ETV Bharat / sports

ಧೋನಿಯ ಬೈಗುಳಗಳೇ ನನ್ನನ್ನು ಉತ್ತಮ ಪವರ್​ ಪ್ಲೇ ಬೌಲರ್ ಆಗಿ ಮಾಡಿವೆ : ದೀಪಕ್ ಚಹಾರ್

ಮಹಿ ಭಾಯ್ ನಾಯಕತ್ವದಲ್ಲಿ ಆಡಬೇಕೆಂಬುದು ನನ್ನ ಬಹುದಿನಗಳ ಕನಸಾಗಿತ್ತು. ಅವರ ನಾಯಕತ್ವದಲ್ಲಿ ನಾನು ಬಹಳಷ್ಟು ಕಲಿತಿದ್ದೇನೆ. ಅವರ ಮಾರ್ಗದರ್ಶನದಲ್ಲಿ ನನ್ನ ಆಟವನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ದಿದ್ದೇನೆ. ಅವರು ಸದಾ ನನ್ನನ್ನು ಬೆಂಬಲಿಸಿದ್ದಾರೆ. ಜವಾಬ್ದಾರಿಯನ್ನು ಹೇಗೆ ತೆಗೆದುಕೊಳ್ಳಬೇಕೆಂದು ಅವರು ನನಗೆ ಕಲಿಸಿದರು. ಪವರ್‌ಪ್ಲೇನಲ್ಲೇ ಮೂರು ಓವರ್‌ಗಳನ್ನು ಬೌಲ್ ಮಾಡುವವರು ನನ್ನ ತಂಡದಲ್ಲಿ (ಸಿಎಸ್‌ಕೆ) ಯಾರೂ ಇಲ್ಲ..

author img

By

Published : May 22, 2021, 4:17 PM IST

ದೀಪಕ್ ಚಹಾರ್
ದೀಪಕ್ ಚಹಾರ್

ನವದೆಹಲಿ : ಮುಂಬರುವ ಶ್ರೀಲಂಕಾ ಪ್ರವಾಸಕ್ಕಾಗಿ ವೈಟ್​ ಬಾಲ್ ತಂಡದಲ್ಲಿ ಅವಕಾಶ ಪಡೆಯಲು ಮುಂಚೂಣಿಯಲ್ಲಿರುವ ಭಾರತ ತಂಡದ ಬೌಲರ್ ದೀಪಕ್ ಚಹಾರ್, ತಾವೂ ಪವರ್​ ಪ್ಲೇ ಬೌಲರ್​ ಆಗಿ ಯಶಸ್ವಿಯಾಗಲು ಎಂಎಸ್​ ಧೋನಿ ಕಾರಣ ಎಂದು ಹೇಳಿದ್ದಾರೆ.

ಮಹಿ ಭಾಯ್​ ನನ್ನನ್ನು ಪವರ್​ ಪ್ಲೇ ಬೌಲರ್​ ಆಗಿ ಮಾಡಿದರು. ಅವರ ಯಾವಾಗಲೂ ನನ್ನನ್ನು'ನೀನು ನನ್ನ ಪವರ್​ ಪ್ಲೇ ಬೌಲರ್​' ಎಂದು ಹೇಳುತ್ತಿರುತ್ತಾರೆ. ಅವರು ಬಹುಪಾಲು ಪಂದ್ಯಗಳಲ್ಲಿ ನನಗೆ ಮೊದಲ ಓವರ್​ ಬೌಲಿಂಗ್ ಮಾಡಲು ಕೊಡುತ್ತಾರೆ.

ನಾನು ಅವರಿಂದ ಸಾಕಷ್ಟು ಬಾರಿ ಬೈಯಿಸಿಕೊಂಡಿದ್ದೇನೆ. ಆದರೆ, ಅವರ ಆ ಮಾತುಗಳು ಮತ್ತು ಮಾರ್ಗದರ್ಶನವೇ ನನ್ನ ಬೆಳವಣಿಗೆಗೆ ಸಹಕಾರಿಯಾಗಿದೆ ಎಂದು ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಚಹಾರ್ ಹೇಳಿದ್ದಾರೆ.

ಮುಂದೂಡಲ್ಪಟ್ಟಿರುವ ಐಪಿಎಲ್​ನಲ್ಲಿ ಚಹಾರ್​ ಹೊಸ ಬಾಲಿನಲ್ಲಿ ಹೆಚ್ಚು ಬೌಲಿಂಗ್ ಮಾಡಿದ್ದಾರೆ. ಅವರು 4 ವಿಕೆಟ್​ ಗೊಂಚಲು ಸೇರಿದಂತೆ ಕೆಲ ಪಂದ್ಯಗಳಲ್ಲಿ ವಿಕೆಟ್​ ಪಡೆದಿದ್ದಾರೆ.

ಇನ್ನು, ಧೋನಿ ಒಂದೇ ಸ್ಪೆಲ್​ನಲ್ಲಿ ಚಹಾರ್​ ಅವರ ಬೌಲಿಂಗ್ ಕೋಟಾವನ್ನು ಕೂಡ ಮುಗಿಸುತ್ತಿದ್ದರು. ಆರಂಭಿಕ ಸ್ಪೆಲ್​ಗಳು ನಿಜಕ್ಕೂ ದೀಪಕ್​ಗೆ ಒಬ್ಬ ಕ್ವಾಲಿಟಿ ಪವರ್​ ಪ್ಲೇ ಬೌಲರ್​ ಆಗಲು ನೆರವಾಗಿದೆ ಎನ್ನವುವುದರಲ್ಲಿ ಅನುಮಾನವಿಲ್ಲ.

ದೀಪಕ್ 14ನೇ ಆವೃತ್ತಿಯಲ್ಲಿ ಒಟ್ಟು 13 ವಿಕೆಟ್ ಪಡೆದಿದ್ದರು. ಕೋಲ್ಕತಾ ನೈಟ್​ ರೈಡರ್ಸ್ ಪರ 29 ರನ್​ ನೀಡಿ 4 ವಿಕೆಟ್​ ಪಡೆದಿದ್ದು ಅವರ ಅತ್ಯುತ್ತಮ ಪ್ರದರ್ಶನವಾಗಿತ್ತು.

"ಮಹಿ ಭಾಯ್ ನಾಯಕತ್ವದಲ್ಲಿ ಆಡಬೇಕೆಂಬುದು ನನ್ನ ಬಹುದಿನಗಳ ಕನಸಾಗಿತ್ತು. ಅವರ ನಾಯಕತ್ವದಲ್ಲಿ ನಾನು ಬಹಳಷ್ಟು ಕಲಿತಿದ್ದೇನೆ. ಅವರ ಮಾರ್ಗದರ್ಶನದಲ್ಲಿ ನನ್ನ ಆಟವನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ದಿದ್ದೇನೆ.

ಅವರು ಸದಾ ನನ್ನನ್ನು ಬೆಂಬಲಿಸಿದ್ದಾರೆ. ಜವಾಬ್ದಾರಿಯನ್ನು ಹೇಗೆ ತೆಗೆದುಕೊಳ್ಳಬೇಕೆಂದು ಅವರು ನನಗೆ ಕಲಿಸಿದರು. ಪವರ್‌ಪ್ಲೇನಲ್ಲೇ ಮೂರು ಓವರ್‌ಗಳನ್ನು ಬೌಲ್ ಮಾಡುವವರು ನನ್ನ ತಂಡದಲ್ಲಿ (ಸಿಎಸ್‌ಕೆ) ಯಾರೂ ಇಲ್ಲ.

ನಾನು ಅದನ್ನು ಮಾಡುತ್ತೇನೆ. ಅದಕ್ಕೆ ಮಹಿ ಭಾಯ್ ಕಾರಣ. ತಂಡಕ್ಕೆ ಮೊದಲ ಓವರ್ ಬೌಲಿಂಗ್ ಮಾಡುವುದು ಸುಲಭದ ಕೆಲಸವಲ್ಲ.

ಸಮಯ ಕಳೆದಂತೆ ನಾನು ಸುಧಾರಿಸಿದ್ದೇನೆ ಮತ್ತು ರನ್​​ಗಳ ಹರಿವನ್ನು ಹೇಗೆ ನಿಯಂತ್ರಿಸುವುದು ಎಂಬುದನ್ನು ಕಲಿತ್ತಿದ್ದೇನೆ. ವಿಶೇಷವಾಗಿ ಟಿ20 ಪಂದ್ಯಗಳಲ್ಲಿ" ಎಂದು ಚಹರ್ ಹೇಳಿದ್ದಾರೆ.

ಇದನ್ನು ಓದಿ:ಪ್ರತಿಬಾರಿ ಮೈದಾನಕ್ಕಿಳಿದಾಗಲೂ ಧೋನಿ ಸರ್​ ಹೇಳಿದ್ದನ್ನು ನೆನಪಿಸಿಕೊಳ್ತೀನಿ : ಇಂದ್ರಾಣಿ ರಾಯ್

ನವದೆಹಲಿ : ಮುಂಬರುವ ಶ್ರೀಲಂಕಾ ಪ್ರವಾಸಕ್ಕಾಗಿ ವೈಟ್​ ಬಾಲ್ ತಂಡದಲ್ಲಿ ಅವಕಾಶ ಪಡೆಯಲು ಮುಂಚೂಣಿಯಲ್ಲಿರುವ ಭಾರತ ತಂಡದ ಬೌಲರ್ ದೀಪಕ್ ಚಹಾರ್, ತಾವೂ ಪವರ್​ ಪ್ಲೇ ಬೌಲರ್​ ಆಗಿ ಯಶಸ್ವಿಯಾಗಲು ಎಂಎಸ್​ ಧೋನಿ ಕಾರಣ ಎಂದು ಹೇಳಿದ್ದಾರೆ.

ಮಹಿ ಭಾಯ್​ ನನ್ನನ್ನು ಪವರ್​ ಪ್ಲೇ ಬೌಲರ್​ ಆಗಿ ಮಾಡಿದರು. ಅವರ ಯಾವಾಗಲೂ ನನ್ನನ್ನು'ನೀನು ನನ್ನ ಪವರ್​ ಪ್ಲೇ ಬೌಲರ್​' ಎಂದು ಹೇಳುತ್ತಿರುತ್ತಾರೆ. ಅವರು ಬಹುಪಾಲು ಪಂದ್ಯಗಳಲ್ಲಿ ನನಗೆ ಮೊದಲ ಓವರ್​ ಬೌಲಿಂಗ್ ಮಾಡಲು ಕೊಡುತ್ತಾರೆ.

ನಾನು ಅವರಿಂದ ಸಾಕಷ್ಟು ಬಾರಿ ಬೈಯಿಸಿಕೊಂಡಿದ್ದೇನೆ. ಆದರೆ, ಅವರ ಆ ಮಾತುಗಳು ಮತ್ತು ಮಾರ್ಗದರ್ಶನವೇ ನನ್ನ ಬೆಳವಣಿಗೆಗೆ ಸಹಕಾರಿಯಾಗಿದೆ ಎಂದು ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಚಹಾರ್ ಹೇಳಿದ್ದಾರೆ.

ಮುಂದೂಡಲ್ಪಟ್ಟಿರುವ ಐಪಿಎಲ್​ನಲ್ಲಿ ಚಹಾರ್​ ಹೊಸ ಬಾಲಿನಲ್ಲಿ ಹೆಚ್ಚು ಬೌಲಿಂಗ್ ಮಾಡಿದ್ದಾರೆ. ಅವರು 4 ವಿಕೆಟ್​ ಗೊಂಚಲು ಸೇರಿದಂತೆ ಕೆಲ ಪಂದ್ಯಗಳಲ್ಲಿ ವಿಕೆಟ್​ ಪಡೆದಿದ್ದಾರೆ.

ಇನ್ನು, ಧೋನಿ ಒಂದೇ ಸ್ಪೆಲ್​ನಲ್ಲಿ ಚಹಾರ್​ ಅವರ ಬೌಲಿಂಗ್ ಕೋಟಾವನ್ನು ಕೂಡ ಮುಗಿಸುತ್ತಿದ್ದರು. ಆರಂಭಿಕ ಸ್ಪೆಲ್​ಗಳು ನಿಜಕ್ಕೂ ದೀಪಕ್​ಗೆ ಒಬ್ಬ ಕ್ವಾಲಿಟಿ ಪವರ್​ ಪ್ಲೇ ಬೌಲರ್​ ಆಗಲು ನೆರವಾಗಿದೆ ಎನ್ನವುವುದರಲ್ಲಿ ಅನುಮಾನವಿಲ್ಲ.

ದೀಪಕ್ 14ನೇ ಆವೃತ್ತಿಯಲ್ಲಿ ಒಟ್ಟು 13 ವಿಕೆಟ್ ಪಡೆದಿದ್ದರು. ಕೋಲ್ಕತಾ ನೈಟ್​ ರೈಡರ್ಸ್ ಪರ 29 ರನ್​ ನೀಡಿ 4 ವಿಕೆಟ್​ ಪಡೆದಿದ್ದು ಅವರ ಅತ್ಯುತ್ತಮ ಪ್ರದರ್ಶನವಾಗಿತ್ತು.

"ಮಹಿ ಭಾಯ್ ನಾಯಕತ್ವದಲ್ಲಿ ಆಡಬೇಕೆಂಬುದು ನನ್ನ ಬಹುದಿನಗಳ ಕನಸಾಗಿತ್ತು. ಅವರ ನಾಯಕತ್ವದಲ್ಲಿ ನಾನು ಬಹಳಷ್ಟು ಕಲಿತಿದ್ದೇನೆ. ಅವರ ಮಾರ್ಗದರ್ಶನದಲ್ಲಿ ನನ್ನ ಆಟವನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ದಿದ್ದೇನೆ.

ಅವರು ಸದಾ ನನ್ನನ್ನು ಬೆಂಬಲಿಸಿದ್ದಾರೆ. ಜವಾಬ್ದಾರಿಯನ್ನು ಹೇಗೆ ತೆಗೆದುಕೊಳ್ಳಬೇಕೆಂದು ಅವರು ನನಗೆ ಕಲಿಸಿದರು. ಪವರ್‌ಪ್ಲೇನಲ್ಲೇ ಮೂರು ಓವರ್‌ಗಳನ್ನು ಬೌಲ್ ಮಾಡುವವರು ನನ್ನ ತಂಡದಲ್ಲಿ (ಸಿಎಸ್‌ಕೆ) ಯಾರೂ ಇಲ್ಲ.

ನಾನು ಅದನ್ನು ಮಾಡುತ್ತೇನೆ. ಅದಕ್ಕೆ ಮಹಿ ಭಾಯ್ ಕಾರಣ. ತಂಡಕ್ಕೆ ಮೊದಲ ಓವರ್ ಬೌಲಿಂಗ್ ಮಾಡುವುದು ಸುಲಭದ ಕೆಲಸವಲ್ಲ.

ಸಮಯ ಕಳೆದಂತೆ ನಾನು ಸುಧಾರಿಸಿದ್ದೇನೆ ಮತ್ತು ರನ್​​ಗಳ ಹರಿವನ್ನು ಹೇಗೆ ನಿಯಂತ್ರಿಸುವುದು ಎಂಬುದನ್ನು ಕಲಿತ್ತಿದ್ದೇನೆ. ವಿಶೇಷವಾಗಿ ಟಿ20 ಪಂದ್ಯಗಳಲ್ಲಿ" ಎಂದು ಚಹರ್ ಹೇಳಿದ್ದಾರೆ.

ಇದನ್ನು ಓದಿ:ಪ್ರತಿಬಾರಿ ಮೈದಾನಕ್ಕಿಳಿದಾಗಲೂ ಧೋನಿ ಸರ್​ ಹೇಳಿದ್ದನ್ನು ನೆನಪಿಸಿಕೊಳ್ತೀನಿ : ಇಂದ್ರಾಣಿ ರಾಯ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.