ETV Bharat / sports

ಟಿ-20 ಗೆದ್ದಾಯ್ತು, ಏಕದಿನ ಟೂರ್ನಿಗಾಗಿ ಚೆನ್ನೈಗೆ ಬಂದಿಳಿದ ಕೊಹ್ಲಿ ಟೀಂ

author img

By

Published : Dec 12, 2019, 6:03 PM IST

ವೆಸ್ಟ್​ ಇಂಡೀಸ್​ ವಿರುದ್ಧದ 3 ಏಕದಿನ ಪಂದ್ಯಗಳ ಸರಣಿ ಭಾನುವಾರದಿಂದ ಆರಂಭಗೊಳ್ಳಲಿದ್ದು, ಈಗಾಗಲೇ ಉಭಯ ತಂಡಗಳು ಚೆನ್ನೈಗೆ ಬಂದಿಳಿದಿವೆ.

Team India
ಚೆನ್ನೈಗೆ ಬಂದ ಟೀಂ ಇಂಡಿಯಾ

ಚೆನ್ನೈ(ತಮಿಳುನಾಡು) : ವೆಸ್ಟ್​ ಇಂಡೀಸ್​ ವಿರುದ್ಧ ನಡೆದ ಮೂರು ಟಿ-20 ಪಂದ್ಯಗಳ ಕ್ರಿಕೆಟ್​ ಸರಣಿಯನ್ನು ಭಾರತ ತಂಡ 2-1 ಅಂತರದಲ್ಲಿ ಕೈವಶ ಮಾಡಿಕೊಂಡಿದೆ. ಇದೀಗ ಏಕದಿನ ಸರಣಿಯಲ್ಲಿ ಪಾಲ್ಗೊಳ್ಳಲು ಉಭಯ ತಂಡಗಳು ಚೆನ್ನೈಗೆ ಬಂದಿಳಿದಿವೆ.

ಇಲ್ಲಿನ ಎಂ.ಎ. ಚಿದಂಬರಂ ಮೈದಾನದಲ್ಲಿ ಭಾನುವಾರ ಮೊದಲ ಏಕದಿನ ಪಂದ್ಯ ನಡೆಯಲಿದ್ದು, ಕೊಹ್ಲಿ ನೇತೃತ್ವದ ಟೀಂ ಇಂಡಿಯಾ ಮುಂದಿನ ಎರಡು ದಿನಗಳ ಕಾಲ ಕಠಿಣ ಅಭ್ಯಾಸ ನಡೆಸಲಿದೆ. ಉಳಿದಂತೆ ವಿಶಾಖಪಟ್ಟಣಂನಲ್ಲಿ ಡಿಸೆಂಬರ್​​​ 18 ಹಾಗೂ ಒಡಿಶಾದ ಕಟಕ್‌ನಲ್ಲಿ ಡಿಸೆಂಬರ್‌ 22 ರಂದು ಪಂದ್ಯಗಳು ನಡೆಯಲಿವೆ.

ಚೆನ್ನೈಗೆ ಬಂದಿಳಿದಿರುವ ಬಗ್ಗೆ ಟೀಂ ಇಂಡಿಯಾ ಆಟಗಾರರಾದ ಕುಲ್ದೀಪ್​ ಯಾದವ್​​ ಹಾಗೂ ರವೀಂದ್ರ ಜಡೇಜಾ ಟ್ವೀಟ್​ ಮಾಡಿದ್ದಾರೆ. ಟೀಂ ಇಂಡಿಯಾದ ಎಡಗೈ ಬ್ಯಾಟ್ಸ್​​ಮನ್​ ಶಿಖರ್​ ಧವನ್​ ಗಾಯಗೊಂಡು ಟೂರ್ನಿಯಿಂದ ಹೊರಬಿದ್ದಿರುವ ಕಾರಣ ಅವರ ಜಾಗ ತಂಬಲು ಕನ್ನಡಿಗ ಮಯಾಂಕ್​ ಅಗರ್‌ವಾಲ್​ ಆಯ್ಕೆಯಾಗಿದ್ದಾರೆ.

ಚೆನ್ನೈ(ತಮಿಳುನಾಡು) : ವೆಸ್ಟ್​ ಇಂಡೀಸ್​ ವಿರುದ್ಧ ನಡೆದ ಮೂರು ಟಿ-20 ಪಂದ್ಯಗಳ ಕ್ರಿಕೆಟ್​ ಸರಣಿಯನ್ನು ಭಾರತ ತಂಡ 2-1 ಅಂತರದಲ್ಲಿ ಕೈವಶ ಮಾಡಿಕೊಂಡಿದೆ. ಇದೀಗ ಏಕದಿನ ಸರಣಿಯಲ್ಲಿ ಪಾಲ್ಗೊಳ್ಳಲು ಉಭಯ ತಂಡಗಳು ಚೆನ್ನೈಗೆ ಬಂದಿಳಿದಿವೆ.

ಇಲ್ಲಿನ ಎಂ.ಎ. ಚಿದಂಬರಂ ಮೈದಾನದಲ್ಲಿ ಭಾನುವಾರ ಮೊದಲ ಏಕದಿನ ಪಂದ್ಯ ನಡೆಯಲಿದ್ದು, ಕೊಹ್ಲಿ ನೇತೃತ್ವದ ಟೀಂ ಇಂಡಿಯಾ ಮುಂದಿನ ಎರಡು ದಿನಗಳ ಕಾಲ ಕಠಿಣ ಅಭ್ಯಾಸ ನಡೆಸಲಿದೆ. ಉಳಿದಂತೆ ವಿಶಾಖಪಟ್ಟಣಂನಲ್ಲಿ ಡಿಸೆಂಬರ್​​​ 18 ಹಾಗೂ ಒಡಿಶಾದ ಕಟಕ್‌ನಲ್ಲಿ ಡಿಸೆಂಬರ್‌ 22 ರಂದು ಪಂದ್ಯಗಳು ನಡೆಯಲಿವೆ.

ಚೆನ್ನೈಗೆ ಬಂದಿಳಿದಿರುವ ಬಗ್ಗೆ ಟೀಂ ಇಂಡಿಯಾ ಆಟಗಾರರಾದ ಕುಲ್ದೀಪ್​ ಯಾದವ್​​ ಹಾಗೂ ರವೀಂದ್ರ ಜಡೇಜಾ ಟ್ವೀಟ್​ ಮಾಡಿದ್ದಾರೆ. ಟೀಂ ಇಂಡಿಯಾದ ಎಡಗೈ ಬ್ಯಾಟ್ಸ್​​ಮನ್​ ಶಿಖರ್​ ಧವನ್​ ಗಾಯಗೊಂಡು ಟೂರ್ನಿಯಿಂದ ಹೊರಬಿದ್ದಿರುವ ಕಾರಣ ಅವರ ಜಾಗ ತಂಬಲು ಕನ್ನಡಿಗ ಮಯಾಂಕ್​ ಅಗರ್‌ವಾಲ್​ ಆಯ್ಕೆಯಾಗಿದ್ದಾರೆ.

Intro:Body:

ಟಿ-20 ಗೆದ್ದಾಯ್ತು... ಏಕದಿನ ಟೂರ್ನಿಯಲ್ಲಿ ಭಾಗಿಯಾಗಲು ಚೆನ್ನೈಗೆ ಬಂದ ಕೊಹ್ಲಿ ಬಾಯ್ಸ್​! 



ಚೆನ್ನೈ: ವೆಸ್ಟ್​ ಇಂಡೀಸ್​ ವಿರುದ್ಧ ನಡೆದ ಮೂರು ಟಿ-20 ಪಂದ್ಯಗಳ ಕ್ರಿಕೆಟ್​ ಸರಣಿಯಲ್ಲಿ ಟೀಂ ಇಂಡಿಯಾ 2-1 ಅಂತರದಲ್ಲಿ ಕೈವಶ ಮಾಡಿಕೊಂಡಿದ್ದು, ಇದೀಗ ಏಕದಿನ ಸರಣಿಯಲ್ಲಿ ಭಾಗಿಯಾಗುವ ಉದ್ದೇಶದಿಂದ ಚೆನ್ನೈಗೆ ಬಂದು ಇಳಿದಿದೆ. 



ಇಲ್ಲಿ ಎಂಎ ಚಿಂದಬರಂ ಮೈದಾನದಲ್ಲಿ ಭಾನುವಾರ ಮೊದಲ ಏಕದಿನ ಪಂದ್ಯ ನಡೆಯಲಿದ್ದು, ವಿರಾಟ್​​ ಕೊಹ್ಲಿ ನೇತೃತ್ವದ ಟೀಂ ಇಂಡಿಯಾ ಮುಂದಿನ ಎರಡು ದಿನಗಳ ಕಾಲ ಕಠಿಣ ಅಭ್ಯಾಸ ನಡೆಸುವ ಸಾಧ್ಯತೆಗಳಿವೆ. ಉಳಿದಂತೆ ವಿಶಾಖಪಟ್ಟಣಂ(ಡಿಸೆಂಬರ್​​​ 18) ಹಾಗೂ ಕಟ್ಟಕ್​​ನಲ್ಲಿ ನಡೆಯಲಿದೆ. 



ತಾವು ಚೆನ್ನೈಗೆ ಬಂದಿಳಿರುವ ಬಗ್ಗೆ ಟೀಂ ಇಂಡಿಯಾ ಪ್ಲೇಯರ್​ಗಳಾದ ಕುಲ್ದೀಪ್​ ಯಾದವ್​​ ಹಾಗೂ ರವೀಂದ್ರ ಜಡೇಜಾ ಟ್ವೀಟ್​ ಮಾಡಿದ್ದಾರೆ. ಇದರ ಜತೆಗೆ ವೆಸ್ಟ್​ ಇಂಡೀಸ್​ ತಂಡ ಸಹ ಚೆನ್ನೈಗೆ ಆಗಮಿಸಿದೆ. 


Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.