ETV Bharat / sports

'ಇಂದಿರಾನಗರ ಮಾತ್ರವಲ್ಲ, ಅವರು ಇಡೀ ಭಾರತದ ಗೂಂಡಾ': ಕೋಚ್​​ ದ್ರಾವಿಡ್​ ಬಗ್ಗೆ ಚಹರ್ ಮಾತು

author img

By

Published : Jul 22, 2021, 6:12 PM IST

ರಾಹುಲ್​​ ದ್ರಾವಿಡ್ ಕೇವಲ ಇಂದಿರಾನಗರದ ಗೂಂಡಾ ಮಾತ್ರವಲ್ಲ, ಇಡೀ ಭಾರತದ ಗೂಂಡಾ (Rahul Dravid sir sirf Indiranagar ka gunda nahi hai pure India k bann gaye hai) ಆಗಿದ್ದಾರೆ ಎಂದು ದೀಪಕ್​ ಚಹರ್ ಕೊಂಡಾಡಿದ್ದಾರೆ.

Deepak Chahar
Deepak Chahar

ಕೊಲಂಬೊ: ಶ್ರೀಲಂಕಾ ವಿರುದ್ಧ ನಡೆದ ಎರಡನೇ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ 3 ವಿಕೆಟ್​ಗಳ ರೋಚಕ ಗೆಲುವು ದಾಖಲಿಸಿದೆ. ಈ ಪಂದ್ಯದ ಗೆಲುವಿನ ಶ್ರೇಯ ಕೋಚ್​ ರಾಹುಲ್​ ದ್ರಾವಿಡ್ ಅವರಿಗೂ ಸಲ್ಲುತ್ತದೆ. ತಂಡ 7 ವಿಕೆಟ್​ ಕಳೆದುಕೊಂಡು ಸಂಕಷ್ಟಕ್ಕೊಳಗಾಗಿದ್ದ ಸಂದರ್ಭದಲ್ಲಿ ಮೈದಾನದಲ್ಲಿದ್ದ ದೀಪಕ್​ ಚಹರ್​ಗೆ ರಕ್ಷಣಾತ್ಮಕ ಆಟದ ಮೊರೆ ಹೋಗುವಂತೆ ಅವರು ಸೂಚನೆ ನೀಡಿದ್ದರು. ಅದರ ಫಲವಾಗಿ ತಂಡ ಗೆಲುವು ಸಾಧಿಸುವಂತಾಯಿತು.

ಇದೇ ವಿಚಾರವಾಗಿ ಮಾತನಾಡಿರುವ ಆಲ್​ರೌಂಡರ್​ ದೀಪಕ್​ ಚಹರ್​, ರಾಹುಲ್​ ದ್ರಾವಿಡ್ ಕೇವಲ 'ಇಂದಿರಾನಗರದ ಗೂಂಡಾ ಮಾತ್ರವಲ್ಲ. ಸಂಪೂರ್ಣ ಭಾರತದ ಗೂಂಡಾ' ಎಂದಿದ್ದಾರೆ. ಇಂಡಿಯನ್​ ಪ್ರೀಮಿಯರ್ ಲೀಗ್​​ ಆರಂಭಗೊಂಡಿದ್ದ ಸಂದರ್ಭದಲ್ಲಿ ರಾಹುಲ್​ ದ್ರಾವಿಡ್​​ ಅವರ ನಟನೆಯ ಜಾಹೀರಾತುವೊಂದು ಸಂಚಲನ ಸೃಷ್ಟಿಸಿತ್ತು. ಅದರಲ್ಲಿ 'ಇಂದಿರಾ ನಗರ್ ಕಾ ಗೂಂಡಾ ಹೂ ಮೈ 'ಹೊಡೆದುಹಾಕಿ ಬಿಡ್ತೀನಿ' ಎಂಬ ಡೈಲಾಗ್‌ಗಳು ವೈರಲ್ ಆಗಿದ್ದವು. ಜತೆಗೆ ಕಾರಿನ ಗ್ಲಾಸ್ ಒಡೆದು ಹಾಕಿ ತಮ್ಮ ಆಕ್ರೋಶ ಹೊರಹಾಕಿದ್ದರು. ಇದಾದ ಬಳಿಕ ರಾಹುಲ್​ ದ್ರಾವಿಡ್​ಗೆ ಅನೇಕರು 'ಇಂದಿರಾನಗರದ ಗೂಂಡಾ' ಎಂದು ತಮಾಷೆಯಾಗಿ ಕರೆಯಲು ಶುರು ಮಾಡಿದ್ದರು.

ಇದನ್ನೂ ಓದಿ: ಹಲ್​ಚಲ್​ ಸೃಷ್ಟಿಸಿದ ಜ್ಯಾಮಿ ಜಾಹೀರಾತು.. ವಾಲ್‌ನಂಥ ದೃಢ ಮನಸ್ಸಿನ ದ್ರಾವಿಡ್‌ ಗೂಂಡಾಗಿರಿಗೆ ಫಿದಾ!

ಸದ್ಯ ಟೀಂ ಇಂಡಿಯಾ ತಂಡದ(ಶ್ರೀಲಂಕಾ ಪ್ರವಾಸ) ಕೋಚ್​ ಆಗಿ ಕಾರ್ಯ ನಿರ್ವಹಿಸುತ್ತಿರುವ ರಾಹುಲ್​ ದ್ರಾವಿಡ್​ ಎಲ್ಲರ ಕಾರ್ಯದ ಬಗ್ಗೆ ಮೆಚ್ಚುಗೆ ವ್ಯಕ್ತವಾಗುತ್ತಿದ್ದು, ಇದೇ ವಿಚಾರವಾಗಿ ದೀಪಕ್​ ಚಹರ್ ಕೂಡ ಮಾತನಾಡಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಭಾಗಿಯಾಗಿ ಮಾತನಾಡಿರುವ ಅವರು, ರಾಹುಲ್​ ದ್ರಾವಿಡ್​ ಸರ್​, ಕೇವಲ ಇಂದಿರಾನಗರದ ಗೂಂಡಾ ಅಲ್ಲ, ಬದಲಾಗಿ ಸಂಪೂರ್ಣ ಭಾರತದ ಗೂಂಡಾ ಆಗಿದ್ದಾರೆ. ತಂಡದೊಂದಿಗೆ ಅವರು ಉತ್ತಮ ಸಂಬಂಧ ಹೊಂದಿದ್ದು, ಆಟಗಾರರಿಗೆ ಎಲ್ಲ ರೀತಿಯಿಂದಲೂ ಮಹತ್ವದ ಸಲಹೆ ನೀಡುತ್ತಾರೆ ಎಂದು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ಕೊಲಂಬೊ: ಶ್ರೀಲಂಕಾ ವಿರುದ್ಧ ನಡೆದ ಎರಡನೇ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ 3 ವಿಕೆಟ್​ಗಳ ರೋಚಕ ಗೆಲುವು ದಾಖಲಿಸಿದೆ. ಈ ಪಂದ್ಯದ ಗೆಲುವಿನ ಶ್ರೇಯ ಕೋಚ್​ ರಾಹುಲ್​ ದ್ರಾವಿಡ್ ಅವರಿಗೂ ಸಲ್ಲುತ್ತದೆ. ತಂಡ 7 ವಿಕೆಟ್​ ಕಳೆದುಕೊಂಡು ಸಂಕಷ್ಟಕ್ಕೊಳಗಾಗಿದ್ದ ಸಂದರ್ಭದಲ್ಲಿ ಮೈದಾನದಲ್ಲಿದ್ದ ದೀಪಕ್​ ಚಹರ್​ಗೆ ರಕ್ಷಣಾತ್ಮಕ ಆಟದ ಮೊರೆ ಹೋಗುವಂತೆ ಅವರು ಸೂಚನೆ ನೀಡಿದ್ದರು. ಅದರ ಫಲವಾಗಿ ತಂಡ ಗೆಲುವು ಸಾಧಿಸುವಂತಾಯಿತು.

ಇದೇ ವಿಚಾರವಾಗಿ ಮಾತನಾಡಿರುವ ಆಲ್​ರೌಂಡರ್​ ದೀಪಕ್​ ಚಹರ್​, ರಾಹುಲ್​ ದ್ರಾವಿಡ್ ಕೇವಲ 'ಇಂದಿರಾನಗರದ ಗೂಂಡಾ ಮಾತ್ರವಲ್ಲ. ಸಂಪೂರ್ಣ ಭಾರತದ ಗೂಂಡಾ' ಎಂದಿದ್ದಾರೆ. ಇಂಡಿಯನ್​ ಪ್ರೀಮಿಯರ್ ಲೀಗ್​​ ಆರಂಭಗೊಂಡಿದ್ದ ಸಂದರ್ಭದಲ್ಲಿ ರಾಹುಲ್​ ದ್ರಾವಿಡ್​​ ಅವರ ನಟನೆಯ ಜಾಹೀರಾತುವೊಂದು ಸಂಚಲನ ಸೃಷ್ಟಿಸಿತ್ತು. ಅದರಲ್ಲಿ 'ಇಂದಿರಾ ನಗರ್ ಕಾ ಗೂಂಡಾ ಹೂ ಮೈ 'ಹೊಡೆದುಹಾಕಿ ಬಿಡ್ತೀನಿ' ಎಂಬ ಡೈಲಾಗ್‌ಗಳು ವೈರಲ್ ಆಗಿದ್ದವು. ಜತೆಗೆ ಕಾರಿನ ಗ್ಲಾಸ್ ಒಡೆದು ಹಾಕಿ ತಮ್ಮ ಆಕ್ರೋಶ ಹೊರಹಾಕಿದ್ದರು. ಇದಾದ ಬಳಿಕ ರಾಹುಲ್​ ದ್ರಾವಿಡ್​ಗೆ ಅನೇಕರು 'ಇಂದಿರಾನಗರದ ಗೂಂಡಾ' ಎಂದು ತಮಾಷೆಯಾಗಿ ಕರೆಯಲು ಶುರು ಮಾಡಿದ್ದರು.

ಇದನ್ನೂ ಓದಿ: ಹಲ್​ಚಲ್​ ಸೃಷ್ಟಿಸಿದ ಜ್ಯಾಮಿ ಜಾಹೀರಾತು.. ವಾಲ್‌ನಂಥ ದೃಢ ಮನಸ್ಸಿನ ದ್ರಾವಿಡ್‌ ಗೂಂಡಾಗಿರಿಗೆ ಫಿದಾ!

ಸದ್ಯ ಟೀಂ ಇಂಡಿಯಾ ತಂಡದ(ಶ್ರೀಲಂಕಾ ಪ್ರವಾಸ) ಕೋಚ್​ ಆಗಿ ಕಾರ್ಯ ನಿರ್ವಹಿಸುತ್ತಿರುವ ರಾಹುಲ್​ ದ್ರಾವಿಡ್​ ಎಲ್ಲರ ಕಾರ್ಯದ ಬಗ್ಗೆ ಮೆಚ್ಚುಗೆ ವ್ಯಕ್ತವಾಗುತ್ತಿದ್ದು, ಇದೇ ವಿಚಾರವಾಗಿ ದೀಪಕ್​ ಚಹರ್ ಕೂಡ ಮಾತನಾಡಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಭಾಗಿಯಾಗಿ ಮಾತನಾಡಿರುವ ಅವರು, ರಾಹುಲ್​ ದ್ರಾವಿಡ್​ ಸರ್​, ಕೇವಲ ಇಂದಿರಾನಗರದ ಗೂಂಡಾ ಅಲ್ಲ, ಬದಲಾಗಿ ಸಂಪೂರ್ಣ ಭಾರತದ ಗೂಂಡಾ ಆಗಿದ್ದಾರೆ. ತಂಡದೊಂದಿಗೆ ಅವರು ಉತ್ತಮ ಸಂಬಂಧ ಹೊಂದಿದ್ದು, ಆಟಗಾರರಿಗೆ ಎಲ್ಲ ರೀತಿಯಿಂದಲೂ ಮಹತ್ವದ ಸಲಹೆ ನೀಡುತ್ತಾರೆ ಎಂದು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.