ETV Bharat / sports

ಶ್ರೇಯಸ್ ಅಯ್ಯರ್ ಆಗಮನದ ನಂತರವೂ ಡೆಲ್ಲಿ ತಂಡಕ್ಕೆ ಪಂತ್ ನಾಯಕ?

author img

By

Published : Aug 30, 2021, 7:44 PM IST

ಡೆಲ್ಲಿ ಕ್ಯಾಪಿಟಲ್ಸ್ ತಂಡ ನಾಯಕತ್ವವನ್ನು ಶ್ರೇಯಸ್​ಗೆ ನೀಡಲಿದೆಯೇ ಅಥವಾ 14ನೇ ಆವೃತ್ತಿಯಲ್ಲಿ ತಂಡವನ್ನು ಯಶಸ್ವಿಯಾಗಿ ಮುನ್ನಡೆಸಿ ಅಗ್ರಸ್ಥಾನದಲ್ಲಿರಿಸಿರುವ ರಿಷಭ್​ ಪಂತ್​ಗೆ ನೀಡಲಿದೆಯಾ ಎಂದು ಕ್ರಿಕೆಟ್ ತಜ್ಞರು ಮತ್ತು ಅಭಿಮಾನಿಗಳ ಮನದಲ್ಲಿ ಕುತೂಹಲವನ್ನುಂಟು ಮಾಡುತ್ತಿದೆ.

Rishabh Pant likely to continue as Delhi Capitals captain
ಶ್ರೇಯಸ್ ಅಯ್ಯರ್ vs ರಿಷಭ್ ಪಂತ್

ನವದೆಹಲಿ : ಯುಎಇಯಲ್ಲಿ ನಡೆಯಲಿರುವ 2ನೇ ಹಂತದ ಐಪಿಎಲ್​ನಲ್ಲಿ ಶ್ರೇಯಸ್​ ಅಯ್ಯರ್ ತಂಡಕ್ಕೆ ಕಮ್​ಬ್ಯಾಕ್​ ಮಾಡಿದ ಹೊರತಾಗಿಯೂ ಡೈನಾಮಿಕ್ ವಿಕೆಟ್ ಕೀಪರ್ ಬ್ಯಾಟ್ಸ್​ಮನ್​ ರಿಷಭ್ ಪಂತ್ ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕನಾಗಿ ಮುಂದುವರಿಯುವ ಸಾಧ್ಯತೆಯಿದೆ ಎಂದು ವರದಿಗಳಿಂದ ತಿಳಿದುಬಂದಿದೆ.

ಕಳೆದ 2 ವರ್ಷಗಳಿಂದ ಡೆಲ್ಲಿ ತಂಡದ ಖಾಯಂ ನಾಯಕನಾಗಿದ್ದ ಶ್ರೇಯಸ್​ ಅಯ್ಯರ್​ ಕಳೆದ ಮಾರ್ಚ್​ನಲ್ಲಿ ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿ ವೇಳೆ ಭುಜದ ನೋವಿಗೆ ಒಳಗಾಗಿ ಇಂಗ್ಲೆಂಡ್​ ವಿರುದ್ಧ ಸೀಮಿತ ಓವರ್​ಗಳ ಸರಣಿಯ ಜೊತೆಗೆ ಮೊದಲಾರ್ಧದ ಐಪಿಎಲ್​ನಿಂದಲೂ ಹೊರಬಿದ್ದಿದ್ದರು. ಇದೀಗ ಗಾಯದಿಂದ ಚೇತರಿಸಿಕೊಂಡಿದ್ದು, ಯುಎಇನಲ್ಲಿ ಈಗಾಗಲೇ ಇಂಡಿಯನ್ ಪ್ರೀಮಿಯರ್​ ಲೀಗ್​ಗಾಗಿ ತರಬೇತಿ ಆರಂಭಿಸಿದ್ದಾರೆ.

ಆದರೆ ಡೆಲ್ಲಿ ಕ್ಯಾಪಿಟಲ್ಸ್ ತಂಡ ನಾಯಕತ್ವವನ್ನು ಶ್ರೇಯಸ್​ಗೆ ನೀಡಲಿದೆಯೇ ಅಥವಾ 14ನೇ ಆವೃತ್ತಿಯಲ್ಲಿ ತಂಡವನ್ನು ಯಶಸ್ವಿಯಾಗಿ ಮುನ್ನಡೆಸಿ ಅಗ್ರಸ್ಥಾನದಲ್ಲಿರಿಸಿರುವ ರಿಷಭ್​ ಪಂತ್​ಗೆ ನೀಡಲಿದೆಯಾ ಎಂದು ಕ್ರಿಕೆಟ್ ತಜ್ಞರು ಮತ್ತು ಅಭಿಮಾನಿಗಳ ಮನದಲ್ಲಿ ಕುತೂಹಲವನ್ನುಂಟು ಮಾಡುತ್ತಿದೆ.

ಶ್ರೇಯಸ್​ ಅಯ್ಯರ್​ ಫಿಟ್​ ಆಗಿರುವುದು ಮತ್ತು ಕಮ್​ಬ್ಯಾಕ್​ಗೆ ಸಿದ್ಧಗೊಂಡಿರುವುದು ಡೆಲ್ಲಿ ತಂಡಕ್ಕೆ ಸಂತೋಷದ ವಿಷಯವಾಗಿದೆ. ಆದರೆ ಡಿಸಿ ಮ್ಯಾನೇಜ್​ಮೆಂಟ್​ ಅಯ್ಯರ್​ಗೆ ಸಂಪೂರ್ಣ ಚೇತರಿಸಿಕೊಳ್ಳಲು ಮತ್ತಷ್ಟು ಸಮಯವನ್ನು ನೀಡಬೇಕೆಂಬ ಆಶಯದಲ್ಲಿದೆ. ಆದ್ದರಿಂದ ರಿಷಭ್ ಪಂತ್ ಯುಎಇನಲ್ಲಿಯೂ ನಾಯಕನಾಗಿ ಮುಂದುವರಿಯಲಿದ್ದಾರೆ ಎನ್ನಲಾಗ್ತಿದೆ. ಆದರೆ ಪಂತ್​ ಈ ಬಾರಿಯ ಐಪಿಎಲ್​ನಲ್ಲಿ ಮಾತ್ರ ಡೆಲ್ಲಿ ತಂಡವನ್ನು ರಿಷಭ್ ಪಂತ್ ಮುನ್ನಡೆಸಲಿದ್ದಾರೆ ಎಂದು ಮೂಲವೊಂದರಿಂದ ಮಾಹಿತಿ ಸಿಕ್ಕಿದೆ.

ಶ್ರೇಯಸ್​ ಅಯ್ಯರ್​ ಅನುಪಸ್ಥಿತಿಯಲ್ಲಿ ಡೆಲ್ಲಿ ತಂಡ ಪಂತ್ ನಾಯಕತ್ವದಲ್ಲಿ ಆಡಿರುವ 8 ಪಂದ್ಯಗಳಲ್ಲಿ 6 ಗೆಲುವು ಮತ್ತು 2 ಸೋಲಿನೊಂದಿಗೆ ಅಗ್ರಸ್ಥಾನದಲ್ಲಿದೆ.
ಇದನ್ನು ಓದಿ:Iplಗೂ ಮುನ್ನವೇ ಆರ್​ಸಿಬಿಗೆ ಆಘಾತ: ಗಾಯಗೊಂಡು ಹೊರಬಿದ್ದ ಸ್ಟಾರ್ ಆಲ್​ರೌಂಡರ್​

ನವದೆಹಲಿ : ಯುಎಇಯಲ್ಲಿ ನಡೆಯಲಿರುವ 2ನೇ ಹಂತದ ಐಪಿಎಲ್​ನಲ್ಲಿ ಶ್ರೇಯಸ್​ ಅಯ್ಯರ್ ತಂಡಕ್ಕೆ ಕಮ್​ಬ್ಯಾಕ್​ ಮಾಡಿದ ಹೊರತಾಗಿಯೂ ಡೈನಾಮಿಕ್ ವಿಕೆಟ್ ಕೀಪರ್ ಬ್ಯಾಟ್ಸ್​ಮನ್​ ರಿಷಭ್ ಪಂತ್ ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕನಾಗಿ ಮುಂದುವರಿಯುವ ಸಾಧ್ಯತೆಯಿದೆ ಎಂದು ವರದಿಗಳಿಂದ ತಿಳಿದುಬಂದಿದೆ.

ಕಳೆದ 2 ವರ್ಷಗಳಿಂದ ಡೆಲ್ಲಿ ತಂಡದ ಖಾಯಂ ನಾಯಕನಾಗಿದ್ದ ಶ್ರೇಯಸ್​ ಅಯ್ಯರ್​ ಕಳೆದ ಮಾರ್ಚ್​ನಲ್ಲಿ ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿ ವೇಳೆ ಭುಜದ ನೋವಿಗೆ ಒಳಗಾಗಿ ಇಂಗ್ಲೆಂಡ್​ ವಿರುದ್ಧ ಸೀಮಿತ ಓವರ್​ಗಳ ಸರಣಿಯ ಜೊತೆಗೆ ಮೊದಲಾರ್ಧದ ಐಪಿಎಲ್​ನಿಂದಲೂ ಹೊರಬಿದ್ದಿದ್ದರು. ಇದೀಗ ಗಾಯದಿಂದ ಚೇತರಿಸಿಕೊಂಡಿದ್ದು, ಯುಎಇನಲ್ಲಿ ಈಗಾಗಲೇ ಇಂಡಿಯನ್ ಪ್ರೀಮಿಯರ್​ ಲೀಗ್​ಗಾಗಿ ತರಬೇತಿ ಆರಂಭಿಸಿದ್ದಾರೆ.

ಆದರೆ ಡೆಲ್ಲಿ ಕ್ಯಾಪಿಟಲ್ಸ್ ತಂಡ ನಾಯಕತ್ವವನ್ನು ಶ್ರೇಯಸ್​ಗೆ ನೀಡಲಿದೆಯೇ ಅಥವಾ 14ನೇ ಆವೃತ್ತಿಯಲ್ಲಿ ತಂಡವನ್ನು ಯಶಸ್ವಿಯಾಗಿ ಮುನ್ನಡೆಸಿ ಅಗ್ರಸ್ಥಾನದಲ್ಲಿರಿಸಿರುವ ರಿಷಭ್​ ಪಂತ್​ಗೆ ನೀಡಲಿದೆಯಾ ಎಂದು ಕ್ರಿಕೆಟ್ ತಜ್ಞರು ಮತ್ತು ಅಭಿಮಾನಿಗಳ ಮನದಲ್ಲಿ ಕುತೂಹಲವನ್ನುಂಟು ಮಾಡುತ್ತಿದೆ.

ಶ್ರೇಯಸ್​ ಅಯ್ಯರ್​ ಫಿಟ್​ ಆಗಿರುವುದು ಮತ್ತು ಕಮ್​ಬ್ಯಾಕ್​ಗೆ ಸಿದ್ಧಗೊಂಡಿರುವುದು ಡೆಲ್ಲಿ ತಂಡಕ್ಕೆ ಸಂತೋಷದ ವಿಷಯವಾಗಿದೆ. ಆದರೆ ಡಿಸಿ ಮ್ಯಾನೇಜ್​ಮೆಂಟ್​ ಅಯ್ಯರ್​ಗೆ ಸಂಪೂರ್ಣ ಚೇತರಿಸಿಕೊಳ್ಳಲು ಮತ್ತಷ್ಟು ಸಮಯವನ್ನು ನೀಡಬೇಕೆಂಬ ಆಶಯದಲ್ಲಿದೆ. ಆದ್ದರಿಂದ ರಿಷಭ್ ಪಂತ್ ಯುಎಇನಲ್ಲಿಯೂ ನಾಯಕನಾಗಿ ಮುಂದುವರಿಯಲಿದ್ದಾರೆ ಎನ್ನಲಾಗ್ತಿದೆ. ಆದರೆ ಪಂತ್​ ಈ ಬಾರಿಯ ಐಪಿಎಲ್​ನಲ್ಲಿ ಮಾತ್ರ ಡೆಲ್ಲಿ ತಂಡವನ್ನು ರಿಷಭ್ ಪಂತ್ ಮುನ್ನಡೆಸಲಿದ್ದಾರೆ ಎಂದು ಮೂಲವೊಂದರಿಂದ ಮಾಹಿತಿ ಸಿಕ್ಕಿದೆ.

ಶ್ರೇಯಸ್​ ಅಯ್ಯರ್​ ಅನುಪಸ್ಥಿತಿಯಲ್ಲಿ ಡೆಲ್ಲಿ ತಂಡ ಪಂತ್ ನಾಯಕತ್ವದಲ್ಲಿ ಆಡಿರುವ 8 ಪಂದ್ಯಗಳಲ್ಲಿ 6 ಗೆಲುವು ಮತ್ತು 2 ಸೋಲಿನೊಂದಿಗೆ ಅಗ್ರಸ್ಥಾನದಲ್ಲಿದೆ.
ಇದನ್ನು ಓದಿ:Iplಗೂ ಮುನ್ನವೇ ಆರ್​ಸಿಬಿಗೆ ಆಘಾತ: ಗಾಯಗೊಂಡು ಹೊರಬಿದ್ದ ಸ್ಟಾರ್ ಆಲ್​ರೌಂಡರ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.