ETV Bharat / sports

ಇಶಾನ್ ಕಿಶನ್​​ ತಲೆಗೆ ಬಿದ್ದ ಚೆಂಡು.. ಆಸ್ಪತ್ರೆಗೆ ದಾಖಲು, ಬ್ರೈನ್​ ಸ್ಕ್ಯಾನ್‌ಗೆ ಒಳಗಾದ ಆಟಗಾರ - Ishan Kishan hospitalized

ಅಂತಿಮ ಪಂದ್ಯದಲ್ಲಿ ಇಶಾನ್​ ಕಿಶನ್​ರಿಗೆ ವಿಶ್ರಾಂತಿ ನೀಡಿ ಅವರ ಬದಲಾಗಿ ಮಯಾಂಕ್​ ಅಗರ್ವಾಲ್​ ಅಥವಾ ವೆಂಕಟೇಶ್​ ಅಯ್ಯರ್​ ಅವರಿಗೆ ಅವಕಾಶ ನೀಡುವ ಸಾಧ್ಯತೆ ಇದೆ. ಈ ಹಿಂದೆ ಆಸ್ಟ್ರೇಲಿಯಾದ ಆಟಗಾರ ಫಿಲ್​ ಹ್ಯೂಸ್​ಗೂ ಕೂಡ ಬೌನ್ಸರ್​ ಎಸೆತದಿಂದ ತಲೆಗೆ ಗಂಭೀರ ಪೆಟ್ಟು ಬಿದ್ದು ಮೃತಪಟ್ಟ ಕಹಿ ಘಟನೆ ನಡೆದಿತ್ತು..

Ishan Kishan
ಇಶಾನ್ ಕಿಶನ್
author img

By

Published : Feb 27, 2022, 11:28 AM IST

Updated : Feb 27, 2022, 2:42 PM IST

ಧರ್ಮಶಾಲಾ : ನಿನ್ನೆ ನಡೆದ ಶ್ರೀಲಂಕಾ ವಿರುದ್ಧದ 2ನೇ ಟಿ-20 ಪಂದ್ಯದಲ್ಲಿ ಭಾರತದ ವಿಕೆಟ್​ ಕೀಪರ್​ ಇಶಾನ್​ ಕಿಶಾನ್​ ತಲೆಗೆ ಚೆಂಡು ಬಡಿದು ಪೆಟ್ಟು ಬಿದ್ದ ಕಾರಣ ಅವರನ್ನು ತಕ್ಷಣವೇ ಇಲ್ಲಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಲ್ಲದೇ, ಕಿಶನ್​ರನ್ನು ಬ್ರೈನ್​ ಸ್ಕ್ಯಾನ್​ಗೆ ಒಳಪಡಿಸಲಾಗಿದೆ.

ಶ್ರೀಲಂಕಾದ ಬೌಲರ್​ ಲಹಿರು ಕುಮಾರ್​ ಎಸೆದ ಬೌನ್ಸರ್​ ಅನ್ನು ಗುರುತಿಸುವಲ್ಲಿ ವಿಫಲರಾದ ಇಶಾನ್​ ತಲೆಗೆ ಬಲವಾಗಿ ಬಡಿದಿದೆ. ಪೆಟ್ಟಿನಿಂದ ಇಶಾನ್​ ಕಿಶನ್ ಕೆಲ ಹೊತ್ತು ನರಳಾಡಿದ್ದಾರೆ.

ಈ ವೇಳೆ ಮೈದಾನದಲ್ಲಿ ಆತಂಕದ ವಾತಾವರಣ ಉಂಟಾಯಿತು. ಭಾರತದ ವೈದ್ಯಕೀಯ ತಂಡ ತಪಾಸಣೆ ನಡಸಿದ ಬಳಿಕ ಕಿಶನ್​ ಸುಧಾರಿಸಿಕೊಂಡು ಮತ್ತೆ ಬ್ಯಾಟಿಂಗ್​ಗೆ ಇಳಿದರು.

ಪಂದ್ಯ ಮುಗಿದ ಬಳಿಕ ಇಶಾನ್​ ಕಿಶನ್​ರನ್ನು ಮುನ್ನೆಚ್ಚರಿಕಾ ಕ್ರಮವಾಗಿ ಆಸ್ಪತ್ರೆಗೆ ದಾಖಲಿಸಿ, ಬ್ರೈನ್​ ಸ್ಕ್ಯಾನ್​ ಒಳಪಡಿಸಲಾಗಿದೆ. ಇಂದು ವರದಿ ಬರಲಿದೆ ಎಂದು ಬಿಸಿಸಿಐ ಅಧಿಕಾರಿಗಳು ತಿಳಿಸಿದ್ದಾರೆ.

ಅಲ್ಲದೇ, ಅಂತಿಮ ಪಂದ್ಯದಲ್ಲಿ ಇಶಾನ್​ ಕಿಶನ್​ರಿಗೆ ವಿಶ್ರಾಂತಿ ನೀಡಿ ಅವರ ಬದಲಾಗಿ ಮಯಾಂಕ್​ ಅಗರ್ವಾಲ್​ ಅಥವಾ ವೆಂಕಟೇಶ್​ ಅಯ್ಯರ್​ ಅವರಿಗೆ ಅವಕಾಶ ನೀಡುವ ಸಾಧ್ಯತೆ ಇದೆ. ಈ ಹಿಂದೆ ಆಸ್ಟ್ರೇಲಿಯಾದ ಆಟಗಾರ ಫಿಲ್​ ಹ್ಯೂಸ್​ಗೂ ಕೂಡ ಬೌನ್ಸರ್​ ಎಸೆತದಿಂದ ತಲೆಗೆ ಗಂಭೀರ ಪೆಟ್ಟು ಬಿದ್ದು ಮೃತಪಟ್ಟ ಕಹಿ ಘಟನೆ ನಡೆದಿತ್ತು.

ಸರಣಿಗೂ ಮುನ್ನ ಭಾರತದ ಬ್ಯಾಟರ್‌ಗಳಾದ ಋತುರಾಜ್ ಗಾಯಕ್‌ವಾಡ್ ಮತ್ತು ಸೂರ್ಯಕುಮಾರ್ ಯಾದವ್ ಮತ್ತು ವೇಗಿ ದೀಪಕ್ ಚಹರ್ ಗಾಯಗೊಂಡು ಸರಣಿಯಿಂದ ಹೊರಗುಳಿದಿದ್ದಾರೆ. ಭಾರತ ಮೂರು ಪಂದ್ಯಗಳ ಸರಣಿಯಲ್ಲಿ 2-0 ಅಂತರದಲ್ಲಿ ಸರಣಿ ಜಯಿಸಿದೆ.

ಓದಿ: 24 ವರ್ಷಗಳ ನಂತರ ಪಾಕಿಸ್ತಾನಕ್ಕೆ ಆಗಮಿಸಿದ ಆಸ್ಟ್ರೇಲಿಯಾ ಕ್ರಿಕೆಟ್‌ ಟೀಂ!

ಧರ್ಮಶಾಲಾ : ನಿನ್ನೆ ನಡೆದ ಶ್ರೀಲಂಕಾ ವಿರುದ್ಧದ 2ನೇ ಟಿ-20 ಪಂದ್ಯದಲ್ಲಿ ಭಾರತದ ವಿಕೆಟ್​ ಕೀಪರ್​ ಇಶಾನ್​ ಕಿಶಾನ್​ ತಲೆಗೆ ಚೆಂಡು ಬಡಿದು ಪೆಟ್ಟು ಬಿದ್ದ ಕಾರಣ ಅವರನ್ನು ತಕ್ಷಣವೇ ಇಲ್ಲಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಲ್ಲದೇ, ಕಿಶನ್​ರನ್ನು ಬ್ರೈನ್​ ಸ್ಕ್ಯಾನ್​ಗೆ ಒಳಪಡಿಸಲಾಗಿದೆ.

ಶ್ರೀಲಂಕಾದ ಬೌಲರ್​ ಲಹಿರು ಕುಮಾರ್​ ಎಸೆದ ಬೌನ್ಸರ್​ ಅನ್ನು ಗುರುತಿಸುವಲ್ಲಿ ವಿಫಲರಾದ ಇಶಾನ್​ ತಲೆಗೆ ಬಲವಾಗಿ ಬಡಿದಿದೆ. ಪೆಟ್ಟಿನಿಂದ ಇಶಾನ್​ ಕಿಶನ್ ಕೆಲ ಹೊತ್ತು ನರಳಾಡಿದ್ದಾರೆ.

ಈ ವೇಳೆ ಮೈದಾನದಲ್ಲಿ ಆತಂಕದ ವಾತಾವರಣ ಉಂಟಾಯಿತು. ಭಾರತದ ವೈದ್ಯಕೀಯ ತಂಡ ತಪಾಸಣೆ ನಡಸಿದ ಬಳಿಕ ಕಿಶನ್​ ಸುಧಾರಿಸಿಕೊಂಡು ಮತ್ತೆ ಬ್ಯಾಟಿಂಗ್​ಗೆ ಇಳಿದರು.

ಪಂದ್ಯ ಮುಗಿದ ಬಳಿಕ ಇಶಾನ್​ ಕಿಶನ್​ರನ್ನು ಮುನ್ನೆಚ್ಚರಿಕಾ ಕ್ರಮವಾಗಿ ಆಸ್ಪತ್ರೆಗೆ ದಾಖಲಿಸಿ, ಬ್ರೈನ್​ ಸ್ಕ್ಯಾನ್​ ಒಳಪಡಿಸಲಾಗಿದೆ. ಇಂದು ವರದಿ ಬರಲಿದೆ ಎಂದು ಬಿಸಿಸಿಐ ಅಧಿಕಾರಿಗಳು ತಿಳಿಸಿದ್ದಾರೆ.

ಅಲ್ಲದೇ, ಅಂತಿಮ ಪಂದ್ಯದಲ್ಲಿ ಇಶಾನ್​ ಕಿಶನ್​ರಿಗೆ ವಿಶ್ರಾಂತಿ ನೀಡಿ ಅವರ ಬದಲಾಗಿ ಮಯಾಂಕ್​ ಅಗರ್ವಾಲ್​ ಅಥವಾ ವೆಂಕಟೇಶ್​ ಅಯ್ಯರ್​ ಅವರಿಗೆ ಅವಕಾಶ ನೀಡುವ ಸಾಧ್ಯತೆ ಇದೆ. ಈ ಹಿಂದೆ ಆಸ್ಟ್ರೇಲಿಯಾದ ಆಟಗಾರ ಫಿಲ್​ ಹ್ಯೂಸ್​ಗೂ ಕೂಡ ಬೌನ್ಸರ್​ ಎಸೆತದಿಂದ ತಲೆಗೆ ಗಂಭೀರ ಪೆಟ್ಟು ಬಿದ್ದು ಮೃತಪಟ್ಟ ಕಹಿ ಘಟನೆ ನಡೆದಿತ್ತು.

ಸರಣಿಗೂ ಮುನ್ನ ಭಾರತದ ಬ್ಯಾಟರ್‌ಗಳಾದ ಋತುರಾಜ್ ಗಾಯಕ್‌ವಾಡ್ ಮತ್ತು ಸೂರ್ಯಕುಮಾರ್ ಯಾದವ್ ಮತ್ತು ವೇಗಿ ದೀಪಕ್ ಚಹರ್ ಗಾಯಗೊಂಡು ಸರಣಿಯಿಂದ ಹೊರಗುಳಿದಿದ್ದಾರೆ. ಭಾರತ ಮೂರು ಪಂದ್ಯಗಳ ಸರಣಿಯಲ್ಲಿ 2-0 ಅಂತರದಲ್ಲಿ ಸರಣಿ ಜಯಿಸಿದೆ.

ಓದಿ: 24 ವರ್ಷಗಳ ನಂತರ ಪಾಕಿಸ್ತಾನಕ್ಕೆ ಆಗಮಿಸಿದ ಆಸ್ಟ್ರೇಲಿಯಾ ಕ್ರಿಕೆಟ್‌ ಟೀಂ!

Last Updated : Feb 27, 2022, 2:42 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.