ETV Bharat / sports

ಸೋಲುತ್ತೇವೆಂಬ ಭಯವೇ ಆಸೀಸ್​ ಸೋಲಿಗೆ ಕಾರಣ: ಮೈಕಲ್​ ಕ್ಲಾರ್ಕ್​

ಮಂಗಳವಾರ ಗಾಯದ ಹೊಡೆತದಿಂದ ಸರಣಿಯುದ್ದಕ್ಕೂ ನೊಂದಿದ್ದ ಭಾರತ ತಂಡ ಕೊನೆಯ ಪಂದ್ಯವನ್ನು 2-1ರಲ್ಲಿ ಗೆಲ್ಲುವ ಮೂಲಕ ಬಾರ್ಡರ್ ಗವಾಸ್ಕರ್ ಸರಣಿಯನ್ನು ತನ್ನಲ್ಲೇ ಉಳಿಸಿಕೊಂಡಿದೆ. ಆಸೀಸ್ ಮಾಜಿ ನಾಯಕ ಕ್ಲಾರ್ಕ್​ ತವರಿನಲ್ಲಿ ಸರಣಿ ಸೋಲು ಕಂಡಿರುವುದಕ್ಕೆ ನಾಯಕ ಟೀಮ್ ಪೇನ್​ರನ್ನು ಹೊಣೆ ಮಾಡುವುದನ್ನು ತಿರಸ್ಕರಿಸಿದ್ದಾರೆ.

author img

By

Published : Jan 20, 2021, 3:22 PM IST

ಮೈಕಲ್ ಕ್ಲಾರ್ಕ್​
ಮೈಕಲ್ ಕ್ಲಾರ್ಕ್​

ಮೆಲ್ಬೋರ್ನ್​: ಗಾಯದಿಂದ ನೊಂದು ಬಲಿಷ್ಠವಲ್ಲದ ಭಾರತ ತಂಡದೆದುರು ಸರಣಿ ಸೋಲು ಕಂಡಿರುವುದಕ್ಕೆ ತವರಿನ ತಂಡವನ್ನು ಮೈಕಲ್​ ಕ್ಲಾರ್ಕ್​ ಟೀಕಿಸಿದ್ದಾರೆ. ಆಸೀಸ್​ ಗೆಲುವಿಗಾಗಿ ಆಕ್ರಮಣಕಾರಿಯಾಗಿ ಆಡುವ ಬದಲು ಸೋಲಿನ ಭಯದಿಂದ ಆಡಿದ್ದೇ ಸರಣಿ ಕಳೆದುಕೊಳ್ಳುವುದಕ್ಕೆ ಕಾರಣ ಎಂದು ಹೇಳಿದ್ದಾರೆ.

ಮಂಗಳವಾರ ಗಾಯದ ಹೊಡೆತದಿಂದ ಸರಣಿಯುದ್ದಕ್ಕೂ ನೊಂದಿದ್ದ ಭಾರತ ತಂಡ ಕೊನೆಯ ಪಂದ್ಯವನ್ನು 2-1ರಲ್ಲಿ ಗೆಲ್ಲುವ ಮೂಲಕ ಬಾರ್ಡರ್ ಗವಾಸ್ಕರ್ ಸರಣಿಯನ್ನು ತನ್ನಲ್ಲೇ ಉಳಿಸಿಕೊಂಡಿದೆ. ಆಸೀಸ್ ಮಾಜಿ ನಾಯಕ ಕ್ಲಾರ್ಕ್​ ತವರಿನಲ್ಲಿ ಸರಣಿ ಸೋಲು ಕಂಡಿರುವುದಕ್ಕೆ ನಾಯಕ ಟೀಮ್ ಪೇನ್​ರನ್ನು ಹೊಣೆ ಮಾಡುವುದನ್ನು ತಿರಸ್ಕರಿಸಿದ್ದಾರೆ.

ಸರಣಿಯುದ್ದಕ್ಕೂ ನಾವು ಕೆಲವು ಹಂತಗಳಲ್ಲಿ ತುಂಬಾ ಋಣಾತ್ಮಕವಾಗಿದ್ದೆವು. ಆಕ್ರಮಣಕಾರಿಯಾಗಿ ಆಡಿ ಪಂದ್ಯ ಗೆಲ್ಲುವ ಬದಲು ಸೋಲುತ್ತೇವೆ ಎಂಬ ಭಾವನೆಯೇ ಹೆಚ್ಚಾಗಿತ್ತು ಎಂದು ಕ್ಲಾರ್ಕ್​ ಸ್ಪೋರ್ಟ್ಸ್ ವೆಬ್​ಸೈಟ್​ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.

ಟಿಮ್ ಪೇನ್​
ಟಿಮ್ ಪೇನ್​

ಆಸ್ಟ್ರೇಲಿಯನ್ನರ ನೆಗೆಟಿವ್​ ಮನಸ್ಥಿತಿಯೇ ಅವರನ್ನು ಹಿಮ್ಮೆಟ್ಟಿಸಿತು ಎಂದು ಅಭಿಪ್ರಾಯಪಟ್ಟಿದ್ದಾರೆ. ನಾವು ಮೊದಲ ಎಸೆತದಿಂದ ಕೊನೆಯ ಎಸೆತದವರೆಗೂ ಪಂದ್ಯವನ್ನು ಗೆಲ್ಲುವ ಮನಸ್ಥಿತಿಯಲ್ಲಿ ಆಡಬೇಕು. ಆದರೆ ನಮ್ಮ ಆಟಗಾರರಲ್ಲಿ ಆ ಭಾವನೆ ಕಂಡುಬರಲಿಲ್ಲ ಎಂದು ಆಸೀಸ್​ ಮಾಜಿ ನಾಯಕ ಹೇಳಿದ್ದಾರೆ.

ಈ ಸರಣಿ ಆರಂಭಕ್ಕೂ ಮುನ್ನ ಮೈಕಲ್ ಕ್ಲಾರ್ಕ್​ ಕೊಹ್ಲಿ ಇಲ್ಲದೆ ಭಾರತ ತಂಡ ಪಂದ್ಯ ಗೆದ್ದರೆ ಭಾರತೀಯರು ಅದನ್ನು ವರ್ಷ ಪೂರ್ತಿ ಸಂಭ್ರಮಿಸಬಹುದು ಎಂದು ಹೇಳಿಕೆ ನೀಡಿದ್ದರು. ಇದೀಗ ಟೀಮ್ ಇಂಡಿಯಾ ಸರಣಿಯನ್ನೇ ಗೆದ್ದು ಆಸ್ಟ್ರೇಲಿಯನ್ನರಿಗೆ ತಿರುಗೇಟು ನೀಡಿದೆ. ಕೊನೆಯ ಪಂದ್ಯದಲ್ಲಿ ಆಸ್ಟ್ರೇಲಿಯಾ ನೀಡಿದ್ದ 328 ರನ್​ಗಳ ಗುರಿಯನ್ನು ಭಾರತ ತಂಡ ಯಶಸ್ವಿಯಾಗಿ ಚೇಸ್ ಮಾಡಿ ಗೆದ್ದುಕೊಂಡಿದೆ.

ಇದನ್ನು ಓದಿ:ಆಸ್ಟ್ರೇಲಿಯಾ ವಿರುದ್ಧ ಭಾರತ ಗೆಲುವು: ಸಂತಸ ಹಂಚಿಕೊಂಡ ಪೂಜಾರ, ಸುಂದರ್​, ಸಿರಾಜ್​ ಕುಟುಂಬ

ಮೆಲ್ಬೋರ್ನ್​: ಗಾಯದಿಂದ ನೊಂದು ಬಲಿಷ್ಠವಲ್ಲದ ಭಾರತ ತಂಡದೆದುರು ಸರಣಿ ಸೋಲು ಕಂಡಿರುವುದಕ್ಕೆ ತವರಿನ ತಂಡವನ್ನು ಮೈಕಲ್​ ಕ್ಲಾರ್ಕ್​ ಟೀಕಿಸಿದ್ದಾರೆ. ಆಸೀಸ್​ ಗೆಲುವಿಗಾಗಿ ಆಕ್ರಮಣಕಾರಿಯಾಗಿ ಆಡುವ ಬದಲು ಸೋಲಿನ ಭಯದಿಂದ ಆಡಿದ್ದೇ ಸರಣಿ ಕಳೆದುಕೊಳ್ಳುವುದಕ್ಕೆ ಕಾರಣ ಎಂದು ಹೇಳಿದ್ದಾರೆ.

ಮಂಗಳವಾರ ಗಾಯದ ಹೊಡೆತದಿಂದ ಸರಣಿಯುದ್ದಕ್ಕೂ ನೊಂದಿದ್ದ ಭಾರತ ತಂಡ ಕೊನೆಯ ಪಂದ್ಯವನ್ನು 2-1ರಲ್ಲಿ ಗೆಲ್ಲುವ ಮೂಲಕ ಬಾರ್ಡರ್ ಗವಾಸ್ಕರ್ ಸರಣಿಯನ್ನು ತನ್ನಲ್ಲೇ ಉಳಿಸಿಕೊಂಡಿದೆ. ಆಸೀಸ್ ಮಾಜಿ ನಾಯಕ ಕ್ಲಾರ್ಕ್​ ತವರಿನಲ್ಲಿ ಸರಣಿ ಸೋಲು ಕಂಡಿರುವುದಕ್ಕೆ ನಾಯಕ ಟೀಮ್ ಪೇನ್​ರನ್ನು ಹೊಣೆ ಮಾಡುವುದನ್ನು ತಿರಸ್ಕರಿಸಿದ್ದಾರೆ.

ಸರಣಿಯುದ್ದಕ್ಕೂ ನಾವು ಕೆಲವು ಹಂತಗಳಲ್ಲಿ ತುಂಬಾ ಋಣಾತ್ಮಕವಾಗಿದ್ದೆವು. ಆಕ್ರಮಣಕಾರಿಯಾಗಿ ಆಡಿ ಪಂದ್ಯ ಗೆಲ್ಲುವ ಬದಲು ಸೋಲುತ್ತೇವೆ ಎಂಬ ಭಾವನೆಯೇ ಹೆಚ್ಚಾಗಿತ್ತು ಎಂದು ಕ್ಲಾರ್ಕ್​ ಸ್ಪೋರ್ಟ್ಸ್ ವೆಬ್​ಸೈಟ್​ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.

ಟಿಮ್ ಪೇನ್​
ಟಿಮ್ ಪೇನ್​

ಆಸ್ಟ್ರೇಲಿಯನ್ನರ ನೆಗೆಟಿವ್​ ಮನಸ್ಥಿತಿಯೇ ಅವರನ್ನು ಹಿಮ್ಮೆಟ್ಟಿಸಿತು ಎಂದು ಅಭಿಪ್ರಾಯಪಟ್ಟಿದ್ದಾರೆ. ನಾವು ಮೊದಲ ಎಸೆತದಿಂದ ಕೊನೆಯ ಎಸೆತದವರೆಗೂ ಪಂದ್ಯವನ್ನು ಗೆಲ್ಲುವ ಮನಸ್ಥಿತಿಯಲ್ಲಿ ಆಡಬೇಕು. ಆದರೆ ನಮ್ಮ ಆಟಗಾರರಲ್ಲಿ ಆ ಭಾವನೆ ಕಂಡುಬರಲಿಲ್ಲ ಎಂದು ಆಸೀಸ್​ ಮಾಜಿ ನಾಯಕ ಹೇಳಿದ್ದಾರೆ.

ಈ ಸರಣಿ ಆರಂಭಕ್ಕೂ ಮುನ್ನ ಮೈಕಲ್ ಕ್ಲಾರ್ಕ್​ ಕೊಹ್ಲಿ ಇಲ್ಲದೆ ಭಾರತ ತಂಡ ಪಂದ್ಯ ಗೆದ್ದರೆ ಭಾರತೀಯರು ಅದನ್ನು ವರ್ಷ ಪೂರ್ತಿ ಸಂಭ್ರಮಿಸಬಹುದು ಎಂದು ಹೇಳಿಕೆ ನೀಡಿದ್ದರು. ಇದೀಗ ಟೀಮ್ ಇಂಡಿಯಾ ಸರಣಿಯನ್ನೇ ಗೆದ್ದು ಆಸ್ಟ್ರೇಲಿಯನ್ನರಿಗೆ ತಿರುಗೇಟು ನೀಡಿದೆ. ಕೊನೆಯ ಪಂದ್ಯದಲ್ಲಿ ಆಸ್ಟ್ರೇಲಿಯಾ ನೀಡಿದ್ದ 328 ರನ್​ಗಳ ಗುರಿಯನ್ನು ಭಾರತ ತಂಡ ಯಶಸ್ವಿಯಾಗಿ ಚೇಸ್ ಮಾಡಿ ಗೆದ್ದುಕೊಂಡಿದೆ.

ಇದನ್ನು ಓದಿ:ಆಸ್ಟ್ರೇಲಿಯಾ ವಿರುದ್ಧ ಭಾರತ ಗೆಲುವು: ಸಂತಸ ಹಂಚಿಕೊಂಡ ಪೂಜಾರ, ಸುಂದರ್​, ಸಿರಾಜ್​ ಕುಟುಂಬ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.