ETV Bharat / sports

IPL 2023 : 108 ರನ್​ಗೆ ಲಖನೌ ಆಲೌಟ್​... ಆರ್​ಸಿಬಿಗೆ ಶರಣಾದ ರಾಹುಲ್​ ಪಡೆ

author img

By

Published : May 1, 2023, 7:17 PM IST

Updated : May 2, 2023, 12:42 AM IST

ಅಲ್ಪ ರನ್​ ಗುರಿ ನೀಡಿದ್ದರೂ ಆರ್​ಸಿಬಿ ತಂಡ ಲಖನೌ ವಿರುದ್ಧ ಗೆಲುವು ದಾಖಲಿಸುವಲ್ಲಿ ಯಶಸ್ವಿಯಾಗಿದೆ. ಈ ಗೆಲುವಿನ ಮೂಲಕ 10 ಅಂಕಗಳೊಂದಿಗೆ ಬೆಂಗಳೂರು 5ನೇ ಸ್ಥಾನಕ್ಕೇರಿದೆ.

IPL 2023
IPL 2023

ಲಖನೌ (ಉತ್ತರ ಪ್ರದೇಶ): ಲಖನೌ ಸೂಪರ್​ ಜೈಂಟ್ಸ್​ ವಿರುದ್ಧ ರಾಯಲ್​ ಚಾಲೆಂಜರ್ಸ್​ ಬೆಂಗಳೂರು 18 ರನ್​ಗಳಿಂದ ರೋಚಕ ಗೆಲುವು ಸಾಧಿಸಿದೆ. ನಿಧಾನಗತಿ ಪಿಚ್​ನಲ್ಲಿ ರನ್​ಗಳು ಕಲೆ ಹಾಕಲು ಎರಡೂ ತಂಡಗಳು ಪರದಾಡಿದವು. ಆದರೆ, ಅಲ್ಪ ಮೊತ್ತದ ಗುರಿ ನೀಡಿದ್ದರೂ, ಬಿಗಿ ಬೌಲಿಂಗ್​ನಿಂದ ಆರ್​ಸಿಬಿ ಜಯದ ಕೇಕೆ ಹಾಕಿತು.

ಇಲ್ಲಿನ ಏಕನಾ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಟಾಸ್​ ಗೆದ್ದು ಮೊದಲು ಬ್ಯಾಟಿಂಗ್​ ಮಾಡಿದ ಆರ್​ಸಿಬಿ 20 ಓವರ್​​ಗಳಲ್ಲಿ 9 ವಿಕೆಟ್​ ನಷ್ಟಕ್ಕೆ ಕೇವಲ 126 ರನ್​ ಮಾತ್ರ ಪೇರಿಸಿತ್ತು. 127 ರನ್​ ಗುರಿ ಬೆನ್ನಟ್ಟಿದ ಕೆಎಲ್​ ರಾಹುಲ್ ಪಡೆ ಇನ್ನೂ ಒಂದು ಬಾಲ್​ ಬಾಕಿರುವಾಗಲೇ 108 ರನ್​ ಕಲೆ ಹಾಕಿತು. ಈ ಮೂಲಕ ​ ಫಾಫ್​ ಡು ಪ್ಲೆಸಿಸ್​ ಪಡೆ ಎದುರು ಲಖನೌ ಶರಣಾಯಿತು.

ಲಖನೌ ಆರಂಭದಿಂದಲೂ ವಿಕೆಟ್​ಗಳನ್ನು ಕಳೆದುಕೊಳ್ಳುತ್ತಾ ಆಘಾತ ಅನುಭವಿಸಿತು. ನಾಯಕ ರಾಹುಲ್​ ಗಾಯದ ಕಾರಣದಿಂದ ಹೊರಗುಳಿದ ಕಾರಣ ಕೈಲ್ ಮೇಯರ್ಸ್ ಮತ್ತು ಆಯುಶ್ ಬದೋನಿ ಕ್ರೀಸ್ ಬಂದರು. ಆದರೆ, ಮೇಯರ್ಸ್​ ಶೂನ್ಯಕ್ಕೆ ವಿಕೆಟ್​ ಒಪ್ಪಿಸಿದರು. ಕೃನಾಲ್ ಪಾಂಡ್ಯ (14) ಮತ್ತು ಆಯುಶ್ ಬದೋನಿ (4), ದೀಪಕ್​ ಹೂಡಾ (1) ಹಾಗೂ ನಿಕೋಲಸ್ ಪೂರನ್ (9) ಸಹ ಬೇಗನೇ ಪೆವಿಲಿಯನ್​ ಸೇರಿದರು. ಇದರಿಂದ ಲಖನೌ ತಂಡ 38 ರನ್​ಗಳು ಆಗುವಷ್ಟರಲ್ಲಿ 5 ವಿಕೆಟ್​ ಕಳೆದುಕೊಂಡಿತು.

ನಂತರ ಮಾರ್ಕಸ್ ಸ್ಟೊಯಿನಿಸ್ (13), ಕೃಷ್ಣಪ್ಪ ಗೌತಮ್ (23) ಮತ್ತು ರವಿ ಬಿಷ್ಣೋಯ್ (5) ಕೂಡ ಹೆಚ್ಚಿನ ರನ್​ ಸಿಡಿಸಲು ಸಾಧ್ಯವಾಗಲಿಲ್ಲ. ಕೊನೆಯಲ್ಲಿ ನವೀನ್-ಉಲ್-ಹಕ್ (13), ಅಮಿತ್ ಮಿಶ್ರಾ (19) ರನ್ ಕಲೆ ಹಾಕಿದರು. ಆದರೆ, ಹೀಗಾಗಿ ಅಲ್ಪ ರನ್​ ಗುರಿ ಮುಟ್ಟಲು ಸಾಧ್ಯವಾಗದೇ ಲಖನೌ ಸೋಲೊಪ್ಪಿಕೊಳ್ಳಬೇಕಾಯಿತು. ಆರ್​ಸಿಬಿ ಪರ ಜೋಶ್ ಹ್ಯಾಜಲ್‌ವುಡ್, ಕರ್ಣ್ ಶರ್ಮಾ ತಲಾ 2 ವಿಕೆಟ್​ ಪಡೆದರೆ, ಗ್ಲೆನ್ ಮ್ಯಾಕ್ಸ್‌ವೆಲ್, ವನಿಂದು ಹಸರಂಗ, ಮೊಹಮ್ಮದ್ ಸಿರಾಜ್, ಹರ್ಷಲ್​ ಪಟೇಲ್​ ತಲಾ 1 ವಿಕೆಟ್​ ಪಡೆದರು.

ಇದಕ್ಕೂ ಮುನ್ನ ಆರ್​ಸಿಬಿ ತಂಡಕ್ಕೆ ವಿರಾಟ್ ಕೊಹ್ಲಿ​ ಮತ್ತು ಡು ಪ್ಲೆಸಿಸ್​ ನಿಧಾನ ಗತಿಯ ಆರಂಭ ನೀಡಿದರು. ಈ ಜೋಡಿ 50ರನ್​ ಜೊತೆಯಾಟ ಮಾಡಿತಾದರೂ ಬಿರುಸಿನ ರನ್​ ಬರದ ಕಾರಣ ಪವರ್​ ಪ್ಲೇ ಅಂತ್ಯಕ್ಕೆ ವಿಕೆಟ್​ ನಷ್ಟ ವಿಲ್ಲದೇ 42 ರನ್​ ಗಳಿಸಿತ್ತು. ರವಿ ಬಿಷ್ಣೋಯ್ ಎಸೆತದಲ್ಲಿ ಕ್ರೀಸ್​ ಬಿಟ್ಟು ಬಂದು ದೊಡ್ಡ ಹೊಡೆತಕ್ಕೆ ಕೈ ಹಾಕಿದ ವಿರಾಟ್​ 30 ಎಸೆತದಲ್ಲಿ 31 ರನ್​ ಗಳಿಸಿ ಸ್ಟಂಪ್​ ಔಟಾದರು.

ಶಹಬಾಜ್‌ ಬದಲಾಗಿ ತಂಡಕ್ಕೆ ಸೇರಿದ್ದ ಅನುಜ್​ ರಾವತ್​ 9 ರನ್​ಗಳಿಸಿ ನಿರ್ಗಮಿಸಿದರು. ಭರವಸೆಯ ಬ್ಯಾಟರ್​ ಗ್ಲೆನ್​ ಮ್ಯಾಕ್ಸ್​​ವೆಲ್​ 4 ರನ್​ಗೆ ವಿಕೆಟ್ ಕೊಟ್ಟರು. ನಂತರ ಬಂದ ಸುಯಶ್ ಪ್ರಭುದೇಸಾಯಿ 6 ರನ್​ಗೆ ಪೆವಿಲಿಯನ್​ ಸೇರಿದರು. 15.2 ಓವರ್​ ಆಗಿದ್ದಾಗ ಕೊಂಚ ಹೊತ್ತು ಮಳೆ ಬಂದ ಹಿನ್ನೆಲೆ ಪಂದ್ಯವನ್ನು ನಿಲ್ಲಿಸಲಾಗಿತ್ತು. ಮಳೆಗೂ ಮುನ್ನ ಕ್ರೀಸ್​ನಲ್ಲಿ 36 ಬಾಲ್​ನಲ್ಲಿ 40 ರನ್​​ ಗಳಿಸಿದ್ದ ಫಾಫ್​ ಮತ್ತು ದಿನೇಶ್​ ಕಾರ್ತಿಕ್​ ಕ್ರೀಸ್​ನಲ್ಲಿದ್ದರು.

ಆದರೆ, ಮಳೆಯ ಬಿಡುವಿನ ನಂತರ ಡು ಪ್ಲೆಸಿಸ್​ (44) ಔಟಾದರು. ಕಾರ್ತಿಕ್​ (16) ಹೋರಾಟಕ್ಕೆ ಪ್ರಯತ್ನಿಸಿದರಾದರೂ ದೊಡ್ಡ ಹೊಡೆತಗಳು ಬರಲಿಲ್ಲ. ಮಹಿಪಾಲ್​ (3), ಕರ್ಣ್ ಶರ್ಮಾ (2), ಮೊಹಮ್ಮದ್ ಸಿರಾಜ್ (0) ಬೇಗ ವಿಕೆಟ್​ ಕೊಟ್ಟರು. ಹಸರಂಗ (8) ಮತ್ತು ಜೋಶ್ ಹ್ಯಾಜಲ್‌ವುಡ್ (1) ಅಜೇಯರಾಗಿ ಉಳಿದು ಆಲ್​​ ಔಟ್​ ತಪ್ಪಿಸಿದರು. ಲಖನೌ ಪರ ನವೀನ್-ಉಲ್-ಹಕ್ 3 ವಿಕೆಟ್​, ರವಿ ಬಿಷ್ಣೋಯ್ ಮತ್ತು ಅಮಿತ್ ಮಿಶ್ರಾತಲಾ 2, ಕೃಷ್ಣಪ್ಪ ಗೌತಮ್ ಒಂದು ವಿಕೆಟ್​ ಪಡೆದರು. ಈ ಗೆಲುವಿನ ಮೂಲಕ 10 ಅಂಕಗಳೊಂದಿಗೆ ಆರ್​ಸಿಬಿ 5ನೇ ಸ್ಥಾನಕ್ಕೇರಿದೆ.

ಇದನ್ನೂ ಓದಿ: IPLನಲ್ಲಿಂದು ಲಕ್ನೋ ವಿರುದ್ಧ 'ಗಂಭೀರ' ಸೇಡಿಗೆ ಸಜ್ಜಾದ RCB; ಪಂದ್ಯಕ್ಕೆ ಮಳೆ ಆತಂಕ

ಲಖನೌ (ಉತ್ತರ ಪ್ರದೇಶ): ಲಖನೌ ಸೂಪರ್​ ಜೈಂಟ್ಸ್​ ವಿರುದ್ಧ ರಾಯಲ್​ ಚಾಲೆಂಜರ್ಸ್​ ಬೆಂಗಳೂರು 18 ರನ್​ಗಳಿಂದ ರೋಚಕ ಗೆಲುವು ಸಾಧಿಸಿದೆ. ನಿಧಾನಗತಿ ಪಿಚ್​ನಲ್ಲಿ ರನ್​ಗಳು ಕಲೆ ಹಾಕಲು ಎರಡೂ ತಂಡಗಳು ಪರದಾಡಿದವು. ಆದರೆ, ಅಲ್ಪ ಮೊತ್ತದ ಗುರಿ ನೀಡಿದ್ದರೂ, ಬಿಗಿ ಬೌಲಿಂಗ್​ನಿಂದ ಆರ್​ಸಿಬಿ ಜಯದ ಕೇಕೆ ಹಾಕಿತು.

ಇಲ್ಲಿನ ಏಕನಾ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಟಾಸ್​ ಗೆದ್ದು ಮೊದಲು ಬ್ಯಾಟಿಂಗ್​ ಮಾಡಿದ ಆರ್​ಸಿಬಿ 20 ಓವರ್​​ಗಳಲ್ಲಿ 9 ವಿಕೆಟ್​ ನಷ್ಟಕ್ಕೆ ಕೇವಲ 126 ರನ್​ ಮಾತ್ರ ಪೇರಿಸಿತ್ತು. 127 ರನ್​ ಗುರಿ ಬೆನ್ನಟ್ಟಿದ ಕೆಎಲ್​ ರಾಹುಲ್ ಪಡೆ ಇನ್ನೂ ಒಂದು ಬಾಲ್​ ಬಾಕಿರುವಾಗಲೇ 108 ರನ್​ ಕಲೆ ಹಾಕಿತು. ಈ ಮೂಲಕ ​ ಫಾಫ್​ ಡು ಪ್ಲೆಸಿಸ್​ ಪಡೆ ಎದುರು ಲಖನೌ ಶರಣಾಯಿತು.

ಲಖನೌ ಆರಂಭದಿಂದಲೂ ವಿಕೆಟ್​ಗಳನ್ನು ಕಳೆದುಕೊಳ್ಳುತ್ತಾ ಆಘಾತ ಅನುಭವಿಸಿತು. ನಾಯಕ ರಾಹುಲ್​ ಗಾಯದ ಕಾರಣದಿಂದ ಹೊರಗುಳಿದ ಕಾರಣ ಕೈಲ್ ಮೇಯರ್ಸ್ ಮತ್ತು ಆಯುಶ್ ಬದೋನಿ ಕ್ರೀಸ್ ಬಂದರು. ಆದರೆ, ಮೇಯರ್ಸ್​ ಶೂನ್ಯಕ್ಕೆ ವಿಕೆಟ್​ ಒಪ್ಪಿಸಿದರು. ಕೃನಾಲ್ ಪಾಂಡ್ಯ (14) ಮತ್ತು ಆಯುಶ್ ಬದೋನಿ (4), ದೀಪಕ್​ ಹೂಡಾ (1) ಹಾಗೂ ನಿಕೋಲಸ್ ಪೂರನ್ (9) ಸಹ ಬೇಗನೇ ಪೆವಿಲಿಯನ್​ ಸೇರಿದರು. ಇದರಿಂದ ಲಖನೌ ತಂಡ 38 ರನ್​ಗಳು ಆಗುವಷ್ಟರಲ್ಲಿ 5 ವಿಕೆಟ್​ ಕಳೆದುಕೊಂಡಿತು.

ನಂತರ ಮಾರ್ಕಸ್ ಸ್ಟೊಯಿನಿಸ್ (13), ಕೃಷ್ಣಪ್ಪ ಗೌತಮ್ (23) ಮತ್ತು ರವಿ ಬಿಷ್ಣೋಯ್ (5) ಕೂಡ ಹೆಚ್ಚಿನ ರನ್​ ಸಿಡಿಸಲು ಸಾಧ್ಯವಾಗಲಿಲ್ಲ. ಕೊನೆಯಲ್ಲಿ ನವೀನ್-ಉಲ್-ಹಕ್ (13), ಅಮಿತ್ ಮಿಶ್ರಾ (19) ರನ್ ಕಲೆ ಹಾಕಿದರು. ಆದರೆ, ಹೀಗಾಗಿ ಅಲ್ಪ ರನ್​ ಗುರಿ ಮುಟ್ಟಲು ಸಾಧ್ಯವಾಗದೇ ಲಖನೌ ಸೋಲೊಪ್ಪಿಕೊಳ್ಳಬೇಕಾಯಿತು. ಆರ್​ಸಿಬಿ ಪರ ಜೋಶ್ ಹ್ಯಾಜಲ್‌ವುಡ್, ಕರ್ಣ್ ಶರ್ಮಾ ತಲಾ 2 ವಿಕೆಟ್​ ಪಡೆದರೆ, ಗ್ಲೆನ್ ಮ್ಯಾಕ್ಸ್‌ವೆಲ್, ವನಿಂದು ಹಸರಂಗ, ಮೊಹಮ್ಮದ್ ಸಿರಾಜ್, ಹರ್ಷಲ್​ ಪಟೇಲ್​ ತಲಾ 1 ವಿಕೆಟ್​ ಪಡೆದರು.

ಇದಕ್ಕೂ ಮುನ್ನ ಆರ್​ಸಿಬಿ ತಂಡಕ್ಕೆ ವಿರಾಟ್ ಕೊಹ್ಲಿ​ ಮತ್ತು ಡು ಪ್ಲೆಸಿಸ್​ ನಿಧಾನ ಗತಿಯ ಆರಂಭ ನೀಡಿದರು. ಈ ಜೋಡಿ 50ರನ್​ ಜೊತೆಯಾಟ ಮಾಡಿತಾದರೂ ಬಿರುಸಿನ ರನ್​ ಬರದ ಕಾರಣ ಪವರ್​ ಪ್ಲೇ ಅಂತ್ಯಕ್ಕೆ ವಿಕೆಟ್​ ನಷ್ಟ ವಿಲ್ಲದೇ 42 ರನ್​ ಗಳಿಸಿತ್ತು. ರವಿ ಬಿಷ್ಣೋಯ್ ಎಸೆತದಲ್ಲಿ ಕ್ರೀಸ್​ ಬಿಟ್ಟು ಬಂದು ದೊಡ್ಡ ಹೊಡೆತಕ್ಕೆ ಕೈ ಹಾಕಿದ ವಿರಾಟ್​ 30 ಎಸೆತದಲ್ಲಿ 31 ರನ್​ ಗಳಿಸಿ ಸ್ಟಂಪ್​ ಔಟಾದರು.

ಶಹಬಾಜ್‌ ಬದಲಾಗಿ ತಂಡಕ್ಕೆ ಸೇರಿದ್ದ ಅನುಜ್​ ರಾವತ್​ 9 ರನ್​ಗಳಿಸಿ ನಿರ್ಗಮಿಸಿದರು. ಭರವಸೆಯ ಬ್ಯಾಟರ್​ ಗ್ಲೆನ್​ ಮ್ಯಾಕ್ಸ್​​ವೆಲ್​ 4 ರನ್​ಗೆ ವಿಕೆಟ್ ಕೊಟ್ಟರು. ನಂತರ ಬಂದ ಸುಯಶ್ ಪ್ರಭುದೇಸಾಯಿ 6 ರನ್​ಗೆ ಪೆವಿಲಿಯನ್​ ಸೇರಿದರು. 15.2 ಓವರ್​ ಆಗಿದ್ದಾಗ ಕೊಂಚ ಹೊತ್ತು ಮಳೆ ಬಂದ ಹಿನ್ನೆಲೆ ಪಂದ್ಯವನ್ನು ನಿಲ್ಲಿಸಲಾಗಿತ್ತು. ಮಳೆಗೂ ಮುನ್ನ ಕ್ರೀಸ್​ನಲ್ಲಿ 36 ಬಾಲ್​ನಲ್ಲಿ 40 ರನ್​​ ಗಳಿಸಿದ್ದ ಫಾಫ್​ ಮತ್ತು ದಿನೇಶ್​ ಕಾರ್ತಿಕ್​ ಕ್ರೀಸ್​ನಲ್ಲಿದ್ದರು.

ಆದರೆ, ಮಳೆಯ ಬಿಡುವಿನ ನಂತರ ಡು ಪ್ಲೆಸಿಸ್​ (44) ಔಟಾದರು. ಕಾರ್ತಿಕ್​ (16) ಹೋರಾಟಕ್ಕೆ ಪ್ರಯತ್ನಿಸಿದರಾದರೂ ದೊಡ್ಡ ಹೊಡೆತಗಳು ಬರಲಿಲ್ಲ. ಮಹಿಪಾಲ್​ (3), ಕರ್ಣ್ ಶರ್ಮಾ (2), ಮೊಹಮ್ಮದ್ ಸಿರಾಜ್ (0) ಬೇಗ ವಿಕೆಟ್​ ಕೊಟ್ಟರು. ಹಸರಂಗ (8) ಮತ್ತು ಜೋಶ್ ಹ್ಯಾಜಲ್‌ವುಡ್ (1) ಅಜೇಯರಾಗಿ ಉಳಿದು ಆಲ್​​ ಔಟ್​ ತಪ್ಪಿಸಿದರು. ಲಖನೌ ಪರ ನವೀನ್-ಉಲ್-ಹಕ್ 3 ವಿಕೆಟ್​, ರವಿ ಬಿಷ್ಣೋಯ್ ಮತ್ತು ಅಮಿತ್ ಮಿಶ್ರಾತಲಾ 2, ಕೃಷ್ಣಪ್ಪ ಗೌತಮ್ ಒಂದು ವಿಕೆಟ್​ ಪಡೆದರು. ಈ ಗೆಲುವಿನ ಮೂಲಕ 10 ಅಂಕಗಳೊಂದಿಗೆ ಆರ್​ಸಿಬಿ 5ನೇ ಸ್ಥಾನಕ್ಕೇರಿದೆ.

ಇದನ್ನೂ ಓದಿ: IPLನಲ್ಲಿಂದು ಲಕ್ನೋ ವಿರುದ್ಧ 'ಗಂಭೀರ' ಸೇಡಿಗೆ ಸಜ್ಜಾದ RCB; ಪಂದ್ಯಕ್ಕೆ ಮಳೆ ಆತಂಕ

Last Updated : May 2, 2023, 12:42 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.