ETV Bharat / sports

ಆರ್​ಸಿಬಿ ಬೌಲರ್​ಗಳು ಉತ್ತಮವಾಗಿ ಬೌಲ್ ಮಾಡಿದ್ರು: ಇಯಾನ್ ಮಾರ್ಗನ್ - ಆರ್​ಸಿಬಿ ಬೌಲರ್​ಗಳು ಉತ್ತಮವಾಗಿ ಬೌಲ್ ಮಾಡಿದ್ರು

ಆರ್​ಸಿಬಿ ಬೌಲರ್​ಗಳು ಉತ್ತಮವಾಗಿ ಬೌಲ್​ ಮಾಡಿದ್ರು. ಆದರೆ ನಾವು ಅದನ್ನು ಉತ್ತಮವಾಗಿ ಎದುರಿಸಬೇಕಿತ್ತು ಎಂದು ಕೆಕೆಆರ್​ ತಂಡದ ನಾಯಕ ಇಯಾನ್ ಮಾರ್ಗನ್ ಹೇಳಿದ್ದಾರೆ.

Eoin Morgan
ಇಯಾನ್ ಮಾರ್ಗನ್
author img

By

Published : Oct 22, 2020, 7:19 AM IST

ಅಬುಧಾಬಿ: ಬುಧವಾರ ನಡೆದ ಐಪಿಎಲ್ ಪಂದ್ಯದಲ್ಲಿ ಕೆಕೆಆರ್​ ತಂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ 8 ವಿಕೆಟ್​ಗಳ ಸೋಲು ಅನುಭವಿಸಿದ್ದು, ಆರ್​ಸಿಬಿ ಬೌಲರ್​ಗಳು ಉತ್ತಮವಾಗಿ ಸ್ಪೆಲ್​ ಮಾಡಿದ್ರು ಎಂದು ಕೋಲ್ಕತ್ತಾ ತಂಡದ ನಾಯಕ ಇಯಾನ್ ಮಾರ್ಗನ್ ಹೇಳಿದ್ದಾರೆ.

ಪಂದ್ಯ ಮುಗಿದ ಬಳಿಕ ಮಾತನಾಡಿದ ಇಯಾನ್ ಮಾರ್ಗನ್, "ಈ ಸೋಲಿಗೆ ನಮ್ಮ ಬ್ಯಾಟಿಂಗ್ ಪ್ರದರ್ಶನವೇ ಕಾರಣ. ಆರಂಭದಲ್ಲೇ ನಾಲ್ಕರಿಂದ ಐದು ವಿಕೆಟ್ ಕಳೆದುಕೊಂಡಿದ್ದು ತುಂಬಾ ನಿರಾಶೆ ಉಂಟುಮಾಡಿದೆ. ಆರ್​ಸಿಬಿ ಬೌಲರ್​ಗಳು ಉತ್ತಮವಾಗಿ ಬೌಲ್​ ಮಾಡಿದ್ರು. ಆದರೆ ನಾವು ಅದನ್ನು ಉತ್ತಮವಾಗಿ ಎದುರಿಸಬೇಕಿತ್ತು. ಇಬ್ಬನಿ ಇದ್ದ ಕಾರಣ ನಾವು ಮೊದಲು ಬೌಲಿಂಗ್ ನಡೆಸಿಬೇಕಿತ್ತು" ಎಂದಿದ್ದಾರೆ.

"ನಾವು ಅಗ್ರ ಮೂವರು ಬ್ಯಾಟ್ಸ್​ಮನ್​ಗಳ ಆಯ್ಕೆಗಳಿಗೆ ಅನುಗುಣವಾಗಿರುತ್ತೇವೆ. ಅವರು ನಮ್ಮನ್ನು ಮುಂದೆ ಕೊಂಡೊಯ್ಯುತ್ತಾರೆ ಎಂದು ನಾವು ನಂಬುತ್ತೇವೆ. ಅವರು ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಿದ್ದಾರೆ. ಆದ್ದರಿಂದ ಭಾರತೀಯ ಬ್ಯಾಟ್ಸ್‌ಮನ್‌ಗಳನ್ನು ಬೆಂಬಲಿಸುವುದು ಮುಖ್ಯವಾಗಿತ್ತು" ಎಂದಿದ್ದಾರೆ.

mohammed siraj
ಮೊಹಮ್ಮದ್ ಸಿರಾಜ್, ಆರ್​ಸಿಬಿ ವೇಗಿ

ಕೆರಿಬಿಯನ್ ಆಟಗಾರರಾರ ಸುನಿಲ್ ನರೈನ್ ಮತ್ತು ರಸೆಲ್ ಆದಷ್ಟು ಶೀಘ್ರದಲ್ಲೇ ತಂಡಕ್ಕೆ ವಾಪಸ್ ಆಗಲಿದ್ದಾರೆ ಎಂದು ಮಾರ್ಗನ್ ತಿಳಿಸಿದ್ದಾರೆ. "ರಸೆಲ್ ಮತ್ತು ನರೈನ್ ಫಿಟ್ ಆಗಿ, ಶೀಘ್ರದಲ್ಲೇ ತಂಡಕ್ಕೆ ಮರಳಲಿದ್ದಾರೆ. ಮುಖ್ಯವಾಗಿ ಅವರಿಬ್ಬರು ಆಲ್​ರೌಂಡ್ ಆಟಗಾರರಾಗಿದ್ದು, ತಂಡಕ್ಕೆ ನೆರವಾಗಲಿದ್ದಾರೆ" ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಕೆಕೆಆರ್ ನೀಡಿದ 85 ರನ್​ಗಳ ಗುರಿಯನ್ನು 13.3 ಓವರ್​ಗಳಲ್ಲಿ 2 ವಿಕೆಟ್ ಕಳೆದುಕೊಂಡು ತಲುಪುವ ಮೂಲಕ 8 ವಿಕೆಟ್​ಗಳ ಭರ್ಜರಿ ಜಯ ಸಾಧಿಸಿದ ಆರ್​ಸಿಬಿ ತಂಡ, ಅಂಕಪಟ್ಟಿಯಲ್ಲಿ 2ನೇ ಸ್ಥಾನಕ್ಕೇರಿದೆ.

ಅಬುಧಾಬಿ: ಬುಧವಾರ ನಡೆದ ಐಪಿಎಲ್ ಪಂದ್ಯದಲ್ಲಿ ಕೆಕೆಆರ್​ ತಂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ 8 ವಿಕೆಟ್​ಗಳ ಸೋಲು ಅನುಭವಿಸಿದ್ದು, ಆರ್​ಸಿಬಿ ಬೌಲರ್​ಗಳು ಉತ್ತಮವಾಗಿ ಸ್ಪೆಲ್​ ಮಾಡಿದ್ರು ಎಂದು ಕೋಲ್ಕತ್ತಾ ತಂಡದ ನಾಯಕ ಇಯಾನ್ ಮಾರ್ಗನ್ ಹೇಳಿದ್ದಾರೆ.

ಪಂದ್ಯ ಮುಗಿದ ಬಳಿಕ ಮಾತನಾಡಿದ ಇಯಾನ್ ಮಾರ್ಗನ್, "ಈ ಸೋಲಿಗೆ ನಮ್ಮ ಬ್ಯಾಟಿಂಗ್ ಪ್ರದರ್ಶನವೇ ಕಾರಣ. ಆರಂಭದಲ್ಲೇ ನಾಲ್ಕರಿಂದ ಐದು ವಿಕೆಟ್ ಕಳೆದುಕೊಂಡಿದ್ದು ತುಂಬಾ ನಿರಾಶೆ ಉಂಟುಮಾಡಿದೆ. ಆರ್​ಸಿಬಿ ಬೌಲರ್​ಗಳು ಉತ್ತಮವಾಗಿ ಬೌಲ್​ ಮಾಡಿದ್ರು. ಆದರೆ ನಾವು ಅದನ್ನು ಉತ್ತಮವಾಗಿ ಎದುರಿಸಬೇಕಿತ್ತು. ಇಬ್ಬನಿ ಇದ್ದ ಕಾರಣ ನಾವು ಮೊದಲು ಬೌಲಿಂಗ್ ನಡೆಸಿಬೇಕಿತ್ತು" ಎಂದಿದ್ದಾರೆ.

"ನಾವು ಅಗ್ರ ಮೂವರು ಬ್ಯಾಟ್ಸ್​ಮನ್​ಗಳ ಆಯ್ಕೆಗಳಿಗೆ ಅನುಗುಣವಾಗಿರುತ್ತೇವೆ. ಅವರು ನಮ್ಮನ್ನು ಮುಂದೆ ಕೊಂಡೊಯ್ಯುತ್ತಾರೆ ಎಂದು ನಾವು ನಂಬುತ್ತೇವೆ. ಅವರು ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಿದ್ದಾರೆ. ಆದ್ದರಿಂದ ಭಾರತೀಯ ಬ್ಯಾಟ್ಸ್‌ಮನ್‌ಗಳನ್ನು ಬೆಂಬಲಿಸುವುದು ಮುಖ್ಯವಾಗಿತ್ತು" ಎಂದಿದ್ದಾರೆ.

mohammed siraj
ಮೊಹಮ್ಮದ್ ಸಿರಾಜ್, ಆರ್​ಸಿಬಿ ವೇಗಿ

ಕೆರಿಬಿಯನ್ ಆಟಗಾರರಾರ ಸುನಿಲ್ ನರೈನ್ ಮತ್ತು ರಸೆಲ್ ಆದಷ್ಟು ಶೀಘ್ರದಲ್ಲೇ ತಂಡಕ್ಕೆ ವಾಪಸ್ ಆಗಲಿದ್ದಾರೆ ಎಂದು ಮಾರ್ಗನ್ ತಿಳಿಸಿದ್ದಾರೆ. "ರಸೆಲ್ ಮತ್ತು ನರೈನ್ ಫಿಟ್ ಆಗಿ, ಶೀಘ್ರದಲ್ಲೇ ತಂಡಕ್ಕೆ ಮರಳಲಿದ್ದಾರೆ. ಮುಖ್ಯವಾಗಿ ಅವರಿಬ್ಬರು ಆಲ್​ರೌಂಡ್ ಆಟಗಾರರಾಗಿದ್ದು, ತಂಡಕ್ಕೆ ನೆರವಾಗಲಿದ್ದಾರೆ" ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಕೆಕೆಆರ್ ನೀಡಿದ 85 ರನ್​ಗಳ ಗುರಿಯನ್ನು 13.3 ಓವರ್​ಗಳಲ್ಲಿ 2 ವಿಕೆಟ್ ಕಳೆದುಕೊಂಡು ತಲುಪುವ ಮೂಲಕ 8 ವಿಕೆಟ್​ಗಳ ಭರ್ಜರಿ ಜಯ ಸಾಧಿಸಿದ ಆರ್​ಸಿಬಿ ತಂಡ, ಅಂಕಪಟ್ಟಿಯಲ್ಲಿ 2ನೇ ಸ್ಥಾನಕ್ಕೇರಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.