ETV Bharat / sports

ಈ ಸೋಲಿಗೆ ಆಟಗಾರರಿಗೆ ಮಾತ್ರ ಶಿಕ್ಷೆಯೇ... ಇದಕ್ಕೆ ಆಯ್ಕೆಗಾರರು ಹೊಣೆಯಲ್ಲವೇ?

author img

By

Published : Jul 13, 2019, 10:39 AM IST

ಸೆಮಿಫೈನಲ್​ನಲ್ಲಿ ಭಾರತ ತಂಡ ಸೋಲನುಭಿವಿಸಿದ ಮೇಲೆ ಆಯ್ಕೆ ಸಮಿತಿಯ ಮೇಲೆ ಅಸಮಾಧಾನಗೊಂಡಿದ್ದು, ವಿಶ್ವಕಪ್​ನಂತಹ ಮಹಾ ಟೂರ್ನಿಯ ವೇಳೆ ಒಬ್ಬ ಸೂಕ್ತ ಆಟಗಾರನನ್ನು 4ನೇ ಕ್ರಮಾಂಕಕ್ಕೆ ಆಯ್ಕೆ ಮಾಡದಿರುವ ಬಗ್ಗೆ ವಿವರಣೆ ನೀಡಲು ಬಿಸಿಸಿಐ ಕೋರಿದೆ.

bcci

ಮುಂಬೈ: ಟೀಂ ಇಂಡಿಯಾ ಆಯ್ಕೆ ಸಮಿತಿ ಮೊದಲಿಗೆ ಕೆ.ಎಲ್.ರಾಹುಲ್ ಅವರನ್ನ ನಾಲ್ಕನೇ ಕ್ರಮಾಂಕದಲ್ಲಿ ಆಡುವ ಸಲುವಾಗಿ ಆಯ್ಕೆ ಮಾಡಿತ್ತು. ಯಾವಾಗ ಓಪನರ್​​ ಶಿಖರ್​ ಧವನ್ ಗಾಯಗೊಂಡು ಹೊರ ಬಿದ್ದರೋ ಆಗ ಆಯ್ಕೆದಾರರು ಕೆ.ಎಲ್.ರಾಹುಲ್​ಗೆ ಬಡ್ತಿ ಕೊಟ್ಟು ಒಪನರ್​ ಆಗಿ ಆಯ್ಕೆ ಮಾಡಲಾಗಿತ್ತು.

ಅತ್ಯಂತ ಪ್ರಮುಖ ಪಂದ್ಯದಲ್ಲಿ ಆಲ್​ರೌಂಡರ್​ ವಿಜಯ್​ ಶಂಕರ್​​​ಗೆ ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟಿಂಗ್​​ಗೆ ಅವಕಾಶ ಕಲ್ಪಿಸಲಾಯಿತು. ವಿಜಯ್​ ಶಂಕರ್​ ಸಹ ಗಾಯಗೊಂಡು ಟೂರ್ನಿಯಿಂದ ಹೊರ ಬಿದ್ದರು. ಆಗ ಅವರ ಸ್ಥಾನಕ್ಕೆ ಕನ್ನಡಿಗ ಮಯಾಂಕ್​ ಅಗರ್​ವಾಲ್​ ಅವರನ್ನ ಆಯ್ಕೆ ಮಾಡಲಾಯಿತು. ಆಯ್ಕೆ ಸಮಿತಿಯ ಈ ನಿರ್ಧಾರ ಈಗ ಬಿಸಿಸಿಐ ಮುಂದೆ ಬರಲಿದ್ದು, ಆಯ್ಕೆ ಸಮಿತಿ ಎಲ್ಲದಕ್ಕೂ ವಿವರಣೆ ನೀಡಬೇಕೆಂಬ ಮಾತು ಕೇಳಿಬರುತ್ತಿದೆ.

ಈ ಸಂಬಂಧ ಮಾತನಾಡಿರುವ ಬಿಸಿಸಿಐ ಅಧಿಕಾರಿಯೊಬ್ಬರು, ಸೋಲಿಗೆ ಕೇವಲ ಆಟಗಾರರನ್ನು ಮಾತ್ರ ದೂರಲಾಗುತ್ತಿದೆ. ಸೋಲಿಗೆ ಕೇವಲ ಆಟಗಾರರು ಮಾತ್ರ ಅಲ್ಲ, ಆಯ್ಕೆ ಸಮಿತಿಯೂ ನೇರ ಹೊಣೆಯಾಗುತ್ತದೆ. ತಂಡ ಸಿರೀಸ್​ಗಳನ್ನ ಗೆದ್ದಾಗ ಎಲ್ಲರಿಗೂ ನಗದು ಬಹುಮಾನ ದೊರೆಯುತ್ತದೆ. ಆಗ ಸೆಲೆಕ್ಟರ್ಸ್​ಗಳಿಂದ ಹಿಡಿದು ತಂಡದ ಗೆಲುವಿಗೆ ಕಾರಣರಾದ ಎಲ್ಲರಿಗೂ ಬಹುಮಾನ ನೀಡಲಾಗುತ್ತದೆ. ಹಾಗೆಯೇ ಸೋಲಿನ ಹೊಣೆಯೂ ಎಲ್ಲರದ್ದಾಗಿರುತ್ತದೆ. ಈ ಸೋಲಿಗೆ ಸೆಲೆಕ್ಟರ್​ಗಳು ಸಹ ಹೊಣೆಗಾರರು ಎಂದಿದ್ದಾರೆ.

ಈ ಮಾತುಗಳು ಈಗ ಆಯ್ಕೆ ಸಮಿತಿ ಮುಖ್ಯಸ್ಥ ಎಂಎಸ್​ಕೆ ಪ್ರಸಾದ್​, ದೇವಾಂಗ್​ ಗಾಂಧಿ, ಗಗನ್​ ಖೋಡಾ, ಜತಿನ್​ ಪರಾಂಜಪೆ ಮತ್ತು ಸರಣ್​ದೀಪ್​ ಸಿಂಗ್​ ಅವರನ್ನೇ ಗುರಿಯಾಗಿಸಿಕೊಂಡಿರುವುದನ್ನ ತೋರಿಸುತ್ತಿದೆ ಎನ್ನಲಾಗುತ್ತಿದೆ. ಒಟ್ಟಿನಲ್ಲಿ ಸೆಮಿಫೈನಲ್ ಸೋಲು ಬಿಸಿಸಿಐ, ಆಯ್ಕೆ ಸಮಿತಿ ಹಾಗೂ ತಂಡದಲ್ಲಿನ ಹುಳುಕುಗಳನ್ನ ಒಂದೊಂದಾಗಿಯೇ ಹೊರ ಹಾಕುತ್ತಿದೆ.

ವಿಶ್ವಕಪ್​ಗೆ 15 ಮಂದಿ ಪ್ರೈಮರಿ ಟೀಂ​ ಆಯ್ಕೆ ಮಾಡಿದಾಗಲೇ ಆಯ್ಕೆ ಸಮಿತಿ ವಿರುದ್ಧ ಅನಾನುಭವಿಗಳು ಎಂಬ ಕೂಗು ಕೇಳಿ ಬಂದಿತ್ತು. ಅದರಲ್ಲೂ ರಾಯುಡುರನ್ನು ಕೈ ಬಿಟ್ಟಿದ್ದು ದೊಡ್ಡ ವಿವಾದಕ್ಕೆ ಕಾರಣವಾಗಿತ್ತು. ಇದೀಗ ಆಯ್ಕೆ ಸಮಿತಿಗೆ ಸೆಮಿಫೈನಲ್​ನ ಸೋಲು ತಲೆನೋವು ತರಿಸಿದೆ.

ಮುಂಬೈ: ಟೀಂ ಇಂಡಿಯಾ ಆಯ್ಕೆ ಸಮಿತಿ ಮೊದಲಿಗೆ ಕೆ.ಎಲ್.ರಾಹುಲ್ ಅವರನ್ನ ನಾಲ್ಕನೇ ಕ್ರಮಾಂಕದಲ್ಲಿ ಆಡುವ ಸಲುವಾಗಿ ಆಯ್ಕೆ ಮಾಡಿತ್ತು. ಯಾವಾಗ ಓಪನರ್​​ ಶಿಖರ್​ ಧವನ್ ಗಾಯಗೊಂಡು ಹೊರ ಬಿದ್ದರೋ ಆಗ ಆಯ್ಕೆದಾರರು ಕೆ.ಎಲ್.ರಾಹುಲ್​ಗೆ ಬಡ್ತಿ ಕೊಟ್ಟು ಒಪನರ್​ ಆಗಿ ಆಯ್ಕೆ ಮಾಡಲಾಗಿತ್ತು.

ಅತ್ಯಂತ ಪ್ರಮುಖ ಪಂದ್ಯದಲ್ಲಿ ಆಲ್​ರೌಂಡರ್​ ವಿಜಯ್​ ಶಂಕರ್​​​ಗೆ ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟಿಂಗ್​​ಗೆ ಅವಕಾಶ ಕಲ್ಪಿಸಲಾಯಿತು. ವಿಜಯ್​ ಶಂಕರ್​ ಸಹ ಗಾಯಗೊಂಡು ಟೂರ್ನಿಯಿಂದ ಹೊರ ಬಿದ್ದರು. ಆಗ ಅವರ ಸ್ಥಾನಕ್ಕೆ ಕನ್ನಡಿಗ ಮಯಾಂಕ್​ ಅಗರ್​ವಾಲ್​ ಅವರನ್ನ ಆಯ್ಕೆ ಮಾಡಲಾಯಿತು. ಆಯ್ಕೆ ಸಮಿತಿಯ ಈ ನಿರ್ಧಾರ ಈಗ ಬಿಸಿಸಿಐ ಮುಂದೆ ಬರಲಿದ್ದು, ಆಯ್ಕೆ ಸಮಿತಿ ಎಲ್ಲದಕ್ಕೂ ವಿವರಣೆ ನೀಡಬೇಕೆಂಬ ಮಾತು ಕೇಳಿಬರುತ್ತಿದೆ.

ಈ ಸಂಬಂಧ ಮಾತನಾಡಿರುವ ಬಿಸಿಸಿಐ ಅಧಿಕಾರಿಯೊಬ್ಬರು, ಸೋಲಿಗೆ ಕೇವಲ ಆಟಗಾರರನ್ನು ಮಾತ್ರ ದೂರಲಾಗುತ್ತಿದೆ. ಸೋಲಿಗೆ ಕೇವಲ ಆಟಗಾರರು ಮಾತ್ರ ಅಲ್ಲ, ಆಯ್ಕೆ ಸಮಿತಿಯೂ ನೇರ ಹೊಣೆಯಾಗುತ್ತದೆ. ತಂಡ ಸಿರೀಸ್​ಗಳನ್ನ ಗೆದ್ದಾಗ ಎಲ್ಲರಿಗೂ ನಗದು ಬಹುಮಾನ ದೊರೆಯುತ್ತದೆ. ಆಗ ಸೆಲೆಕ್ಟರ್ಸ್​ಗಳಿಂದ ಹಿಡಿದು ತಂಡದ ಗೆಲುವಿಗೆ ಕಾರಣರಾದ ಎಲ್ಲರಿಗೂ ಬಹುಮಾನ ನೀಡಲಾಗುತ್ತದೆ. ಹಾಗೆಯೇ ಸೋಲಿನ ಹೊಣೆಯೂ ಎಲ್ಲರದ್ದಾಗಿರುತ್ತದೆ. ಈ ಸೋಲಿಗೆ ಸೆಲೆಕ್ಟರ್​ಗಳು ಸಹ ಹೊಣೆಗಾರರು ಎಂದಿದ್ದಾರೆ.

ಈ ಮಾತುಗಳು ಈಗ ಆಯ್ಕೆ ಸಮಿತಿ ಮುಖ್ಯಸ್ಥ ಎಂಎಸ್​ಕೆ ಪ್ರಸಾದ್​, ದೇವಾಂಗ್​ ಗಾಂಧಿ, ಗಗನ್​ ಖೋಡಾ, ಜತಿನ್​ ಪರಾಂಜಪೆ ಮತ್ತು ಸರಣ್​ದೀಪ್​ ಸಿಂಗ್​ ಅವರನ್ನೇ ಗುರಿಯಾಗಿಸಿಕೊಂಡಿರುವುದನ್ನ ತೋರಿಸುತ್ತಿದೆ ಎನ್ನಲಾಗುತ್ತಿದೆ. ಒಟ್ಟಿನಲ್ಲಿ ಸೆಮಿಫೈನಲ್ ಸೋಲು ಬಿಸಿಸಿಐ, ಆಯ್ಕೆ ಸಮಿತಿ ಹಾಗೂ ತಂಡದಲ್ಲಿನ ಹುಳುಕುಗಳನ್ನ ಒಂದೊಂದಾಗಿಯೇ ಹೊರ ಹಾಕುತ್ತಿದೆ.

ವಿಶ್ವಕಪ್​ಗೆ 15 ಮಂದಿ ಪ್ರೈಮರಿ ಟೀಂ​ ಆಯ್ಕೆ ಮಾಡಿದಾಗಲೇ ಆಯ್ಕೆ ಸಮಿತಿ ವಿರುದ್ಧ ಅನಾನುಭವಿಗಳು ಎಂಬ ಕೂಗು ಕೇಳಿ ಬಂದಿತ್ತು. ಅದರಲ್ಲೂ ರಾಯುಡುರನ್ನು ಕೈ ಬಿಟ್ಟಿದ್ದು ದೊಡ್ಡ ವಿವಾದಕ್ಕೆ ಕಾರಣವಾಗಿತ್ತು. ಇದೀಗ ಆಯ್ಕೆ ಸಮಿತಿಗೆ ಸೆಮಿಫೈನಲ್​ನ ಸೋಲು ತಲೆನೋವು ತರಿಸಿದೆ.

Intro:Body:

 ಈ ಸೋಲು ಆಟಗಾರರಿಗೆ ಮಾತ್ರ ಶಿಕ್ಷೆಯೇ.. ಇದಕ್ಕೆ ಆಯ್ಕೆದಾರರು ಹೊಣೆಯಲ್ಲವೇ? 

ಮುಂಬೈ:  ಟೀಂ ಇಂಡಿಯಾ ಆಯ್ಕೆ ಸಮಿತಿ ಮೊದಲಿಗೆ ಕೆ.ಎಲ್. ರಾಹುಲ್ ಅವರನ್ನ ನಾಲ್ಕನೇ ಕ್ರಮಾಂಕದಲ್ಲಿ ಆಡುವ ಸಲುವಾಗಿ ಆಯ್ಕೆ ಮಾಡಿತ್ತು. ಯಾವಾಗ  ಓಪ್ನರ್​​ ಶಿಖರ್​ ಧವನ್ ಗಾಯಗೊಂಡು ಹೊರ ಬಿದ್ದರೋ ಆಗ ಆಯ್ಕೆದಾರರು  ಕೆ.ಎಲ್. ರಾಹುಲ್​ಗೆ ಬಡ್ತಿ ಕೊಟ್ಟು ಒಪ್ನರ್​ ಆಗಿ ಆಯ್ಕೆ ಮಾಡಿಕೊಂಡರು.  



ಅತ್ಯಂತ ಪ್ರಮುಖ ಪಂದ್ಯದಲ್ಲಿ ಆಲ್​ರೌಂಡರ್​ ವಿಜಯ್​ ಶಂಕರ್​​​ಗೆ ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟಿಂಗ್​​ಗೆ ಅವಕಾಶ ಕಲ್ಪಿಸಲಾಯಿತು.  ವಿಜಯ್​ ಶಂಕರ್​ ಸಹ ಗಾಯಗೊಂಡು ಟೂರ್ನಿಯಿಂದ ಹೊರ ಬಿದ್ದರು. ಆಗ ಅವರ ಸ್ಥಾನಕ್ಕೆ ಕನ್ನಡಿಗ ಮಯಾಂಕ್​ ಅಗರ್​ವಾಲ್​ ಅವರನ್ನ ಆಯ್ಕೆ ಮಾಡಲಾಯಿತು.  



ಆಯ್ಕೆ ಸಮಿತಿಯ ಈ ನಿರ್ಧಾರ ಈಗ ಬಿಸಿಸಿಐ ಮುಂದೆ ಬರಲಿದ್ದು, ಆಯ್ಕೆ ಸಮಿತಿ ಎಲ್ಲದಕ್ಕೂ ವಿವರಣೆ ನೀಡಬೇಕಾಗುತ್ತದೆ. ಈ ಸಂಬಂಧ ಮಾತನಾಡಿರುವ ಬಿಸಿಸಿಐ ಅಧಿಕಾರಿಯೊಬ್ಬರು. ಸೋಲಿಗೆ ಕೇವಲ ಆಟಗಾರರನ್ನು ಮಾತ್ರ ದೂರಲಾಗುತ್ತಿದೆ.  ಸೋಲಿಗೆ ಕೇವಲ ಆಟಗಾರರು ಮಾತ್ರ ಅಲ್ಲ ಆಯ್ಕೆ ಸಮಿತಿಯೂ ಹೊಣೆ ಆಗುತ್ತದೆ. ತಂಡ ಸಿರೀಸ್​ಗಳನ್ನ ಗೆದ್ದಾಗ ಎಲ್ಲರಿಗೂ ನಗದು ಬಹುಮಾನ ದೊರೆಯುತ್ತದೆ. ಆಗ ಸೆಲೆಕ್ಟರ್ಸ್​ಗಳಿಂದ ಹಿಡಿದು ತಂಡದ ಗೆಲುವಿಗೆ ಕಾರಣರಾದ ಎಲ್ಲರಿಗೂ ಬಹುಮಾನ ನೀಡಲಾಗುತ್ತದೆ. ಹಾಗೆಯೇ ಸೋಲಿನ ಹೊಣೆಯ ಎಲ್ಲರದ್ದೂ ಆಗಿರುತ್ತದೆ.  ಈ ಸೋಲಿಗೆ ಸೆಲೆಕ್ಟರ್​ಗಳು ಸಹ ಅಕೌಂಟೆಬಿಲಿಟಿ ಹೊರಬೇಕಾಗುತ್ತದೆ ಎಂದಿದ್ದಾರೆ. 

 ಈ ಮಾತುಗಳು ಈಗ ಆಯ್ಕೆ ಸಮಿತಿ ಮುಖ್ಯಸ್ಥ ಎಂ ಎಸ್​ಕೆ ಪ್ರಸಾದ್​,  ದೇವಾಂಗ್​ ಗಾಂಧಿ, ಗಗನ್​ ಖೋಡಾ, ಜತಿನ್​ ಪರಾಂಜಪೆ ಮತ್ತು ಸರಣ್​ದೀಪ್​ ಸಿಂಗ್​  ಅವರನ್ನೇ ಗುರಿಯಾಗಿಸಿಕೊಂಡಿರುವುದನ್ನ ತೋರಿಸುತ್ತಿದೆ ಎನ್ನಲಾಗುತ್ತಿದೆ.   ಒಟ್ಟಿನಲ್ಲಿ ಸೆಮಿಫೈನಲ್ ಸೋಲು  ಬಿಸಿಸಿಐ, ಆಯ್ಕೆ ಸಮಿತಿ ಹಾಗೂ ತಂಡದಲ್ಲಿನ ಹುಳುಕುಗಳನ್ನ ಒಂದೊಂದಾಗಿಯೇ ಹೊರ ಹಾಕುತ್ತಿದೆ.  


Conclusion:

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.