ETV Bharat / sports

ಟೆಸ್ಟ್​ ಕ್ರಿಕೆಟ್‌ನಲ್ಲಿ 100 ವಿಕೆಟ್​ ಪಡೆಯುವ ಕನಸು.. ಕೇರಳ ವೇಗಿ ಎಸ್‌. ಶ್ರೀಶಾಂತ್​ - ಮತ್ತೆ ಮೈದಾನಕ್ಕೆ ಶ್ರೀಶಾಂತ್​

ಮುಂದಿನ ವರ್ಷ ನಿಷೇಧದ ಅವಧಿ ಕೊನೆಗೊಳ್ಳುವುದರಿಂದ ಮತ್ತೆ ಕ್ರಿಕೆಟ್​ ಅಂಗಳಕ್ಕೆ ಕಾಲಿಡುವ ಅಭಿಲಾಷೆ ವ್ಯಕ್ತಪಡಿಸಿದ್ದಾರೆ ಕೇರಳ ಎಕ್ಸ್‌ಪ್ರೆಸ್‌ ಎಸ್‌. ಶ್ರೀಶಾಂತ್‌. ಜೊತೆಗೆ ಬಿಸಿಸಿಐನಿಂದ ದೊರೆಯುವ ಎಲ್ಲಾ ಸೌಲಭ್ಯಗಳನ್ನು ಉಪಯೋಗಿಸಿಕೊಂಡು ಟೀಂ​ ಇಂಡಿಯಾಗೆ ಕಮ್​ ಬ್ಯಾಕ್ ಮಾಡಿ ಟೆಸ್ಟ್​ ಕ್ರಿಕೆಟ್​ನಲ್ಲಿ100 ವಿಕೆಟ್​ ಪಡೆಯುವುದು ನನ್ನ ಗುರಿ ಎಂದು ಶ್ರೀಶಾಂತ್​ ತಿಳಿಸಿದ್ದಾರೆ.

Sreesanth
author img

By

Published : Aug 20, 2019, 8:16 PM IST

ಮುಂಬೈ​: ಸ್ಪಾಟ್​ ಫಿಕ್ಸಿಂಗ್​ ಆರೋಪದ ಮೇಲೆ ಹೇರಲಾಗಿದ್ದ ಆಜೀವ ನಿಷೇಧ ಶಿಕ್ಷೆಯನ್ನ ತೆರವುಗೊಳಿಸಿದ ಬಿಸಿಸಿಐಗೆ ಎಸ್‌. ಶ್ರೀಶಾಂತ್​ ಧನ್ಯವಾದ ತಿಳಿಸಿದ್ದಾರೆ.

ಮುಂದಿನ ವರ್ಷ ನಿಷೇಧದ ಅವಧಿ ಕೊನೆಗೊಳ್ಳುವುದರಿಂದ ಶ್ರೀಶಾಂತ್ ಮತ್ತೆ ಕ್ರಿಕೆಟ್​ ಅಂಗಳಕ್ಕೆ ಕಾಲಿಡುವ ಅಭಿಲಾಷೆ ವ್ಯಕ್ತಪಡಿಸಿದ್ದಾರೆ. ಬಿಸಿಸಿಐನಿಂದ ದೊರೆಯುವ ಎಲ್ಲಾ ಸೌಲಭ್ಯಗಳನ್ನು ಉಪಯೋಗಿಸಿಕೊಂಡು ಟೀಂ ಇಂಡಿಯಾಗೆ ಕಮ್​ ಬ್ಯಾಕ್‌ ಮಾಡಿ, ಟೆಸ್ಟ್​ ಕ್ರಿಕೆಟ್​ನಲ್ಲಿ 100 ವಿಕೆಟ್​ ಪಡೆಯುವುದು ನನ್ನ ಗುರಿ ಎಂದು ಶ್ರೀಶಾಂತ್​ ತಿಳಿಸಿದ್ದಾರೆ.

ನಿಷೇಧ ತೆರವು ಕುರಿತು ಎಸ್​. ಶ್ರೀಶಾಂತ್​ ಪ್ರತಿಕ್ರಿಯೆ..

ಈ ಸಂದರ್ಭದಲ್ಲಿ ತಮ್ಮ ಕಷ್ಟದ ಸಮಯದಲ್ಲಿ ತನ್ನ ನೆರವಿಗೆ ನಿಂತ ಕೇರಳ ಕ್ರಿಕೆಟ್​ ಅಕಾಡೆಮಿ, ಕೇರಳ ಜನತೆ, ಹಾಗೂ ತಮ್ಮ ಪರವಾಗಿ ತೀರ್ಪು ನೀಡಿರುವ ಸುಪ್ರಿಂಕೋರ್ಟ್​ ಹಾಗೂ ಒಂಬುಡ್ಸ್​ಮನ್​ ಡಿಕೆ ಜೈನ್​ ಅವರಿಗೆ ಧನ್ಯವಾದ ತಿಳಿಸಿದ್ದಾರೆ ಶ್ರೀಶಾಂತ್‌.

ನನಗೆ ಕಲೆಯಲ್ಲಿ ಆಸಕ್ತಿಯಿದ್ದುದರಿಂದ ನಾನು ಸಿನಿಮಾದಲ್ಲಿ ತೊಡಗಿಕೊಂಡಿದ್ದೆ. ಇದೀಗ ಕ್ರಿಕೆಟ್​ ಆಡುವುದಕ್ಕೆ ಅವಕಾಶ ಸಿಕ್ಕಿರುವುದರಿಂದ ಮತ್ತೆ ನಾನು ಸಿನಿಮಾಗಿಂತ ಕ್ರಿಕೆಟ್​ಗೆ ಮೊದಲ ಆದ್ಯತೆ ನೀಡುತ್ತೇನೆ. ಕಠಿಣ ಅಭ್ಯಾಸ ನಡೆಸಿ ಟೀಂ​ ಇಂಡಿಯಾಗೆ ಪದಾರ್ಪಣೆ ಮಾಡುತ್ತೇನೆ ಎಂದು ಶ್ರೀಶಾಂತ್​ ಸಂತೋಷ ವ್ಯಕ್ತಪಡಿಸಿದ್ದಾರೆ. ಶ್ರೀಶಾಂತ್ ಭಾರತ ತಂಡದ ಪರ ​27 ಟೆಸ್ಟ್​ ಪಂದ್ಯದಲ್ಲಿ 87 ವಿಕೆಟ್​, 53 ಏಕದಿನ ಪಂದ್ಯಗಳಲ್ಲಿ 75 ವಿಕೆಟ್​ ಹಾಗೂ 10 ಟಿ20 ಪಂದ್ಯಗಳಲ್ಲಿ 7 ವಿಕೆಟ್​ ಪಡೆದಿದ್ದಾರೆ.

ಮುಂಬೈ​: ಸ್ಪಾಟ್​ ಫಿಕ್ಸಿಂಗ್​ ಆರೋಪದ ಮೇಲೆ ಹೇರಲಾಗಿದ್ದ ಆಜೀವ ನಿಷೇಧ ಶಿಕ್ಷೆಯನ್ನ ತೆರವುಗೊಳಿಸಿದ ಬಿಸಿಸಿಐಗೆ ಎಸ್‌. ಶ್ರೀಶಾಂತ್​ ಧನ್ಯವಾದ ತಿಳಿಸಿದ್ದಾರೆ.

ಮುಂದಿನ ವರ್ಷ ನಿಷೇಧದ ಅವಧಿ ಕೊನೆಗೊಳ್ಳುವುದರಿಂದ ಶ್ರೀಶಾಂತ್ ಮತ್ತೆ ಕ್ರಿಕೆಟ್​ ಅಂಗಳಕ್ಕೆ ಕಾಲಿಡುವ ಅಭಿಲಾಷೆ ವ್ಯಕ್ತಪಡಿಸಿದ್ದಾರೆ. ಬಿಸಿಸಿಐನಿಂದ ದೊರೆಯುವ ಎಲ್ಲಾ ಸೌಲಭ್ಯಗಳನ್ನು ಉಪಯೋಗಿಸಿಕೊಂಡು ಟೀಂ ಇಂಡಿಯಾಗೆ ಕಮ್​ ಬ್ಯಾಕ್‌ ಮಾಡಿ, ಟೆಸ್ಟ್​ ಕ್ರಿಕೆಟ್​ನಲ್ಲಿ 100 ವಿಕೆಟ್​ ಪಡೆಯುವುದು ನನ್ನ ಗುರಿ ಎಂದು ಶ್ರೀಶಾಂತ್​ ತಿಳಿಸಿದ್ದಾರೆ.

ನಿಷೇಧ ತೆರವು ಕುರಿತು ಎಸ್​. ಶ್ರೀಶಾಂತ್​ ಪ್ರತಿಕ್ರಿಯೆ..

ಈ ಸಂದರ್ಭದಲ್ಲಿ ತಮ್ಮ ಕಷ್ಟದ ಸಮಯದಲ್ಲಿ ತನ್ನ ನೆರವಿಗೆ ನಿಂತ ಕೇರಳ ಕ್ರಿಕೆಟ್​ ಅಕಾಡೆಮಿ, ಕೇರಳ ಜನತೆ, ಹಾಗೂ ತಮ್ಮ ಪರವಾಗಿ ತೀರ್ಪು ನೀಡಿರುವ ಸುಪ್ರಿಂಕೋರ್ಟ್​ ಹಾಗೂ ಒಂಬುಡ್ಸ್​ಮನ್​ ಡಿಕೆ ಜೈನ್​ ಅವರಿಗೆ ಧನ್ಯವಾದ ತಿಳಿಸಿದ್ದಾರೆ ಶ್ರೀಶಾಂತ್‌.

ನನಗೆ ಕಲೆಯಲ್ಲಿ ಆಸಕ್ತಿಯಿದ್ದುದರಿಂದ ನಾನು ಸಿನಿಮಾದಲ್ಲಿ ತೊಡಗಿಕೊಂಡಿದ್ದೆ. ಇದೀಗ ಕ್ರಿಕೆಟ್​ ಆಡುವುದಕ್ಕೆ ಅವಕಾಶ ಸಿಕ್ಕಿರುವುದರಿಂದ ಮತ್ತೆ ನಾನು ಸಿನಿಮಾಗಿಂತ ಕ್ರಿಕೆಟ್​ಗೆ ಮೊದಲ ಆದ್ಯತೆ ನೀಡುತ್ತೇನೆ. ಕಠಿಣ ಅಭ್ಯಾಸ ನಡೆಸಿ ಟೀಂ​ ಇಂಡಿಯಾಗೆ ಪದಾರ್ಪಣೆ ಮಾಡುತ್ತೇನೆ ಎಂದು ಶ್ರೀಶಾಂತ್​ ಸಂತೋಷ ವ್ಯಕ್ತಪಡಿಸಿದ್ದಾರೆ. ಶ್ರೀಶಾಂತ್ ಭಾರತ ತಂಡದ ಪರ ​27 ಟೆಸ್ಟ್​ ಪಂದ್ಯದಲ್ಲಿ 87 ವಿಕೆಟ್​, 53 ಏಕದಿನ ಪಂದ್ಯಗಳಲ್ಲಿ 75 ವಿಕೆಟ್​ ಹಾಗೂ 10 ಟಿ20 ಪಂದ್ಯಗಳಲ್ಲಿ 7 ವಿಕೆಟ್​ ಪಡೆದಿದ್ದಾರೆ.

Intro:Body:Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.