೀಯ ಆಟಗಾರರಲ್ಲಿ ಆತ್ಮವಿಶ್ವಾಸ ಹೆಚ್ಚಾಗಲು ನೆರವಾಯಿತು.

ಮುಂಬೈ: ಜುಲೈ 13 ಭಾರತ ಕ್ರಿಕೆಟ್​​ ಇತಿಹಾಸದಲ್ಲಿ ಅಭಿಮಾನಿಗಳು ಎಂದೂ ಮರೆಯಲಾಗದ ದಿನ. ಭಾರತದಲ್ಲಿ ಕ್ರಿಕೆಟ್​ ನೆಲೆ ನಿಲ್ಲುವಂತೆ ಮಾಡಿದ್ದ ಆ ಪಂದ್ಯ, ಲಾರ್ಡ್ಸ್​ ಮೈದಾನದಲ್ಲಿ ಗಂಗೂಲಿ ಜರ್ಸಿ ಬಿಚ್ಚಿ ಕುಣಿದಾಡಿದ್ದ ದಿನ, ಒಟ್ಟಿನಲ್ಲಿ ಭಾರತ ಕ್ರಿಕೆಟ್ ಬದಲಾದ ದಿನವಿದು.

ಹೌದು ಇಂದಿಗೆ 18 ವರ್ಷಗಳ ಹಿಂದೆ, ಜುಲೈ 13 2002ರಲ್ಲಿ ಗಂಗೂಲಿ ನೇತೃತ್ವದ ಭಾರತ ತಂಡ ಐತಿಹಾಸಿಕ ನಾಟ್​ವೆಸ್ಟ್​ ಸರಣಿ ಗೆದ್ದು ಲಾರ್ಡ್ಸ್​ ಮೈದಾನದಲ್ಲಿ ಸಂಭ್ರಮಿಸಿತ್ತು. ಕೈಫ್, ಯುವರಾಜ್​ ಆಟ ಭಾರತೀಯರ ಮನಗೆದ್ದಿತ್ತು. ಇಂಗ್ಲೆಂಡ್​ ನೆಲದಲ್ಲಿ ಪ್ರಶಸ್ತಿ ಎತ್ತಿ ಹಿಡಿದಿದ್ದ ಬಂಗಾಳದ ಹುಲಿ ಜರ್ಸಿ ಬಿಚ್ಚಿ ಸಂಭ್ರಮಿಸುವ ಮೂಲಕ ಇಂಗ್ಲೆಂಡ್​ ವಿರುದ್ಧ ಸೇಡು ತೀರಿಸಿಕೊಂಡಿದ್ದರು.

ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್​ ಮಾಡಿದ್ದ ಇಂಗ್ಲೆಂಡ್​ ತಂಡ ಟ್ರೆಸ್ಕೋತಿಕ್(109) ಹಾಗೂ ನಾಸಿರ್​ ಹುಸೇನ್​(115) ಶತಕಗಳ ನೆರವಿನಿಂದ​ ಭಾರತಕ್ಕೆ 326 ರನ್​ಗಳ ಟಾರ್ಗೆಟ್​ ನೀಡಿತ್ತು. ಈ ಮೊತ್ತವನ್ನು ಬೆನ್ನಟ್ಟಿದ್ದ ಭಾರತ ತಂಡ 8 ವಿಕೆಟ್​ ಕಳೆದುಕೊಂಡು 49.3 ಓವರ್​ಗಳಲ್ಲಿ ಗುರಿ ತಲುಪಿ ಇತಿಹಾಸ ನಿರ್ಮಿಸಿತ್ತು.

Natwest   final vs England
ಸೌರವ್​ ಗಂಗೂಲಿ

326 ರನ್​ಗಳ ಟಾರ್ಗೆಟ್​ ಪಡೆದಿದ್ದ ಭಾರತ ತಂಡ ಮೊದಲ ವಿಕೆಟ್​ಗೆ 106 ರನ್​ಗಳ ಜೊತೆಯಾಟ ನೀಡಿತ್ತು. ಗಂಗೂಲಿ 43 ಎಸೆತಗಳಲ್ಲಿ 60 ರನ್​ಗಳಿಸಿ ಭರ್ಜರಿ ಆರಂಭ ನೀಡಿದ್ದರು. ಆದರೆ, ನಂತರ ಇಂಗ್ಲೆಂಡ್ ಬೌಲಿಂಗ್​ ದಾಳಿಗೆ ದಿಢೀರ್​ ಕುಸಿತ ಕಂಡ ಟೀಮ್​ ಇಂಡಿಯಾ 146 ರನ್​ಗಳಾಗುವಷ್ಟರಲ್ಲಿ 5 ವಿಕೆಟ್​ ಕಳೆದುಕೊಂಡಿತು ಸೋಲಿನತ್ತ ಮುಖ ಮಾಡಿತ್ತು.

Natwest   final vs England
ಸೌರವ್​ ಗಂಗೂಲಿ

ಆದರೆ, 6ನೇ ವಿಕೆಟ್​ ಜೊತೆಯಾಟದಲ್ಲಿ ಒಂದಾದ ಮೊಹಮ್ಮದ್​ ಕೈಫ್ ​(ಔಟಾಗದೇ 87) ಹಾಗೂ ಯುವರಾಜ್​(69) 121 ರನ್​ಗಳ ಜೊತೆಯಾಟ ನಡೆಸಿ ಭಾರತದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಅದರಲ್ಲೂ ಕೊನೆಯವರೆಗೂ ಹೋರಾಡಿದ್ದ ಕೈಫ್​ 75 ಎಸೆತಗಳಲ್ಲಿ 2 ಸಿಕ್ಸರ್​ ಹಾಗೂ 6 ಬೌಂಡರಿಗಳ ನೆರವಿನಿಂದ 87 ರನ್​ಗಳಿಸಿ ಭಾರತಕ್ಕೆ ಟ್ರೋಫಿ ತಂದು ಕೊಟ್ಟಿದ್ದರು.

ಈ ಪಂದ್ಯ ಕೇವಲ ಪ್ರಶಸ್ತಿಯನ್ನು ಮಾತ್ರ ತಂದು ಕೊಡಲಿಲ್ಲ. ಮ್ಯಾಚ್​ ಫಿಕ್ಸಿಂಗ್​ನಿಂದ ಕ್ರಿಕೆಟ್​ ನೋಡುವುದನ್ನೇ ಬಿಟ್ಟಿದ್ದ ಭಾರತೀಯರನ್ನು ಮತ್ತೆ ಮೈದಾನಕ್ಕೆ ಬರುವಂತೆ ಮಾಡಿತು. ಏಕದಿನ ಕ್ರಿಕೆಟ್​ನಲ್ಲಿ ಭಾರತ ತಂಡ ಅಗ್ರ ರಾಷ್ಟ್ರಗಳ ಪಟ್ಟಿಗೆ ಸೇರಿತು. ವಿಶ್ವಕ್ರಿಕೆಟ್​ನಲ್ಲಿ 'ದಾದಾ'ಗಿರಿಗೆ ನಾಂದಿ ಹಾಡಿಸಿತ್ತು. ಈ ಸರಣಿಯ ನಂತರ ಭಾರತ ತಂಡ ದೇಶ ವಿದೇಶಗಳಲ್ಲಿ ದಿಗ್ವಿಜಯ ಸಾಧಿಸಿತು. 2003ರ ವಿಶ್ವಕಪ್​ ಟೂರ್ನಿಗೆ ಭಾರತೀಯ ಆಟಗಾರರಲ್ಲಿ ಆತ್ಮವಿಶ್ವಾಸ ಹೆಚ್ಚಾಗಲು ನೆರವಾಯಿತು.

Last Updated : Jul 13, 2021, 4:56 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.