ETV Bharat / sports

ಲಾಲಾರಸ ಬಳಕೆ ನಿಷೇಧದಿಂದ ಬೌಲರ್​ಗಳು ಅಂಗವಿಕಲರಾಗಿದ್ದಾರೆ: ಸಚಿನ್ ತೆಂಡೂಲ್ಕರ್

author img

By

Published : Dec 14, 2020, 8:00 PM IST

ಚೆಂಡಿಗೆ ಲಾಲಾರಸ ಹಚ್ಚುವುದರಿಂದ ಚೆಂಡಿನ ಮೇಲೆ ಹಿಡಿತ ಸಾಧಿಸಿ ಸ್ವಿಂಗ್ ಮಾಡಬಹುದು. ಆದರೆ, ನಿಷೇಧದಿಂದ ಬೌಲರ್​ಗಳ ಪ್ರಮುಖ ಅಂಗವನ್ನೇ ಕಸಿದಂತಾಗಿದೆ ಎಂದು ಸಚಿನ್ ತೆಂಡೂಲ್ಕರ್ ಹೇಳಿದ್ದಾರೆ.

bowlers are handicapped
ಸಚಿನ್ ತೆಂಡೂಲ್ಕರ್

ನವದೆಹಲಿ: ಕೋವಿಡ್ ನಿಯಮಗಳಿಂದಾಗಿ ಕ್ರಿಕೆಟಿಗರ ಕೈ ಕಟ್ಟಿ ಹಾಕಿದಂತಾಗಿದ್ದು, ಬಯೋ ಬಬಲ್ ನಲ್ಲಿ ಉಳಿದುಕೊಳ್ಳಲು ಕ್ರಿಕೆಟಿಗರು ಸಾಕಷ್ಟು ಹರಸಾಹಸ ಪಡಬೇಕು. ಇದು ನಿಜಕ್ಕೂ ಅವರಿಗೆ ದೊಡ್ಡ ಸವಾಲಿನ ಕೆಲಸವಾಗಿದೆ ಎಂದು ಕ್ರಿಕೆಟ್ ದಂತಕತೆ ಸಚಿನ್ ತೆಂಡೂಲ್ಕರ್ ಹೇಳಿದ್ದಾರೆ.

ಕೋವಿಡ್ ನಿಯಮಗಳಿಂದ ಕ್ರಿಕೆಟಿಗರು ಹಲವು ಸಮಸ್ಯೆಗೆ ಸಿಲುಕಿದ್ದು, ಲಾಲಾರಸ ಬಳಸುವುದನ್ನು ನಿಷೇಧಿಸಿರುವುದು ಬೌಲರ್​ಗಳ ಕೈ ಕಟ್ಟಿಹಾಕಿದೆ ಎಂದಿದ್ದಾರೆ.

ಚೆಂಡಿಗೆ ಲಾಲಾರಸ ಹಾಕುವ ಮೂಲಕ ಬೌಲರ್​ಗಳು ಹಿಡಿತ ಸಾಧಿಸುತ್ತಿದ್ದರು. ಆದರೆ ಲಾಲಾರಸ ಬಳಕೆಯ ನಿಷೇಧದಿಂದಾಗಿ ಚೆಂಡಿನ ಮೇಲಿನ ಹಿಡಿತ ಸಾಧಿಸಲಾಗದೇ ಬೌಲರ್​ಗಳು ಪರದಾಡುತ್ತಿದ್ದಾರೆ. ಜಸ್ಪ್ರೀತ್ ಬುಮ್ರಾ ರಂತಹ ವೇಗದ ಬೌಲರ್​ಗಳಿಗೆ ಅನಾನುಕೂಲವಾಗುತ್ತಿದ್ದು, ಈ ನಿಯಮ ನಿಜಕ್ಕೂ ಅವರನ್ನು ಅಂಗವಿಕಲರನ್ನಾಗಿ ಮಾಡಿದೆ ಎಂದಿದ್ದಾರೆ.

ಚೆಂಡಿಗೆ ಲಾಲಾರಸ ಹಚ್ಚುವುದರಿಂದ ಚೆಂಡಿನ ಮೇಲೆ ಹಿಡಿತ ಸಾಧಿಸಿ ಸ್ವಿಂಗ್ ಮಾಡಬಹುದು. ಆದರೆ, ನಿಷೇಧದಿಂದ ಬೌಲರ್​ಗಳ ಪ್ರಮುಖ ಅಂಗವನ್ನೇ ಕಸಿದಂತಾಗಿದೆ ಎಂದಿದ್ದಾರೆ.

ನವದೆಹಲಿ: ಕೋವಿಡ್ ನಿಯಮಗಳಿಂದಾಗಿ ಕ್ರಿಕೆಟಿಗರ ಕೈ ಕಟ್ಟಿ ಹಾಕಿದಂತಾಗಿದ್ದು, ಬಯೋ ಬಬಲ್ ನಲ್ಲಿ ಉಳಿದುಕೊಳ್ಳಲು ಕ್ರಿಕೆಟಿಗರು ಸಾಕಷ್ಟು ಹರಸಾಹಸ ಪಡಬೇಕು. ಇದು ನಿಜಕ್ಕೂ ಅವರಿಗೆ ದೊಡ್ಡ ಸವಾಲಿನ ಕೆಲಸವಾಗಿದೆ ಎಂದು ಕ್ರಿಕೆಟ್ ದಂತಕತೆ ಸಚಿನ್ ತೆಂಡೂಲ್ಕರ್ ಹೇಳಿದ್ದಾರೆ.

ಕೋವಿಡ್ ನಿಯಮಗಳಿಂದ ಕ್ರಿಕೆಟಿಗರು ಹಲವು ಸಮಸ್ಯೆಗೆ ಸಿಲುಕಿದ್ದು, ಲಾಲಾರಸ ಬಳಸುವುದನ್ನು ನಿಷೇಧಿಸಿರುವುದು ಬೌಲರ್​ಗಳ ಕೈ ಕಟ್ಟಿಹಾಕಿದೆ ಎಂದಿದ್ದಾರೆ.

ಚೆಂಡಿಗೆ ಲಾಲಾರಸ ಹಾಕುವ ಮೂಲಕ ಬೌಲರ್​ಗಳು ಹಿಡಿತ ಸಾಧಿಸುತ್ತಿದ್ದರು. ಆದರೆ ಲಾಲಾರಸ ಬಳಕೆಯ ನಿಷೇಧದಿಂದಾಗಿ ಚೆಂಡಿನ ಮೇಲಿನ ಹಿಡಿತ ಸಾಧಿಸಲಾಗದೇ ಬೌಲರ್​ಗಳು ಪರದಾಡುತ್ತಿದ್ದಾರೆ. ಜಸ್ಪ್ರೀತ್ ಬುಮ್ರಾ ರಂತಹ ವೇಗದ ಬೌಲರ್​ಗಳಿಗೆ ಅನಾನುಕೂಲವಾಗುತ್ತಿದ್ದು, ಈ ನಿಯಮ ನಿಜಕ್ಕೂ ಅವರನ್ನು ಅಂಗವಿಕಲರನ್ನಾಗಿ ಮಾಡಿದೆ ಎಂದಿದ್ದಾರೆ.

ಚೆಂಡಿಗೆ ಲಾಲಾರಸ ಹಚ್ಚುವುದರಿಂದ ಚೆಂಡಿನ ಮೇಲೆ ಹಿಡಿತ ಸಾಧಿಸಿ ಸ್ವಿಂಗ್ ಮಾಡಬಹುದು. ಆದರೆ, ನಿಷೇಧದಿಂದ ಬೌಲರ್​ಗಳ ಪ್ರಮುಖ ಅಂಗವನ್ನೇ ಕಸಿದಂತಾಗಿದೆ ಎಂದಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.