ETV Bharat / sports

ಕಳಪೆ ಪ್ರದರ್ಶನ ತೋರಿದ್ದ ರಸೆಲ್​,​ ಕಾರ್ತಿಕ್ ಉಳಿಸಿಕೊಂಡ ಕೆಕೆಆರ್.. ಯಾರೆಲ್ಲಾ ಔಟ್? ಇಲ್ಲಿದೆ ಮಾಹಿತಿ

author img

By

Published : Jan 20, 2021, 9:41 PM IST

ಕೋಲ್ಕತಾ ನೈಟ್ ರೈಡರ್ಸ್‌ ತಂಡವು ದಿನೇಶ್​ ಕಾರ್ತಿಕ್, ಕುಲದೀಪ್​ ಯಾದವ್​​ ಸೇರಿ 17 ಸದಸ್ಯರ ತಂಡವನ್ನು ಉಳಿಸಿಕೊಂಡಿದ್ದು, ಕೇವಲ ಐದು ಆಟಗಾರರನ್ನು ಬಿಡುಗಡೆ ಮಾಡಿದೆ..

KKR keep the faith in Kuldeep, Karthik
ಕೆಕೆಆರ್

ಹೈದರಾಬಾದ್ ​: ನಾಯಕತ್ವದಿಂದ ಕೆಳಗಿಳಿದ ಮತ್ತು ಅಸ್ಥಿರ ಪ್ರದರ್ಶನ ತೋರಿದ ದಿನೇಶ್ ಕಾರ್ತಿಕ್ ಅವರನ್ನು ಮುಂದಿನ ಆವೃತ್ತಿಯಲ್ಲಿ ಕೈಬಿಡುವ ಸಾಧ್ಯತೆಯಿದೆ ಎಂಬ ಹುಸಿ ಮಾತುಗಳಿಗೆ ಕೋಲ್ಕತಾ ನೈಟ್ ರೈಡರ್ಸ್ (ಕೆಕೆಆರ್​) ಬ್ರೇಕ್​ ಹಾಕಿದೆ. ಅಲ್ಲದೆ, ತೀರಾ ಕಳಪೆ ಪ್ರದರ್ಶನ ತೋರಿದ್ದ ಆ್ಯಂಡ್ರೆ ರಸೆಲ್‌ರನ್ನು ಉಳಿಸಿಕೊಳ್ಳುವ ಮೂಲಕ ಆಶ್ಚರ್ಯ ಮೂಡಿಸಿದೆ.

ಇದನ್ನೂ ಓದಿ...16 ಆಟಗಾರರನ್ನು ಉಳಿಸಿಕೊಂಡ ಪಂಜಾಬ್​: ಮ್ಯಾಕ್ಸ್​​ವೆಲ್​, ಕರುಣ್​​ ನಾಯರ್​ಗೆ ಗೇಟ್​ಪಾಸ್​​

ದಿನೇಶ್​ ಕಾರ್ತಿಕ್, ಕುಲದೀಪ್​ ಯಾದವ್​​ ಸೇರಿ 17 ಸದಸ್ಯರ ತಂಡವನ್ನು ಉಳಿಸಿಕೊಂಡಿದ್ದು, ಕೇವಲ ಐದು ಆಟಗಾರರನ್ನು ಬಿಡುಗಡೆ ಮಾಡಿದೆ. ಎರಡು ಬಾರಿ ಚಾಂಪಿಯನ್‌ ಆಗಿರುವ ಕೆಕೆಆರ್​, ಟಾಮ್ ಬ್ಯಾಂಟನ್, ಕ್ರಿಸ್ ಗ್ರೀನ್ (ವಿದೇಶಿಯರು)‌ ಮತ್ತು ಸಿದ್ಧೇಶ್ ಲಾಡ್, ನಿಖಿಲ್ ನಾಯಕ್, ಎಂ ಸಿದ್ಧಾರ್ಥ್ ಅವರನ್ನು (ಭಾರತೀಯರು) ಬಿಡುಗಡೆ ಮಾಡಿದೆ.

ಕಳೆದ ಐಪಿಎಲ್ ಆವೃತ್ತಿಯಲ್ಲಿ ಕೆಕೆಆರ್ ತಂಡವನ್ನು ಇಬ್ಬರು ನಾಯಕರು ಮುನ್ನಡೆಸಿದ್ದರು. ಮೊದಲಾರ್ಧದಲ್ಲಿ ದಿನೇಶ್ ಕಾರ್ತಿಕ್, ದ್ವಿತಿಯಾರ್ಧದಲ್ಲಿ ಇಯಾನ್ ಮಾರ್ಗನ್​​​ಗೆ‌ ನಾಯಕತ್ವ ಕೊಟ್ಟಿದ್ದರು. 14 ಪಂದ್ಯಗಳಲ್ಲಿ ಏಳು ಪಂದ್ಯಗಳಲ್ಲಿ ಗೆಲುವು ಸಾಧಿಸಿ, 7 ಪಂದ್ಯಗಳಲ್ಲಿ ಸೋಲನಭವಿಸಿ ಅಂಕಪಟ್ಟಿಯಲ್ಲಿ 5ನೇ ಸ್ಥಾನದಲ್ಲಿತ್ತು.

📣 Meet the Retained Knights for #IPL2021#KKR #Cricket pic.twitter.com/dkW857CWX8

— KolkataKnightRiders (@KKRiders) January 20, 2021 ">

ಇದನ್ನೂ ಓದಿ...ಜೇಸನ್​ ರಾಯ್​, ಅಲೆಕ್ಸ್​​ ಕ್ಯಾರಿ ಔಟ್​​​​​: ಡೆಲ್ಲಿ ಉಳಿಸಿಕೊಂಡ ಯುವ ಆಟಗಾರರ ಪಟ್ಟಿ ಹೀಗಿದೆ

ಕೆಕೆಆರ್​ ಉಳಿಸಿಕೊಂಡ ತಂಡ : ದಿನೇಶ್ ಕಾರ್ತಿಕ್, ಆ್ಯಂಡ್ರೆ ರಸೆಲ್, ಕಮಲೇಶ್ ನಾಗರಕೋಟಿ, ಕುಲದೀಪ್ ಯಾದವ್, ಲೂಕಿ ಫರ್ಗ್ಯುಸನ್, ನಿತೀಶ್ ರಾಣಾ, ಪ್ರಸಿದ್ಧ್ ಕೃಷ್ಣ, ರಿಂಕು ಸಿಂಗ್, ಸಂದೀಪ್ ವಾರಿಯರ್, ಶಿವಮ್​​ ಮಾವಿ, ಶುಭಮನ್ ಗಿಲ್, ಸುನಿಲ್ ನಾರಾಯಣ್​​, ಇಯಾನ್ ಮೋರ್ಗಾನ್ (ನಾಯಕ), ಪ್ಯಾಟ್ ಕಮಿನ್ಸ್​​, ವರುಣ್ ಚಕ್ರವರ್ತಿ, ಅಲಿ ಖಾನ್, ಟಿಮ್ ಸೀಫರ್ಟ್.

ಫ್ರಾಂಚೈಸಿ ಉಳಿಸಿಕೊಂಡ ಮೊತ್ತ: ₹10.85 ಕೋಟಿ

ಹೈದರಾಬಾದ್ ​: ನಾಯಕತ್ವದಿಂದ ಕೆಳಗಿಳಿದ ಮತ್ತು ಅಸ್ಥಿರ ಪ್ರದರ್ಶನ ತೋರಿದ ದಿನೇಶ್ ಕಾರ್ತಿಕ್ ಅವರನ್ನು ಮುಂದಿನ ಆವೃತ್ತಿಯಲ್ಲಿ ಕೈಬಿಡುವ ಸಾಧ್ಯತೆಯಿದೆ ಎಂಬ ಹುಸಿ ಮಾತುಗಳಿಗೆ ಕೋಲ್ಕತಾ ನೈಟ್ ರೈಡರ್ಸ್ (ಕೆಕೆಆರ್​) ಬ್ರೇಕ್​ ಹಾಕಿದೆ. ಅಲ್ಲದೆ, ತೀರಾ ಕಳಪೆ ಪ್ರದರ್ಶನ ತೋರಿದ್ದ ಆ್ಯಂಡ್ರೆ ರಸೆಲ್‌ರನ್ನು ಉಳಿಸಿಕೊಳ್ಳುವ ಮೂಲಕ ಆಶ್ಚರ್ಯ ಮೂಡಿಸಿದೆ.

ಇದನ್ನೂ ಓದಿ...16 ಆಟಗಾರರನ್ನು ಉಳಿಸಿಕೊಂಡ ಪಂಜಾಬ್​: ಮ್ಯಾಕ್ಸ್​​ವೆಲ್​, ಕರುಣ್​​ ನಾಯರ್​ಗೆ ಗೇಟ್​ಪಾಸ್​​

ದಿನೇಶ್​ ಕಾರ್ತಿಕ್, ಕುಲದೀಪ್​ ಯಾದವ್​​ ಸೇರಿ 17 ಸದಸ್ಯರ ತಂಡವನ್ನು ಉಳಿಸಿಕೊಂಡಿದ್ದು, ಕೇವಲ ಐದು ಆಟಗಾರರನ್ನು ಬಿಡುಗಡೆ ಮಾಡಿದೆ. ಎರಡು ಬಾರಿ ಚಾಂಪಿಯನ್‌ ಆಗಿರುವ ಕೆಕೆಆರ್​, ಟಾಮ್ ಬ್ಯಾಂಟನ್, ಕ್ರಿಸ್ ಗ್ರೀನ್ (ವಿದೇಶಿಯರು)‌ ಮತ್ತು ಸಿದ್ಧೇಶ್ ಲಾಡ್, ನಿಖಿಲ್ ನಾಯಕ್, ಎಂ ಸಿದ್ಧಾರ್ಥ್ ಅವರನ್ನು (ಭಾರತೀಯರು) ಬಿಡುಗಡೆ ಮಾಡಿದೆ.

ಕಳೆದ ಐಪಿಎಲ್ ಆವೃತ್ತಿಯಲ್ಲಿ ಕೆಕೆಆರ್ ತಂಡವನ್ನು ಇಬ್ಬರು ನಾಯಕರು ಮುನ್ನಡೆಸಿದ್ದರು. ಮೊದಲಾರ್ಧದಲ್ಲಿ ದಿನೇಶ್ ಕಾರ್ತಿಕ್, ದ್ವಿತಿಯಾರ್ಧದಲ್ಲಿ ಇಯಾನ್ ಮಾರ್ಗನ್​​​ಗೆ‌ ನಾಯಕತ್ವ ಕೊಟ್ಟಿದ್ದರು. 14 ಪಂದ್ಯಗಳಲ್ಲಿ ಏಳು ಪಂದ್ಯಗಳಲ್ಲಿ ಗೆಲುವು ಸಾಧಿಸಿ, 7 ಪಂದ್ಯಗಳಲ್ಲಿ ಸೋಲನಭವಿಸಿ ಅಂಕಪಟ್ಟಿಯಲ್ಲಿ 5ನೇ ಸ್ಥಾನದಲ್ಲಿತ್ತು.

ಇದನ್ನೂ ಓದಿ...ಜೇಸನ್​ ರಾಯ್​, ಅಲೆಕ್ಸ್​​ ಕ್ಯಾರಿ ಔಟ್​​​​​: ಡೆಲ್ಲಿ ಉಳಿಸಿಕೊಂಡ ಯುವ ಆಟಗಾರರ ಪಟ್ಟಿ ಹೀಗಿದೆ

ಕೆಕೆಆರ್​ ಉಳಿಸಿಕೊಂಡ ತಂಡ : ದಿನೇಶ್ ಕಾರ್ತಿಕ್, ಆ್ಯಂಡ್ರೆ ರಸೆಲ್, ಕಮಲೇಶ್ ನಾಗರಕೋಟಿ, ಕುಲದೀಪ್ ಯಾದವ್, ಲೂಕಿ ಫರ್ಗ್ಯುಸನ್, ನಿತೀಶ್ ರಾಣಾ, ಪ್ರಸಿದ್ಧ್ ಕೃಷ್ಣ, ರಿಂಕು ಸಿಂಗ್, ಸಂದೀಪ್ ವಾರಿಯರ್, ಶಿವಮ್​​ ಮಾವಿ, ಶುಭಮನ್ ಗಿಲ್, ಸುನಿಲ್ ನಾರಾಯಣ್​​, ಇಯಾನ್ ಮೋರ್ಗಾನ್ (ನಾಯಕ), ಪ್ಯಾಟ್ ಕಮಿನ್ಸ್​​, ವರುಣ್ ಚಕ್ರವರ್ತಿ, ಅಲಿ ಖಾನ್, ಟಿಮ್ ಸೀಫರ್ಟ್.

ಫ್ರಾಂಚೈಸಿ ಉಳಿಸಿಕೊಂಡ ಮೊತ್ತ: ₹10.85 ಕೋಟಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.