ETV Bharat / sports

IPL 2023: 10ನೇ ಬಾರಿಗೆ ಫೈನಲ್​ಗೆ ಎಂಟ್ರಿ ಕೊಟ್ಟ ಚೆನ್ನೈ... ಸೋತ ಗುಜರಾತ್​ಗಿದೆ ಮತ್ತೊಂದು ಅವಕಾಶ

author img

By

Published : May 23, 2023, 9:39 PM IST

Updated : May 24, 2023, 11:38 AM IST

16ನೇ ಆವೃತ್ತಿಯ ಐಪಿಎಲ್​ ಟೂರ್ನಿಯ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಚೆನ್ನೈ ಸೂಪರ್​​ ಕಿಂಗ್ಸ್​ ವಿರುದ್ಧ ಗುಜರಾತ್​ ತಂಡ ಸೋಲು ಕಂಡಿದೆ. ಆದರೂ, ಫೈನಲ್​ ಪ್ರವೇಶಿಸಲು ಹಾರ್ದಿಕ್ ಪಾಂಡ್ಯ ಪಡೆಗೆ ಅವಕಾಶ ಇದೆ.

Gujarat Titans vs Chennai Super Kings, Qualifier 1 Score update
CSK vs GT Qualifier 1: ಜಿಟಿ ಬೌಲರ್​ಗಳ ಪಾರಮ್ಯ, ಗಾಯಕ್ವಾಡ್​ ಅರ್ಧಶತಕದ ನೆರವಿನಿಂದ ಗುಜರಾತ್​ 173 ರನ್​ನ ಗುರಿ

ಚೆನ್ನೈ (ತಮಿಳುನಾಡು): ಐಪಿಎಲ್​ ಟೂರ್ನಿಯಲ್ಲಿ ಚೆನ್ನೈ ಸೂಪರ್​ ಕಿಂಗ್ಸ್​ 10ನೇ ಬಾರಿಗೆ ಫೈನಲ್​ಗೆ ಲಗ್ಗೆ ಇಟ್ಟಿದೆ. ಮಂಗಳವಾರ ನಡೆದ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಎಂಎಸ್​ ಧೋನಿ ಪಡೆ ಗುಜರಾತ್​ ಟೈಟಾನ್ಸ್ ತಂಡವನ್ನು 15 ರನ್​ಗಳಿಂದ ಮಣಿಸಿ ಜಯದ ಕೇಕೆ ಹಾಕಿದೆ.

ಇಲ್ಲಿನ ಚೆಪಾಕ್​ನಲ್ಲಿ ನಡೆದ ಪಂದ್ಯದಲ್ಲಿ ಟಾಸ್​ ಸೋತು ಚೆನ್ನೈ ಸೂಪರ್​ ಕಿಂಗ್ಸ್​ ಮೊದಲು ಬ್ಯಾಟಿಂಗ್​ಗೆ ಇಳಿಯಿತು. ಎಂದಿನಂತೆ ಆರಂಭಿಕ ಬ್ಯಾಟರ್​ಗಳಾದ ರುತುರಾಜ್ ಗಾಯಕ್ವಾಡ್ ಮತ್ತು ಡೆವೊನ್ ಕಾನ್ವೇ ತಂಡಕ್ಕೆ ಉತ್ತಮ ಆರಂಭ ಒದಗಿಸಿದರು. ಈ ಇಬ್ಬರು ಕೂಡ ಮೊದಲ ವಿಕೆಟ್​ಗೆ 87 ರನ್​ ಕಲೆ ಹಾಕಿ 9ನೇ ಬಾರಿಗೆ ಅರ್ಧಶತಕದ ಜೊತೆಯಾಟ ನೀಡಿದರು. 44 ಎಸೆತ ಎದುರಿಸಿ 7 ಬೌಂಡರಿ ಮತ್ತು 1 ಸಿಕ್ಸರ್​ ಸಮೇತ 60 ರನ್​ ಬಾರಿಸಿ ಗಾಯಕ್ವಾಡ್ ನಿರ್ಗಮಿಸಿದರು. ಇದರ ಬೆನ್ನಲ್ಲೆ 40 ರನ್​ ಗಳಿಸಿದ್ದ ಕಾನ್ವೆ ಕೂಡಾ ವಿಕೆಟ್ ಒಪ್ಪಿಸಿದರು.

ಕಾನ್ವೆ ಮತ್ತು ಗಾಯಕ್ವಾಡ್​ ವಿಕೆಟ್​ ಬೀಳುತ್ತಿದ್ದಂತೆ ಮಧ್ಯಮ ಕ್ರಮಾಂಕವೂ ಏಕಾಏಕಿ ಕುಸಿತ ಕಂಡಿತು. ಅಲ್ಲದೇ, ಗುಜರಾತ್​ನ ಬೌಲರ್​ಗಳು ರನ್​ಗೆ ಕಡಿವಾಣ ಹಾಕಿದ್ದರು. ಶಿವಂ ದುಬೆ 1 ರನ್, ಅಜಿಂಕ್ಯಾ ರಹಾನೆ 17 ರನ್, ಅಂಬಟಿ ರಾಯುಡು 17 ಮತ್ತು ನಾಯಕ ಧೋನಿ 1 ರನ್​ಗೆ ಪೆವಿಲಿಯನ್​ ಸೇರಿದರು.

ಆದರೆ ಕೊನೆಯ ಓವರ್​ನಲ್ಲಿ ರವೀಂದ್ರ ಜಡೇಜಾ ಆಸರೆಯಾದರು. 16 ಬಾಲ್​ ಎದುರಿಸಿದ ಅವರು 2 ಬೌಂಡರಿಯ ಸಹಾಯದಿಂದ 22 ರನ್​ ಗಳಿಸಿ ಕೊನೆಯ ಬಾಲ್​ಗೆ ವಿಕೆಟ್​ ಕೊಟ್ಟರು. 9 ರನ್​ ಗಳಿಸಿದ್ದ ಅಲಿ ಅಜೇಯರಾಗಿ ಉಳಿದರು. ಇದರಿಂದ 7 ವಿಕೆಟ್​ ಕಳೆದುಕೊಂಡ ಚೆನ್ನೈ 172 ರನ್​ ಕಲೆ ಹಾಕಿತ್ತು. ಗುಜರಾತ್​ ಪರ ಶಮಿ ಮತ್ತು ಶರ್ಮಾ ತಲಾ ಎರಡು ವಿಕೆಟ್​ ಪಡೆದರೆ, ರಶೀದ್ ಖಾನ್, ದರ್ಶನ್ ನಲ್ಕಂಡೆ, ಮತ್ತು ನೂರ್ ಅಹ್ಮದ್ ಒಂದೊಂದು ವಿಕೆಟ್​ ಪಡೆದರು.

173 ರನ್​ ಟಾರ್ಗೆಟ್ ಬೆನ್ನಟ್ಟಿದ ಗುಜರಾತ್​ ಉತ್ತಮ ಆರಂಭ ಪಡೆಯಲು ಸಾಧ್ಯವಾಗಲಿಲ್ಲ. ವೃದ್ಧಿಮಾನ್ ಸಹಾ 12 ರನ್​ಗೆ ವಿಕೆಟ್​ ಒಪ್ಪಿಸಿದರು. ನಾಯಕ ಹಾರ್ದಿಕ್ ಪಾಂಡ್ಯ ಕೂಡ ಕೇವಲ8 ರನ್​ ಗಳಿಸಿ ನಿರ್ಗಮಿಸಿದರು. ದಾಸುನ್ ಶನಕ 17 ರನ್​ ಕಲೆ ಹಾಕಿದರೆ, ಡೇವಿಡ್ ಮಿಲ್ಲರ್ 4 ರನ್​ಗೆ ಪೆವಿಲಿಯನ್​ ಸೇರಿದರು. ಇದರ ಬೆನ್ನಲ್ಲೆ 42 ರನ್​ ಗಳಿಸಿ ಆಡುತ್ತಿದ್ದ ಶುಭಮಾನ್ ಗಿಲ್ ನಿರ್ಗಮಿಸಿದರು. ಇದರಿಂದ 13.1 ಓವರ್​ನಲ್ಲಿ 88 ರನ್​ ಗಳಿಸಿ ಗುಜರಾತ್​ ಐದು ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು.

ನಂತರದಲ್ಲಿ ರಾಹುಲ್ ತೆವಾಟಿಯಾ ಸಹ ಕೇವಲ 3 ರಅಂತಿಮ ಎಸೆತದಲ್ಲಿ ಮೊಹಮ್ಮದ್ ಶಮಿ ವಿಕೆಟ್ ಪತನದೊಂದಿಗೆ ಗುಜರಾತ್ ಟೈಟಾನ್ಸ್ 157 ರನ್‌ಗ ಆಲೌಟ್ ಆಯಿತು. ಸಿಎಸ್‌ಕೆ 15 ರನ್ ಗೆಲುವು ದಾಖಲಿಸಿ ನೇರವಾಗಿ ಫೈನಲ್ ಪ್ರವೇಶಿಸಿದೆ.

ನ್​ಗೆ ಔಟಾದರು. ಇದರ ನಡುವೆ ವಿಜಯ್ ಶಂಕರ್​ ಮತ್ತು ರಶೀದ್ ಖಾನ್ ಸ್ವಲ್ಪ ಹೋರಾಟ ನಡೆಸಿದರು. ಆದರೆ, ವಿಜಯ್ 14 ರನ್​ ಸಿಡಿಸಿ ವಿಕೆಟ್​ ಒಪ್ಪಿಸಿದರು. ದರ್ಶನ್ ನಲ್ಕಂಡೆ ಶೂನ್ಯಕ್ಕೆ ರನ್​ ಔಟ್​ ಬಲೆಗೆ ಬಿದ್ದರು. ಎರಡು ಸಿಕ್ಸರ್ ಮತ್ತು ಮೂರು ಬೌಂಡರಿ ಸಮೇತ ​ರಶೀದ್ ಖಾನ್ 30 ರನ್​ ಬಾರಿಸಿ ಔಟಾದರು. ಕೊನೆಯಲ್ಲಿ ನೂರ್ ಅಹ್ಮದ್ ಅಜೇಯ 7 ರನ್ ಮತ್ತು ಮೊಹಮ್ಮದ್ ಶಮಿ 5 ರನ್​ ಕಲೆ ಹಾಕಿ ವಿಕೆಟ್​ ಒಪ್ಪಿಸಿದರು. ಇದರೊಂದಿಗೆ 20 ಓವರ್​ಗಳಲ್ಲಿ 157 ರನ್​ಗಳಿಗೆ ಸರ್ವಪತನ ಕಂಡು ಸೋಲೊಪ್ಪಿಕೊಂಡಿತ್ತು.

ಚೆನ್ನೈ ಪರ ದೀಪಕ್ ಚಹಾರ್, ಮಹೇಶ್ ತೀಕ್ಷ್ಣ, ರವೀಂದ್ರ ಜಡೇಜಾ, ಮತೀಶ ಪತಿರಣ ತಲಾ ಎರಡು ವಿಕೆಟ್ ಪಡೆದರೆ,​ ತುಷಾರ್ ದೇಶಪಾಂಡೆ ಒಂದು ವಿಕೆಟ್​ ಪಡೆದು ತಂಡದ ಗೆಲುವಿಗೆ ಕಾರಣವಾದರು. ಇದರೊಂದಿಗೆ ಚೆನ್ನೈ 15 ರನ್ ಗೆಲುವು ದಾಖಲಿಸಿ ನೇರವಾಗಿ ಫೈನಲ್ ಪ್ರವೇಶಿಸಿತು. ಪಂದ್ಯದಲ್ಲಿ ಸೋತಿರುವ ಗುಜರಾತ್​ಗೆ​ ಮೇ 26ರಂದು 2ನೇ ಕ್ವಾಲಿಫೈಯರ್ ಅವಕಾಶ ಇದೆ. ಮೇ 24ರಂದು ಲಖನೌ ಮತ್ತು ಮುಂಬೈ ಮುಖಾಮುಖಿಯಾಗಲಿದ್ದು, ಇಲ್ಲಿ ಗೆದ್ದ ತಂಡ ಕ್ವಾಲಿಫೈಯರ್​ಗೆ ಅರ್ಹತೆ ಪಡೆಯಲಿದೆ.

ಚೆನ್ನೈ (ತಮಿಳುನಾಡು): ಐಪಿಎಲ್​ ಟೂರ್ನಿಯಲ್ಲಿ ಚೆನ್ನೈ ಸೂಪರ್​ ಕಿಂಗ್ಸ್​ 10ನೇ ಬಾರಿಗೆ ಫೈನಲ್​ಗೆ ಲಗ್ಗೆ ಇಟ್ಟಿದೆ. ಮಂಗಳವಾರ ನಡೆದ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಎಂಎಸ್​ ಧೋನಿ ಪಡೆ ಗುಜರಾತ್​ ಟೈಟಾನ್ಸ್ ತಂಡವನ್ನು 15 ರನ್​ಗಳಿಂದ ಮಣಿಸಿ ಜಯದ ಕೇಕೆ ಹಾಕಿದೆ.

ಇಲ್ಲಿನ ಚೆಪಾಕ್​ನಲ್ಲಿ ನಡೆದ ಪಂದ್ಯದಲ್ಲಿ ಟಾಸ್​ ಸೋತು ಚೆನ್ನೈ ಸೂಪರ್​ ಕಿಂಗ್ಸ್​ ಮೊದಲು ಬ್ಯಾಟಿಂಗ್​ಗೆ ಇಳಿಯಿತು. ಎಂದಿನಂತೆ ಆರಂಭಿಕ ಬ್ಯಾಟರ್​ಗಳಾದ ರುತುರಾಜ್ ಗಾಯಕ್ವಾಡ್ ಮತ್ತು ಡೆವೊನ್ ಕಾನ್ವೇ ತಂಡಕ್ಕೆ ಉತ್ತಮ ಆರಂಭ ಒದಗಿಸಿದರು. ಈ ಇಬ್ಬರು ಕೂಡ ಮೊದಲ ವಿಕೆಟ್​ಗೆ 87 ರನ್​ ಕಲೆ ಹಾಕಿ 9ನೇ ಬಾರಿಗೆ ಅರ್ಧಶತಕದ ಜೊತೆಯಾಟ ನೀಡಿದರು. 44 ಎಸೆತ ಎದುರಿಸಿ 7 ಬೌಂಡರಿ ಮತ್ತು 1 ಸಿಕ್ಸರ್​ ಸಮೇತ 60 ರನ್​ ಬಾರಿಸಿ ಗಾಯಕ್ವಾಡ್ ನಿರ್ಗಮಿಸಿದರು. ಇದರ ಬೆನ್ನಲ್ಲೆ 40 ರನ್​ ಗಳಿಸಿದ್ದ ಕಾನ್ವೆ ಕೂಡಾ ವಿಕೆಟ್ ಒಪ್ಪಿಸಿದರು.

ಕಾನ್ವೆ ಮತ್ತು ಗಾಯಕ್ವಾಡ್​ ವಿಕೆಟ್​ ಬೀಳುತ್ತಿದ್ದಂತೆ ಮಧ್ಯಮ ಕ್ರಮಾಂಕವೂ ಏಕಾಏಕಿ ಕುಸಿತ ಕಂಡಿತು. ಅಲ್ಲದೇ, ಗುಜರಾತ್​ನ ಬೌಲರ್​ಗಳು ರನ್​ಗೆ ಕಡಿವಾಣ ಹಾಕಿದ್ದರು. ಶಿವಂ ದುಬೆ 1 ರನ್, ಅಜಿಂಕ್ಯಾ ರಹಾನೆ 17 ರನ್, ಅಂಬಟಿ ರಾಯುಡು 17 ಮತ್ತು ನಾಯಕ ಧೋನಿ 1 ರನ್​ಗೆ ಪೆವಿಲಿಯನ್​ ಸೇರಿದರು.

ಆದರೆ ಕೊನೆಯ ಓವರ್​ನಲ್ಲಿ ರವೀಂದ್ರ ಜಡೇಜಾ ಆಸರೆಯಾದರು. 16 ಬಾಲ್​ ಎದುರಿಸಿದ ಅವರು 2 ಬೌಂಡರಿಯ ಸಹಾಯದಿಂದ 22 ರನ್​ ಗಳಿಸಿ ಕೊನೆಯ ಬಾಲ್​ಗೆ ವಿಕೆಟ್​ ಕೊಟ್ಟರು. 9 ರನ್​ ಗಳಿಸಿದ್ದ ಅಲಿ ಅಜೇಯರಾಗಿ ಉಳಿದರು. ಇದರಿಂದ 7 ವಿಕೆಟ್​ ಕಳೆದುಕೊಂಡ ಚೆನ್ನೈ 172 ರನ್​ ಕಲೆ ಹಾಕಿತ್ತು. ಗುಜರಾತ್​ ಪರ ಶಮಿ ಮತ್ತು ಶರ್ಮಾ ತಲಾ ಎರಡು ವಿಕೆಟ್​ ಪಡೆದರೆ, ರಶೀದ್ ಖಾನ್, ದರ್ಶನ್ ನಲ್ಕಂಡೆ, ಮತ್ತು ನೂರ್ ಅಹ್ಮದ್ ಒಂದೊಂದು ವಿಕೆಟ್​ ಪಡೆದರು.

173 ರನ್​ ಟಾರ್ಗೆಟ್ ಬೆನ್ನಟ್ಟಿದ ಗುಜರಾತ್​ ಉತ್ತಮ ಆರಂಭ ಪಡೆಯಲು ಸಾಧ್ಯವಾಗಲಿಲ್ಲ. ವೃದ್ಧಿಮಾನ್ ಸಹಾ 12 ರನ್​ಗೆ ವಿಕೆಟ್​ ಒಪ್ಪಿಸಿದರು. ನಾಯಕ ಹಾರ್ದಿಕ್ ಪಾಂಡ್ಯ ಕೂಡ ಕೇವಲ8 ರನ್​ ಗಳಿಸಿ ನಿರ್ಗಮಿಸಿದರು. ದಾಸುನ್ ಶನಕ 17 ರನ್​ ಕಲೆ ಹಾಕಿದರೆ, ಡೇವಿಡ್ ಮಿಲ್ಲರ್ 4 ರನ್​ಗೆ ಪೆವಿಲಿಯನ್​ ಸೇರಿದರು. ಇದರ ಬೆನ್ನಲ್ಲೆ 42 ರನ್​ ಗಳಿಸಿ ಆಡುತ್ತಿದ್ದ ಶುಭಮಾನ್ ಗಿಲ್ ನಿರ್ಗಮಿಸಿದರು. ಇದರಿಂದ 13.1 ಓವರ್​ನಲ್ಲಿ 88 ರನ್​ ಗಳಿಸಿ ಗುಜರಾತ್​ ಐದು ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು.

ನಂತರದಲ್ಲಿ ರಾಹುಲ್ ತೆವಾಟಿಯಾ ಸಹ ಕೇವಲ 3 ರಅಂತಿಮ ಎಸೆತದಲ್ಲಿ ಮೊಹಮ್ಮದ್ ಶಮಿ ವಿಕೆಟ್ ಪತನದೊಂದಿಗೆ ಗುಜರಾತ್ ಟೈಟಾನ್ಸ್ 157 ರನ್‌ಗ ಆಲೌಟ್ ಆಯಿತು. ಸಿಎಸ್‌ಕೆ 15 ರನ್ ಗೆಲುವು ದಾಖಲಿಸಿ ನೇರವಾಗಿ ಫೈನಲ್ ಪ್ರವೇಶಿಸಿದೆ.

ನ್​ಗೆ ಔಟಾದರು. ಇದರ ನಡುವೆ ವಿಜಯ್ ಶಂಕರ್​ ಮತ್ತು ರಶೀದ್ ಖಾನ್ ಸ್ವಲ್ಪ ಹೋರಾಟ ನಡೆಸಿದರು. ಆದರೆ, ವಿಜಯ್ 14 ರನ್​ ಸಿಡಿಸಿ ವಿಕೆಟ್​ ಒಪ್ಪಿಸಿದರು. ದರ್ಶನ್ ನಲ್ಕಂಡೆ ಶೂನ್ಯಕ್ಕೆ ರನ್​ ಔಟ್​ ಬಲೆಗೆ ಬಿದ್ದರು. ಎರಡು ಸಿಕ್ಸರ್ ಮತ್ತು ಮೂರು ಬೌಂಡರಿ ಸಮೇತ ​ರಶೀದ್ ಖಾನ್ 30 ರನ್​ ಬಾರಿಸಿ ಔಟಾದರು. ಕೊನೆಯಲ್ಲಿ ನೂರ್ ಅಹ್ಮದ್ ಅಜೇಯ 7 ರನ್ ಮತ್ತು ಮೊಹಮ್ಮದ್ ಶಮಿ 5 ರನ್​ ಕಲೆ ಹಾಕಿ ವಿಕೆಟ್​ ಒಪ್ಪಿಸಿದರು. ಇದರೊಂದಿಗೆ 20 ಓವರ್​ಗಳಲ್ಲಿ 157 ರನ್​ಗಳಿಗೆ ಸರ್ವಪತನ ಕಂಡು ಸೋಲೊಪ್ಪಿಕೊಂಡಿತ್ತು.

ಚೆನ್ನೈ ಪರ ದೀಪಕ್ ಚಹಾರ್, ಮಹೇಶ್ ತೀಕ್ಷ್ಣ, ರವೀಂದ್ರ ಜಡೇಜಾ, ಮತೀಶ ಪತಿರಣ ತಲಾ ಎರಡು ವಿಕೆಟ್ ಪಡೆದರೆ,​ ತುಷಾರ್ ದೇಶಪಾಂಡೆ ಒಂದು ವಿಕೆಟ್​ ಪಡೆದು ತಂಡದ ಗೆಲುವಿಗೆ ಕಾರಣವಾದರು. ಇದರೊಂದಿಗೆ ಚೆನ್ನೈ 15 ರನ್ ಗೆಲುವು ದಾಖಲಿಸಿ ನೇರವಾಗಿ ಫೈನಲ್ ಪ್ರವೇಶಿಸಿತು. ಪಂದ್ಯದಲ್ಲಿ ಸೋತಿರುವ ಗುಜರಾತ್​ಗೆ​ ಮೇ 26ರಂದು 2ನೇ ಕ್ವಾಲಿಫೈಯರ್ ಅವಕಾಶ ಇದೆ. ಮೇ 24ರಂದು ಲಖನೌ ಮತ್ತು ಮುಂಬೈ ಮುಖಾಮುಖಿಯಾಗಲಿದ್ದು, ಇಲ್ಲಿ ಗೆದ್ದ ತಂಡ ಕ್ವಾಲಿಫೈಯರ್​ಗೆ ಅರ್ಹತೆ ಪಡೆಯಲಿದೆ.

Last Updated : May 24, 2023, 11:38 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.