ETV Bharat / sports

ಎಬಿಡಿ ಬ್ಯಾಟಿಂಗ್​​ ಆರ್ಭಟ ಪಂದ್ಯದ ಗತಿಯನ್ನೇ ಬದಲಿಸಿತು: ವಾಷಿಂಗ್ಟನ್​ ಸುಂದರ್

author img

By

Published : Oct 13, 2020, 8:06 AM IST

Updated : Oct 13, 2020, 9:30 AM IST

ಎಬಿ ಡಿವಿಲಿಯರ್ಸ್ 33 ಎಸೆತಗಳಲ್ಲಿ ಅಜೇಯ 73 ರನ್ ಗಳಿಸಿ ರಾಯಲ್ ಚಾಲೆಂಜರ್ಸ್ ಬೆಂಗಳೂರು, ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ವಿರುದ್ಧ ಗೆಲುವು ಸಾಧಿಸಲು ಕಾರಣವಾಯಿತು ಎಂದು ವಾಷಿಂಗ್ಟನ್​ ಸುಂದರ್ ಹೇಳಿದರು.

ವಾಷಿಂಗ್ಟನ್​ ಸುಂದರ್
ವಾಷಿಂಗ್ಟನ್​ ಸುಂದರ್

ಶಾರ್ಜಾ: ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಸೋಮವಾರ ಸುನಿಲ್ ನರೈನ್ ಅನುಪಸ್ಥಿತಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಕೋಲ್ಕತ್ತಾ ನೈಟ್ ರೈಡರ್ಸ್ ತಂಡವನ್ನು 82 ರನ್‌ಗಳಿಂದ ಮಣಿಸಿದೆ. ಇನ್ನು ಎಬಿ ಡಿವಿಲಿಯರ್ಸ್ 33 ಎಸೆತಗಳಲ್ಲಿ ಅಜೇಯ 73 ರನ್ ಗಳಿಸಿ ತಂಡದ ಗೆಲುವಿಗೆ ಕಾರಣರಾಗಿದ್ದಾರೆ.

ಈ ಬಗ್ಗೆ ವಾಷಿಂಗ್ಟನ್​ ಸುಂದರ್​ ಮಾತನಾಡಿದ್ದು,"ಆಂಡ್ರೆ ರಸ್ಸೆಲ್ ವಿರುದ್ಧ ಆಟವಾಡಲು ನಾವು ಬಹಳಷ್ಟು ಯೋಜನೆಗಳನ್ನು ಮಾಡಿದ್ದೆವು. ಚಹಾಲ್​ ಜೊತೆ ಬೌಲಿಂಗ್​ ಮಾಡಿದ್ದಕ್ಕೆ ತುಂಬಾ ಸಂತೋಷವಾಗಿದೆ. ನಮ್ಮ ಗೆಲುವು ನಮಗೆ ಸಂತೋಷ ನೀಡಿದೆ. ಆಟ ಪ್ರಾರಂಭವಾಗುವ ಮೊದಲು ನಿಧಾನಗತಿಯಲ್ಲಿ ಆಟ ಮುಂದುವರಿಯಬಹುದು ಎಂದು ಭಾವಿಸಿದ್ದೆವು. ಆದರೆ ಎಬಿಡಿ ಬ್ಯಾಟಿಂಗ್ ಮಾಡಿದ ರೀತಿ ಅಕ್ಷರಶಃ ಆಟದ ವರಸೆಯನ್ನು ಬದಲಾಯಿಸಿತು. ನಮ್ಮ ತಂಡ 160 ರನ್​ ಗಳಿಸಬಹುದು ಎಂದುಕೊಂಡಿದ್ದೆವು. ಆದರೆ ಅವರು ಬ್ಯಾಟಿಂಗ್ ಮಾಡಿದ ರೀತಿ ಗೆಲುವಿನ ನಗೆ ಬೀರಲು ಸಹಕಾರಿಯಾಯಿತು” ಎಂದು ಹೇಳಿದ್ದಾರೆ.

"ಆರು ಬೌಲರ್‌ಗಳು ಉತ್ತಮವಾಗಿ ಆಡಿದ್ದೇವೆ. ಇದು ಕೋಲ್ಕತ್ತಾ ತಂಡದ ವಿರುದ್ಧ 82 ರನ್‌ಗಳಿಂದ ಜಯ ಗಳಿಸಲು ಸಾಧ್ಯವಾಯಿತು. ಈ ಗೆಲುವುಗಳು ತಂಡದಲ್ಲಿನ ವಿಶ್ವಾಸವನ್ನು ಹೆಚ್ಚಿಸುತ್ತದೆ. ಇನ್ನೂ ಹೆಚ್ಚಿನ ಆಟಗಳು ಬರಲಿವೆ. ಮುಂದಿನ ಪಂದ್ಯದಲ್ಲಿ ಇನ್ನಷ್ಟು ಉತ್ತಮ ಪ್ರದರ್ಶನ ನೀಡಲು ಪ್ರಯತ್ನಿಸುತ್ತೇವೆ" ಎಂದರು.

ಎಬಿ ಡಿವಿಲಿಯರ್ಸ್‌ರ ಅತ್ಯಧಿಕ ಸ್ಕೋರ್ ಬೆಂಗಳೂರಿನ ರನ್​ಗಳನ್ನು 194-2ಕ್ಕೆ ಏರಿಸಿತು. ಇನ್ನು ಡೆತ್ ಓವರ್‌ಗಳಲ್ಲಿ ಆರು ಸಿಕ್ಸರ್ ಮತ್ತು ಐದು ಬೌಂಡರಿ ಬಾರಿಸಿದ ಅವರು ಗೆಲುವಿನ ಕಾರಣಕರ್ತರಾದರು ಎಂದರು. ಕೋಲ್ಕತ್ತಾ ತಂಡಕ್ಕೆ ಸುನಿಲ್​ ನರೈನ್​ ಅನುಪಸ್ಥಿತಿ ಸಂಕಷ್ಕ್ಕೀಡು ಮಾಡಿತು ಎಂದನಿಸುತ್ತದೆ ಎಂದರು.

ಶಾರ್ಜಾ: ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಸೋಮವಾರ ಸುನಿಲ್ ನರೈನ್ ಅನುಪಸ್ಥಿತಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಕೋಲ್ಕತ್ತಾ ನೈಟ್ ರೈಡರ್ಸ್ ತಂಡವನ್ನು 82 ರನ್‌ಗಳಿಂದ ಮಣಿಸಿದೆ. ಇನ್ನು ಎಬಿ ಡಿವಿಲಿಯರ್ಸ್ 33 ಎಸೆತಗಳಲ್ಲಿ ಅಜೇಯ 73 ರನ್ ಗಳಿಸಿ ತಂಡದ ಗೆಲುವಿಗೆ ಕಾರಣರಾಗಿದ್ದಾರೆ.

ಈ ಬಗ್ಗೆ ವಾಷಿಂಗ್ಟನ್​ ಸುಂದರ್​ ಮಾತನಾಡಿದ್ದು,"ಆಂಡ್ರೆ ರಸ್ಸೆಲ್ ವಿರುದ್ಧ ಆಟವಾಡಲು ನಾವು ಬಹಳಷ್ಟು ಯೋಜನೆಗಳನ್ನು ಮಾಡಿದ್ದೆವು. ಚಹಾಲ್​ ಜೊತೆ ಬೌಲಿಂಗ್​ ಮಾಡಿದ್ದಕ್ಕೆ ತುಂಬಾ ಸಂತೋಷವಾಗಿದೆ. ನಮ್ಮ ಗೆಲುವು ನಮಗೆ ಸಂತೋಷ ನೀಡಿದೆ. ಆಟ ಪ್ರಾರಂಭವಾಗುವ ಮೊದಲು ನಿಧಾನಗತಿಯಲ್ಲಿ ಆಟ ಮುಂದುವರಿಯಬಹುದು ಎಂದು ಭಾವಿಸಿದ್ದೆವು. ಆದರೆ ಎಬಿಡಿ ಬ್ಯಾಟಿಂಗ್ ಮಾಡಿದ ರೀತಿ ಅಕ್ಷರಶಃ ಆಟದ ವರಸೆಯನ್ನು ಬದಲಾಯಿಸಿತು. ನಮ್ಮ ತಂಡ 160 ರನ್​ ಗಳಿಸಬಹುದು ಎಂದುಕೊಂಡಿದ್ದೆವು. ಆದರೆ ಅವರು ಬ್ಯಾಟಿಂಗ್ ಮಾಡಿದ ರೀತಿ ಗೆಲುವಿನ ನಗೆ ಬೀರಲು ಸಹಕಾರಿಯಾಯಿತು” ಎಂದು ಹೇಳಿದ್ದಾರೆ.

"ಆರು ಬೌಲರ್‌ಗಳು ಉತ್ತಮವಾಗಿ ಆಡಿದ್ದೇವೆ. ಇದು ಕೋಲ್ಕತ್ತಾ ತಂಡದ ವಿರುದ್ಧ 82 ರನ್‌ಗಳಿಂದ ಜಯ ಗಳಿಸಲು ಸಾಧ್ಯವಾಯಿತು. ಈ ಗೆಲುವುಗಳು ತಂಡದಲ್ಲಿನ ವಿಶ್ವಾಸವನ್ನು ಹೆಚ್ಚಿಸುತ್ತದೆ. ಇನ್ನೂ ಹೆಚ್ಚಿನ ಆಟಗಳು ಬರಲಿವೆ. ಮುಂದಿನ ಪಂದ್ಯದಲ್ಲಿ ಇನ್ನಷ್ಟು ಉತ್ತಮ ಪ್ರದರ್ಶನ ನೀಡಲು ಪ್ರಯತ್ನಿಸುತ್ತೇವೆ" ಎಂದರು.

ಎಬಿ ಡಿವಿಲಿಯರ್ಸ್‌ರ ಅತ್ಯಧಿಕ ಸ್ಕೋರ್ ಬೆಂಗಳೂರಿನ ರನ್​ಗಳನ್ನು 194-2ಕ್ಕೆ ಏರಿಸಿತು. ಇನ್ನು ಡೆತ್ ಓವರ್‌ಗಳಲ್ಲಿ ಆರು ಸಿಕ್ಸರ್ ಮತ್ತು ಐದು ಬೌಂಡರಿ ಬಾರಿಸಿದ ಅವರು ಗೆಲುವಿನ ಕಾರಣಕರ್ತರಾದರು ಎಂದರು. ಕೋಲ್ಕತ್ತಾ ತಂಡಕ್ಕೆ ಸುನಿಲ್​ ನರೈನ್​ ಅನುಪಸ್ಥಿತಿ ಸಂಕಷ್ಕ್ಕೀಡು ಮಾಡಿತು ಎಂದನಿಸುತ್ತದೆ ಎಂದರು.

Last Updated : Oct 13, 2020, 9:30 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.