ETV Bharat / sports

IND vs SL ನಡುವಿನ ಪಂದ್ಯ ಪುನಾರಂಭ: 47 ಓವರ್​ಗಳಿಗೆ ಕಡಿತಗೊಂಡ ಆಟ

author img

By

Published : Jul 23, 2021, 2:50 PM IST

Updated : Jul 23, 2021, 6:43 PM IST

ಲಂಕಾ ವಿರುದ್ಧದ ಮೂರು ಏಕದಿನ ಪಂದ್ಯಗಳ ಸರಣಿಯಲ್ಲಿ ಈಗಾಗಲೇ ಟೀಂ ಇಂಡಿಯಾ 2-0 ಅಂತರದಿಂದ ಜಯ ಸಾಧಿಸಿದ್ದು, ಇಂದಿನ ಪಂದ್ಯದಲ್ಲಿ ಹೊಸ ಪ್ರತಿಭೆಗಳಿಗೆ ಅವಕಾಶ ನೀಡಲಾಗಿದೆ.

IND vs SL
IND vs SL

ಕೊಲಂಬೊ: ಆತಿಥೇಯ ಶ್ರೀಲಂಕಾ ವಿರುದ್ಧದ ಕೊನೆಯ ಏಕದಿನ ಪಂದ್ಯ ಆರಂಭಗೊಂಡಿದೆ. ಟಾಸ್​ ಗೆದ್ದಿರುವ ಟೀಂ ಇಂಡಿಯಾ ಬ್ಯಾಟಿಂಗ್​ ಆಯ್ದುಕೊಂಡಿದೆ.ಆರ್​. ಪ್ರೇಮದಾಸ್ ಮೈದಾನದಲ್ಲಿ ಪಂದ್ಯ ನಡೆಯುತ್ತಿದ್ದು, ಟೀಂ ಇಂಡಿಯಾ 23 ಓವರ್​ಗಳಲ್ಲಿ 3ವಿಕೆಟ್​ನಷ್ಟಕ್ಕೆ 147ರನ್​ಗಳಿಕೆ ಮಾಡಿದ್ದು, ಈ ವೇಳೆ ಮಳೆಯಿಂದಾಗಿ ಸ್ಥಗಿತಗೊಂಡಿತ್ತು. ಇದೀಗ ಪಂದ್ಯ ಪುನರ್​ ಆರಂಭಗೊಂಡಿದ್ದು, 47 ಓವರ್​ಗಳಿಗೆ ಕಡಿತಗೊಳಿಸಲಾಗಿದೆ.

ಟೀಂ ಇಂಡಿಯಾ ಪರ ಕ್ಯಾಪ್ಟನ್ ಶಿಖರ್ ಧವನ್​(13ರನ್​), ಪೃಥ್ವಿ ಶಾ(49ರನ್​),ಸಂಜು ಸ್ಯಾಮ್ಸನ್​(46ರನ್​) 11ರನ್​ಗಳಿಕೆ ಮಾಡಿರುವ ಮನೀಷ್ ಪಾಂಡೆ ವಿಕೆಟ್​ ಒಪ್ಪಿಸಿದ್ದಾರೆ. 22ರನ್​ಗಳಿಕೆ ಮಾಡಿರುವ ಸೂರ್ಯಕುಮಾರ್ ಯಾದವ್ ಹಾಗೂ ಮನೀಷ್ ಪಾಂಡೆ​ ಮೈದಾನದಲ್ಲಿದ್ದಾರೆ.

ಈಗಾಗಲೇ ಮುಕ್ತಾಯಗೊಂಡಿರುವ ಎರಡು ಪಂದ್ಯಗಳಲ್ಲಿ ಟೀಂ ಇಂಡಿಯಾ ಗೆಲುವು ದಾಖಲಿಸಿದ್ದು ಸರಣಿ ಕೈವಶ ಮಾಡಿಕೊಂಡಿದೆ. ಹಾಗಾಗಿ, ಇಂದಿನ ಪಂದ್ಯದಲ್ಲಿ ಹೊಸ ಪ್ರತಿಭೆಗಳಿಗೆ ಅವಕಾಶ ನೀಡಲಾಗಿದೆ.

ಪ್ರಮುಖವಾಗಿ ಇಂದಿನ ಪಂದ್ಯದಲ್ಲಿ ಕಿಶನ್​ ಸ್ಥಾನಕ್ಕೆ ಸಂಜು ಸ್ಯಾಮನ್ಸ್​ ವಿಕೆಟ್ ಕೀಪರ್​ ಆಗಿ ಆಯ್ಕೆಯಾಗಿದ್ದಾರೆ. ಉಳಿದಂತೆ ಬ್ಯಾಟ್ಸ್‌ಮನ್ ನಿತೀಶ್ ರಾಣಾ, ಸ್ಪಿನ್ನರ್​​ ಚೇತನ್ ಸಕಾರಿಯಾ, ಕನ್ನಡಿಗ ಆಲ್​ರೌಂಡರ್​ ಕೆ. ಗೌತಮ್​ ಹಾಗೂ ರಾಹುಲ್​ ಚಹರ್​ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ಪದಾರ್ಪಣೆ ಮಾಡಿದ್ದಾರೆ.

ಆಡುವ 11ರ ಬಳಗ

ಟೀಂ ಇಂಡಿಯಾ: ಪೃಥ್ವಿ ಶಾ, ಶಿಖರ್ ಧವನ್​(ಕ್ಯಾಪ್ಟನ್​), ಸಂಜು ಸ್ಯಾಮನ್ಸ್​(ವಿ.ಕೀ), ಮನೀಷ್ ಪಾಂಡೆ, ಸೂರ್ಯಕುಮಾರ್ ಯಾದವ್​, ನಿತೀಶ್ ರಾಣಾ, ಹಾರ್ದಿಕ್ ಪಾಂಡ್ಯಾ, ಕೃಷ್ಣಪ್ಪ ಗೌತಮ್​, ರಾಹುಲ್​ ಚಹರ್​, ನವದೀಪ್​ ಸೈನಿ ಹಾಗು ಚೇತನ್ ಸಕಾರಿಯಾ

ಇಂದಿನ ಪಂದ್ಯದಲ್ಲಿ ವಿಕೆಟ್​ ಕೀಪರ್ ಇಶನ್ ಕಿಶಾನ್​, ಕೃನಾಲ್​ ಪಾಂಡ್ಯ, ಉಪನಾಯಕ ಭುನವೇಶ್ವರ್ ಕುಮಾರ್​, 2ನೇ ಏಕದಿನ ಪಂದ್ಯದ ಹೀರೋ ದೀಪಕ್​ ಚಹಾರ್, ಕುಲ್ದೀಪ್ ಯಾದವ್​ ಹಾಗೂ ಯಜುವೇಂದ್ರ ಚಹಾಲ್​ಗೆ ವಿಶ್ರಾಂತಿ ನೀಡಲಾಗಿದೆ. ಆದರೆ ಆರಂಭಿಕ ಆಟಗಾರ ದೇವದತ್ ಪಡಿಕ್ಕಲ್​ಗೆ ಅವಕಾಶ ನೀಡಿಲ್ಲ.

ಶ್ರೀಲಂಕಾ: ಅವಿಷ್ಕಾ ಫರ್ನಾಂಡೊ, ಮಿನೋಡ್ ಭನುಕಾ (ವಿ.ಕೀ), ಭನುಕಾ ರಾಜಪಕ್ಸೆ, ಧನಂಜಯ ಡಿ ಸಿಲ್ವಾ, ಚರಿತ್ ಅಸಲಂಕಾ, ದಾಸುನ್ ಶನಕಾ (ಕ್ಯಾ), ರಮೇಶ್ ಮೆಂಡಿಸ್, ಚಮಿಕಾ ಕರುಣರತ್ನೆ, ಅಕಿಲಾ ದಾನಂಜಯ, ದುಷ್ಮಂತ ಚಮೀರಾ ಮತ್ತು ಪ್ರವೀಣ್ ಜಯವಿಕ್ರಮಾ

ಕೊಲಂಬೊ: ಆತಿಥೇಯ ಶ್ರೀಲಂಕಾ ವಿರುದ್ಧದ ಕೊನೆಯ ಏಕದಿನ ಪಂದ್ಯ ಆರಂಭಗೊಂಡಿದೆ. ಟಾಸ್​ ಗೆದ್ದಿರುವ ಟೀಂ ಇಂಡಿಯಾ ಬ್ಯಾಟಿಂಗ್​ ಆಯ್ದುಕೊಂಡಿದೆ.ಆರ್​. ಪ್ರೇಮದಾಸ್ ಮೈದಾನದಲ್ಲಿ ಪಂದ್ಯ ನಡೆಯುತ್ತಿದ್ದು, ಟೀಂ ಇಂಡಿಯಾ 23 ಓವರ್​ಗಳಲ್ಲಿ 3ವಿಕೆಟ್​ನಷ್ಟಕ್ಕೆ 147ರನ್​ಗಳಿಕೆ ಮಾಡಿದ್ದು, ಈ ವೇಳೆ ಮಳೆಯಿಂದಾಗಿ ಸ್ಥಗಿತಗೊಂಡಿತ್ತು. ಇದೀಗ ಪಂದ್ಯ ಪುನರ್​ ಆರಂಭಗೊಂಡಿದ್ದು, 47 ಓವರ್​ಗಳಿಗೆ ಕಡಿತಗೊಳಿಸಲಾಗಿದೆ.

ಟೀಂ ಇಂಡಿಯಾ ಪರ ಕ್ಯಾಪ್ಟನ್ ಶಿಖರ್ ಧವನ್​(13ರನ್​), ಪೃಥ್ವಿ ಶಾ(49ರನ್​),ಸಂಜು ಸ್ಯಾಮ್ಸನ್​(46ರನ್​) 11ರನ್​ಗಳಿಕೆ ಮಾಡಿರುವ ಮನೀಷ್ ಪಾಂಡೆ ವಿಕೆಟ್​ ಒಪ್ಪಿಸಿದ್ದಾರೆ. 22ರನ್​ಗಳಿಕೆ ಮಾಡಿರುವ ಸೂರ್ಯಕುಮಾರ್ ಯಾದವ್ ಹಾಗೂ ಮನೀಷ್ ಪಾಂಡೆ​ ಮೈದಾನದಲ್ಲಿದ್ದಾರೆ.

ಈಗಾಗಲೇ ಮುಕ್ತಾಯಗೊಂಡಿರುವ ಎರಡು ಪಂದ್ಯಗಳಲ್ಲಿ ಟೀಂ ಇಂಡಿಯಾ ಗೆಲುವು ದಾಖಲಿಸಿದ್ದು ಸರಣಿ ಕೈವಶ ಮಾಡಿಕೊಂಡಿದೆ. ಹಾಗಾಗಿ, ಇಂದಿನ ಪಂದ್ಯದಲ್ಲಿ ಹೊಸ ಪ್ರತಿಭೆಗಳಿಗೆ ಅವಕಾಶ ನೀಡಲಾಗಿದೆ.

ಪ್ರಮುಖವಾಗಿ ಇಂದಿನ ಪಂದ್ಯದಲ್ಲಿ ಕಿಶನ್​ ಸ್ಥಾನಕ್ಕೆ ಸಂಜು ಸ್ಯಾಮನ್ಸ್​ ವಿಕೆಟ್ ಕೀಪರ್​ ಆಗಿ ಆಯ್ಕೆಯಾಗಿದ್ದಾರೆ. ಉಳಿದಂತೆ ಬ್ಯಾಟ್ಸ್‌ಮನ್ ನಿತೀಶ್ ರಾಣಾ, ಸ್ಪಿನ್ನರ್​​ ಚೇತನ್ ಸಕಾರಿಯಾ, ಕನ್ನಡಿಗ ಆಲ್​ರೌಂಡರ್​ ಕೆ. ಗೌತಮ್​ ಹಾಗೂ ರಾಹುಲ್​ ಚಹರ್​ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ಪದಾರ್ಪಣೆ ಮಾಡಿದ್ದಾರೆ.

ಆಡುವ 11ರ ಬಳಗ

ಟೀಂ ಇಂಡಿಯಾ: ಪೃಥ್ವಿ ಶಾ, ಶಿಖರ್ ಧವನ್​(ಕ್ಯಾಪ್ಟನ್​), ಸಂಜು ಸ್ಯಾಮನ್ಸ್​(ವಿ.ಕೀ), ಮನೀಷ್ ಪಾಂಡೆ, ಸೂರ್ಯಕುಮಾರ್ ಯಾದವ್​, ನಿತೀಶ್ ರಾಣಾ, ಹಾರ್ದಿಕ್ ಪಾಂಡ್ಯಾ, ಕೃಷ್ಣಪ್ಪ ಗೌತಮ್​, ರಾಹುಲ್​ ಚಹರ್​, ನವದೀಪ್​ ಸೈನಿ ಹಾಗು ಚೇತನ್ ಸಕಾರಿಯಾ

ಇಂದಿನ ಪಂದ್ಯದಲ್ಲಿ ವಿಕೆಟ್​ ಕೀಪರ್ ಇಶನ್ ಕಿಶಾನ್​, ಕೃನಾಲ್​ ಪಾಂಡ್ಯ, ಉಪನಾಯಕ ಭುನವೇಶ್ವರ್ ಕುಮಾರ್​, 2ನೇ ಏಕದಿನ ಪಂದ್ಯದ ಹೀರೋ ದೀಪಕ್​ ಚಹಾರ್, ಕುಲ್ದೀಪ್ ಯಾದವ್​ ಹಾಗೂ ಯಜುವೇಂದ್ರ ಚಹಾಲ್​ಗೆ ವಿಶ್ರಾಂತಿ ನೀಡಲಾಗಿದೆ. ಆದರೆ ಆರಂಭಿಕ ಆಟಗಾರ ದೇವದತ್ ಪಡಿಕ್ಕಲ್​ಗೆ ಅವಕಾಶ ನೀಡಿಲ್ಲ.

ಶ್ರೀಲಂಕಾ: ಅವಿಷ್ಕಾ ಫರ್ನಾಂಡೊ, ಮಿನೋಡ್ ಭನುಕಾ (ವಿ.ಕೀ), ಭನುಕಾ ರಾಜಪಕ್ಸೆ, ಧನಂಜಯ ಡಿ ಸಿಲ್ವಾ, ಚರಿತ್ ಅಸಲಂಕಾ, ದಾಸುನ್ ಶನಕಾ (ಕ್ಯಾ), ರಮೇಶ್ ಮೆಂಡಿಸ್, ಚಮಿಕಾ ಕರುಣರತ್ನೆ, ಅಕಿಲಾ ದಾನಂಜಯ, ದುಷ್ಮಂತ ಚಮೀರಾ ಮತ್ತು ಪ್ರವೀಣ್ ಜಯವಿಕ್ರಮಾ

Last Updated : Jul 23, 2021, 6:43 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.