ETV Bharat / sports

ಚೆನ್ನೈ ವಿರುದ್ಧ ಹೀನಾಯ ಸೋಲು: ಅಂಜಿಕೆಯಿಲ್ಲದ ಕ್ರಿಕೆಟ್​ ಆಡುವಂತೆ ತಂಡಕ್ಕೆ ರಾಹುಲ್ ಧೈರ್ಯ​!

author img

By

Published : Apr 17, 2021, 3:58 PM IST

ಚೆನ್ನೈ ವಿರುದ್ಧ ಪಂಜಾಬ್ ತಂಡ ಹೀನಾಯ ಸೋಲು ಕಂಡಿದ್ದು, ಇದರಿಂದ ಹೊರಬಂದು ಭಯವಿಲ್ಲದ ಕ್ರಿಕೆಟ್​ ಆಡುವಂತೆ ತಂಡಕ್ಕೆ ಕ್ಯಾಪ್ಟನ್​ ಕೆ.ಎಲ್​ ರಾಹುಲ್ ಧೈರ್ಯ ತುಂಬಿದ್ದಾರೆ.

KL Rahul
KL Rahul

ಮುಂಬೈ: ಇಂಡಿಯನ್​ ಪ್ರೀಮಿಯರ್ ಲೀಗ್​ನ ಚೆನ್ನೈ ವಿರುದ್ಧದ ಪಂದ್ಯದಲ್ಲಿ ಪಂಜಾಬ್​ ಕಿಂಗ್ಸ್​ 6 ವಿಕೆಟ್​ಗಳ ಸೋಲು ಕಂಡಿದ್ದು, ಬ್ಯಾಟಿಂಗ್​ನಲ್ಲಿ ಸಂಪೂರ್ಣವಾಗಿ ವೈಫಲ್ಯ ಅನುಭವಿಸಿದೆ. ಇದೇ ವಿಚಾರವಾಗಿ ಪಂದ್ಯ ಮುಕ್ತಾಯಗೊಂಡ ಬಳಿಕ ತಂಡದ ಕ್ಯಾಪ್ಟನ್ ಕೆ.ಎಲ್. ರಾಹುಲ್ ಮಾತನಾಡಿದ್ದು, ಅಂಜಿಕೆಯಿಲ್ಲದೆ ಕ್ರಿಕೆಟ್​ ಆಡುವಂತೆ ತಂಡದ ಪ್ಲೇಯರ್ಸ್​ಗೆ ಧೈರ್ಯ ತುಂಬಿದ್ದಾರೆ.

ಈ ಬಗ್ಗೆ ಹೆಚ್ಚಿನದು ಹೇಳುವ ಅಗತ್ಯವಿಲ್ಲ. ಯಾವುದೇ ತಂಡ ಆರಂಭದ 7 - 8 ಓವರ್​ಗಳಲ್ಲಿ ನಾಲ್ಕೈದು ವಿಕೆಟ್ ಕಳೆದುಕೊಂಡರೆ ಅದು ತಂಡಕ್ಕೆ ದೊಡ್ಡ ಹೊಡೆತ. ಅವರು ಚೆನ್ನಾಗಿ ಬೌಲಿಂಗ್​ ಮಾಡಿದರು. ಆದರೆ, ನಮ್ಮ ಕಡೆಯಿಂದ ಕೆಲವೊಂದು ತಪ್ಪು ಹೊಡೆತದಿಂದಾಗಿ ವಿಕೆಟ್​ ಕಳೆದುಕೊಳ್ಳಬೇಕಾಯಿತು ಎಂದರು.

ಚೆನ್ನೈ ವಿರುದ್ಧದ ಪಂದ್ಯಗಳಲ್ಲಿ ಮಾಡಿರುವ ತಪ್ಪುಗಳಿಂದ ನಾವು ಕಲಿಯಬೇಕಾಗಿದ್ದು, ಮುಂದಿನ ಪಂದ್ಯಗಳಲ್ಲಿ ಸಿಡಿದೇಳಬೇಕು ಎಂದರು. ಮೊದಲ ಪಂದ್ಯದಲ್ಲಿ ನಾವು 220ರನ್​ಗಳಿಕೆ ಮಾಡಿದ್ದೆವು. ಆದರೆ ಚೆನ್ನೈ ವಿರುದ್ಧದ ಪಂದ್ಯದಲ್ಲಿ ಅದರ ಅರ್ಧ ರನ್​ ಸಹ ಗಳಿಕೆ ಮಾಡಲು ಸಾಧ್ಯವಾಗಲಿಲ್ಲ. ಈ ಸೋಲಿನಿಂದ ಹೊರಬಂದು ನಾವು ಅಂಜಿಕೆಯಿಲ್ಲದ ಕ್ರಿಕೆಟ್​ ಆಡಬೇಕು ಎಂದು ತಿಳಿಸಿದರು.

ನಿನ್ನೆ ಚೆನ್ನೈ ವಿರುದ್ಧ ನಡೆದ ಪಂದ್ಯದಲ್ಲಿ ಪಂಜಾಬ್​ನ ಟಾಪ್​ ಆರ್ಡರ್​​ ಪ್ಲೇಯರ್ಸ್​ ಬ್ಯಾಟಿಂಗ್​ನಲ್ಲಿ ವೈಫಲ್ಯ ಅನುಭವಿಸಿದ್ದರು. ಆದರೆ, ಶಾರೂಖ್​ ಖಾನ್​ 47ರನ್​​ಗಳಿಕೆ ಮಾಡಿದ್ದರಿಂದ 100ರ ಗಡಿ ದಾಟಿತು. ಇದರ ಬೆನ್ನತ್ತಿದ್ದ ಚೆನ್ನೈ ತಂಡ 15.4 ಓವರ್​ಗಳಲ್ಲಿ 4 ವಿಕೆಟ್​ ಕಳೆದುಕೊಂಡು ಗುರಿ ಮುಟ್ಟಿ ಗೆಲುವು ಸಾಧಿಸಿತ್ತು.

ಮುಂಬೈ: ಇಂಡಿಯನ್​ ಪ್ರೀಮಿಯರ್ ಲೀಗ್​ನ ಚೆನ್ನೈ ವಿರುದ್ಧದ ಪಂದ್ಯದಲ್ಲಿ ಪಂಜಾಬ್​ ಕಿಂಗ್ಸ್​ 6 ವಿಕೆಟ್​ಗಳ ಸೋಲು ಕಂಡಿದ್ದು, ಬ್ಯಾಟಿಂಗ್​ನಲ್ಲಿ ಸಂಪೂರ್ಣವಾಗಿ ವೈಫಲ್ಯ ಅನುಭವಿಸಿದೆ. ಇದೇ ವಿಚಾರವಾಗಿ ಪಂದ್ಯ ಮುಕ್ತಾಯಗೊಂಡ ಬಳಿಕ ತಂಡದ ಕ್ಯಾಪ್ಟನ್ ಕೆ.ಎಲ್. ರಾಹುಲ್ ಮಾತನಾಡಿದ್ದು, ಅಂಜಿಕೆಯಿಲ್ಲದೆ ಕ್ರಿಕೆಟ್​ ಆಡುವಂತೆ ತಂಡದ ಪ್ಲೇಯರ್ಸ್​ಗೆ ಧೈರ್ಯ ತುಂಬಿದ್ದಾರೆ.

ಈ ಬಗ್ಗೆ ಹೆಚ್ಚಿನದು ಹೇಳುವ ಅಗತ್ಯವಿಲ್ಲ. ಯಾವುದೇ ತಂಡ ಆರಂಭದ 7 - 8 ಓವರ್​ಗಳಲ್ಲಿ ನಾಲ್ಕೈದು ವಿಕೆಟ್ ಕಳೆದುಕೊಂಡರೆ ಅದು ತಂಡಕ್ಕೆ ದೊಡ್ಡ ಹೊಡೆತ. ಅವರು ಚೆನ್ನಾಗಿ ಬೌಲಿಂಗ್​ ಮಾಡಿದರು. ಆದರೆ, ನಮ್ಮ ಕಡೆಯಿಂದ ಕೆಲವೊಂದು ತಪ್ಪು ಹೊಡೆತದಿಂದಾಗಿ ವಿಕೆಟ್​ ಕಳೆದುಕೊಳ್ಳಬೇಕಾಯಿತು ಎಂದರು.

ಚೆನ್ನೈ ವಿರುದ್ಧದ ಪಂದ್ಯಗಳಲ್ಲಿ ಮಾಡಿರುವ ತಪ್ಪುಗಳಿಂದ ನಾವು ಕಲಿಯಬೇಕಾಗಿದ್ದು, ಮುಂದಿನ ಪಂದ್ಯಗಳಲ್ಲಿ ಸಿಡಿದೇಳಬೇಕು ಎಂದರು. ಮೊದಲ ಪಂದ್ಯದಲ್ಲಿ ನಾವು 220ರನ್​ಗಳಿಕೆ ಮಾಡಿದ್ದೆವು. ಆದರೆ ಚೆನ್ನೈ ವಿರುದ್ಧದ ಪಂದ್ಯದಲ್ಲಿ ಅದರ ಅರ್ಧ ರನ್​ ಸಹ ಗಳಿಕೆ ಮಾಡಲು ಸಾಧ್ಯವಾಗಲಿಲ್ಲ. ಈ ಸೋಲಿನಿಂದ ಹೊರಬಂದು ನಾವು ಅಂಜಿಕೆಯಿಲ್ಲದ ಕ್ರಿಕೆಟ್​ ಆಡಬೇಕು ಎಂದು ತಿಳಿಸಿದರು.

ನಿನ್ನೆ ಚೆನ್ನೈ ವಿರುದ್ಧ ನಡೆದ ಪಂದ್ಯದಲ್ಲಿ ಪಂಜಾಬ್​ನ ಟಾಪ್​ ಆರ್ಡರ್​​ ಪ್ಲೇಯರ್ಸ್​ ಬ್ಯಾಟಿಂಗ್​ನಲ್ಲಿ ವೈಫಲ್ಯ ಅನುಭವಿಸಿದ್ದರು. ಆದರೆ, ಶಾರೂಖ್​ ಖಾನ್​ 47ರನ್​​ಗಳಿಕೆ ಮಾಡಿದ್ದರಿಂದ 100ರ ಗಡಿ ದಾಟಿತು. ಇದರ ಬೆನ್ನತ್ತಿದ್ದ ಚೆನ್ನೈ ತಂಡ 15.4 ಓವರ್​ಗಳಲ್ಲಿ 4 ವಿಕೆಟ್​ ಕಳೆದುಕೊಂಡು ಗುರಿ ಮುಟ್ಟಿ ಗೆಲುವು ಸಾಧಿಸಿತ್ತು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.