ETV Bharat / sports

ಭಾರತ-ಇಂಗ್ಲೆಂಡ್​ ಮೊದಲ ಟೆಸ್ಟ್.. ಚೈನ್​​​ಮ್ಯಾನ್​ ಸ್ಪಿನ್ನರ್​ಗೆ ಕೊಕ್​.. ಶಹಬಾಜ್​ಗೆ ಮಣೆ ಹಾಕಿದ್ಯಾಕೆ?

author img

By

Published : Feb 5, 2021, 12:41 PM IST

ಆಂಗ್ಲ ಪಡೆಯ ಬ್ಯಾಟಿಂಗ್ ರಣತಂತ್ರವನ್ನು ಕಟ್ಟಿ ಹಾಕಲು ನದೀಮ್​​ರನ್ನ ಆಯ್ಕೆ ಮಾಡಿರಬಹುದು ಎಂದು ಕ್ರಿಕೆಟ್ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಗಾಯದ ತೊಂದರೆಗೆ ಸಿಲುಕಿರುವ ಎಡಗೈ ಸ್ಪಿನ್ನರ್, ಆಲ್​​ ರೌಂಡರ್​ ರವೀಂದ್ರ ಜಡೇಜಾ ತಂಡದಿಂದ ಹೊರ ಗುಳಿದಿದ್ದಾರೆ. ಕುಲ್‌ದೀಪ್ ಅವರನ್ನು ಯಾಕೆ ಆಯ್ಕೆ ಮಾಡಲಿಲ್ಲ ಎಂಬುದು ಅಭಿಮಾನಿಗಳನ್ನ ಗೊಂದಲಕ್ಕೀಡು ಮಾಡಿದೆ..

Kuldeep Yadav
ಕುಲ್‌ದೀಪ್ ಯಾದವ್

ಚೆನ್ನೈ: ಪ್ರವಾಸಿ ಇಂಗ್ಲೆಂಡ್ ವಿರುದ್ಧ ನಡೆಯುತ್ತಿರುವ ಟೆಸ್ಟ್​​ ಸರಣಿಯ ಮೊದಲ ಪಂದ್ಯದಲ್ಲಿ ಸ್ಥಾನ ಪಡೆಯುವಲ್ಲಿ ಚೈನ್​​​ಮ್ಯಾನ್​ ಸ್ಪಿನ್ನರ್​ ಕುಲ್‌ದೀಪ್ ಯಾದವ್ ಮತ್ತೊಮ್ಮೆ ಅವಕಾಶ ವಂಚಿತರಾಗಿದ್ದಾರೆ.

ತವರು ನೆಲದಲ್ಲಿ ಉತ್ತಮವೆನಿಸಿದರು ಕುಲ್‌ದೀಪ್ ಅವರನ್ನು ಕಡೆಗಣಿಸಲಾಗಿದೆ. ಕುಲ್‌ದೀಪ್ ಯಾದವ್​​ ಬದಲಿಗೆ ಅಕ್ಷರ್​ ಪಟೇಲ್​ ಗಾಯದ ನಂತರ ತಂಡ ಸೇರಿಕೊಂಡಿದ್ದ ಎಡಗೈ ಸ್ಪಿನ್ನರ್ ಶಹಬಾಜ್ ನದೀಮ್‌ಗೆ ಅವಕಾಶ ನೀಡಿದ್ದು ಆಶ್ಚರ್ಯವನ್ನುಂಟು ಮಾಡಿದೆ.

2019ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ರಾಂಚಿಯಲ್ಲಿ ನಡೆದ ಪಂದ್ಯದಲ್ಲಿ ಟೆಸ್ಟ್​​ ಕ್ರಿಕೆಟ್​ಗೆ ನದೀಮ್​ ಪದಾರ್ಪಣೆ ಮಾಡಿದ್ದರು. ಪದಾರ್ಪಣೆ ಪಂದ್ಯದಲ್ಲೇ ನಾಲ್ಕು ವಿಕೆಟ್‌ಗಳನ್ನ ಕಬಳಿಸಿದ್ದ ಶಹಬಾಜ್​ ಭರವಸೆಯ ಬೌಲರ್​ ಎನಿಸಿದ್ದರು. ಈಗ ಮತ್ತೊಂದು ಸುವರ್ಣಾವಕಾಶ ಅವರ ಪಾಲಿಗೆ ಒಲಿದು ಬಂದಿದೆ.

ಓದಿ : ಮೊಣಕಾಲಿನ ಗಾಯದ ಸಮಸ್ಯೆ.. ಟೆಸ್ಟ್​ನಿಂದ ಅಕ್ಷರ್ ಪಟೇಲ್ ಔಟ್​​..

ಆಂಗ್ಲ ಪಡೆಯ ಬ್ಯಾಟಿಂಗ್ ರಣತಂತ್ರವನ್ನು ಕಟ್ಟಿ ಹಾಕಲು ನದೀಮ್​​ರನ್ನ ಆಯ್ಕೆ ಮಾಡಿರಬಹುದು ಎಂದು ಕ್ರಿಕೆಟ್ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಗಾಯದ ತೊಂದರೆಗೆ ಸಿಲುಕಿರುವ ಎಡಗೈ ಸ್ಪಿನ್ನರ್, ಆಲ್​​ ರೌಂಡರ್​ ರವೀಂದ್ರ ಜಡೇಜಾ ತಂಡದಿಂದ ಹೊರಗುಳಿದಿದ್ದಾರೆ. ಕುಲ್‌ದೀಪ್ ಅವರನ್ನು ಯಾಕೆ ಆಯ್ಕೆ ಮಾಡಲಿಲ್ಲ ಎಂಬುದು ಅಭಿಮಾನಿಗಳನ್ನ ಗೊಂದಲಕ್ಕೀಡು ಮಾಡಿದೆ.

6 ಟೆಸ್ಟ್ ಪಂದ್ಯಗಳನ್ನು ಆಡಿರುವ ಕುಲ್‌ದೀಪ್ ಯಾದವ್, 24 ವಿಕೆಟ್‌ಗಳನ್ನು ಕಬಳಿಸಿದ್ದಾರೆ. 5/57 ಇವರ ಜೀವನದ ಶ್ರೇಷ್ಠ ಬೌಲಿಂಗ್ ಪ್ರದರ್ಶನವಾಗಿದೆ.

ಚೆನ್ನೈ: ಪ್ರವಾಸಿ ಇಂಗ್ಲೆಂಡ್ ವಿರುದ್ಧ ನಡೆಯುತ್ತಿರುವ ಟೆಸ್ಟ್​​ ಸರಣಿಯ ಮೊದಲ ಪಂದ್ಯದಲ್ಲಿ ಸ್ಥಾನ ಪಡೆಯುವಲ್ಲಿ ಚೈನ್​​​ಮ್ಯಾನ್​ ಸ್ಪಿನ್ನರ್​ ಕುಲ್‌ದೀಪ್ ಯಾದವ್ ಮತ್ತೊಮ್ಮೆ ಅವಕಾಶ ವಂಚಿತರಾಗಿದ್ದಾರೆ.

ತವರು ನೆಲದಲ್ಲಿ ಉತ್ತಮವೆನಿಸಿದರು ಕುಲ್‌ದೀಪ್ ಅವರನ್ನು ಕಡೆಗಣಿಸಲಾಗಿದೆ. ಕುಲ್‌ದೀಪ್ ಯಾದವ್​​ ಬದಲಿಗೆ ಅಕ್ಷರ್​ ಪಟೇಲ್​ ಗಾಯದ ನಂತರ ತಂಡ ಸೇರಿಕೊಂಡಿದ್ದ ಎಡಗೈ ಸ್ಪಿನ್ನರ್ ಶಹಬಾಜ್ ನದೀಮ್‌ಗೆ ಅವಕಾಶ ನೀಡಿದ್ದು ಆಶ್ಚರ್ಯವನ್ನುಂಟು ಮಾಡಿದೆ.

2019ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ರಾಂಚಿಯಲ್ಲಿ ನಡೆದ ಪಂದ್ಯದಲ್ಲಿ ಟೆಸ್ಟ್​​ ಕ್ರಿಕೆಟ್​ಗೆ ನದೀಮ್​ ಪದಾರ್ಪಣೆ ಮಾಡಿದ್ದರು. ಪದಾರ್ಪಣೆ ಪಂದ್ಯದಲ್ಲೇ ನಾಲ್ಕು ವಿಕೆಟ್‌ಗಳನ್ನ ಕಬಳಿಸಿದ್ದ ಶಹಬಾಜ್​ ಭರವಸೆಯ ಬೌಲರ್​ ಎನಿಸಿದ್ದರು. ಈಗ ಮತ್ತೊಂದು ಸುವರ್ಣಾವಕಾಶ ಅವರ ಪಾಲಿಗೆ ಒಲಿದು ಬಂದಿದೆ.

ಓದಿ : ಮೊಣಕಾಲಿನ ಗಾಯದ ಸಮಸ್ಯೆ.. ಟೆಸ್ಟ್​ನಿಂದ ಅಕ್ಷರ್ ಪಟೇಲ್ ಔಟ್​​..

ಆಂಗ್ಲ ಪಡೆಯ ಬ್ಯಾಟಿಂಗ್ ರಣತಂತ್ರವನ್ನು ಕಟ್ಟಿ ಹಾಕಲು ನದೀಮ್​​ರನ್ನ ಆಯ್ಕೆ ಮಾಡಿರಬಹುದು ಎಂದು ಕ್ರಿಕೆಟ್ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಗಾಯದ ತೊಂದರೆಗೆ ಸಿಲುಕಿರುವ ಎಡಗೈ ಸ್ಪಿನ್ನರ್, ಆಲ್​​ ರೌಂಡರ್​ ರವೀಂದ್ರ ಜಡೇಜಾ ತಂಡದಿಂದ ಹೊರಗುಳಿದಿದ್ದಾರೆ. ಕುಲ್‌ದೀಪ್ ಅವರನ್ನು ಯಾಕೆ ಆಯ್ಕೆ ಮಾಡಲಿಲ್ಲ ಎಂಬುದು ಅಭಿಮಾನಿಗಳನ್ನ ಗೊಂದಲಕ್ಕೀಡು ಮಾಡಿದೆ.

6 ಟೆಸ್ಟ್ ಪಂದ್ಯಗಳನ್ನು ಆಡಿರುವ ಕುಲ್‌ದೀಪ್ ಯಾದವ್, 24 ವಿಕೆಟ್‌ಗಳನ್ನು ಕಬಳಿಸಿದ್ದಾರೆ. 5/57 ಇವರ ಜೀವನದ ಶ್ರೇಷ್ಠ ಬೌಲಿಂಗ್ ಪ್ರದರ್ಶನವಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.