ETV Bharat / sports

ಭವಿಷ್ಯದಲ್ಲಿನ ಟೂರ್ನಿಗಳತ್ತ ಹೆಚ್ಚು ಗಮನ ನೀಡಬೇಕಿದೆ: ವಿರಾಟ್ ಕೊಹ್ಲಿ

ಭಾರತ ತಂಡದ ವೇಳಾಪಟ್ಟಿ ಇತ್ತೀಚೆಗೆ ಬಹಳ ಕಾರ್ಯನಿರತವಾಗಿದೆ. ಕಳೆದ ವರ್ಷ ನವೆಂಬರ್‌ನಲ್ಲಿ ನಡೆದ ಐಪಿಎಲ್ -2020 ರ ನಂತರ ಟೀಮ್ ಇಂಡಿಯಾ ಆಸ್ಟ್ರೇಲಿಯಾಕ್ಕೆ ಹೋಗಿ ಎಲ್ಲ ಸ್ವರೂಪದ ಸರಣಿಯಲ್ಲಿ ಭಾಗವಹಿಸಿದೆ. ಆ ನಂತರ ತವರು ನೆಲದಲ್ಲಿ ಇಂಗ್ಲೆಂಡ್ ವಿರುದ್ಧ ಟೆಸ್ಟ್, ಟಿ- 20 ಮತ್ತು ಏಕದಿನ ಸರಣಿಗಳನ್ನ ಆಡಿ ತನ್ನ ಸಾಮರ್ಥ್ಯವನ್ನ ಸಾಬೀತು ಮಾಡಿದೆ.

author img

By

Published : Mar 30, 2021, 7:23 AM IST

playing in bubbles will be difficult says India captain Virat Kohli
ವಿರಾಟ್ ಕೊಹ್ಲಿ

ಪುಣೆ: ಇಂಗ್ಲೆಂಡ್ ವಿರುದ್ಧದ ಮೂರನೇ ಏಕದಿನ ಪಂದ್ಯದಲ್ಲಿ ಜಯಗಳಿಸಿದ ನಂತರ ವಿರಾಟ್ ಕೊಹ್ಲಿ ಭವಿಷ್ಯದಲ್ಲಿನ ಟೂರ್ನಿಗಳ ಬಗ್ಗೆ ಹೆಚ್ಚಿನ ಗಮನ ನೀಡಬೇಕು ಎಂದು ಪ್ರತಿಪಾದಿಸಿದ್ದಾರೆ.

ಕೊಹ್ಲಿ, "ಭವಿಷ್ಯದಲ್ಲಿನ ಟೂರ್ನಿಗಳತ್ತ ಗಮನ ನೀಡಬೇಕು, ಅದರಲ್ಲೂ ವಿಶೇಷವಾಗಿ ಬಯೋಬಬಲ್‌ನಲ್ಲಿ ಆಡಲು ಕಷ್ಟವಾಗುತ್ತದೆ ಮತ್ತು ಎಲ್ಲ ಜನರು ಎಲ್ಲ ಸಮಯದಲ್ಲೂ ಒಂದೇ ಮಾನಸಿಕ ಸಾಮರ್ಥ್ಯ ಹೊಂದಿರುವುದಿಲ್ಲ. ಭವಿಷ್ಯದಲ್ಲಿ ಈ ವಿಷಯಗಳ ಬಗ್ಗೆ ಚರ್ಚಿಸಲಾಗುವುದು ಎಂಬ ನಂಬಿಕೆ ನನಗಿದೆ. " ಎಂದರು

ಭಾರತ ತಂಡದ ವೇಳಾಪಟ್ಟಿ ಇತ್ತೀಚೆಗೆ ಬಹಳ ಕಾರ್ಯನಿರತವಾಗಿದೆ. ಕಳೆದ ವರ್ಷ ನವೆಂಬರ್‌ನಲ್ಲಿ ನಡೆದ ಐಪಿಎಲ್ -2020ರ ನಂತರ ಟೀಮ್ ಇಂಡಿಯಾ ಆಸ್ಟ್ರೇಲಿಯಾಕ್ಕೆ ಹೋಗಿ ಎಲ್ಲ ಸ್ವರೂಪಗಳ ಸರಣಿ ಆಡಿದ್ದು, ಅದರ ನಂತರ ತವರು ನೆಲದಲ್ಲಿ ಇಂಗ್ಲೆಂಡ್ ವಿರುದ್ಧ ಟೆಸ್ಟ್, ಟಿ- 20 ಮತ್ತು ಏಕದಿನ ಸರಣಿಗಳನ್ನ ಆಡಿದೆ.

ಈ ಅವಧಿಯಲ್ಲಿ ಟೀಮ್​ ಇಂಡಿಯಾ 8 ಟೆಸ್ಟ್, 6 ಏಕದಿನ ಮತ್ತು 6 ಟಿ-20 ಪಂದ್ಯಗಳನ್ನು ಆಡಿದೆ. ಈ ವರ್ಷದ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಮತ್ತು ಟಿ-20 ವಿಶ್ವಕಪ್‌ ಟೂರ್ನಿಗಳಿದ್ದು, ಈಗ ಆಡಿದ ಟೆಸ್ಟ್ ಮತ್ತು ಟಿ-20 ಪಂದ್ಯಗಳ ಸರಣಿ ಬಹಳ ಸಹಾಯಕವಾಗಲಿವೆ.

ಓದಿ : ಧೋನಿಗೆ ಬೌಲರ್‌ಗಳಿಂದ ಅತ್ಯುತ್ತಮ ಪ್ರದರ್ಶನ ಹೊರತೆಗೆಯುವ ಕಲೆ ತಿಳಿದಿದೆ: ಕೆ.ಗೌತಮ್

ಮ್ಯಾನ್ ಆಫ್ ದಿ ಮ್ಯಾಚ್ ಮತ್ತು ಮ್ಯಾನ್ ಆಫ್ ದಿ ಸೀರೀಸ್ ಪ್ರಶಸ್ತಿಗಳ ಬಗ್ಗೆ ಕೊಹ್ಲಿ ಅಸಮಾಧಾನ ಹೊರ ಹಾಕಿದ್ದಾರೆ. ಶಾರ್ದೂಲ್​ ಠಾಕೂರ್ ಮತ್ತು ಭುವನೇಶ್ವರ್ ಕುಮಾರ್ ಅವರಿಗೆ ಈ ಪ್ರಶಸ್ತಿಗಳನ್ನು ನೀಡಬೇಕಿತ್ತು. ಆದರೆ, ಇಂಗ್ಲೆಂಡ್‌ನ ಜಾನಿ ಬೈರ್‌ಸ್ಟೋವ್ ಅವರನ್ನು ಮ್ಯಾನ್ ಆಫ್ ದಿ ಸೀರೀಸ್ ಮತ್ತು ಸ್ಯಾಮ್ ಕರ್ರನ್ ಅವರನ್ನು ಮ್ಯಾನ್ ಆಫ್ ದಿ ಮ್ಯಾಚ್ ಎಂದು ಹೆಸರಿಸಲಾಯಿತು ಎಂದರು.

ಪುಣೆ: ಇಂಗ್ಲೆಂಡ್ ವಿರುದ್ಧದ ಮೂರನೇ ಏಕದಿನ ಪಂದ್ಯದಲ್ಲಿ ಜಯಗಳಿಸಿದ ನಂತರ ವಿರಾಟ್ ಕೊಹ್ಲಿ ಭವಿಷ್ಯದಲ್ಲಿನ ಟೂರ್ನಿಗಳ ಬಗ್ಗೆ ಹೆಚ್ಚಿನ ಗಮನ ನೀಡಬೇಕು ಎಂದು ಪ್ರತಿಪಾದಿಸಿದ್ದಾರೆ.

ಕೊಹ್ಲಿ, "ಭವಿಷ್ಯದಲ್ಲಿನ ಟೂರ್ನಿಗಳತ್ತ ಗಮನ ನೀಡಬೇಕು, ಅದರಲ್ಲೂ ವಿಶೇಷವಾಗಿ ಬಯೋಬಬಲ್‌ನಲ್ಲಿ ಆಡಲು ಕಷ್ಟವಾಗುತ್ತದೆ ಮತ್ತು ಎಲ್ಲ ಜನರು ಎಲ್ಲ ಸಮಯದಲ್ಲೂ ಒಂದೇ ಮಾನಸಿಕ ಸಾಮರ್ಥ್ಯ ಹೊಂದಿರುವುದಿಲ್ಲ. ಭವಿಷ್ಯದಲ್ಲಿ ಈ ವಿಷಯಗಳ ಬಗ್ಗೆ ಚರ್ಚಿಸಲಾಗುವುದು ಎಂಬ ನಂಬಿಕೆ ನನಗಿದೆ. " ಎಂದರು

ಭಾರತ ತಂಡದ ವೇಳಾಪಟ್ಟಿ ಇತ್ತೀಚೆಗೆ ಬಹಳ ಕಾರ್ಯನಿರತವಾಗಿದೆ. ಕಳೆದ ವರ್ಷ ನವೆಂಬರ್‌ನಲ್ಲಿ ನಡೆದ ಐಪಿಎಲ್ -2020ರ ನಂತರ ಟೀಮ್ ಇಂಡಿಯಾ ಆಸ್ಟ್ರೇಲಿಯಾಕ್ಕೆ ಹೋಗಿ ಎಲ್ಲ ಸ್ವರೂಪಗಳ ಸರಣಿ ಆಡಿದ್ದು, ಅದರ ನಂತರ ತವರು ನೆಲದಲ್ಲಿ ಇಂಗ್ಲೆಂಡ್ ವಿರುದ್ಧ ಟೆಸ್ಟ್, ಟಿ- 20 ಮತ್ತು ಏಕದಿನ ಸರಣಿಗಳನ್ನ ಆಡಿದೆ.

ಈ ಅವಧಿಯಲ್ಲಿ ಟೀಮ್​ ಇಂಡಿಯಾ 8 ಟೆಸ್ಟ್, 6 ಏಕದಿನ ಮತ್ತು 6 ಟಿ-20 ಪಂದ್ಯಗಳನ್ನು ಆಡಿದೆ. ಈ ವರ್ಷದ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಮತ್ತು ಟಿ-20 ವಿಶ್ವಕಪ್‌ ಟೂರ್ನಿಗಳಿದ್ದು, ಈಗ ಆಡಿದ ಟೆಸ್ಟ್ ಮತ್ತು ಟಿ-20 ಪಂದ್ಯಗಳ ಸರಣಿ ಬಹಳ ಸಹಾಯಕವಾಗಲಿವೆ.

ಓದಿ : ಧೋನಿಗೆ ಬೌಲರ್‌ಗಳಿಂದ ಅತ್ಯುತ್ತಮ ಪ್ರದರ್ಶನ ಹೊರತೆಗೆಯುವ ಕಲೆ ತಿಳಿದಿದೆ: ಕೆ.ಗೌತಮ್

ಮ್ಯಾನ್ ಆಫ್ ದಿ ಮ್ಯಾಚ್ ಮತ್ತು ಮ್ಯಾನ್ ಆಫ್ ದಿ ಸೀರೀಸ್ ಪ್ರಶಸ್ತಿಗಳ ಬಗ್ಗೆ ಕೊಹ್ಲಿ ಅಸಮಾಧಾನ ಹೊರ ಹಾಕಿದ್ದಾರೆ. ಶಾರ್ದೂಲ್​ ಠಾಕೂರ್ ಮತ್ತು ಭುವನೇಶ್ವರ್ ಕುಮಾರ್ ಅವರಿಗೆ ಈ ಪ್ರಶಸ್ತಿಗಳನ್ನು ನೀಡಬೇಕಿತ್ತು. ಆದರೆ, ಇಂಗ್ಲೆಂಡ್‌ನ ಜಾನಿ ಬೈರ್‌ಸ್ಟೋವ್ ಅವರನ್ನು ಮ್ಯಾನ್ ಆಫ್ ದಿ ಸೀರೀಸ್ ಮತ್ತು ಸ್ಯಾಮ್ ಕರ್ರನ್ ಅವರನ್ನು ಮ್ಯಾನ್ ಆಫ್ ದಿ ಮ್ಯಾಚ್ ಎಂದು ಹೆಸರಿಸಲಾಯಿತು ಎಂದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.