ನವದೆಹಲಿ: 2007ರ ವಿಶ್ವಕಪ್ ಟಿ-20 ಟೂರ್ನಿ ಮತ್ತು ಭಾರತ-ಪಾಕಿಸ್ತಾನ ನಡುವಿನ ಪಂದ್ಯದ ಬಗ್ಗೆ ವೀರೇಂದ್ರ ಸೆಹ್ವಾಗ್, ಇರ್ಫಾನ್ ಪಠಾಣ್ ಹಾಗೂ ಆರ್ಪಿ.ಸಿಂಗ್ ತಮ್ಮ ಅನುಭವ ಹಂಚಿಕೊಂಡಿದ್ದಾರೆ.
- " class="align-text-top noRightClick twitterSection" data="">
ಕ್ರಿಕೆಟ್ ಡೈರೀಸ್ ಎಂಬ ಯೂಟ್ಯೂಬ್ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಈ ಆಟಗಾರರು ಟಿ-20 ಟೂರ್ನಿಯ ರೋಚಕ ಕ್ಷಣಗಳ ಬಗ್ಗೆ ಸಂಪೂರ್ಣವಾಗಿ ಮಾಹಿತಿ ಹಂಚಿಕೊಂಡಿದ್ದಾರೆ.
ಫೈನಲ್ ಪಂದ್ಯದಿಂದ ವೀರು ಔಟ್.. ಪಠಾಣ್ ಫ್ಯಾಮಿಲಿ ಫುಲ್ ಖುಷ್:
2007ರ ಟಿ-20 ವಿಶ್ವಕಪ್ ಫೈನಲ್ ಪಂದ್ಯದ ವೇಳೆ ವಿರೇಂದ್ರ ಸೆಹ್ವಾಗ್ ಗಾಯಗೊಂಡಿದ್ದರಿಂದ ಪಾಕ್ ವಿರುದ್ಧದ ಪಂದ್ಯದಿಂದ ಹೊರಗುಳಿಯಬೇಕಾಯಿತು. ಹೀಗಾಗಿ ಯೂಸುಫ್ ಪಠಾಣ್ ಫೈನಲ್ ಪಂದ್ಯದಲ್ಲಿ ಆಡುವ ಅವಕಾಶ ಪಡೆದುಕೊಂಡಿದ್ದರು. ಇದರಿಂದ ಪಠಾಣ್ ಫ್ಯಾಮಿಲಿ ಫುಲ್ ಖುಷ್ ಆಗಿತ್ತಂತೆ.
ಸಚಿನ್ರನ್ನ 2007 ರಿಂದ 2011ರ ವರೆಗೆ ಕಿಚಾಯಿಸಿದ್ದ ಸೆಹ್ವಾಗ್:
ಟಿ-20 ವಿಶ್ವಕಪ್ ಗೆದ್ದಿದ್ದರಿಂದ ಪ್ರತಿಯೊಬ್ಬ ಆಟಗಾರರಿಗೆ ವಿಶ್ವ ಚಾಂಪಿಯನ್ ಎನ್ನುವ ಬ್ಯಾಡ್ಜ್ ನೀಡಲಾಗಿತ್ತು. ಹಿರಿಯ ಆಟಗಾರರಾಗಿದ್ರೂ ನಿಮಗೆ ಈ ಬ್ಯಾಡ್ಜ್ ಸಿಕ್ಕಿಲ್ಲ ಎಂದು ಸಚಿನ್ರನ್ನ ಸೆಹ್ವಾಗ್ ಕಿಚಾಯಿಸುತ್ತಿದ್ದರಂತೆ. 2011ರ ಏಕದಿನ ವಿಶ್ವಕಪ್ ಗೆದ್ದ ನಂತರ ಸಚಿನ್ಗೂ ಈಬ್ಯಾಡ್ಜ್ ದೊರಕಿತು ಎಂದು ಸೆಹ್ವಾಗ್ ಹೇಳಿದ್ದಾರೆ.
ಪಾಕ್ ವಿರುದ್ಧದ ಪಂದ್ಯಕ್ಕೆ ಗಂಭೀರ್ ಸದಾ ಮುಂದು:
ಭಾರತ ಮತ್ತು ಪಾಕಿಸ್ತಾನದ ಪಂದ್ಯ ಎಂದರೆ ನಾವು ಗಂಭೀರ್ ಅವರನ್ನೇ ಮುಂದೆ ಬಿಡುತ್ತಿದ್ದೆವು. ಏನೇ ಬಂದರೂ ಗಂಭೀರ್ ಅದಕ್ಕೆ ತಕ್ಕ ಉತ್ತರ ಕೊಡುತ್ತಿದ್ದರು ಎಂದು ಪಠಾಣ್ ಇದೇ ವೇಳೆ ಹೇಳಿದ್ದಾರೆ.