ETV Bharat / sports

ಸೋಲಿಗೆ ನನ್ನ ಮಂದಗತಿಯ ಬ್ಯಾಟಿಂಗ್ ಕಾರಣ ಎಂದು ತನ್ನನ್ನು ತಾನೇ ದೂಷಿಸಿಕೊಂಡ ವಾರ್ನರ್​!​

author img

By

Published : Apr 29, 2021, 4:04 PM IST

ನವದೆಹಲಿಯ ಅರುಣ್​ ಜೇಟ್ಲಿ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಹೈದರಾಬಾದ್ 20 ಓವರ್​ಗಳಲ್ಲಿ 3 ವಿಕೆಟ್​ ಕಳೆದುಕೊಂಡು 171 ರನ್ ​ಗಳಿಸಿತ್ತು. ವಾರ್ನರ್​ 55 ಎಸೆತಗಳನ್ನಾಡಿ ಕೇವಲ 57 ರನ್​ಗಳಿಸಿದ್ದರು. ಮನೀಶ್ ಪಾಂಡೆ 61 ಮತ್ತು ಕೇನ್ ವಿಲಿಯಮ್ಸನ್ 10 ಎಸೆತಗಳಲ್ಲಿ 26 ರನ್ ​ಗಳಿಸಿದ್ದರು. ಆದರೆ ಸಿಎಸ್​ಕೆ ಕೇವಲ 3 ವಿಕೆಟ್ ಕಳೆದುಕೊಂಡು ಗುರಿ ತಲುಪಿತು.

ಡೇವಿಡ್ ವಾರ್ನರ್
ಡೇವಿಡ್ ವಾರ್ನರ್

ನವದೆಹಲಿ: ಬುಧವಾರ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ನನ್ನ ಮಂದಗತಿಯ ಬ್ಯಾಟಿಂಗ್​ನಿಂದಲೇ ಹೈದರಾಬಾದ್​ ತಂಡಕ್ಕೆ ಸೋಲುಂಟಾಯಿತು. ಇದರ ಸಂಪೂರ್ಣ ಹೊಣೆಯನ್ನು ನಾನು ಹೊರುತ್ತೇನೆ ಎಂದು ನಾಯಕ ಡೇವಿಡ್ ವಾರ್ನರ್​ ಹೇಳಿದ್ದಾರೆ.

ನವದೆಹಲಿಯ ಅರುಣ್​ ಜೇಟ್ಲಿ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಹೈದರಾಬಾದ್ 20 ಓವರ್​ಗಳಲ್ಲಿ 3 ವಿಕೆಟ್​ ಕಳೆದುಕೊಂಡು 171 ರನ್ ​ಗಳಿಸಿತ್ತು. ವಾರ್ನರ್​ 55 ಎಸೆತಗಳನ್ನಾಡಿ ಕೇವಲ 57 ರನ್​ ಗಳಿಸಿದ್ದರು. ಮನೀಶ್ ಪಾಂಡೆ 61 ಮತ್ತು ಕೇನ್ ವಿಲಿಯಮ್ಸನ್ 10 ಎಸೆತಗಳಲ್ಲಿ 26 ರನ್​ ಗಳಿಸಿದ್ದರು. ಆದರೆ ಸಿಎಸ್​ಕೆ ಕೇವಲ 3 ವಿಕೆಟ್ ಕಳೆದುಕೊಂಡು ಗುರಿ ತಲುಪಿತು.

ಪಂದ್ಯದ ನಂತರ ಡೇವಿಡ್ ವಾರ್ನರ್ ಮಾತನಾಡಿ, "ನಾನು ಬ್ಯಾಟಿಂಗ್‌ ಮಾಡಿದ ರೀತಿಯಿಂದಾಗಿ ಈ ಸೋಲಿನ ಸಂಪೂರ್ಣ ಹೊಣೆ ಹೊರುತ್ತೇನೆ. ನಿಜಕ್ಕೂ ಇದು ಬಹಳ ನಿಧಾನತಿಯ ಬ್ಯಾಟಿಂಗ್‌ ಆಗಿತ್ತು. ನಾನು ಹೊಡೆದ ಶಾಟ್​ಗಳೆಲ್ಲಾ ಫೀಲ್ಡರ್‌ ಇದ್ದ ಜಾಗಕ್ಕೆ ಸೇರುತ್ತಿದ್ದವು. ಇದರಿಂದ ನನಗೆ ತುಂಬಾ ನಿರಾಶೆಯಾಗಿದೆ. ಮನೀಶ್ ಬ್ಯಾಟಿಂಗ್ ಮಾಡಿದ ರೀತಿ ಅದ್ಭುತವಾಗಿತ್ತು. ಕೊನೆಯಲ್ಲಿ ಕೇನ್‌ ಬಿರುಸಿನ ಆಟವಾಡಿ ತಂಡಕ್ಕೆ ಗೌರವಯುತ ಮೊತ್ತ ತಂದುಕೊಟ್ಟರು. ಆದರೆ ಉತ್ತಮ ಮೊತ್ತ ದಾಖಲಿಸಲು ಸಾಧ್ಯವಾಗದಿದ್ದಕ್ಕೆ ನಾನೇ ಕಾರಣ. ಇದರ ಹೊಣೆ ನಾನೇ ಹೊರುತ್ತೇನೆ" ಎಂದು ಹೇಳಿದ್ದಾರೆ.

ಬಹುಶಃ ನನ್ನ 15 ಅತ್ಯುತ್ತಮ ಹೊಡೆತಗಳು ಫೀಲ್ಡರ್‌ಗಳ ಕೈ ಸೇರಿದವು. ಈ ಸಂದರ್ಭದಲ್ಲಿ ನನ್ನಿಂದ ಹೆಚ್ಚೇನೂ ಮಾಡಲು ಸಾಧ್ಯವಾಗಲಿಲ್ಲ. ಪ್ರತಿ ಹೊಡೆತಗಳೂ ಫೀಲ್ಡರ್‌ ಕೈ ಸೇರಿದಾಗ ಬ್ಯಾಟ್ಸ್‌ಮನ್‌ಗೆ ನಿರಾಶೆ ಮೂಡುತ್ತದೆ.

ಆದರೆ ಕೇನ್ ಕಳೆದ ಪಂದ್ಯದಲ್ಲಿ 3ನೇ ಕ್ರಮಾಂಕದಲ್ಲಿ ಉತ್ತಮವಾಗಿ ಆಡುದ್ದರು. ಈಗ 4ನೇ ಕ್ರಮಾಂಕದಲ್ಲೂ ನ್ಯಾಯ ಒದಗಿಸಿಕೊಟ್ಟಿದ್ದಾರೆ. ನಾನು ಹೆಚ್ಚಿನ ಎಸೆತಗಳನ್ನು ಎದುರಿಸಿದ್ದರಿಂದ ಪಂದ್ಯದಲ್ಲಿ ಗೆಲುವಿಗೆ ಬೇಕಾದ ಅಗತ್ಯ ಮೊತ್ತ ಗಳಿಸಲು ಸಾಧ್ಯವಾಗಲಿಲ್ಲ. ಇದು ಉತ್ತಮ ಬ್ಯಾಟಿಂಗ್ ಪಿಚ್​ ಆಗಿದ್ದು, ಮುಂದಿನ ಪಂದ್ಯಗಳಲ್ಲಿ ಉತ್ತಮವಾಗಿ ಆಡಲಿದ್ದೇವೆ ಎಂದು ಅವರು ಹೇಳಿದ್ದಾರೆ.

ಇದನ್ನು ಓದಿ:ಐಪಿಎಲ್​ ಇತಿಹಾಸದಲ್ಲಿ ವಾರ್ನರ್ ಹೊಸ ದಾಖಲೆ... ಈ ಸಾಧನೆ ಮಾಡಿದ ಮೊದಲ ಪ್ಲೇಯರ್​​

ನವದೆಹಲಿ: ಬುಧವಾರ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ನನ್ನ ಮಂದಗತಿಯ ಬ್ಯಾಟಿಂಗ್​ನಿಂದಲೇ ಹೈದರಾಬಾದ್​ ತಂಡಕ್ಕೆ ಸೋಲುಂಟಾಯಿತು. ಇದರ ಸಂಪೂರ್ಣ ಹೊಣೆಯನ್ನು ನಾನು ಹೊರುತ್ತೇನೆ ಎಂದು ನಾಯಕ ಡೇವಿಡ್ ವಾರ್ನರ್​ ಹೇಳಿದ್ದಾರೆ.

ನವದೆಹಲಿಯ ಅರುಣ್​ ಜೇಟ್ಲಿ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಹೈದರಾಬಾದ್ 20 ಓವರ್​ಗಳಲ್ಲಿ 3 ವಿಕೆಟ್​ ಕಳೆದುಕೊಂಡು 171 ರನ್ ​ಗಳಿಸಿತ್ತು. ವಾರ್ನರ್​ 55 ಎಸೆತಗಳನ್ನಾಡಿ ಕೇವಲ 57 ರನ್​ ಗಳಿಸಿದ್ದರು. ಮನೀಶ್ ಪಾಂಡೆ 61 ಮತ್ತು ಕೇನ್ ವಿಲಿಯಮ್ಸನ್ 10 ಎಸೆತಗಳಲ್ಲಿ 26 ರನ್​ ಗಳಿಸಿದ್ದರು. ಆದರೆ ಸಿಎಸ್​ಕೆ ಕೇವಲ 3 ವಿಕೆಟ್ ಕಳೆದುಕೊಂಡು ಗುರಿ ತಲುಪಿತು.

ಪಂದ್ಯದ ನಂತರ ಡೇವಿಡ್ ವಾರ್ನರ್ ಮಾತನಾಡಿ, "ನಾನು ಬ್ಯಾಟಿಂಗ್‌ ಮಾಡಿದ ರೀತಿಯಿಂದಾಗಿ ಈ ಸೋಲಿನ ಸಂಪೂರ್ಣ ಹೊಣೆ ಹೊರುತ್ತೇನೆ. ನಿಜಕ್ಕೂ ಇದು ಬಹಳ ನಿಧಾನತಿಯ ಬ್ಯಾಟಿಂಗ್‌ ಆಗಿತ್ತು. ನಾನು ಹೊಡೆದ ಶಾಟ್​ಗಳೆಲ್ಲಾ ಫೀಲ್ಡರ್‌ ಇದ್ದ ಜಾಗಕ್ಕೆ ಸೇರುತ್ತಿದ್ದವು. ಇದರಿಂದ ನನಗೆ ತುಂಬಾ ನಿರಾಶೆಯಾಗಿದೆ. ಮನೀಶ್ ಬ್ಯಾಟಿಂಗ್ ಮಾಡಿದ ರೀತಿ ಅದ್ಭುತವಾಗಿತ್ತು. ಕೊನೆಯಲ್ಲಿ ಕೇನ್‌ ಬಿರುಸಿನ ಆಟವಾಡಿ ತಂಡಕ್ಕೆ ಗೌರವಯುತ ಮೊತ್ತ ತಂದುಕೊಟ್ಟರು. ಆದರೆ ಉತ್ತಮ ಮೊತ್ತ ದಾಖಲಿಸಲು ಸಾಧ್ಯವಾಗದಿದ್ದಕ್ಕೆ ನಾನೇ ಕಾರಣ. ಇದರ ಹೊಣೆ ನಾನೇ ಹೊರುತ್ತೇನೆ" ಎಂದು ಹೇಳಿದ್ದಾರೆ.

ಬಹುಶಃ ನನ್ನ 15 ಅತ್ಯುತ್ತಮ ಹೊಡೆತಗಳು ಫೀಲ್ಡರ್‌ಗಳ ಕೈ ಸೇರಿದವು. ಈ ಸಂದರ್ಭದಲ್ಲಿ ನನ್ನಿಂದ ಹೆಚ್ಚೇನೂ ಮಾಡಲು ಸಾಧ್ಯವಾಗಲಿಲ್ಲ. ಪ್ರತಿ ಹೊಡೆತಗಳೂ ಫೀಲ್ಡರ್‌ ಕೈ ಸೇರಿದಾಗ ಬ್ಯಾಟ್ಸ್‌ಮನ್‌ಗೆ ನಿರಾಶೆ ಮೂಡುತ್ತದೆ.

ಆದರೆ ಕೇನ್ ಕಳೆದ ಪಂದ್ಯದಲ್ಲಿ 3ನೇ ಕ್ರಮಾಂಕದಲ್ಲಿ ಉತ್ತಮವಾಗಿ ಆಡುದ್ದರು. ಈಗ 4ನೇ ಕ್ರಮಾಂಕದಲ್ಲೂ ನ್ಯಾಯ ಒದಗಿಸಿಕೊಟ್ಟಿದ್ದಾರೆ. ನಾನು ಹೆಚ್ಚಿನ ಎಸೆತಗಳನ್ನು ಎದುರಿಸಿದ್ದರಿಂದ ಪಂದ್ಯದಲ್ಲಿ ಗೆಲುವಿಗೆ ಬೇಕಾದ ಅಗತ್ಯ ಮೊತ್ತ ಗಳಿಸಲು ಸಾಧ್ಯವಾಗಲಿಲ್ಲ. ಇದು ಉತ್ತಮ ಬ್ಯಾಟಿಂಗ್ ಪಿಚ್​ ಆಗಿದ್ದು, ಮುಂದಿನ ಪಂದ್ಯಗಳಲ್ಲಿ ಉತ್ತಮವಾಗಿ ಆಡಲಿದ್ದೇವೆ ಎಂದು ಅವರು ಹೇಳಿದ್ದಾರೆ.

ಇದನ್ನು ಓದಿ:ಐಪಿಎಲ್​ ಇತಿಹಾಸದಲ್ಲಿ ವಾರ್ನರ್ ಹೊಸ ದಾಖಲೆ... ಈ ಸಾಧನೆ ಮಾಡಿದ ಮೊದಲ ಪ್ಲೇಯರ್​​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.