ETV Bharat / sports

ವಿಶ್ವಕಪ್​ ಕ್ರಿಕೆಟ್​; ಕಿವೀಸ್​ ವಿರುದ್ಧ ಗೆದ್ದ ಪಾಕ್​ಗೆ ಐಸಿಸಿ ದಂಡ ವಿಧಿಸಿದ್ದೇಕೆ ಗೊತ್ತಾ?

author img

By ETV Bharat Karnataka Team

Published : Nov 5, 2023, 8:51 PM IST

Pakistan fined for slow over-rate against New Zealand: ಕಿವೀಸ್ ವಿರುದ್ಧ ಬೆಂಗಳೂರಿನ ಚಿನ್ನಸ್ವಾಮಿ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಡಿಎಲ್​ಎಸ್​ ನಿಯಮದಿಂದ ಪಾಕ್​ 21 ರನ್​ಗಳ ಗೆಲುವು ದಾಖಲಿಸಿತ್ತು.

Pakistan fined for slow over-rate
Pakistan fined for slow over-rate

ಬೆಂಗಳೂರು: ಕಿವೀಸನ್​ ವಿರುದ್ಧ ಫಖರ್ ಜಮಾನ್ ಮತ್ತು ವರುಣನ ಕೊಡುಗೆಯಿಂದ ಪಂದ್ಯವನ್ನು ಗೆದ್ದ ಪಾಕಿಸ್ತಾನ ದಂಡಕ್ಕೆ ಒಳಪಟ್ಟಿದೆ. ಮೊದಲ ಇನ್ನಿಂಗ್ಸ್​ನಲ್ಲಿ ಬೌಲಿಂಗ್​ ಮಾಡಿದ ಪಾಕಿಸ್ತಾನ ನಿಧಾನ ಗತಿಯ ಬೌಲಿಂಗ್​ಗಾಗಿ ದಂಡಕ್ಕೆ ಗುರಿಯಾಗಿದೆ. ಬೆಂಗಳೂರಿನಲ್ಲಿ ನ್ಯೂಜಿಲೆಂಡ್‌ನ ಇನ್ನಿಂಗ್ಸ್‌ನಲ್ಲಿ ಪಾಕಿಸ್ತಾನವು ಎರಡು ಓವರ್‌ಗಳಷ್ಟು ಹೆಚ್ಚು ಸಮಯವನ್ನು ತೆಗೆದುಕೊಂಡಿದೆ. ಅದಕ್ಕಾಗಿ ಪಾಕ್​ ತಂಡ ಪಂದ್ಯದ ಶುಲ್ಕದ ಶೇಕಡಾ 10 ರಷ್ಟು ದಂಡವನ್ನು ನೀಡಲಾಯಿತು.

ಆನ್-ಫೀಲ್ಡ್ ಅಂಪೈರ್‌ಗಳಾದ ಪಾಲ್ ವಿಲ್ಸನ್ ಮತ್ತು ರಿಚರ್ಡ್ ಕೆಟಲ್‌ಬರೋ, ಮೂರನೇ ಅಂಪೈರ್ ರಿಚರ್ಡ್ ಇಲ್ಲಿಂಗ್‌ವರ್ತ್ ಮತ್ತು ನಾಲ್ಕನೇ ಅಂಪೈರ್ ಜೋಯಲ್ ವಿಲ್ಸನ್ ಆರೋಪಿಸಿದ್ದಾರೆ. ಎಮಿರೇಟ್ಸ್ ಐಸಿಸಿ ಎಲೈಟ್ ಪ್ಯಾನೆಲ್ ಆಫ್ ಮ್ಯಾಚ್ ರೆಫರಿಗಳ ರಿಚಿ ರಿಚರ್ಡ್‌ಸನ್ ಅವರು ದಂಡವನ್ನು ವಿಧಿಸಿದ್ದಾರೆ.

  • Pakistan's emphatic win in Bengaluru has been soured after the side was sanctioned for slow over-rate.

    Details 👇#CWC23https://t.co/0Opke1903M

    — ICC Cricket World Cup (@cricketworldcup) November 5, 2023 " class="align-text-top noRightClick twitterSection" data=" ">

ಆಟಗಾರರು ಮತ್ತು ಆಟಗಾರರ ಬೆಂಬಲ ಸಿಬ್ಬಂದಿಗಾಗಿ ಐಸಿಸಿ ನೀತಿ ಸಂಹಿತೆಯ ಆರ್ಟಿಕಲ್ 2.22 ರ ಪ್ರಕಾರ, ಕನಿಷ್ಠ ಓವರ್-ರೇಟ್ ಅಪರಾಧಗಳಿಗೆ ಸಂಬಂಧಿಸಿದಂತೆ, ಆಟಗಾರರು ತಮ್ಮ ತಂಡವು ನಿಗದಿತ ಸಮಯದಲ್ಲಿ ಬೌಲ್ ಮಾಡಲು ವಿಫಲರಾದ ಪ್ರತಿ ಓವರ್‌ಗೆ ಅವರ ಪಂದ್ಯದ ಶುಲ್ಕದ ಐದು ಶೇಕಡಾ ದಂಡವನ್ನು ವಿಧಿಸಲಾಗುತ್ತದೆ. ಪಾಕಿಸ್ತಾನ ತಂಡದ ನಾಯಕ ಬಾಬರ್ ಅಜಮ್​ ಅವರು ಅಪರಾಧವನ್ನು ಒಪ್ಪಿಕೊಂಡಿದ್ದಲ್ಲದೇ ದಂಡಕ್ಕೂ ಒಪ್ಪಿಗೆ ಸೂಚಿಸಿದ್ದಾರೆ. ಹೀಗಾಗಿ ಔಪಚಾರಿಕ ವಿಚಾರಣೆ ಇಲ್ಲದೇ ಜುಲ್ಮಾನೆ ವಿಧಿಸಲಾಗಿದೆ.

ನಡೆಯುತ್ತಿರುವ ವಿಶ್ವಕಪ್​ನಲ್ಲಿ ಮಳೆಗೆ ಗುರಿಯಾದ ಮೊದಲ ಪಂದ್ಯ ಇದಾಯಿತು. ಶನಿವಾರ ಬೆಂಗಳೂರಿನಲ್ಲಿ ಬಹುತೇಕ ಮಳೆಯ ಮುನ್ಸೂಚನೆ ಇತ್ತು ಇದರಿಂದ ಮೊದಲು ಟಾಸ್​ ಗೆದ್ದ ತಂಡ ಎರಡನೇ ಬ್ಯಾಟಿಂಗ್​ ಆಯ್ಕೆಯನ್ನು ಮಾಡುವುದು ಸೂಕ್ತ ಎಂದು ಮೊದಲೇ ಅಂದಾಜಿಸಲಾಗಿತ್ತು. ಅದರಂತೆ ಪಾಕಿಸ್ತಾನ ತಂಡ ಟಾಸ್​ ಗೆದ್ದು ಬೌಲಿಂಗ್​ ಆಯ್ಕೆ ಮಾಡಿಕೊಂಡಿತ್ತು.

ಚಿನ್ನಸ್ವಾಮಿ ಮೈದಾನದಲ್ಲಿ ಬ್ಯಾಟಿಂಗ್​ ಸ್ನೇಹಿ ಆಗಿದ್ದರಿಂದ ಕಿವೀಸ್​ ಪಡೆ ಭರ್ಜರಿ ಬ್ಯಾಟಿಂಗ್​ ಮಾಡಿತ್ತು. ರಚಿನ್​ ರವೀಂದ್ರ ವಿಶ್ವಕಪ್​ನ ಮೂರನೇ ಶತಕವನ್ನು ಪೂರೈಸಿದರೆ ಮತ್ತು ಗಾಯದಿಂದ ಚೇತರಿಸಿಕೊಂಡು ತಂಡಕ್ಕೆ ಮರಳಿದ ಕೇನ್​​ ವಿಲಿಯಮ್ಸನ್​ (95) 5 ರನ್​ನಿಂದ ಶತಕ ವಂಚಿತರಾದರು. ಇವರಲ್ಲದೇ ಕೊನೆಯಲ್ಲಿ ಬಂದ ಕಿವೀಸ್ ಆಟಗಾರರು ಚರುಕಿನ ಚುಟುಕು ಇನ್ನಿಂಗ್ಸ್​ ಕಟ್ಟಿದ್ದರಿಂದ ತಂಡ 402 ರನ್​ನ ಬೃಹತ್​ ಗುರಿಯನ್ನೇ ನೀಡಿತ್ತು.

ಮೊದಲ ಇನ್ನಿಂಗ್ಸ್​ ಮುಗಿದ ಬೆನ್ನಲ್ಲೇ ಮಳೆ ಬಂದು ಮ್ಯಾಚ್​ ನಿಂತಿತ್ತು. ಇದು ಪಾಕ್​ ಬ್ಯಾಟಿಂಗ್​ಗೆ ಸಹಕಾರ ಆಯಿತು ಎಂದೇ ಹೇಳಬಹುದು. ಪಾಕಿಸ್ತಾನ ಮೊದಲ ವಿಕೆಟ್​ನ್ನು ಬೇಗ ಕಳೆದುಕೊಂಡರೂ, ಫಖರ್ ಜಮಾನ್​ ಮತ್ತು ಬಾಬರ್​ ಅಜಮ್​ ಉತ್ತಮ ಜೊತೆಯಾಟ ಆಡಿದರು. 25ನೇ ಓವರ್​ಗೆ ಮಳೆ ಜೋರಾದ ಹಿನ್ನೆಲೆ ಪಂದ್ಯವನ್ನು ಡಿಎಲ್​ಎಸ್ ನಿಯಮದನ್ವಯ ವಿಜೇತರನ್ನು ಪ್ರಕಟಿಸಲಾಯಿತು. ಫಖರ್ ಕೇವಲ 81 ಎಸೆತಗಳಲ್ಲಿ ಅಜೇಯ 126* ರನ್ ಮತ್ತು ಬಾಬರ್​ ಅಜಮ್​ ಅರ್ಧಶತಕದ ನೆರವಿನಿಂದ ಪಾಕ್​ 21 ರನ್​ಗಳ ಗೆಲುವು ದಾಖಲಿಸಿತು. ಅಲ್ಲದೇ ವಿಶ್ವಕಪ್​ ಸೆಮೀಸ್​ ರೇಸ್​ನಲ್ಲಿ ಉಳಿದುಕೊಂಡಿತು.

ಇದನ್ನೂ ಓದಿ: 49ನೇ ಏಕದಿನ ಶತಕ ಗಳಿಸಿದ ವಿರಾಟ್.. ಸಚಿನ್​ ಸಾಧನೆ ಸರಿಗಟ್ಟಿದ ಕಿಂಗ್​ ಕೊಹ್ಲಿ​

ಬೆಂಗಳೂರು: ಕಿವೀಸನ್​ ವಿರುದ್ಧ ಫಖರ್ ಜಮಾನ್ ಮತ್ತು ವರುಣನ ಕೊಡುಗೆಯಿಂದ ಪಂದ್ಯವನ್ನು ಗೆದ್ದ ಪಾಕಿಸ್ತಾನ ದಂಡಕ್ಕೆ ಒಳಪಟ್ಟಿದೆ. ಮೊದಲ ಇನ್ನಿಂಗ್ಸ್​ನಲ್ಲಿ ಬೌಲಿಂಗ್​ ಮಾಡಿದ ಪಾಕಿಸ್ತಾನ ನಿಧಾನ ಗತಿಯ ಬೌಲಿಂಗ್​ಗಾಗಿ ದಂಡಕ್ಕೆ ಗುರಿಯಾಗಿದೆ. ಬೆಂಗಳೂರಿನಲ್ಲಿ ನ್ಯೂಜಿಲೆಂಡ್‌ನ ಇನ್ನಿಂಗ್ಸ್‌ನಲ್ಲಿ ಪಾಕಿಸ್ತಾನವು ಎರಡು ಓವರ್‌ಗಳಷ್ಟು ಹೆಚ್ಚು ಸಮಯವನ್ನು ತೆಗೆದುಕೊಂಡಿದೆ. ಅದಕ್ಕಾಗಿ ಪಾಕ್​ ತಂಡ ಪಂದ್ಯದ ಶುಲ್ಕದ ಶೇಕಡಾ 10 ರಷ್ಟು ದಂಡವನ್ನು ನೀಡಲಾಯಿತು.

ಆನ್-ಫೀಲ್ಡ್ ಅಂಪೈರ್‌ಗಳಾದ ಪಾಲ್ ವಿಲ್ಸನ್ ಮತ್ತು ರಿಚರ್ಡ್ ಕೆಟಲ್‌ಬರೋ, ಮೂರನೇ ಅಂಪೈರ್ ರಿಚರ್ಡ್ ಇಲ್ಲಿಂಗ್‌ವರ್ತ್ ಮತ್ತು ನಾಲ್ಕನೇ ಅಂಪೈರ್ ಜೋಯಲ್ ವಿಲ್ಸನ್ ಆರೋಪಿಸಿದ್ದಾರೆ. ಎಮಿರೇಟ್ಸ್ ಐಸಿಸಿ ಎಲೈಟ್ ಪ್ಯಾನೆಲ್ ಆಫ್ ಮ್ಯಾಚ್ ರೆಫರಿಗಳ ರಿಚಿ ರಿಚರ್ಡ್‌ಸನ್ ಅವರು ದಂಡವನ್ನು ವಿಧಿಸಿದ್ದಾರೆ.

  • Pakistan's emphatic win in Bengaluru has been soured after the side was sanctioned for slow over-rate.

    Details 👇#CWC23https://t.co/0Opke1903M

    — ICC Cricket World Cup (@cricketworldcup) November 5, 2023 " class="align-text-top noRightClick twitterSection" data=" ">

ಆಟಗಾರರು ಮತ್ತು ಆಟಗಾರರ ಬೆಂಬಲ ಸಿಬ್ಬಂದಿಗಾಗಿ ಐಸಿಸಿ ನೀತಿ ಸಂಹಿತೆಯ ಆರ್ಟಿಕಲ್ 2.22 ರ ಪ್ರಕಾರ, ಕನಿಷ್ಠ ಓವರ್-ರೇಟ್ ಅಪರಾಧಗಳಿಗೆ ಸಂಬಂಧಿಸಿದಂತೆ, ಆಟಗಾರರು ತಮ್ಮ ತಂಡವು ನಿಗದಿತ ಸಮಯದಲ್ಲಿ ಬೌಲ್ ಮಾಡಲು ವಿಫಲರಾದ ಪ್ರತಿ ಓವರ್‌ಗೆ ಅವರ ಪಂದ್ಯದ ಶುಲ್ಕದ ಐದು ಶೇಕಡಾ ದಂಡವನ್ನು ವಿಧಿಸಲಾಗುತ್ತದೆ. ಪಾಕಿಸ್ತಾನ ತಂಡದ ನಾಯಕ ಬಾಬರ್ ಅಜಮ್​ ಅವರು ಅಪರಾಧವನ್ನು ಒಪ್ಪಿಕೊಂಡಿದ್ದಲ್ಲದೇ ದಂಡಕ್ಕೂ ಒಪ್ಪಿಗೆ ಸೂಚಿಸಿದ್ದಾರೆ. ಹೀಗಾಗಿ ಔಪಚಾರಿಕ ವಿಚಾರಣೆ ಇಲ್ಲದೇ ಜುಲ್ಮಾನೆ ವಿಧಿಸಲಾಗಿದೆ.

ನಡೆಯುತ್ತಿರುವ ವಿಶ್ವಕಪ್​ನಲ್ಲಿ ಮಳೆಗೆ ಗುರಿಯಾದ ಮೊದಲ ಪಂದ್ಯ ಇದಾಯಿತು. ಶನಿವಾರ ಬೆಂಗಳೂರಿನಲ್ಲಿ ಬಹುತೇಕ ಮಳೆಯ ಮುನ್ಸೂಚನೆ ಇತ್ತು ಇದರಿಂದ ಮೊದಲು ಟಾಸ್​ ಗೆದ್ದ ತಂಡ ಎರಡನೇ ಬ್ಯಾಟಿಂಗ್​ ಆಯ್ಕೆಯನ್ನು ಮಾಡುವುದು ಸೂಕ್ತ ಎಂದು ಮೊದಲೇ ಅಂದಾಜಿಸಲಾಗಿತ್ತು. ಅದರಂತೆ ಪಾಕಿಸ್ತಾನ ತಂಡ ಟಾಸ್​ ಗೆದ್ದು ಬೌಲಿಂಗ್​ ಆಯ್ಕೆ ಮಾಡಿಕೊಂಡಿತ್ತು.

ಚಿನ್ನಸ್ವಾಮಿ ಮೈದಾನದಲ್ಲಿ ಬ್ಯಾಟಿಂಗ್​ ಸ್ನೇಹಿ ಆಗಿದ್ದರಿಂದ ಕಿವೀಸ್​ ಪಡೆ ಭರ್ಜರಿ ಬ್ಯಾಟಿಂಗ್​ ಮಾಡಿತ್ತು. ರಚಿನ್​ ರವೀಂದ್ರ ವಿಶ್ವಕಪ್​ನ ಮೂರನೇ ಶತಕವನ್ನು ಪೂರೈಸಿದರೆ ಮತ್ತು ಗಾಯದಿಂದ ಚೇತರಿಸಿಕೊಂಡು ತಂಡಕ್ಕೆ ಮರಳಿದ ಕೇನ್​​ ವಿಲಿಯಮ್ಸನ್​ (95) 5 ರನ್​ನಿಂದ ಶತಕ ವಂಚಿತರಾದರು. ಇವರಲ್ಲದೇ ಕೊನೆಯಲ್ಲಿ ಬಂದ ಕಿವೀಸ್ ಆಟಗಾರರು ಚರುಕಿನ ಚುಟುಕು ಇನ್ನಿಂಗ್ಸ್​ ಕಟ್ಟಿದ್ದರಿಂದ ತಂಡ 402 ರನ್​ನ ಬೃಹತ್​ ಗುರಿಯನ್ನೇ ನೀಡಿತ್ತು.

ಮೊದಲ ಇನ್ನಿಂಗ್ಸ್​ ಮುಗಿದ ಬೆನ್ನಲ್ಲೇ ಮಳೆ ಬಂದು ಮ್ಯಾಚ್​ ನಿಂತಿತ್ತು. ಇದು ಪಾಕ್​ ಬ್ಯಾಟಿಂಗ್​ಗೆ ಸಹಕಾರ ಆಯಿತು ಎಂದೇ ಹೇಳಬಹುದು. ಪಾಕಿಸ್ತಾನ ಮೊದಲ ವಿಕೆಟ್​ನ್ನು ಬೇಗ ಕಳೆದುಕೊಂಡರೂ, ಫಖರ್ ಜಮಾನ್​ ಮತ್ತು ಬಾಬರ್​ ಅಜಮ್​ ಉತ್ತಮ ಜೊತೆಯಾಟ ಆಡಿದರು. 25ನೇ ಓವರ್​ಗೆ ಮಳೆ ಜೋರಾದ ಹಿನ್ನೆಲೆ ಪಂದ್ಯವನ್ನು ಡಿಎಲ್​ಎಸ್ ನಿಯಮದನ್ವಯ ವಿಜೇತರನ್ನು ಪ್ರಕಟಿಸಲಾಯಿತು. ಫಖರ್ ಕೇವಲ 81 ಎಸೆತಗಳಲ್ಲಿ ಅಜೇಯ 126* ರನ್ ಮತ್ತು ಬಾಬರ್​ ಅಜಮ್​ ಅರ್ಧಶತಕದ ನೆರವಿನಿಂದ ಪಾಕ್​ 21 ರನ್​ಗಳ ಗೆಲುವು ದಾಖಲಿಸಿತು. ಅಲ್ಲದೇ ವಿಶ್ವಕಪ್​ ಸೆಮೀಸ್​ ರೇಸ್​ನಲ್ಲಿ ಉಳಿದುಕೊಂಡಿತು.

ಇದನ್ನೂ ಓದಿ: 49ನೇ ಏಕದಿನ ಶತಕ ಗಳಿಸಿದ ವಿರಾಟ್.. ಸಚಿನ್​ ಸಾಧನೆ ಸರಿಗಟ್ಟಿದ ಕಿಂಗ್​ ಕೊಹ್ಲಿ​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.