ETV Bharat / sports

ಕೊಹ್ಲಿ ಪಡೆ ವಿಶ್ವಕಪ್​ ಸೋಲುವುದಕ್ಕೆ ಇದೇ ಮುಖ್ಯ ಕಾರಣ... ಯುವಿ ಹೊರಹಾಕಿದ್ರು ಈ ಮಾಹಿತಿ!

author img

By

Published : Sep 26, 2019, 10:15 PM IST

ಐಸಿಸಿ ಏಕದಿನ ವಿಶ್ವಕಪ್​​ನಲ್ಲಿ ಟೀಂ ಇಂಡಿಯಾ ಸೋಲು ಕಾಣಲು 4ನೇ ಕ್ರಮಾಂಕದಲ್ಲಿ ಉತ್ತಮವಾಗಿ ಬ್ಯಾಟ್​ ಬೀಸದೇ ಇರುವುದು ಎಂದು ಟೀಂ ಇಂಡಿಯಾ ಮಾಜಿ ಕ್ರಿಕೆಟ್​ ಪ್ಲೇಯರ್​ ಯುವರಾಜ್​ ಸಿಂಗ್​ ಅಭಿಪ್ರಾಯಪಟ್ಟಿದ್ದಾರೆ.

ಯುವರಾಜ್​ ಸಿಂಗ್​​

ಮುಂಬೈ: ಪ್ರಸಕ್ತ ವರ್ಷ ನಡೆದ ಐಸಿಸಿ ಏಕದಿನ ವಿಶ್ವಕಪ್​ನಲ್ಲಿ ಟೀಂ ಇಂಡಿಯಾ ಸೆಮಿಫೈನಲ್​​ನಲ್ಲಿ ನ್ಯೂಜಿಲ್ಯಾಂಡ್​ ವಿರುದ್ಧ ಸೋಲು ಕಾಣುವ ಮೂಲಕ ಟೂರ್ನಿಯಿಂದ ಹೊರಬಿದ್ದ ವಿಚಾರ ಎಲ್ಲರಿಗೂ ಗೊತ್ತಿದೆ. ಈ ಸೋಲಿಗೆ ಮುಖ್ಯ ಕಾರಣ ಏನು ಎಂಬುದನ್ನ ಇದೀಗ ಸಿಕ್ಸರ್​ ಕಿಂಗ್ ಯುವರಾಜ್​ ಸಿಂಗ್​​​ ತಿಳಿಸಿದ್ದಾರೆ.

ಕೊಹ್ಲಿ ಪಡೆ ವಿಶ್ವಕಪ್​ ಕೈಚೆಲ್ಲುವುದಕ್ಕೆ ಮುಖ್ಯ ಕಾರಣವಾಗಿದ್ದು, ನಂಬರ್​ 4 ಕ್ರಮಾಂಕದಲ್ಲಿನ ಬ್ಯಾಟಿಂಗ್​ ವೈಪಲ್ಯ ಎಂಬ ಮಾಹಿತಿಯನ್ನ ಯುವರಾಜ್​ ಸಿಂಗ್​​ ತಿಳಿಸಿದ್ರು. ಈ ಹಿಂದಿನಿಂದಲೂ ಟೀಂ ಇಂಡಿಯಾ ಈ ಕ್ರಮಾಂಕದಲ್ಲಿ ಬ್ಯಾಟಿಂಗ್​ ವೈಫಲ್ಯ ಅನುಭವಿಸುತ್ತಿದೆ. 2019ರ ಐಸಿಸಿ ವಿಶ್ವಕಪ್​​ನಲ್ಲೂ ಕೆಎಲ್​ ರಾಹುಲ್​,ರಿಷಭ್​ ಪಂತ್​,ವಿಜಯ್​ ಶಂಕರ್​ ಹಾಗೂ ದಿನೇಶ್​ ಕಾರ್ತಿಕ್​​ ಈ ಸ್ಥಾನದಲ್ಲಿ ಬ್ಯಾಟ್​ ಬೀಸಿದ್ರೂ ಯಾವೊಬ್ಬ ಪ್ಲೇಯರ್​ ಹೇಳಿಕೊಳ್ಳುವಂತಹ ಪ್ರದರ್ಶನ ನೀಡಲಿಲ್ಲ. ಟೀಂ ಇಂಡಿಯಾ ಮ್ಯಾನೇಜ್​ಮೆಂಟ್​ ಈ ವಿಷಯವನ್ನ ಗಂಭೀರವಾಗಿ ಪರಿಗಣನೆ ಮಾಡಬೇಕು ಎಂದು ಅವರು ತಿಳಿಸಿದ್ದಾರೆ.

team india
ಟೀಂ ಇಂಡಿಯಾ

ವಿಶ್ವಕಪ್​ ಆರಂಭಗೊಳ್ಳುವುದಕ್ಕೂ ಮುಂಚಿತವಾಗಿ ನಾವು ಆಸ್ಟ್ರೇಲಿಯಾ ಸರಣಿ ಕೈಚೆಲ್ಲಿದ್ದೇವು. ಈ ವೇಳೆ ರಾಯುಡು ಸರಿಯಾದ ಪ್ರದರ್ಶನ ನೀಡದ ಕಾರಣ ವಿಜಯ್​ ಶಂಕರ್​ಗೆ ಚಾನ್ಸ್​ ನೀಡಲಾಯಿತು. ಈ ವೇಳೆ ಆಯ್ಕೆ ಸಮಿತಿ 4ನೇ ಕ್ರಮಾಂಕದಲ್ಲಿ ಬ್ಯಾಟಿಂಗ್​ ಮಾಡುವ ಮಹತ್ವ ತಿಳಿದುಕೊಳ್ಳಬೇಕಾಗಿತ್ತು. ವಿಜಯ್​ ಶಂಕರ್​ ಹಾಗೂ ರಿಷಭ್​ ಪಂತ್​ಗೆ ಅಷ್ಟೊಂದು ಅನುಭವ ಇರಲಿಲ್ಲ. ದಿನೇಶ್​ ಕಾರ್ತಿಕ್​ಗೆ ಅನುಭವವಿದ್ದರೂ, ತುಂಬಾ ಸಮಯದಿಂದ ಮೈದಾನಕ್ಕೆ ಇಳಿಯದ ಅವರಿಗೆ ದಿಢೀರ್​ ಆಗಿ ಬುಲಾವ್​ ನೀಡಲಾಯಿತು. ಹೀಗಾಗಿ ಸೆಮಿಫೈನಲ್​​ನಲ್ಲಿ ಟೀಂ ಇಂಡಿಯಾ ಸೋಲು ಕಾಣುವಂತಾಯಿತು.

ವಿಶ್ವಕಪ್​​ನಲ್ಲಿ ಧೋನಿ 5ನೇ ಕ್ರಮಾಂಕದಲ್ಲಿ ಉತ್ತಮವಾಗಿ ಬ್ಯಾಟ್​ ಬೀಸಿದ್ದರು. ಆದರೆ ಸೆಮಿಫೈನಲ್​​ನಲ್ಲಿ ಅವರಿಗೆ ದಿನೇಶ್​ ಕಾರ್ತಿಕ್​ ಹಾಗೂ ಹಾರ್ದಿಕಪ್​ ಪಾಂಡ್ಯನಂತರ ಬ್ಯಾಟ್​ ಮಾಡಲು ಕಳುಹಿಸಲಾಯಿತು. ಇದು ನನಗೆ ತುಂಬಾ ಆಶ್ಚರ್ಯ ನೀಡಿತು ಎಂದು ತಿಳಿಸಿದ್ದರು.

ಮುಂಬೈ: ಪ್ರಸಕ್ತ ವರ್ಷ ನಡೆದ ಐಸಿಸಿ ಏಕದಿನ ವಿಶ್ವಕಪ್​ನಲ್ಲಿ ಟೀಂ ಇಂಡಿಯಾ ಸೆಮಿಫೈನಲ್​​ನಲ್ಲಿ ನ್ಯೂಜಿಲ್ಯಾಂಡ್​ ವಿರುದ್ಧ ಸೋಲು ಕಾಣುವ ಮೂಲಕ ಟೂರ್ನಿಯಿಂದ ಹೊರಬಿದ್ದ ವಿಚಾರ ಎಲ್ಲರಿಗೂ ಗೊತ್ತಿದೆ. ಈ ಸೋಲಿಗೆ ಮುಖ್ಯ ಕಾರಣ ಏನು ಎಂಬುದನ್ನ ಇದೀಗ ಸಿಕ್ಸರ್​ ಕಿಂಗ್ ಯುವರಾಜ್​ ಸಿಂಗ್​​​ ತಿಳಿಸಿದ್ದಾರೆ.

ಕೊಹ್ಲಿ ಪಡೆ ವಿಶ್ವಕಪ್​ ಕೈಚೆಲ್ಲುವುದಕ್ಕೆ ಮುಖ್ಯ ಕಾರಣವಾಗಿದ್ದು, ನಂಬರ್​ 4 ಕ್ರಮಾಂಕದಲ್ಲಿನ ಬ್ಯಾಟಿಂಗ್​ ವೈಪಲ್ಯ ಎಂಬ ಮಾಹಿತಿಯನ್ನ ಯುವರಾಜ್​ ಸಿಂಗ್​​ ತಿಳಿಸಿದ್ರು. ಈ ಹಿಂದಿನಿಂದಲೂ ಟೀಂ ಇಂಡಿಯಾ ಈ ಕ್ರಮಾಂಕದಲ್ಲಿ ಬ್ಯಾಟಿಂಗ್​ ವೈಫಲ್ಯ ಅನುಭವಿಸುತ್ತಿದೆ. 2019ರ ಐಸಿಸಿ ವಿಶ್ವಕಪ್​​ನಲ್ಲೂ ಕೆಎಲ್​ ರಾಹುಲ್​,ರಿಷಭ್​ ಪಂತ್​,ವಿಜಯ್​ ಶಂಕರ್​ ಹಾಗೂ ದಿನೇಶ್​ ಕಾರ್ತಿಕ್​​ ಈ ಸ್ಥಾನದಲ್ಲಿ ಬ್ಯಾಟ್​ ಬೀಸಿದ್ರೂ ಯಾವೊಬ್ಬ ಪ್ಲೇಯರ್​ ಹೇಳಿಕೊಳ್ಳುವಂತಹ ಪ್ರದರ್ಶನ ನೀಡಲಿಲ್ಲ. ಟೀಂ ಇಂಡಿಯಾ ಮ್ಯಾನೇಜ್​ಮೆಂಟ್​ ಈ ವಿಷಯವನ್ನ ಗಂಭೀರವಾಗಿ ಪರಿಗಣನೆ ಮಾಡಬೇಕು ಎಂದು ಅವರು ತಿಳಿಸಿದ್ದಾರೆ.

team india
ಟೀಂ ಇಂಡಿಯಾ

ವಿಶ್ವಕಪ್​ ಆರಂಭಗೊಳ್ಳುವುದಕ್ಕೂ ಮುಂಚಿತವಾಗಿ ನಾವು ಆಸ್ಟ್ರೇಲಿಯಾ ಸರಣಿ ಕೈಚೆಲ್ಲಿದ್ದೇವು. ಈ ವೇಳೆ ರಾಯುಡು ಸರಿಯಾದ ಪ್ರದರ್ಶನ ನೀಡದ ಕಾರಣ ವಿಜಯ್​ ಶಂಕರ್​ಗೆ ಚಾನ್ಸ್​ ನೀಡಲಾಯಿತು. ಈ ವೇಳೆ ಆಯ್ಕೆ ಸಮಿತಿ 4ನೇ ಕ್ರಮಾಂಕದಲ್ಲಿ ಬ್ಯಾಟಿಂಗ್​ ಮಾಡುವ ಮಹತ್ವ ತಿಳಿದುಕೊಳ್ಳಬೇಕಾಗಿತ್ತು. ವಿಜಯ್​ ಶಂಕರ್​ ಹಾಗೂ ರಿಷಭ್​ ಪಂತ್​ಗೆ ಅಷ್ಟೊಂದು ಅನುಭವ ಇರಲಿಲ್ಲ. ದಿನೇಶ್​ ಕಾರ್ತಿಕ್​ಗೆ ಅನುಭವವಿದ್ದರೂ, ತುಂಬಾ ಸಮಯದಿಂದ ಮೈದಾನಕ್ಕೆ ಇಳಿಯದ ಅವರಿಗೆ ದಿಢೀರ್​ ಆಗಿ ಬುಲಾವ್​ ನೀಡಲಾಯಿತು. ಹೀಗಾಗಿ ಸೆಮಿಫೈನಲ್​​ನಲ್ಲಿ ಟೀಂ ಇಂಡಿಯಾ ಸೋಲು ಕಾಣುವಂತಾಯಿತು.

ವಿಶ್ವಕಪ್​​ನಲ್ಲಿ ಧೋನಿ 5ನೇ ಕ್ರಮಾಂಕದಲ್ಲಿ ಉತ್ತಮವಾಗಿ ಬ್ಯಾಟ್​ ಬೀಸಿದ್ದರು. ಆದರೆ ಸೆಮಿಫೈನಲ್​​ನಲ್ಲಿ ಅವರಿಗೆ ದಿನೇಶ್​ ಕಾರ್ತಿಕ್​ ಹಾಗೂ ಹಾರ್ದಿಕಪ್​ ಪಾಂಡ್ಯನಂತರ ಬ್ಯಾಟ್​ ಮಾಡಲು ಕಳುಹಿಸಲಾಯಿತು. ಇದು ನನಗೆ ತುಂಬಾ ಆಶ್ಚರ್ಯ ನೀಡಿತು ಎಂದು ತಿಳಿಸಿದ್ದರು.

Intro:Body:

ಕೊಹ್ಲಿ ಪಡೆ ವಿಶ್ವಕಪ್​ ಸೋಲುವುದಕ್ಕೆ ಇದೇ ಮುಖ್ಯ ಕಾರಣ... ಯುವಿ ಹೊರಹಾಕಿದ್ರು ಈ ಮಾಹಿತಿ! 



ಮುಂಬೈ: ಪ್ರಸಕ್ತ ವರ್ಷ ನಡೆದ ಐಸಿಸಿ ಏಕದಿನ ವಿಶ್ವಕಪ್​ನಲ್ಲಿ ಟೀಂ ಇಂಡಿಯಾ ಸೆಮಿಫೈನಲ್​​ನಲ್ಲಿ ನ್ಯೂಜಿಲ್ಯಾಂಡ್​ ವಿರುದ್ಧ ಸೋಲು ಕಾಣುವ ಮೂಲಕ ಟೂರ್ನಿಯಿಂದ ಹೊರಬಿದ್ದ ವಿಚಾರ ಎಲ್ಲರಿಗೂ ಗೊತ್ತಿದೆ. ಈ ಸೋಲಿಗೆ ಮುಖ್ಯ ಕಾರಣ ಏನು ಎಂಬುದನ್ನ ಇದೀಗ ಸಿಕ್ಸರ್​ ಕಿಂಗ್ ಯುವರಾಜ್​ ಸಿಂಗ್​​​ ತಿಳಿಸಿದ್ದಾರೆ. 



ಕೊಹ್ಲಿ ಪಡೆ ವಿಶ್ವಕಪ್​ ಕೈಚೆಲ್ಲುವುದಕ್ಕೆ ಮುಖ್ಯ ಕಾರಣವಾಗಿದ್ದು, ನಂಬರ್​ 4 ಕ್ರಮಾಂಕದಲ್ಲಿನ ಬ್ಯಾಟಿಂಗ್​ ವೈಪಲ್ಯ ಎಂಬ ಮಾಹಿತಿಯನ್ನ ಯುವರಾಜ್​ ಸಿಂಗ್​​ ತಿಳಿಸಿದ್ರು. ಈ ಹಿಂದಿನಿಂದಲೂ ಟೀಂ ಇಂಡಿಯಾ ಈ ಕ್ರಮಾಂಕದಲ್ಲಿ ಬ್ಯಾಟಿಂಗ್​ ವೈಫಲ್ಯ ಅನುಭವಿಸುತ್ತಿದೆ. 2019ರ ಐಸಿಸಿ ವಿಶ್ವಕಪ್​​ನಲ್ಲೂ ಕೆಎಲ್​ ರಾಹುಲ್​,ರಿಷಭ್​ ಪಂತ್​,ವಿಜಯ್​ ಶಂಕರ್​ ಹಾಗೂ ದಿನೇಶ್​ ಕಾರ್ತಿಕ್​​ ಈ ಸ್ಥಾನದಲ್ಲಿ ಬ್ಯಾಟ್​ ಬೀಸಿದ್ರೂ ಯಾವೊಬ್ಬ ಪ್ಲೇಯರ್​ ಹೇಳಿಕೊಳ್ಳುವಂತಹ ಪ್ರದರ್ಶನ ನೀಡಲಿಲ್ಲ. ಟೀಂ ಇಂಡಿಯಾ ಮ್ಯಾನೇಜ್​ಮೆಂಟ್​ ಈ ವಿಷಯವನ್ನ ಗಂಭೀರವಾಗಿ ಪರಿಗಣನೆ ಮಾಡಬೇಕು ಎಂದು ಅವರು ತಿಳಿಸಿದ್ದಾರೆ. 



ವಿಶ್ವಕಪ್​ ಆರಂಭಗೊಳ್ಳುವುದಕ್ಕೂ ಮುಂಚಿತವಾಗಿ ನಾವು ಆಸ್ಟ್ರೇಲಿಯಾ ಸರಣಿ ಕೈಚೆಲ್ಲಿದ್ದೇವು. ಈ ವೇಳೆ ರಾಯುಡು ಸರಿಯಾದ ಪ್ರದರ್ಶನ ನೀಡದ ಕಾರಣ ವಿಜಯ್​ ಶಂಕರ್​ಗೆ ಚಾನ್ಸ್​ ನೀಡಲಾಯಿತು. ಈ ವೇಳೆ ಆಯ್ಕೆ ಸಮಿತಿ 4ನೇ ಕ್ರಮಾಂಕದಲ್ಲಿ ಬ್ಯಾಟಿಂಗ್​ ಮಾಡುವ ಮಹತ್ವ ತಿಳಿದುಕೊಳ್ಳಬೇಕಾಗಿತ್ತು. ವಿಜಯ್​ ಶಂಕರ್​ ಹಾಗೂ ರಿಷಭ್​ ಪಂತ್​ಗೆ ಅಷ್ಟೊಂದು ಅನುಭವ ಇರಲಿಲ್ಲ. ದಿನೇಶ್​ ಕಾರ್ತಿಕ್​ಗೆ ಅನುಭವವಿದ್ದರೂ, ತುಂಬಾ ಸಮಯದಿಂದ ಮೈದಾನಕ್ಕೆ ಇಳಿಯದ ಅವರಿಗೆ ದಿಢೀರ್​ ಆಗಿ ಬುಲಾವ್​ ನೀಡಲಾಯಿತು. ಹೀಗಾಗಿ ಸೆಮಿಫೈನಲ್​​ನಲ್ಲಿ ಟೀಂ ಇಂಡಿಯಾ ಸೋಲು ಕಾಣುವಂತಾಯಿತು. 



ವಿಶ್ವಕಪ್​​ನಲ್ಲಿ ಧೋನಿ 5ನೇ ಕ್ರಮಾಂಕದಲ್ಲಿ ಉತ್ತಮವಾಗಿ ಬ್ಯಾಟ್​ ಬೀಸಿದ್ದರು. ಆದರೆ ಸೆಮಿಫೈನಲ್​​ನಲ್ಲಿ ಅವರಿಗೆ ದಿನೇಶ್​ ಕಾರ್ತಿಕ್​ ಹಾಗೂ ಹಾರ್ದಿಕಪ್​ ಪಾಂಡ್ಯನಂತರ ಬ್ಯಾಟ್​ ಮಾಡಲು ಕಳುಹಿಸಲಾಯಿತು. ಇದು ನನಗೆ ತುಂಬಾ ಆಶ್ಚರ್ಯ ನೀಡಿತು ಎಂದು ತಿಳಿಸಿದ್ದರು. 


Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.