ETV Bharat / sports

IND vs SL ತಮ್ಮನ ಮೂಲಕ ಅಣ್ಣನಿಗೆ 'ಗೆಲುವಿನ ಗುಟ್ಟು' ರವಾನಿಸಿ ಪಂದ್ಯ ಗೆಲ್ಲಿಸಿದ ದ್ರಾವಿಡ್‌!

ಶ್ರೀಲಂಕಾ ವಿರುದ್ಧ ನಿನ್ನೆ ನಡೆದ ಎರಡನೇ ಏಕದಿನ ಪಂದ್ಯದಲ್ಲಿ ಸೋಲಿನ ಸುಳಿಗೆ ಸಿಲುಕಿಕೊಂಡಿದ್ದ ಟೀಂ ಇಂಡಿಯಾಗೆ ಆಪತ್ಬಾಂದವನಾಗಿದ್ದು ದೀಪಕ್​ ಚಹರ್​. ಉತ್ತರ ಪ್ರದೇಶದ ಈ ಆಟಗಾರ ಪಂದ್ಯದ ಕೊನೆಯವರೆಗೂ ವಿರೋಚಿತ ಹೋರಾಟ ನಡೆಸಿ ಭಾರತದ ಗೆಲುವಿನ ರೂವಾರಿಯಾಗಿದ್ದರು. ಆದ್ರೆ, ಈ ಗೆಲುವಿನ ಹಿಂದೆ ಇದ್ದವರು 'ದಿ ಗ್ರೇಟ್‌ ವಾಲ್' ದ್ರಾವಿಡ್‌.

author img

By

Published : Jul 21, 2021, 5:00 PM IST

Dravid
Dravid

ಕೊಲಂಬೊ: ಆರ್​.ಪ್ರೇಮದಾಸ್​ ಮೈದಾನದಲ್ಲಿ ನಡೆದ 2ನೇ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ ರೋಚಕ ಗೆಲುವು ಪಡೆದುಕೊಂಡಿದೆ. ಅನೇಕ ನಾಟಕೀಯ ಬೆಳವಣಿಗೆಗಳಿಗೆ ಪಂದ್ಯ ಕಾರಣವಾಗಿದ್ದರಿಂದ ಕೊನೆಯ ಓವರ್​​ವರೆಗೂ ರೋಚಕತೆಯಿಂದ ಕೂಡಿತ್ತು. ಇದರ ಮಧ್ಯೆ ಡ್ರೆಸ್ಸಿಂಗ್​ ರೂಂನಲ್ಲಿದ್ದ ಕೋಚ್​ ರಾಹುಲ್​ ದ್ರಾವಿಡ್ ದಿಢೀರ್ ಆಗಿ ಹೊರಗಡೆ ಬಂದು ರಾಹುಲ್​ ಚಹರ್​ ಬಳಿ ಕೆಲಹೊತ್ತು ಮಾತನಾಡಿರುವ ದೃಶ್ಯಗಳು ಎಲ್ಲೆಡೆ ವೈರಲ್​ ಆಗಿವೆ.

276 ರನ್​ ಬೆನ್ನತ್ತಿದ್ದ ಟೀಂ ಇಂಡಿಯಾ 193 ರನ್​ಗಳಿಕೆ ಮಾಡುವಷ್ಟರಲ್ಲಿ 7 ವಿಕೆಟ್​ ಕಳೆದುಕೊಂಡು ಸಂಕಷ್ಟಕ್ಕೊಳಗಾಗಿತ್ತು. ಈ ವೇಳೆ ಮೈದಾನದಲ್ಲಿ ದೀಪಕ್​ ಚಹರ್​ಗೆ ಕೋಚ್ ರಾಹುಲ್​ ದ್ರಾವಿಡ್​ ಆಟಗಾರನ ಮೂಲಕ ಕೆಲವೊಂದು ಸೂಚನೆ ನೀಡಿದ್ದಾರೆ. ಟೀಂ ಇಂಡಿಯಾ 44ನೇ ಓವರ್​ ಎದುರಿಸುತ್ತಿದ್ದ ಸಂದರ್ಭದಲ್ಲಿ ಈ ಘಟನೆ ನಡೆದಿದೆ.

ಮೈದಾನದಲ್ಲಿ 5ರನ್​ಗಳಿಕೆ ಮಾಡಿದ್ದ ಭುವಿ ಹಾಗೂ 49ರನ್ ​ಗಳಿಸಿದ್ದ ದೀಪಕ್​ ಚಹರ್​​ ಬ್ಯಾಟಿಂಗ್ ಮಾಡ್ತಿದ್ದಾಗ ಡ್ರೆಸ್ಸಿಂಗ್ ರೂಂನಿಂದ ಎದ್ದು ಬಂದಿರುವ ಕೋಚ್​ ರಾಹುಲ್​ ದ್ರಾವಿಡ್​ ಡಗೌಟ್​ನಲ್ಲಿ ಕುಳಿತುಕೊಂಡಿದ್ದ ರಾಹುಲ್​ ಚಹರ್​ ಬಳಿ ಕೆಲವೊಂದು ಸಲಹೆ ನೀಡಿದ್ದಾರೆ. ಅವುಗಳನ್ನು ಮೈದಾನದಲ್ಲಿ ಬ್ಯಾಟ್​ ಬೀಸುತ್ತಿದ್ದ ದೀಪಕ್​ ಚಹರ್​ಗೆ ತಲುಪಿಸುವಂತೆಯೂ ಹೇಳಿದ್ದಾರೆ. ಇದಾದ ಬಳಿಕ ಮೈದಾನಕ್ಕೆ ತೆರಳಿದ್ದ ಸಹ ಆಟಗಾರ ರಾಹುಲ್​ ಚಹರ್​, ಕೋಚ್​ ನೀಡಿದ್ದ ಸಲಹೆಗಳನ್ನು ದೀಪಕ್ ಚಹಾರ್‌ಗೆ ಹೇಳಿದ್ದರು.

ಇದನ್ನೂ ಓದಿ: ಪಿಪಿಸಿಸಿ ಅಧ್ಯಕ್ಷರಾಗುತ್ತಿದ್ದಂತೆ ಅಲರ್ಟ್‌; ಪಂಜಾಬ್‌ನಲ್ಲಿ ತಮ್ಮ ಬಣದ ಶಕ್ತಿ ಹೆಚ್ಚಿಸಿಕೊಳ್ಳುತ್ತಿರುವ ಸಿಧು

ಲಭ್ಯವಾಗಿರುವ ಮಾಹಿತಿ ಪ್ರಕಾರ, ಮೈದಾನದಲ್ಲಿ ರಕ್ಷಣಾತ್ಮಕ ಆಟದ ಮೊರೆ ಹೋಗುವಂತೆ ರಾಹುಲ್​ ದ್ರಾವಿಡ್​ ಬ್ಯಾಟ್ಸ್​ಮನ್​ ದೀಪಕ್​ ಚಹರ್​ಗೆ ಸೂಚನೆ ನೀಡಿದ್ದರು ಎನ್ನಲಾಗಿದೆ. ಪಂದ್ಯದ ಕೊನೆಯವರೆಗೂ ವಿಕೆಟ್ ಕಾಯ್ದುಕೊಂಡು ಬ್ಯಾಟಿಂಗ್​ ಮಾಡಿದ್ದರಿಂದಲೇ ನಿನ್ನೆ ಟೀಂ ಇಂಡಿಯಾ ಗೆಲುವು ದಾಖಲು ಮಾಡಿದೆ. ಈ ಹಿಂದೆ ಕೂಡ ರಾಹುಲ್​​ ದ್ರಾವಿಡ್​ ಇಂಡಿಯಾ ಎ ತಂಡದ ಕೋಚ್​ ಆಗಿದ್ದ ಸಂದರ್ಭದಲ್ಲಿ ದೀಪಕ್​ ಚಹರ್​ ಕೆಲವೊಂದು ಪಂದ್ಯಗಳನ್ನು ತಂಡಕ್ಕಾಗಿ ಗೆಲ್ಲಿಸಿಕೊಟ್ಟಿರುವ ಉದಾಹರಣೆಗಳಿವೆ. ಪಂದ್ಯ ಮುಗಿದ ಬಳಿಕ ಮಾತನಾಡಿರುವ ದೀಪಕ್​ ಚಹರ್, ರಾಹುಲ್​ ಸರ್ ನನ್ನ ಮೇಲೆ ಇಟ್ಟಿರುವ ನಂಬಿಕೆ ಉಳಿಸಿಕೊಂಡಿದ್ದೇನೆ ಎಂದಿದ್ದರು.

ಕೊಲಂಬೊ: ಆರ್​.ಪ್ರೇಮದಾಸ್​ ಮೈದಾನದಲ್ಲಿ ನಡೆದ 2ನೇ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ ರೋಚಕ ಗೆಲುವು ಪಡೆದುಕೊಂಡಿದೆ. ಅನೇಕ ನಾಟಕೀಯ ಬೆಳವಣಿಗೆಗಳಿಗೆ ಪಂದ್ಯ ಕಾರಣವಾಗಿದ್ದರಿಂದ ಕೊನೆಯ ಓವರ್​​ವರೆಗೂ ರೋಚಕತೆಯಿಂದ ಕೂಡಿತ್ತು. ಇದರ ಮಧ್ಯೆ ಡ್ರೆಸ್ಸಿಂಗ್​ ರೂಂನಲ್ಲಿದ್ದ ಕೋಚ್​ ರಾಹುಲ್​ ದ್ರಾವಿಡ್ ದಿಢೀರ್ ಆಗಿ ಹೊರಗಡೆ ಬಂದು ರಾಹುಲ್​ ಚಹರ್​ ಬಳಿ ಕೆಲಹೊತ್ತು ಮಾತನಾಡಿರುವ ದೃಶ್ಯಗಳು ಎಲ್ಲೆಡೆ ವೈರಲ್​ ಆಗಿವೆ.

276 ರನ್​ ಬೆನ್ನತ್ತಿದ್ದ ಟೀಂ ಇಂಡಿಯಾ 193 ರನ್​ಗಳಿಕೆ ಮಾಡುವಷ್ಟರಲ್ಲಿ 7 ವಿಕೆಟ್​ ಕಳೆದುಕೊಂಡು ಸಂಕಷ್ಟಕ್ಕೊಳಗಾಗಿತ್ತು. ಈ ವೇಳೆ ಮೈದಾನದಲ್ಲಿ ದೀಪಕ್​ ಚಹರ್​ಗೆ ಕೋಚ್ ರಾಹುಲ್​ ದ್ರಾವಿಡ್​ ಆಟಗಾರನ ಮೂಲಕ ಕೆಲವೊಂದು ಸೂಚನೆ ನೀಡಿದ್ದಾರೆ. ಟೀಂ ಇಂಡಿಯಾ 44ನೇ ಓವರ್​ ಎದುರಿಸುತ್ತಿದ್ದ ಸಂದರ್ಭದಲ್ಲಿ ಈ ಘಟನೆ ನಡೆದಿದೆ.

ಮೈದಾನದಲ್ಲಿ 5ರನ್​ಗಳಿಕೆ ಮಾಡಿದ್ದ ಭುವಿ ಹಾಗೂ 49ರನ್ ​ಗಳಿಸಿದ್ದ ದೀಪಕ್​ ಚಹರ್​​ ಬ್ಯಾಟಿಂಗ್ ಮಾಡ್ತಿದ್ದಾಗ ಡ್ರೆಸ್ಸಿಂಗ್ ರೂಂನಿಂದ ಎದ್ದು ಬಂದಿರುವ ಕೋಚ್​ ರಾಹುಲ್​ ದ್ರಾವಿಡ್​ ಡಗೌಟ್​ನಲ್ಲಿ ಕುಳಿತುಕೊಂಡಿದ್ದ ರಾಹುಲ್​ ಚಹರ್​ ಬಳಿ ಕೆಲವೊಂದು ಸಲಹೆ ನೀಡಿದ್ದಾರೆ. ಅವುಗಳನ್ನು ಮೈದಾನದಲ್ಲಿ ಬ್ಯಾಟ್​ ಬೀಸುತ್ತಿದ್ದ ದೀಪಕ್​ ಚಹರ್​ಗೆ ತಲುಪಿಸುವಂತೆಯೂ ಹೇಳಿದ್ದಾರೆ. ಇದಾದ ಬಳಿಕ ಮೈದಾನಕ್ಕೆ ತೆರಳಿದ್ದ ಸಹ ಆಟಗಾರ ರಾಹುಲ್​ ಚಹರ್​, ಕೋಚ್​ ನೀಡಿದ್ದ ಸಲಹೆಗಳನ್ನು ದೀಪಕ್ ಚಹಾರ್‌ಗೆ ಹೇಳಿದ್ದರು.

ಇದನ್ನೂ ಓದಿ: ಪಿಪಿಸಿಸಿ ಅಧ್ಯಕ್ಷರಾಗುತ್ತಿದ್ದಂತೆ ಅಲರ್ಟ್‌; ಪಂಜಾಬ್‌ನಲ್ಲಿ ತಮ್ಮ ಬಣದ ಶಕ್ತಿ ಹೆಚ್ಚಿಸಿಕೊಳ್ಳುತ್ತಿರುವ ಸಿಧು

ಲಭ್ಯವಾಗಿರುವ ಮಾಹಿತಿ ಪ್ರಕಾರ, ಮೈದಾನದಲ್ಲಿ ರಕ್ಷಣಾತ್ಮಕ ಆಟದ ಮೊರೆ ಹೋಗುವಂತೆ ರಾಹುಲ್​ ದ್ರಾವಿಡ್​ ಬ್ಯಾಟ್ಸ್​ಮನ್​ ದೀಪಕ್​ ಚಹರ್​ಗೆ ಸೂಚನೆ ನೀಡಿದ್ದರು ಎನ್ನಲಾಗಿದೆ. ಪಂದ್ಯದ ಕೊನೆಯವರೆಗೂ ವಿಕೆಟ್ ಕಾಯ್ದುಕೊಂಡು ಬ್ಯಾಟಿಂಗ್​ ಮಾಡಿದ್ದರಿಂದಲೇ ನಿನ್ನೆ ಟೀಂ ಇಂಡಿಯಾ ಗೆಲುವು ದಾಖಲು ಮಾಡಿದೆ. ಈ ಹಿಂದೆ ಕೂಡ ರಾಹುಲ್​​ ದ್ರಾವಿಡ್​ ಇಂಡಿಯಾ ಎ ತಂಡದ ಕೋಚ್​ ಆಗಿದ್ದ ಸಂದರ್ಭದಲ್ಲಿ ದೀಪಕ್​ ಚಹರ್​ ಕೆಲವೊಂದು ಪಂದ್ಯಗಳನ್ನು ತಂಡಕ್ಕಾಗಿ ಗೆಲ್ಲಿಸಿಕೊಟ್ಟಿರುವ ಉದಾಹರಣೆಗಳಿವೆ. ಪಂದ್ಯ ಮುಗಿದ ಬಳಿಕ ಮಾತನಾಡಿರುವ ದೀಪಕ್​ ಚಹರ್, ರಾಹುಲ್​ ಸರ್ ನನ್ನ ಮೇಲೆ ಇಟ್ಟಿರುವ ನಂಬಿಕೆ ಉಳಿಸಿಕೊಂಡಿದ್ದೇನೆ ಎಂದಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.