ETV Bharat / sports

ವರುಣನ ಕಾಟಕ್ಕೂ ಬೆದರದ ಭಾರತ.. ಮಳೆಗೆ ತೋಯ್ದ ಬಾಂಗ್ಲಾಗೆ 5 ರನ್​ಗಳ ಸೋಲು

ಮಹತ್ವದ ಪಂದ್ಯದಲ್ಲಿ ಭಾರತ, ಬಾಂಗ್ಲಾದೇಶದ ವಿರುದ್ಧ ಭರ್ಜರಿಯಾಗಿ ಗೆದ್ದು ಸೆಮಿಫೈನಲ್​ಗೆ ಮತ್ತಷ್ಟು ಹತ್ತಿರವಾಯಿತು. 4 ಪಂದ್ಯಗಳಲ್ಲಿ ಮೂರು ಗೆದ್ದು 6 ಅಂಕ ಗಳಿಸಿರುವ ಟೀಂ ಇಂಡಿಯಾ ಬಿ ಗುಂಪಿನಲ್ಲಿ ಅಗ್ರಸ್ಥಾನಕ್ಕೆ ಲಗ್ಗೆ ಇಟ್ಟಿತು.

author img

By

Published : Nov 2, 2022, 5:48 PM IST

Updated : Nov 2, 2022, 6:15 PM IST

india-win-against-bangladesh
ವರುಣ ಕಾಟಕ್ಕೂ ಬೆದರದ ಭಾರತ

ಅಡಿಲೇಡ್​(ಆಸ್ಟ್ರೇಲಿಯಾ): ವರುಣದೇವ ಮತ್ತು ಬಾಂಗ್ಲಾದೇಶದ ಬ್ಯಾಟರ್​ ಲಿಟನ್​ ದಾಸ್​ರ ಸವಾಲನ್ನು ಮೆಟ್ಟಿನಿಂತ ಭಾರತ ಮಹತ್ವದ ಪಂದ್ಯದಲ್ಲಿ ಡಕ್ವರ್ಥ್ ಲೂಯಿಸ್​ ನಿಯಮ ಪ್ರಕಾರ 5 ರನ್​ಗಳಿಂದ ಗೆದ್ದು ಸೆಮಿಫೈನಲ್​ ತಲುಪುವ ಹಾದಿಯನ್ನು ಸುಲಭ ಮಾಡಿಕೊಂಡಿತು. ಆಡಿದ 4 ಪಂದ್ಯಗಳಲ್ಲಿ 3 ಗೆದ್ದು 1 ಸೋತು 6 ಅಂಕಗಳೊಂದಿಗೆ ಬಿ ಗುಂಪಿನಲ್ಲಿ ಮತ್ತೆ ಅಗ್ರಸ್ಥಾನಕ್ಕೆ ಲಗ್ಗೆ ಇಟ್ಟಿತು.

ಅಡಿಲೇಡ್​ನ ಓವಲ್​ ಮೈದಾನಲ್ಲಿ ಟಾಸ್​ ಸೋತು ಮೊದಲು ಬ್ಯಾಟ್​ ಮಾಡಿದ ಭಾರತ 20 ಓವರ್​ಗಳಲ್ಲಿ 6 ವಿಕೆಟ್​ಗೆ 184 ರನ್ ಗಳಿಸಿತ್ತು. 2ನೇ ಇನಿಂಗ್ಸ್​ ಆರಂಭಿಸಿದ್ದ ಬಾಂಗ್ಲಾದೇಶ 7 ನೇ ಓವರ್​ ವೇಳೆ ವರುಣನ ಆಗಮನವಾಯಿತು.

ಅರ್ಧಗಂಟೆಗೂ ಅಧಿಕ ಮಳೆ ಬಿದ್ದ ಕಾರಣ ಆಟವನ್ನು 16 ಓವರ್​ಗೆ ಕಡಿತ ಮಾಡಿ ಗೆಲ್ಲಲು ಡಕ್ವರ್ಥ್​ ಲೂಯಿಸ್​ ನಿಯಮದ ಪ್ರಕಾರ 151 ರನ್​ ಗುರಿ ನೀಡಲಾಯಿತು. ಮತ್ತೆ ಇನಿಂಗ್ಸ್​ ಆರಂಭಿಸಿದ ಬಾಂಗ್ಲಾ ಪಡೆ ಸತತ ವಿಕೆಟ್​ ಕಳೆದುಕೊಂಡು ಅಂತಿಮವಾಗಿ 6 ವಿಕೆಟ್​ ಕಳೆದುಕೊಂಡು 145 ರನ್​ ಮಾತ್ರ ಗಳಿಸಿ 5 ರನ್​ಗಳಿಂದ ಪರಾಭವಗೊಂಡಿತು.

ಲಿಟನ್​ ದಾಸ್​ ಗುಡುಗು: ಭಾರತ ನೀಡಿದ ಬೃಹತ್​ ಮೊತ್ತ ಬೆಂಬತ್ತಿದ ಶಕೀಬ್ ಅಲ್​ ಹಸನ್​ ಪಡೆಯ ಬ್ಯಾಟರ್​ ಲಿಟನ್​ ದಾಸ್​ ಬಿರುಸಿನ ಆರಂಭ ನೀಡಿದರು. 27 ಎಸೆತಗಳಲ್ಲಿ 7 ಬೌಂಡರಿ 3 ಸಿಕ್ಸರ್​ಗಳಿಂದ 60 ರನ್​ ಗಳಿಸಿದರು. ಮಳೆ ನಿಂತ ಬಳಿಕ ಮತ್ತೆ ಆಟ ಶುರುವಾದಾಗ ಕೆಎಲ್​ ರಾಹುಲ್​ರ ಚಾಣಕ್ಯ ಫೀಲ್ಡಿಂಗ್​ಗೆ ರನೌಟ್​ ಆದರು.

ಮಳೆಯಲ್ಲಿ ತೋಯ್ದ ಬಾಂಗ್ಲಾ: ಬಾಂಗ್ಲಾದೇಶ 7 ನೇ ಓವರ್​ ಆಡುತ್ತಿದ್ದಾಗ ಮಳೆ ಸುರಿಯಲಾರಂಭಿಸಿತು. ಅರ್ಧಗಂಟೆಗೂ ಹೆಚ್ಚು ಮಳೆ ಸುರಿದಿದ್ದರಿಂದ ಡಕ್ವರ್ಥ್​ ಲೂಯಿಸ್​ ನಿಯಮದ ಪ್ರಕಾರ ಆಟವನ್ನು 16 ಓವರ್​ಗೆ ಕಡಿತ ಮಾಡಿ 151 ರನ್​ ಗುರಿ ನಿಗದಿ ಮಾಡಲಾಯಿತು.

ಆಟ ಮರು ಆರಂಭವಾದ ಕೆಲ ಹೊತ್ತಿನಲ್ಲೇ ಉತ್ತಮವಾಗಿ ಬ್ಯಾಟ್​ ಮಾಡುತ್ತಿದ್ದ ಲಿಟನ್​ ದಾಸ್​ ರಾಹುಲ್​ಗೆ ರನೌಟ್​ ಆದರು. ಬಳಿಕ ನಜ್ಮುಲ್​ ಹುಸೈನ್​ ಶ್ಯಾಂಟೋ 21 ರನ್​ ಗಳಿಸಿ ಪೆವಿಲಿಯನ್​ ಸೇರಿದರು. ಇದಾದ ನಂತರ ದೊಡ್ಡ ಮೊತ್ತ ಗಳಿಸುವಲ್ಲಿ ವಿಫಲವಾಗಿ 145 ರನ್​ ಗಳಿಸಿತು. ಭಾರತ ಪರ ಉತ್ತಮವಾಗಿ ಬೌಲ್​ ಮಾಡಿದ ಅರ್ಷದೀಪ್​ ಸಿಂಗ್​, ಹಾರ್ದಿಕ್​ ಪಾಂಡ್ಯಾ ತಲಾ 2 ವಿಕೆಟ್​ ಗಳಿಸಿದರು.

ಭಾರತ ಇನಿಂಗ್ಸ್​: ಇದಕ್ಕೂ ಮೊದಲು ಬ್ಯಾಟ್ ಮಾಡಿದ ಭಾರತಕ್ಕೆ ವಿರಾಟ್​ ಕೊಹ್ಲಿ ಮತ್ತೆ ನೆರವಾದರು. ವಿಶ್ವಕಪ್​ನ 4 ಮನೇ ಪಂದ್ಯದಲ್ಲಿ 3 ನೇ ಅರ್ಧಶತಕ ಸಿಡಿಸಿದ ಚೇಸ್​ ಮಾಸ್ಟರ್​ ಪಂದ್ಯಶ್ರೇಷ್ಟ ಪ್ರಶಸ್ತಿಗೂ ಭಾಜನರಾದರು.

ಟೀಕೆಗೆ ಉತ್ತರಿಸಿದ ರಾಹುಲ್ ಬ್ಯಾಟ್​: ವಿಶ್ವಕಪ್​ನ ಮೊದಲ ಮೂರು ಪಂದ್ಯಗಳಲ್ಲಿ ರನ್​ ಗಳಿಸಲು ಪರದಾಡುತ್ತಿದ್ದ ಕನ್ನಡಿಗ ಕೆ ಎಲ್​ ರಾಹುಲ್​ ತೀವ್ರ ಟೀಕೆಗೆ ಗುರಿಯಾಗಿದ್ದರು. ಮುಂದಿನ ಪಂದ್ಯಗಳಿಗೆ ರಾಹುಲ್​ರನ್ನು ಕೈಬಿಡುವಂತೆ ಒತ್ತಾಯ ಕೇಳಿಬಂದಿತ್ತು. ಆದರೆ, ಮಹತ್ವದ ಪಂದ್ಯದಲ್ಲಿ ಬ್ಯಾಟ್​ಗೆ ಬುದ್ಧಿ ಹೇಳಿದ ರಾಹುಲ್​​ ಭರ್ಜರಿ ಅರ್ಧಶತಕ ಸಿಡಿಸಿದರು.

32 ಎಸೆತಗಳಲ್ಲಿ 4 ಸಿಕ್ಸರ್​, 3 ಬೌಂಡರಿಗಳಿಂದ 50 ರನ್​ ಗಳಿಸಿದರು. ಪಂದ್ಯದಲ್ಲಿ ಸಿಡಿದ 5 ಸಿಕ್ಸ್​ಗಳಲ್ಲಿ ರಾಹುಲ್​ 4 ಸಿಕ್ಸ್​ಗಳಿವೆ. ಈ ಮೂಲಕ ತಾವು ನಿಧಾನಗತಿಯ ಬ್ಯಾಟರ್ ಅಲ್ಲ, ಟಿ20 ತಾವು ಫಿಟ್​ ಎಂಬುದನ್ನು ಸಾಬೀತು ಮಾಡಿದರು. ನಾಯಕ ರೋಹಿತ್​ ಶರ್ಮಾ ವೈಫಲ್ಯ ಈ ಪಂದ್ಯದಲ್ಲೂ ಮುಂದುವರಿಯಿತು. 2 ಗಳಿಸಿದ್ದಾಗ ಹಸನ್​ ಮುಹಮದ್​ಗೆ ವಿಕೆಟ್​ ನೀಡಿದರು.

ವಿರಾಟ್​ ದಾಖಲೆಯ ಅರ್ಧಶತಕ: ಇನ್ನು ಭರ್ಜರಿ ಫಾರ್ಮ್​ನಲ್ಲಿರುವ ಬ್ಯಾಟಿಂಗ್​ ಕಿಂಗ್​ ವಿರಾಟ್ ಕೊಹ್ಲಿ ಬಾಂಗ್ಲಾ ಬೌಲರ್​ಗಳ ಬೆಂಡೆತ್ತಿದರು. 44 ಎಸೆತಗಳಲ್ಲಿ 8 ಬೌಂಡರಿಗಳ ಸಮೇತ 64 ರನ್​ ಸಿಡಿಸಿ ಈ ವಿಶ್ವಕಪ್​​ನಲ್ಲಿ 3ನೇ ಅರ್ಧಶತಕ ಸಿಡಿಸಿದರು.

ಚೇಸ್​ ಮಾಸ್ಟರ್​ 28 ರನ್​ ಗಳಿಸಿದಾಗ ಚುಟುಕು ಮಾದರಿಯ ವಿಶ್ವಕಪ್​ನಲ್ಲಿ ಅತ್ಯಧಿಕ ರನ್​ ಗಳಿಸಿದ ಬ್ಯಾಟರ್ ಆಗಿ ದಾಖಲೆ ಬರೆದರು. ಶ್ರೀಲಂಕಾದ ಲೆಜೆಂಡರಿ ಬ್ಯಾಟರ್​ ಮಹೇಲಾ ಜಯವರ್ಧನೆ 1016 ಗಳಿಸಿದ್ದರು. ಇದನ್ನು ಮೀರಿಸಿದ ವಿರಾಟ್​ ಕೊಹ್ಲಿ 24 ಪಂದ್ಯಗಳಲ್ಲಿ 1053 ರನ್ ಗಳಿಸಿದರು.

ಸೂರ್ಯಕುಮಾರ್​ ಯಾದವ್​ 30 ರನ್​ ಬಾರಿಸಿದರು. ಕೊನೆಯಲ್ಲಿ ಸಿಡಿದ ಅಶ್ವಿನ್​ ತಲಾ 1 ಸಿಕ್ಸರ್​, ಬೌಂಡರಿ ಬಾರಿಸಿದರು. ಬಾಂಗ್ಲಾದೇಶದ ಪರವಾಗಿ ಹಸನ್​ ಮುಹಮದ್​ 3 ನಾಯಕ ಶಕೀಬ್​ ಅಲ್​ ಹಸನ್​ 2, ಟಸ್ಕಿನ್​ ಅಹ್ಮದ್​ ವಿಕೆಟ್​ ಪಡೆಯದಿದ್ದರೂ ಬಿಗಿ ಬೌಲಿಂಗ್​ ಪ್ರದರ್ಶನ ನೀಡಿದರು.

ಓದಿ: ಟಿ20 ವಿಶ್ವಕಪ್​ನಲ್ಲಿ ವಿರಾಟ್​ ವಿಕ್ರಮ.. ಶ್ರೀಲಂಕಾದ ಮಹೇಲಾ ಜಯವರ್ಧನೆ ದಾಖಲೆ ಪುಡಿ

ಅಡಿಲೇಡ್​(ಆಸ್ಟ್ರೇಲಿಯಾ): ವರುಣದೇವ ಮತ್ತು ಬಾಂಗ್ಲಾದೇಶದ ಬ್ಯಾಟರ್​ ಲಿಟನ್​ ದಾಸ್​ರ ಸವಾಲನ್ನು ಮೆಟ್ಟಿನಿಂತ ಭಾರತ ಮಹತ್ವದ ಪಂದ್ಯದಲ್ಲಿ ಡಕ್ವರ್ಥ್ ಲೂಯಿಸ್​ ನಿಯಮ ಪ್ರಕಾರ 5 ರನ್​ಗಳಿಂದ ಗೆದ್ದು ಸೆಮಿಫೈನಲ್​ ತಲುಪುವ ಹಾದಿಯನ್ನು ಸುಲಭ ಮಾಡಿಕೊಂಡಿತು. ಆಡಿದ 4 ಪಂದ್ಯಗಳಲ್ಲಿ 3 ಗೆದ್ದು 1 ಸೋತು 6 ಅಂಕಗಳೊಂದಿಗೆ ಬಿ ಗುಂಪಿನಲ್ಲಿ ಮತ್ತೆ ಅಗ್ರಸ್ಥಾನಕ್ಕೆ ಲಗ್ಗೆ ಇಟ್ಟಿತು.

ಅಡಿಲೇಡ್​ನ ಓವಲ್​ ಮೈದಾನಲ್ಲಿ ಟಾಸ್​ ಸೋತು ಮೊದಲು ಬ್ಯಾಟ್​ ಮಾಡಿದ ಭಾರತ 20 ಓವರ್​ಗಳಲ್ಲಿ 6 ವಿಕೆಟ್​ಗೆ 184 ರನ್ ಗಳಿಸಿತ್ತು. 2ನೇ ಇನಿಂಗ್ಸ್​ ಆರಂಭಿಸಿದ್ದ ಬಾಂಗ್ಲಾದೇಶ 7 ನೇ ಓವರ್​ ವೇಳೆ ವರುಣನ ಆಗಮನವಾಯಿತು.

ಅರ್ಧಗಂಟೆಗೂ ಅಧಿಕ ಮಳೆ ಬಿದ್ದ ಕಾರಣ ಆಟವನ್ನು 16 ಓವರ್​ಗೆ ಕಡಿತ ಮಾಡಿ ಗೆಲ್ಲಲು ಡಕ್ವರ್ಥ್​ ಲೂಯಿಸ್​ ನಿಯಮದ ಪ್ರಕಾರ 151 ರನ್​ ಗುರಿ ನೀಡಲಾಯಿತು. ಮತ್ತೆ ಇನಿಂಗ್ಸ್​ ಆರಂಭಿಸಿದ ಬಾಂಗ್ಲಾ ಪಡೆ ಸತತ ವಿಕೆಟ್​ ಕಳೆದುಕೊಂಡು ಅಂತಿಮವಾಗಿ 6 ವಿಕೆಟ್​ ಕಳೆದುಕೊಂಡು 145 ರನ್​ ಮಾತ್ರ ಗಳಿಸಿ 5 ರನ್​ಗಳಿಂದ ಪರಾಭವಗೊಂಡಿತು.

ಲಿಟನ್​ ದಾಸ್​ ಗುಡುಗು: ಭಾರತ ನೀಡಿದ ಬೃಹತ್​ ಮೊತ್ತ ಬೆಂಬತ್ತಿದ ಶಕೀಬ್ ಅಲ್​ ಹಸನ್​ ಪಡೆಯ ಬ್ಯಾಟರ್​ ಲಿಟನ್​ ದಾಸ್​ ಬಿರುಸಿನ ಆರಂಭ ನೀಡಿದರು. 27 ಎಸೆತಗಳಲ್ಲಿ 7 ಬೌಂಡರಿ 3 ಸಿಕ್ಸರ್​ಗಳಿಂದ 60 ರನ್​ ಗಳಿಸಿದರು. ಮಳೆ ನಿಂತ ಬಳಿಕ ಮತ್ತೆ ಆಟ ಶುರುವಾದಾಗ ಕೆಎಲ್​ ರಾಹುಲ್​ರ ಚಾಣಕ್ಯ ಫೀಲ್ಡಿಂಗ್​ಗೆ ರನೌಟ್​ ಆದರು.

ಮಳೆಯಲ್ಲಿ ತೋಯ್ದ ಬಾಂಗ್ಲಾ: ಬಾಂಗ್ಲಾದೇಶ 7 ನೇ ಓವರ್​ ಆಡುತ್ತಿದ್ದಾಗ ಮಳೆ ಸುರಿಯಲಾರಂಭಿಸಿತು. ಅರ್ಧಗಂಟೆಗೂ ಹೆಚ್ಚು ಮಳೆ ಸುರಿದಿದ್ದರಿಂದ ಡಕ್ವರ್ಥ್​ ಲೂಯಿಸ್​ ನಿಯಮದ ಪ್ರಕಾರ ಆಟವನ್ನು 16 ಓವರ್​ಗೆ ಕಡಿತ ಮಾಡಿ 151 ರನ್​ ಗುರಿ ನಿಗದಿ ಮಾಡಲಾಯಿತು.

ಆಟ ಮರು ಆರಂಭವಾದ ಕೆಲ ಹೊತ್ತಿನಲ್ಲೇ ಉತ್ತಮವಾಗಿ ಬ್ಯಾಟ್​ ಮಾಡುತ್ತಿದ್ದ ಲಿಟನ್​ ದಾಸ್​ ರಾಹುಲ್​ಗೆ ರನೌಟ್​ ಆದರು. ಬಳಿಕ ನಜ್ಮುಲ್​ ಹುಸೈನ್​ ಶ್ಯಾಂಟೋ 21 ರನ್​ ಗಳಿಸಿ ಪೆವಿಲಿಯನ್​ ಸೇರಿದರು. ಇದಾದ ನಂತರ ದೊಡ್ಡ ಮೊತ್ತ ಗಳಿಸುವಲ್ಲಿ ವಿಫಲವಾಗಿ 145 ರನ್​ ಗಳಿಸಿತು. ಭಾರತ ಪರ ಉತ್ತಮವಾಗಿ ಬೌಲ್​ ಮಾಡಿದ ಅರ್ಷದೀಪ್​ ಸಿಂಗ್​, ಹಾರ್ದಿಕ್​ ಪಾಂಡ್ಯಾ ತಲಾ 2 ವಿಕೆಟ್​ ಗಳಿಸಿದರು.

ಭಾರತ ಇನಿಂಗ್ಸ್​: ಇದಕ್ಕೂ ಮೊದಲು ಬ್ಯಾಟ್ ಮಾಡಿದ ಭಾರತಕ್ಕೆ ವಿರಾಟ್​ ಕೊಹ್ಲಿ ಮತ್ತೆ ನೆರವಾದರು. ವಿಶ್ವಕಪ್​ನ 4 ಮನೇ ಪಂದ್ಯದಲ್ಲಿ 3 ನೇ ಅರ್ಧಶತಕ ಸಿಡಿಸಿದ ಚೇಸ್​ ಮಾಸ್ಟರ್​ ಪಂದ್ಯಶ್ರೇಷ್ಟ ಪ್ರಶಸ್ತಿಗೂ ಭಾಜನರಾದರು.

ಟೀಕೆಗೆ ಉತ್ತರಿಸಿದ ರಾಹುಲ್ ಬ್ಯಾಟ್​: ವಿಶ್ವಕಪ್​ನ ಮೊದಲ ಮೂರು ಪಂದ್ಯಗಳಲ್ಲಿ ರನ್​ ಗಳಿಸಲು ಪರದಾಡುತ್ತಿದ್ದ ಕನ್ನಡಿಗ ಕೆ ಎಲ್​ ರಾಹುಲ್​ ತೀವ್ರ ಟೀಕೆಗೆ ಗುರಿಯಾಗಿದ್ದರು. ಮುಂದಿನ ಪಂದ್ಯಗಳಿಗೆ ರಾಹುಲ್​ರನ್ನು ಕೈಬಿಡುವಂತೆ ಒತ್ತಾಯ ಕೇಳಿಬಂದಿತ್ತು. ಆದರೆ, ಮಹತ್ವದ ಪಂದ್ಯದಲ್ಲಿ ಬ್ಯಾಟ್​ಗೆ ಬುದ್ಧಿ ಹೇಳಿದ ರಾಹುಲ್​​ ಭರ್ಜರಿ ಅರ್ಧಶತಕ ಸಿಡಿಸಿದರು.

32 ಎಸೆತಗಳಲ್ಲಿ 4 ಸಿಕ್ಸರ್​, 3 ಬೌಂಡರಿಗಳಿಂದ 50 ರನ್​ ಗಳಿಸಿದರು. ಪಂದ್ಯದಲ್ಲಿ ಸಿಡಿದ 5 ಸಿಕ್ಸ್​ಗಳಲ್ಲಿ ರಾಹುಲ್​ 4 ಸಿಕ್ಸ್​ಗಳಿವೆ. ಈ ಮೂಲಕ ತಾವು ನಿಧಾನಗತಿಯ ಬ್ಯಾಟರ್ ಅಲ್ಲ, ಟಿ20 ತಾವು ಫಿಟ್​ ಎಂಬುದನ್ನು ಸಾಬೀತು ಮಾಡಿದರು. ನಾಯಕ ರೋಹಿತ್​ ಶರ್ಮಾ ವೈಫಲ್ಯ ಈ ಪಂದ್ಯದಲ್ಲೂ ಮುಂದುವರಿಯಿತು. 2 ಗಳಿಸಿದ್ದಾಗ ಹಸನ್​ ಮುಹಮದ್​ಗೆ ವಿಕೆಟ್​ ನೀಡಿದರು.

ವಿರಾಟ್​ ದಾಖಲೆಯ ಅರ್ಧಶತಕ: ಇನ್ನು ಭರ್ಜರಿ ಫಾರ್ಮ್​ನಲ್ಲಿರುವ ಬ್ಯಾಟಿಂಗ್​ ಕಿಂಗ್​ ವಿರಾಟ್ ಕೊಹ್ಲಿ ಬಾಂಗ್ಲಾ ಬೌಲರ್​ಗಳ ಬೆಂಡೆತ್ತಿದರು. 44 ಎಸೆತಗಳಲ್ಲಿ 8 ಬೌಂಡರಿಗಳ ಸಮೇತ 64 ರನ್​ ಸಿಡಿಸಿ ಈ ವಿಶ್ವಕಪ್​​ನಲ್ಲಿ 3ನೇ ಅರ್ಧಶತಕ ಸಿಡಿಸಿದರು.

ಚೇಸ್​ ಮಾಸ್ಟರ್​ 28 ರನ್​ ಗಳಿಸಿದಾಗ ಚುಟುಕು ಮಾದರಿಯ ವಿಶ್ವಕಪ್​ನಲ್ಲಿ ಅತ್ಯಧಿಕ ರನ್​ ಗಳಿಸಿದ ಬ್ಯಾಟರ್ ಆಗಿ ದಾಖಲೆ ಬರೆದರು. ಶ್ರೀಲಂಕಾದ ಲೆಜೆಂಡರಿ ಬ್ಯಾಟರ್​ ಮಹೇಲಾ ಜಯವರ್ಧನೆ 1016 ಗಳಿಸಿದ್ದರು. ಇದನ್ನು ಮೀರಿಸಿದ ವಿರಾಟ್​ ಕೊಹ್ಲಿ 24 ಪಂದ್ಯಗಳಲ್ಲಿ 1053 ರನ್ ಗಳಿಸಿದರು.

ಸೂರ್ಯಕುಮಾರ್​ ಯಾದವ್​ 30 ರನ್​ ಬಾರಿಸಿದರು. ಕೊನೆಯಲ್ಲಿ ಸಿಡಿದ ಅಶ್ವಿನ್​ ತಲಾ 1 ಸಿಕ್ಸರ್​, ಬೌಂಡರಿ ಬಾರಿಸಿದರು. ಬಾಂಗ್ಲಾದೇಶದ ಪರವಾಗಿ ಹಸನ್​ ಮುಹಮದ್​ 3 ನಾಯಕ ಶಕೀಬ್​ ಅಲ್​ ಹಸನ್​ 2, ಟಸ್ಕಿನ್​ ಅಹ್ಮದ್​ ವಿಕೆಟ್​ ಪಡೆಯದಿದ್ದರೂ ಬಿಗಿ ಬೌಲಿಂಗ್​ ಪ್ರದರ್ಶನ ನೀಡಿದರು.

ಓದಿ: ಟಿ20 ವಿಶ್ವಕಪ್​ನಲ್ಲಿ ವಿರಾಟ್​ ವಿಕ್ರಮ.. ಶ್ರೀಲಂಕಾದ ಮಹೇಲಾ ಜಯವರ್ಧನೆ ದಾಖಲೆ ಪುಡಿ

Last Updated : Nov 2, 2022, 6:15 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.