ETV Bharat / sports

ವಿರಾಟ್​​ ಕೊಹ್ಲಿ ಹೇಳಿಕೆಗೆ ವ್ಯಾಪಕ ಟೀಕೆ: ಬೆಂಬಲಕ್ಕೆ ನಿಂತ ಆರ್.​ಅಶ್ವಿನ್​

author img

By

Published : Jul 2, 2021, 7:12 PM IST

ಟೆಸ್ಟ್​ ಚಾಂಪಿಯನ್​ ಫೈನಲ್​ನಲ್ಲಿ ಟೀಂ ಇಂಡಿಯಾ ಸೋಲು ಕಾಣುತ್ತಿದ್ದಂತೆ ವಿರಾಟ್​ ಕೊಹ್ಲಿ ನೀಡಿದ್ದ ಹೇಳಿಕೆಯೊಂದು ಹೆಚ್ಚು ಟೀಕೆಗೆ ಗುರಿಯಾಗಿತ್ತು. ಈ ವಿಚಾರವಾಗಿ ಇದೀಗ ಅಶ್ವಿನ್​​ ಮಾತನಾಡಿದ್ದಾರೆ.

Ravichandran Ashwin
Ravichandran Ashwin

ಸೌತಾಂಪ್ಟನ್​​: ನ್ಯೂಜಿಲ್ಯಾಂಡ್​ ವಿರುದ್ಧದ ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ ಫೈನಲ್​​ನಲ್ಲಿ ಟೀಂ ಇಂಡಿಯಾ ಮುಗ್ಗರಿಸಿದ್ದು, ಕೇನ್​ ವಿಲಿಯಮ್ಸನ್​​ ನೇತೃತ್ವದ ಕಿವೀಸ್​ ಪಡೆ ಚಾಂಪಿಯನ್​​ ಆಗಿ ಹೊರಹೊಮ್ಮಿತ್ತು. ಇದಾದ ಬಳಿಕ ವಿರಾಟ್​​ ಕೊಹ್ಲಿ ನೀಡಿದ್ದ ಹೇಳಿಕೆಯೊಂದು ಭಾರೀ ಟೀಕೆಗೊಳಗಾಗಿತ್ತು. ಈ ವಿಚಾರಕ್ಕೆ ಸಂಬಂಧಿಸಿದಂತೆ ಆರ್​.ಅಶ್ವಿನ್​​​ ಸಮಜಾಯಿಷಿ ನೀಡಿದ್ದಾರೆ.

ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ ಫೈನಲ್​​ನಲ್ಲಿ ಮೂರು ಟೆಸ್ಟ್​ ಪಂದ್ಯಗಳಿರಬೇಕು ಎಂದು ಕೊಹ್ಲಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದರು. ಈ ಮಾತಿಗೆ ದನಿಗೂಡಿಸಿರುವ ಅಶ್ವಿನ್​​, ಕೊಹ್ಲಿ ಮೂರು ಟೆಸ್ಟ್​ ಪಂದ್ಯಗಳನ್ನಾಡಿಸುವಂತೆ ಬೇಡಿಕೆ ಇಟ್ಟಿಲ್ಲ. ಬದಲಾಗಿ ತಮ್ಮ ಅಭಿಪ್ರಾಯ ಹೊರಹಾಕಿ, ಮುಂದಿನ ಆವೃತ್ತಿ ಈ ರೀತಿಯಾಗಿರಬೇಕು ಎಂದು ಹೇಳಿದ್ದರು ಸಮರ್ಥಿಸಿಕೊಂಡಿದ್ದಾರೆ.

ಮಹತ್ವದ ಪಂದ್ಯದಲ್ಲಿ ಟೀಂ ಇಂಡಿಯಾ ಸೋಲು ಕಂಡಿರುವುದು ಅಭಿಮಾನಿಗಳಲ್ಲಿ ನಿರಾಸೆ ಮೂಡಿಸಿದೆ. ಆದರೆ ಬರುವ ದಿನಗಳಲ್ಲಿ ಟೀಂ ಇಂಡಿಯಾ ಐಸಿಸಿ ಪಂದ್ಯಾವಳಿಯ ಮತ್ತಷ್ಟು ಟೂರ್ನಿಗಳಲ್ಲಿ ಗೆಲುವು ಸಾಧಿಸುವ ಮೂಲಕ ಅವರ ಪ್ರೀತಿ ಗೆಲ್ಲುತ್ತೇವೆ ಎಂದಿದ್ದಾರೆ.

ಇದನ್ನೂ ಓದಿರಿ: Sri Lanka vs India: ಮೈದಾನಕ್ಕಿಳಿದು ಅಭ್ಯಾಸ ಆರಂಭಿಸಿದ ದ್ರಾವಿಡ್ ಹುಡುಗರು

ಫೈನಲ್‌ನಲ್ಲಿ ಸೋತಾಗ ಕ್ರೀಡಾಭಿಮಾನಿಗಳು ನಿರಾಸೆಗೊಳ್ತಾರೆ. ಲಕ್ಷಾಂತರ ಭಾರತೀಯರು ಒಳ್ಳೆಯ ಸುದ್ದಿಗಾಗಿ ಎದುರು ನೋಡುತ್ತಿರುತ್ತಾರೆ. ಆದರೆ ಅದು ಆಗಲಿಲ್ಲ. ನಾವು ಬೇರೆ ಐಸಿಸಿ ಪಂದ್ಯಾವಳಿಯನ್ನು ಗೆಲ್ಲುವುದನ್ನು ಆಶಿಸುತ್ತೇವೆ ಎಂದು ಅವರು ಹೇಳಿದರು.

ಆಗಸ್ಟ್​ 4ರಿಂದ ಟೀಂ ಇಂಡಿಯಾ ಇಂಗ್ಲೆಂಡ್​ ವಿರುದ್ಧದ ಟೆಸ್ಟ್​ ಸರಣಿಯಲ್ಲಿ ಭಾಗಿಯಾಗಲಿದ್ದು, ಉತ್ತಮ ಪ್ರದರ್ಶನ ನೀಡುವ ಸಾಧ್ಯತೆ ಇದೆ.

ಸೌತಾಂಪ್ಟನ್​​: ನ್ಯೂಜಿಲ್ಯಾಂಡ್​ ವಿರುದ್ಧದ ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ ಫೈನಲ್​​ನಲ್ಲಿ ಟೀಂ ಇಂಡಿಯಾ ಮುಗ್ಗರಿಸಿದ್ದು, ಕೇನ್​ ವಿಲಿಯಮ್ಸನ್​​ ನೇತೃತ್ವದ ಕಿವೀಸ್​ ಪಡೆ ಚಾಂಪಿಯನ್​​ ಆಗಿ ಹೊರಹೊಮ್ಮಿತ್ತು. ಇದಾದ ಬಳಿಕ ವಿರಾಟ್​​ ಕೊಹ್ಲಿ ನೀಡಿದ್ದ ಹೇಳಿಕೆಯೊಂದು ಭಾರೀ ಟೀಕೆಗೊಳಗಾಗಿತ್ತು. ಈ ವಿಚಾರಕ್ಕೆ ಸಂಬಂಧಿಸಿದಂತೆ ಆರ್​.ಅಶ್ವಿನ್​​​ ಸಮಜಾಯಿಷಿ ನೀಡಿದ್ದಾರೆ.

ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ ಫೈನಲ್​​ನಲ್ಲಿ ಮೂರು ಟೆಸ್ಟ್​ ಪಂದ್ಯಗಳಿರಬೇಕು ಎಂದು ಕೊಹ್ಲಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದರು. ಈ ಮಾತಿಗೆ ದನಿಗೂಡಿಸಿರುವ ಅಶ್ವಿನ್​​, ಕೊಹ್ಲಿ ಮೂರು ಟೆಸ್ಟ್​ ಪಂದ್ಯಗಳನ್ನಾಡಿಸುವಂತೆ ಬೇಡಿಕೆ ಇಟ್ಟಿಲ್ಲ. ಬದಲಾಗಿ ತಮ್ಮ ಅಭಿಪ್ರಾಯ ಹೊರಹಾಕಿ, ಮುಂದಿನ ಆವೃತ್ತಿ ಈ ರೀತಿಯಾಗಿರಬೇಕು ಎಂದು ಹೇಳಿದ್ದರು ಸಮರ್ಥಿಸಿಕೊಂಡಿದ್ದಾರೆ.

ಮಹತ್ವದ ಪಂದ್ಯದಲ್ಲಿ ಟೀಂ ಇಂಡಿಯಾ ಸೋಲು ಕಂಡಿರುವುದು ಅಭಿಮಾನಿಗಳಲ್ಲಿ ನಿರಾಸೆ ಮೂಡಿಸಿದೆ. ಆದರೆ ಬರುವ ದಿನಗಳಲ್ಲಿ ಟೀಂ ಇಂಡಿಯಾ ಐಸಿಸಿ ಪಂದ್ಯಾವಳಿಯ ಮತ್ತಷ್ಟು ಟೂರ್ನಿಗಳಲ್ಲಿ ಗೆಲುವು ಸಾಧಿಸುವ ಮೂಲಕ ಅವರ ಪ್ರೀತಿ ಗೆಲ್ಲುತ್ತೇವೆ ಎಂದಿದ್ದಾರೆ.

ಇದನ್ನೂ ಓದಿರಿ: Sri Lanka vs India: ಮೈದಾನಕ್ಕಿಳಿದು ಅಭ್ಯಾಸ ಆರಂಭಿಸಿದ ದ್ರಾವಿಡ್ ಹುಡುಗರು

ಫೈನಲ್‌ನಲ್ಲಿ ಸೋತಾಗ ಕ್ರೀಡಾಭಿಮಾನಿಗಳು ನಿರಾಸೆಗೊಳ್ತಾರೆ. ಲಕ್ಷಾಂತರ ಭಾರತೀಯರು ಒಳ್ಳೆಯ ಸುದ್ದಿಗಾಗಿ ಎದುರು ನೋಡುತ್ತಿರುತ್ತಾರೆ. ಆದರೆ ಅದು ಆಗಲಿಲ್ಲ. ನಾವು ಬೇರೆ ಐಸಿಸಿ ಪಂದ್ಯಾವಳಿಯನ್ನು ಗೆಲ್ಲುವುದನ್ನು ಆಶಿಸುತ್ತೇವೆ ಎಂದು ಅವರು ಹೇಳಿದರು.

ಆಗಸ್ಟ್​ 4ರಿಂದ ಟೀಂ ಇಂಡಿಯಾ ಇಂಗ್ಲೆಂಡ್​ ವಿರುದ್ಧದ ಟೆಸ್ಟ್​ ಸರಣಿಯಲ್ಲಿ ಭಾಗಿಯಾಗಲಿದ್ದು, ಉತ್ತಮ ಪ್ರದರ್ಶನ ನೀಡುವ ಸಾಧ್ಯತೆ ಇದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.