ETV Bharat / sports

ಸುಂದರ್ ಶತಕ ಮಿಸ್​ ಮಾಡಿಕೊಂಡಿದ್ದಕ್ಕೆ ಬೇಸರವಿದೆ: ವಾಶಿಂಗ್ಟನ್ ತಂದೆ

author img

By

Published : Jan 17, 2021, 8:57 PM IST

ಬಾರ್ಡರ್​-ಗವಾಸ್ಕರ್ ಟ್ರೋಫಿ ಟೂರ್ನಿಯಲ್ಲಿ ಆಸ್ಟ್ರೇಲಿಯಾ ವಿರುದ್ಧದ ಕೊನೆಯ ಪಂದ್ಯದ 3ನೇ ದಿನದಂದು ವಾಷಿಂಗ್ಟನ್ ಸುಂದರ್ 7ನೇ ಕ್ರಮಾಂಕದಲ್ಲಿ ಬ್ಯಾಟಿಂಗ್​ಗೆ ಬಂದು 62 ರನ್ ಗಳಿಸಿದ್ದಲ್ಲದೆ, ಶಾರ್ದೂಲ್ ಠಾಕೂರ್ (67) ಅವರ ಜೊತೆಗೆ 8 ವಿಕೆಟ್​ಗೆ 123 ರನ್​ಗಳ ಜೊತೆಯಾಟ ನಡೆಸಿ ಆಸ್ಟ್ರೇಲಿಯಾದ ಬೌಲರ್​ಗಳನ್ನು ಬೆವರಿಳಿಸಿದ್ದರು.

ವಾಷಿಂಗ್ಟನ್​ ಸುಂದರ್
ವಾಷಿಂಗ್ಟನ್​ ಸುಂದರ್

ಬ್ರಿಸ್ಬೇನ್​: ಆಸ್ಟ್ರೇಲಿಯಾ ವಿರುದ್ಧದ 4ನೇ ಟೆಸ್ಟ್​ ಪಂದ್ಯದಲ್ಲಿ 7 ಮತ್ತು 8ನೇ ಕ್ರಮಾಂಕದ ಬ್ಯಾಟಿಂಗ್ ಬಂದು ಆಕರ್ಷಕ ಅರ್ಧಶತಕ ಸಿಡಿಸಿದ್ದಕ್ಕೆ ವಾಷಿಂಗ್ಟನ್ ಸುಂದರ್ ಹಾಗೂ ಶಾರ್ದೂಲ್ ಠಾಕೂರ್ ಅವರನ್ನು ಕ್ರಿಕೆಟ್​ ಅಭಿಮಾನಿಗಳು ಹಾಗೂ ಮಾಜಿ ಕ್ರಿಕೆಟಿಗರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದರೆ, ಅವರ ತಂದೆ ಎಂ. ಸುಂದರ್​ ಮಾತ್ರ ಮಗ ಶತಕ ವಂಚಿತನಾಗಿದ್ದಕ್ಕೆ ಬೇಸರ ವ್ಯಕ್ತಪಡಿಸಿದ್ದಾರೆ.

ಬಾರ್ಡರ್​-ಗವಾಸ್ಕರ್ ಟ್ರೋಫಿ ಟೂರ್ನಿಯಲ್ಲಿ ಆಸ್ಟ್ರೇಲಿಯಾ ವಿರುದ್ಧದ ಕೊನೆಯ ಪಂದ್ಯದ 3ನೇ ದಿನದಂದು ವಾಷಿಂಗ್ಟನ್ ಸುಂದರ್ 7ನೇ ಕ್ರಮಾಂಕದಲ್ಲಿ ಬ್ಯಾಟಿಂಗ್​ಗೆ ಬಂದು 62 ರನ್ ಗಳಿಸಿದ್ದಲ್ಲದೆ, ಶಾರ್ದೂಲ್ ಠಾಕೂರ್ (67) ಅವರ ಜೊತೆಗೆ 8 ವಿಕೆಟ್​ಗೆ 123 ರನ್​ಗಳ ಜೊತೆಯಾಟ ನಡೆಸಿ ಆಸ್ಟ್ರೇಲಿಯಾದ ಬೌಲರ್​ಗಳನ್ನು ಬೆವರಿಳಿಸಿದ್ದರು.

"ಅವನು (ವಾಷಿಂಗ್ಟನ್ ಸುಂದರ್) ಶತಕ ಸಿಡಿಸಲಾಗದಿದ್ದಕ್ಕೆ ನನಗೆ ತುಂಬಾ ಬೇಸರವಾಗಿದೆ. ಸಿರಾಜ್ ಬಂದಾಗ ಅವನು ಸಿಕ್ಸ್ ಮತ್ತು ಬೌಂಡರಿಗಳನ್ನು ಬಾರಿಸಬೇಕಿತ್ತು. ಆ ಸಾಮರ್ಥ್ಯ ಕೂಡ ಅವನಿಗಿತ್ತು. ಆದರೆ ಹಿನ್ನಡೆಯನ್ನು ಕಡಿಮೆ ಮಾಡಲು ಮತ್ತು ಆಸ್ಟ್ರೇಲಿಯಾ ಟೋಟಲ್​ಗೆ ಹತ್ತಿರವಾಗಲು ಯೋಚಿಸಿದ್ದಾನೆ." ಎಂದು ವಾಷಿಂಗ್ಟನ್ ಸುಂದರ್ ತಂದೆ ಎಂ. ಸುಂದರ್ ಸುದ್ದಿಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.

ವಾಷಿಂಗ್ಟನ್​ ಸುಂದರ್​ -ಶಾರ್ದುಲ್ ಠಾಕೂರ್​
ವಾಷಿಂಗ್ಟನ್​ ಸುಂದರ್​ -ಶಾರ್ದುಲ್ ಠಾಕೂರ್​

ನಾನು ಆಸ್ಟ್ರೇಲಿಯಾದಲ್ಲಿರುವ ಆತನ ಜೊತೆ ಮಾತನಾಡುತ್ತಿದ್ದೆ. ಕಳೆದ ಸಂಜೆ ಮಾತನಾಡುವ ವೇಳೆ ಬ್ಯಾಟಿಂಗ್​ಗೆ ಅವಕಾಶ ಸಿಕ್ಕರೆ ದೊಡ್ಡ ಮೊತ್ತ ಗಳಿಸು ಎಂದು ಹೇಳಿದ್ದೆ. ಆತ ಕೂಡ ಖಚಿತವಾಗಿ ರನ್ ಗಳಿಸುತ್ತೇನೆಂದು ಹೇಳಿದ್ದ. ಆದರೆ ಏಕೆ ವಿಫಲನಾದ ಎಂಬುದನ್ನು ತಿಳಿದುಕೊಳ್ಳಬೇಕಾಗಿದೆ ಎಂದಿದ್ದಾರೆ.

2016-17ರಲ್ಲಿ ರಣಜಿ ಟ್ರೋಫಿಗೆ ಪಾದಾರ್ಪಣೆ ಮಾಡಿದ್ದರು. ಆ ಪಂದ್ಯದಲ್ಲಿ ಅಭಿನವ್​ ಮುಕುಂದ್​ ಜೊತೆ 107 ರನ್​ಗಳ ಆರಂಭಿಕ ಜೊತೆಯಾಟ ನಡೆಸಿದ್ದ. ನಂತರ ಎಂ. ಚಿದಂಬರಂ ಕ್ರೀಡಾಂಗಣದಲ್ಲಿ ತ್ರಿಪುರ ವಿರುದ್ಧ 156 ರನ್​ಗಳಿಸಿದ್ದ ಎಂದು ಅವರ ತಂದೆ ಮಾಹಿತಿ ನೀಡಿದ್ದಾರೆ.

ಇದನ್ನು ಓದಿ: ಗಾಯ ಮೀರಿ ಹೋರಾಡುತ್ತಿರುವ ಭಾರತೀಯ ತಂಡದ ಸಾಧನೆಗೆ ಅಖ್ತರ್‌ ಶಹಬ್ಬಾಸ್‌ಗಿರಿ

ಬ್ರಿಸ್ಬೇನ್​: ಆಸ್ಟ್ರೇಲಿಯಾ ವಿರುದ್ಧದ 4ನೇ ಟೆಸ್ಟ್​ ಪಂದ್ಯದಲ್ಲಿ 7 ಮತ್ತು 8ನೇ ಕ್ರಮಾಂಕದ ಬ್ಯಾಟಿಂಗ್ ಬಂದು ಆಕರ್ಷಕ ಅರ್ಧಶತಕ ಸಿಡಿಸಿದ್ದಕ್ಕೆ ವಾಷಿಂಗ್ಟನ್ ಸುಂದರ್ ಹಾಗೂ ಶಾರ್ದೂಲ್ ಠಾಕೂರ್ ಅವರನ್ನು ಕ್ರಿಕೆಟ್​ ಅಭಿಮಾನಿಗಳು ಹಾಗೂ ಮಾಜಿ ಕ್ರಿಕೆಟಿಗರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದರೆ, ಅವರ ತಂದೆ ಎಂ. ಸುಂದರ್​ ಮಾತ್ರ ಮಗ ಶತಕ ವಂಚಿತನಾಗಿದ್ದಕ್ಕೆ ಬೇಸರ ವ್ಯಕ್ತಪಡಿಸಿದ್ದಾರೆ.

ಬಾರ್ಡರ್​-ಗವಾಸ್ಕರ್ ಟ್ರೋಫಿ ಟೂರ್ನಿಯಲ್ಲಿ ಆಸ್ಟ್ರೇಲಿಯಾ ವಿರುದ್ಧದ ಕೊನೆಯ ಪಂದ್ಯದ 3ನೇ ದಿನದಂದು ವಾಷಿಂಗ್ಟನ್ ಸುಂದರ್ 7ನೇ ಕ್ರಮಾಂಕದಲ್ಲಿ ಬ್ಯಾಟಿಂಗ್​ಗೆ ಬಂದು 62 ರನ್ ಗಳಿಸಿದ್ದಲ್ಲದೆ, ಶಾರ್ದೂಲ್ ಠಾಕೂರ್ (67) ಅವರ ಜೊತೆಗೆ 8 ವಿಕೆಟ್​ಗೆ 123 ರನ್​ಗಳ ಜೊತೆಯಾಟ ನಡೆಸಿ ಆಸ್ಟ್ರೇಲಿಯಾದ ಬೌಲರ್​ಗಳನ್ನು ಬೆವರಿಳಿಸಿದ್ದರು.

"ಅವನು (ವಾಷಿಂಗ್ಟನ್ ಸುಂದರ್) ಶತಕ ಸಿಡಿಸಲಾಗದಿದ್ದಕ್ಕೆ ನನಗೆ ತುಂಬಾ ಬೇಸರವಾಗಿದೆ. ಸಿರಾಜ್ ಬಂದಾಗ ಅವನು ಸಿಕ್ಸ್ ಮತ್ತು ಬೌಂಡರಿಗಳನ್ನು ಬಾರಿಸಬೇಕಿತ್ತು. ಆ ಸಾಮರ್ಥ್ಯ ಕೂಡ ಅವನಿಗಿತ್ತು. ಆದರೆ ಹಿನ್ನಡೆಯನ್ನು ಕಡಿಮೆ ಮಾಡಲು ಮತ್ತು ಆಸ್ಟ್ರೇಲಿಯಾ ಟೋಟಲ್​ಗೆ ಹತ್ತಿರವಾಗಲು ಯೋಚಿಸಿದ್ದಾನೆ." ಎಂದು ವಾಷಿಂಗ್ಟನ್ ಸುಂದರ್ ತಂದೆ ಎಂ. ಸುಂದರ್ ಸುದ್ದಿಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.

ವಾಷಿಂಗ್ಟನ್​ ಸುಂದರ್​ -ಶಾರ್ದುಲ್ ಠಾಕೂರ್​
ವಾಷಿಂಗ್ಟನ್​ ಸುಂದರ್​ -ಶಾರ್ದುಲ್ ಠಾಕೂರ್​

ನಾನು ಆಸ್ಟ್ರೇಲಿಯಾದಲ್ಲಿರುವ ಆತನ ಜೊತೆ ಮಾತನಾಡುತ್ತಿದ್ದೆ. ಕಳೆದ ಸಂಜೆ ಮಾತನಾಡುವ ವೇಳೆ ಬ್ಯಾಟಿಂಗ್​ಗೆ ಅವಕಾಶ ಸಿಕ್ಕರೆ ದೊಡ್ಡ ಮೊತ್ತ ಗಳಿಸು ಎಂದು ಹೇಳಿದ್ದೆ. ಆತ ಕೂಡ ಖಚಿತವಾಗಿ ರನ್ ಗಳಿಸುತ್ತೇನೆಂದು ಹೇಳಿದ್ದ. ಆದರೆ ಏಕೆ ವಿಫಲನಾದ ಎಂಬುದನ್ನು ತಿಳಿದುಕೊಳ್ಳಬೇಕಾಗಿದೆ ಎಂದಿದ್ದಾರೆ.

2016-17ರಲ್ಲಿ ರಣಜಿ ಟ್ರೋಫಿಗೆ ಪಾದಾರ್ಪಣೆ ಮಾಡಿದ್ದರು. ಆ ಪಂದ್ಯದಲ್ಲಿ ಅಭಿನವ್​ ಮುಕುಂದ್​ ಜೊತೆ 107 ರನ್​ಗಳ ಆರಂಭಿಕ ಜೊತೆಯಾಟ ನಡೆಸಿದ್ದ. ನಂತರ ಎಂ. ಚಿದಂಬರಂ ಕ್ರೀಡಾಂಗಣದಲ್ಲಿ ತ್ರಿಪುರ ವಿರುದ್ಧ 156 ರನ್​ಗಳಿಸಿದ್ದ ಎಂದು ಅವರ ತಂದೆ ಮಾಹಿತಿ ನೀಡಿದ್ದಾರೆ.

ಇದನ್ನು ಓದಿ: ಗಾಯ ಮೀರಿ ಹೋರಾಡುತ್ತಿರುವ ಭಾರತೀಯ ತಂಡದ ಸಾಧನೆಗೆ ಅಖ್ತರ್‌ ಶಹಬ್ಬಾಸ್‌ಗಿರಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.