ETV Bharat / sports

'ಸಿಇಒ ಕೂಡ ತಂಡದ ಆಯ್ಕೆಯಲ್ಲಿ ಭಾಗಿ'.. ಮುಂಬೈ ವಿರುದ್ಧ ಗೆದ್ದ ಬಳಿಕ ಶ್ರೇಯಸ್​ ಹೇಳಿದ್ರು ಈ ಮಾತು! - ಕೋಲ್ಕತ್ತಾ ನೈಟ್ ರೈಡರ್ಸ್​

ಕೋಲ್ಕತ್ತಾ ನೈಟ್​ ರೈಡರ್ಸ್ ತಂಡದಲ್ಲಿ ಎಲ್ಲವೂ ಸರಿಯಾಗಿಲ್ಲ ಎಂಬ ಮಾತನ್ನ ಟೀಂ ಇಂಡಿಯಾ ಮಾಜಿ ಆಟಗಾರ ಮೊಹಮ್ಮದ್ ಕೈಫ್​​ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದರು. ಇದರ ಬೆನ್ನಲ್ಲೇ ಶ್ರೇಯಸ್​ ಅಯ್ಯರ್ ಈ ರೀತಿಯಾಗಿ ಮಾತನಾಡಿದ್ದು, ಎಲ್ಲವೂ ಸರಿಯಾಗಿದೆ ಎಂದಿದ್ದಾರೆ..

KKR Captain Shreyas Iyer
KKR Captain Shreyas Iyer
author img

By

Published : May 10, 2022, 4:02 PM IST

ಮುಂಬೈ : ಇಂಡಿಯನ್​ ಪ್ರೀಮಿಯರ್ ಲೀಗ್​ನಲ್ಲಿ ನಿನ್ನೆ ಮುಂಬೈ ಇಂಡಿಯನ್ಸ್​ ವಿರುದ್ಧ ನಡೆದ ಪಂದ್ಯದಲ್ಲಿ ಕೋಲ್ಕತ್ತಾ ನೈಟ್​ ರೈಡರ್ಸ್​ 52 ರನ್‌ಗಳ ಗೆಲುವು ದಾಖಲು ಮಾಡಿದ್ದು, ಪ್ಲೇ-ಆಫ್​ ಆಸೆ ಜೀವಂತವಾಗಿರಿಸಿಕೊಂಡಿದೆ. ಜಯ ದಾಖಲಿಸಿದ ಬಳಿಕ ಮಾತನಾಡಿರುವ ಶ್ರೇಯಸ್​ ಅಯ್ಯರ್, ಆಡುವ 11ರ ಬಳಗ ಆಯ್ಕೆ ವಿಚಾರದಲ್ಲಿ ಸಿಇಒ ಕೂಡ ಭಾಗಿಯಾಗುತ್ತಾರೆ ಎಂದು ಹೇಳಿಕೊಂಡಿದ್ದಾರೆಂದು ವರದಿಯಾಗಿದೆ.

ಆಡುವ 11ರ ಬಳಗ ಆಯ್ಕೆ ಮಾಡುವುದು ಕಷ್ಟಕರ. ನೀವೂ ಇಂದಿನ ಪಂದ್ಯದಲ್ಲಿ ಕಣಕ್ಕಿಳಿಯುತ್ತಿಲ್ಲ ಎಂದು ಪ್ಲೇಯರ್ಸ್​ಗೆ ಹೇಳುವುದು ತುಂಬಾ ಕಷ್ಟದ ಕೆಲಸವಾಗಿದ್ದು, ಆಡುವ 11ರ ಬಳಗ ಆಯ್ಕೆ ಮಾಡುವ ಸಂದರ್ಭದಲ್ಲಿ ಸಿಇಒ ವೆಂಕಿ ಮೈಸೂರು ಸಹ ಭಾಗಿಯಾಗುತ್ತಾರೆ ಎಂದಿದ್ದಾರೆ.

ಐಪಿಎಲ್​ ಆಡಲು ಆರಂಭಿಸಿದಾಗ ನಾನು ಕೂಡ ಆ ಸ್ಥಾನದಿಂದ ಬಂದಿದ್ದೇನೆ. ಕೋಚ್​ ಜೊತೆ ಚರ್ಚೆ ಮಾಡಿದ ಬಳಿಕ ಆಡುವ 11ರ ಬಳಗ ಆಯ್ಕೆ ಮಾಡಲಾಗುತ್ತದೆ. ನಿಸ್ಸಂಶವಾಗಿ ಸಿಇಒ ಕೂಡ ಇದರಲ್ಲಿ ಭಾಗಿಯಾಗುತ್ತಾರೆ. ತಂಡ ಆಯ್ಕೆ ನಂತರ ಕೋಚ್​ ಆಟಗಾರರ ಬಳಿ ಹೋಗಿ, ನೀವೂ ಇಂದಿನ ಪಂದ್ಯ ಆಡುತ್ತಿಲ್ಲ ಎಂದು ತಿಳಿಸುತ್ತಾರೆ.

ಇದನ್ನೂ ಓದಿ: ವಿಶ್ವಕಪ್​​ಗೂ ಮುನ್ನ ಆಸ್ಟ್ರೇಲಿಯಾ-ಭಾರತದ ನಡುವೆ ಮೂರು ಟಿ20 ಪಂದ್ಯ

ಪ್ರಾಮಾಣಿಕವಾಗಿ ಹೇಳಬೇಕೆಂದರೆ, ನಿರ್ಧಾರ ಕೈಗೊಳ್ಳುವ ಸಂದರ್ಭದಲ್ಲಿ ಎಲ್ಲರೂ ಬೆಂಬಲ ನೀಡುತ್ತಾರೆ. ನಾಯಕನಾಗಿ ಇದರ ಬಗ್ಗೆ ನನಗೆ ಹೆಮ್ಮೆ ಇದೆ ಎಂದಿದ್ದಾರೆ. ಇದೇ ವೇಳೆ ಮುಂಬೈ ಇಂಡಿಯನ್ಸ್​ ವಿರುದ್ಧ ಗೆಲುವಿನ ಬಗ್ಗೆ ಮಾತನಾಡಿದ ಶ್ರೇಯಸ್​, ಖಂಡಿತವಾಗಿ ದೊಡ್ಡ ಅಂತರದಿಂದ ಗೆಲುವು ದಾಖಲು ಮಾಡಿರುವುದು ತೃಪ್ತಿ ನೀಡಿದೆ. ಮುಂದಿನ ಪಂದ್ಯಗಳಲ್ಲೂ ಉತ್ತಮ ಪ್ರದರ್ಶನ ನೀಡುವ ಇರಾದೆ ಇದೆ ಎಂದರು.

ಇದನ್ನೂ ಓದಿ: KKR ಕ್ಯಾಪ್ಟನ್​​-ಕೋಚ್​​ ನಡುವೆ ಎಲ್ಲವೂ ಸರಿ ಇಲ್ವಾ? 12 ಪಂದ್ಯಗಳಲ್ಲಿ 20 ಪ್ಲೇಯರ್ಸ್​​ಗೆ ಚಾನ್ಸ್​​​ ನೀಡಿದ್ಯಾಕೆ!?

ಕೋಲ್ಕತ್ತಾ ನೈಟ್​ ರೈಡರ್ಸ್ ತಂಡದಲ್ಲಿ ಎಲ್ಲವೂ ಸರಿಯಾಗಿಲ್ಲ ಎಂಬ ಮಾತನ್ನ ಟೀಂ ಇಂಡಿಯಾ ಮಾಜಿ ಆಟಗಾರ ಮೊಹಮ್ಮದ್ ಕೈಫ್​​ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದರು. ಇದರ ಬೆನ್ನಲ್ಲೇ ಶ್ರೇಯಸ್​ ಅಯ್ಯರ್ ಈ ರೀತಿಯಾಗಿ ಮಾತನಾಡಿದ್ದು, ಎಲ್ಲವೂ ಸರಿಯಾಗಿದೆ ಎಂದಿದ್ದಾರೆ.

ಮುಂಬೈ : ಇಂಡಿಯನ್​ ಪ್ರೀಮಿಯರ್ ಲೀಗ್​ನಲ್ಲಿ ನಿನ್ನೆ ಮುಂಬೈ ಇಂಡಿಯನ್ಸ್​ ವಿರುದ್ಧ ನಡೆದ ಪಂದ್ಯದಲ್ಲಿ ಕೋಲ್ಕತ್ತಾ ನೈಟ್​ ರೈಡರ್ಸ್​ 52 ರನ್‌ಗಳ ಗೆಲುವು ದಾಖಲು ಮಾಡಿದ್ದು, ಪ್ಲೇ-ಆಫ್​ ಆಸೆ ಜೀವಂತವಾಗಿರಿಸಿಕೊಂಡಿದೆ. ಜಯ ದಾಖಲಿಸಿದ ಬಳಿಕ ಮಾತನಾಡಿರುವ ಶ್ರೇಯಸ್​ ಅಯ್ಯರ್, ಆಡುವ 11ರ ಬಳಗ ಆಯ್ಕೆ ವಿಚಾರದಲ್ಲಿ ಸಿಇಒ ಕೂಡ ಭಾಗಿಯಾಗುತ್ತಾರೆ ಎಂದು ಹೇಳಿಕೊಂಡಿದ್ದಾರೆಂದು ವರದಿಯಾಗಿದೆ.

ಆಡುವ 11ರ ಬಳಗ ಆಯ್ಕೆ ಮಾಡುವುದು ಕಷ್ಟಕರ. ನೀವೂ ಇಂದಿನ ಪಂದ್ಯದಲ್ಲಿ ಕಣಕ್ಕಿಳಿಯುತ್ತಿಲ್ಲ ಎಂದು ಪ್ಲೇಯರ್ಸ್​ಗೆ ಹೇಳುವುದು ತುಂಬಾ ಕಷ್ಟದ ಕೆಲಸವಾಗಿದ್ದು, ಆಡುವ 11ರ ಬಳಗ ಆಯ್ಕೆ ಮಾಡುವ ಸಂದರ್ಭದಲ್ಲಿ ಸಿಇಒ ವೆಂಕಿ ಮೈಸೂರು ಸಹ ಭಾಗಿಯಾಗುತ್ತಾರೆ ಎಂದಿದ್ದಾರೆ.

ಐಪಿಎಲ್​ ಆಡಲು ಆರಂಭಿಸಿದಾಗ ನಾನು ಕೂಡ ಆ ಸ್ಥಾನದಿಂದ ಬಂದಿದ್ದೇನೆ. ಕೋಚ್​ ಜೊತೆ ಚರ್ಚೆ ಮಾಡಿದ ಬಳಿಕ ಆಡುವ 11ರ ಬಳಗ ಆಯ್ಕೆ ಮಾಡಲಾಗುತ್ತದೆ. ನಿಸ್ಸಂಶವಾಗಿ ಸಿಇಒ ಕೂಡ ಇದರಲ್ಲಿ ಭಾಗಿಯಾಗುತ್ತಾರೆ. ತಂಡ ಆಯ್ಕೆ ನಂತರ ಕೋಚ್​ ಆಟಗಾರರ ಬಳಿ ಹೋಗಿ, ನೀವೂ ಇಂದಿನ ಪಂದ್ಯ ಆಡುತ್ತಿಲ್ಲ ಎಂದು ತಿಳಿಸುತ್ತಾರೆ.

ಇದನ್ನೂ ಓದಿ: ವಿಶ್ವಕಪ್​​ಗೂ ಮುನ್ನ ಆಸ್ಟ್ರೇಲಿಯಾ-ಭಾರತದ ನಡುವೆ ಮೂರು ಟಿ20 ಪಂದ್ಯ

ಪ್ರಾಮಾಣಿಕವಾಗಿ ಹೇಳಬೇಕೆಂದರೆ, ನಿರ್ಧಾರ ಕೈಗೊಳ್ಳುವ ಸಂದರ್ಭದಲ್ಲಿ ಎಲ್ಲರೂ ಬೆಂಬಲ ನೀಡುತ್ತಾರೆ. ನಾಯಕನಾಗಿ ಇದರ ಬಗ್ಗೆ ನನಗೆ ಹೆಮ್ಮೆ ಇದೆ ಎಂದಿದ್ದಾರೆ. ಇದೇ ವೇಳೆ ಮುಂಬೈ ಇಂಡಿಯನ್ಸ್​ ವಿರುದ್ಧ ಗೆಲುವಿನ ಬಗ್ಗೆ ಮಾತನಾಡಿದ ಶ್ರೇಯಸ್​, ಖಂಡಿತವಾಗಿ ದೊಡ್ಡ ಅಂತರದಿಂದ ಗೆಲುವು ದಾಖಲು ಮಾಡಿರುವುದು ತೃಪ್ತಿ ನೀಡಿದೆ. ಮುಂದಿನ ಪಂದ್ಯಗಳಲ್ಲೂ ಉತ್ತಮ ಪ್ರದರ್ಶನ ನೀಡುವ ಇರಾದೆ ಇದೆ ಎಂದರು.

ಇದನ್ನೂ ಓದಿ: KKR ಕ್ಯಾಪ್ಟನ್​​-ಕೋಚ್​​ ನಡುವೆ ಎಲ್ಲವೂ ಸರಿ ಇಲ್ವಾ? 12 ಪಂದ್ಯಗಳಲ್ಲಿ 20 ಪ್ಲೇಯರ್ಸ್​​ಗೆ ಚಾನ್ಸ್​​​ ನೀಡಿದ್ಯಾಕೆ!?

ಕೋಲ್ಕತ್ತಾ ನೈಟ್​ ರೈಡರ್ಸ್ ತಂಡದಲ್ಲಿ ಎಲ್ಲವೂ ಸರಿಯಾಗಿಲ್ಲ ಎಂಬ ಮಾತನ್ನ ಟೀಂ ಇಂಡಿಯಾ ಮಾಜಿ ಆಟಗಾರ ಮೊಹಮ್ಮದ್ ಕೈಫ್​​ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದರು. ಇದರ ಬೆನ್ನಲ್ಲೇ ಶ್ರೇಯಸ್​ ಅಯ್ಯರ್ ಈ ರೀತಿಯಾಗಿ ಮಾತನಾಡಿದ್ದು, ಎಲ್ಲವೂ ಸರಿಯಾಗಿದೆ ಎಂದಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.