ETV Bharat / sports

ಈದ್​​​​ಗೆ ಮೀಸಲಿಟ್ಟ ಹಣವನ್ನು ಬಡವರಿಗೆ ಆಹಾರ ನೀಡಲು ಉಪಯೋಗಿಸಿದ ಸರ್ಫರಾಜ್​ ಖಾನ್

author img

By

Published : May 23, 2020, 4:00 PM IST

Updated : May 23, 2020, 6:05 PM IST

ಸಚಿನ್​ ತೆಂಡೂಲ್ಕರ್​, ವಿರಾಟ್​ ಕೊಹ್ಲಿ, ರೋಹಿತ್​ ಶರ್ಮಾ ಸೇರಿದಂತೆ ಹಲವಾರು ಮಾಜಿ ಹಾಗೂ ಹಾಲಿ ಕ್ರಿಕೆಟಿಗರು ತಮ್ಮ ಕೈಲಾದ ಸಹಾಯ ಮಾಡಿದ್ದಾರೆ. ಇದೀಗ ಅವರ ಸಾಲಿಗೆ ಯುವ ಕ್ರಿಕೆಟಿಗ ಸರ್ಫರಾಜ್​ ಖಾನ್​ ಸೇರಿದ್ದಾರೆ.

ಸರ್ಫರಾಜ್​ ಖಾನ್
ಸರ್ಫರಾಜ್​ ಖಾನ್

ಮುಂಬೈ: ದೇಶವ್ಯಾಪಿ ತಾಂಡವವಾಡುತ್ತಿರುವ ಕೊರೊನಾದಿಂದ ಸಾಕಷ್ಟು ಬಡಜನರು ಸಂಕಷ್ಟಕ್ಕೀಡಾಗಿದ್ದಾರೆ. ಈಗಾಗಲೇ ಕ್ರಿಕೆಟಿಗರು, ಸಿನಿಮಾ ನಟರು ನೊಂದ ಜನರ ಪಾಲಿಗೆ ನೆರವು ನೀಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.

ಸಚಿನ್​ ತೆಂಡೂಲ್ಕರ್​, ವಿರಾಟ್​ ಕೊಹ್ಲಿ, ರೋಹಿತ್​ ಶರ್ಮಾ ಸೇರಿದಂತೆ ಹಲವಾರು ಮಾಜಿ ಹಾಗೂ ಹಾಲಿ ಕ್ರಿಕೆಟಿಗರು ತಮ್ಮ ಕೈಲಾದ ಸಹಾಯ ಮಾಡಿದ್ದಾರೆ. ಇದೀಗ ಅವರ ಸಾಲಿಗೆ ಯುವ ಕ್ರಿಕೆಟಿಗ ಸರ್ಫರಾಜ್​ ಖಾನ್​ ಸೇರಿದ್ದಾರೆ.

ಮುಂಬೈ ರಣಜಿ ತಂಡದಲ್ಲಿ ಆಡುತ್ತಿರುವ ಉತ್ತರ ಪ್ರದೇಶದ ಸರ್ಫರಾಜ್​ ಖಾನ್​ ಅವರ ತಂದೆ ಜೊತೆಗೂಡಿ ತಮ್ಮ ತವರಾದ ಅಜಾಮ್​ಗರ್​ನಲ್ಲಿ ಬಡವರಿಗೆ ,ಕೂಲಿ ಕಾರ್ಮಿಕರಿಗೆ, ರಿಕ್ಷಾ,-ಟ್ರಕ್​ ಡ್ರೈವರ್​​​​​​​ಗಳಿಗೆ ಆಹಾರ ನೀಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.

ಈ ಕುರಿತು ಪ್ರತಿಕ್ರಿಯೆ ನೀಡಿರುವ ಸರ್ಫರಾಜ್​ ಖಾನ್​ , ಈ ವರ್ಷ ನಮ್ಮ ಮನೆಯಲ್ಲಿ ಈದ್​ ಆಚರಿಸುತ್ತಿಲ್ಲ. ಹಬ್ಬಕ್ಕಾಗಿ ಮೀಸಲಿಟ್ಟಿರುವ ಹಣವನ್ನು ಅಗತ್ಯವಿರುವ ಜನರಿಗಾಗಿ ವಿನಿಯೋಗಿಸುತ್ತಿದ್ದೇವೆ. ಯಾರ ಬಳಿ ಹಣವಿದೆಯೋ ಅವರು ಕೂಡ ಬಡ ಜನರಿಗೆ ಸಹಾಯ ಮಾಡಲು ಧಾವಿಸಬೇಕು ಎಂದು ಕೇಳಿಕೊಂಡಿದ್ದಾರೆ.

ಊರಿಗೆ ವಾಪಸ್​ ಆಗುತ್ತಿರುವ ಜನರಿಗೆ ನಾವು ಊಟದ ಪಾಕೆಟ್ ಮತ್ತು ವಾಟರ್​ ಬಾಟಲ್​ಗಳನ್ನು ನೀಡುತ್ತಿದ್ದೇವೆ. ಅವರು ತಮ್ಮ ಊರಿಗೆ ಹೋಗುವ ಸಲುವಾಗಿ ಹಲವು ದಿನಗಳಿಂದ ಪ್ರಯಾಣ ಬೆಳೆಸಿದ್ದಾರೆ. ಕೆಲವರು ಬಾಯಾರಿಕೆ ಹಾಗೂ ಹಸಿವಿನಿಂದ ದಣಿದಿರುತ್ತಾರೆ. ನಾವು ಕೂಡ ರಂಜಾನ್​ನಲ್ಲಿ ಉಪವಾಸ ಮಾಡುತ್ತೇವೆ. ನಮಗೆ ಆಹಾರ ಮತ್ತು ನೀರಿನ ಮಹತ್ವ ತಿಳಿದಿದೆ ಎಂದಿದ್ದಾರೆ.

ಮುಂಬೈ: ದೇಶವ್ಯಾಪಿ ತಾಂಡವವಾಡುತ್ತಿರುವ ಕೊರೊನಾದಿಂದ ಸಾಕಷ್ಟು ಬಡಜನರು ಸಂಕಷ್ಟಕ್ಕೀಡಾಗಿದ್ದಾರೆ. ಈಗಾಗಲೇ ಕ್ರಿಕೆಟಿಗರು, ಸಿನಿಮಾ ನಟರು ನೊಂದ ಜನರ ಪಾಲಿಗೆ ನೆರವು ನೀಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.

ಸಚಿನ್​ ತೆಂಡೂಲ್ಕರ್​, ವಿರಾಟ್​ ಕೊಹ್ಲಿ, ರೋಹಿತ್​ ಶರ್ಮಾ ಸೇರಿದಂತೆ ಹಲವಾರು ಮಾಜಿ ಹಾಗೂ ಹಾಲಿ ಕ್ರಿಕೆಟಿಗರು ತಮ್ಮ ಕೈಲಾದ ಸಹಾಯ ಮಾಡಿದ್ದಾರೆ. ಇದೀಗ ಅವರ ಸಾಲಿಗೆ ಯುವ ಕ್ರಿಕೆಟಿಗ ಸರ್ಫರಾಜ್​ ಖಾನ್​ ಸೇರಿದ್ದಾರೆ.

ಮುಂಬೈ ರಣಜಿ ತಂಡದಲ್ಲಿ ಆಡುತ್ತಿರುವ ಉತ್ತರ ಪ್ರದೇಶದ ಸರ್ಫರಾಜ್​ ಖಾನ್​ ಅವರ ತಂದೆ ಜೊತೆಗೂಡಿ ತಮ್ಮ ತವರಾದ ಅಜಾಮ್​ಗರ್​ನಲ್ಲಿ ಬಡವರಿಗೆ ,ಕೂಲಿ ಕಾರ್ಮಿಕರಿಗೆ, ರಿಕ್ಷಾ,-ಟ್ರಕ್​ ಡ್ರೈವರ್​​​​​​​ಗಳಿಗೆ ಆಹಾರ ನೀಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.

ಈ ಕುರಿತು ಪ್ರತಿಕ್ರಿಯೆ ನೀಡಿರುವ ಸರ್ಫರಾಜ್​ ಖಾನ್​ , ಈ ವರ್ಷ ನಮ್ಮ ಮನೆಯಲ್ಲಿ ಈದ್​ ಆಚರಿಸುತ್ತಿಲ್ಲ. ಹಬ್ಬಕ್ಕಾಗಿ ಮೀಸಲಿಟ್ಟಿರುವ ಹಣವನ್ನು ಅಗತ್ಯವಿರುವ ಜನರಿಗಾಗಿ ವಿನಿಯೋಗಿಸುತ್ತಿದ್ದೇವೆ. ಯಾರ ಬಳಿ ಹಣವಿದೆಯೋ ಅವರು ಕೂಡ ಬಡ ಜನರಿಗೆ ಸಹಾಯ ಮಾಡಲು ಧಾವಿಸಬೇಕು ಎಂದು ಕೇಳಿಕೊಂಡಿದ್ದಾರೆ.

ಊರಿಗೆ ವಾಪಸ್​ ಆಗುತ್ತಿರುವ ಜನರಿಗೆ ನಾವು ಊಟದ ಪಾಕೆಟ್ ಮತ್ತು ವಾಟರ್​ ಬಾಟಲ್​ಗಳನ್ನು ನೀಡುತ್ತಿದ್ದೇವೆ. ಅವರು ತಮ್ಮ ಊರಿಗೆ ಹೋಗುವ ಸಲುವಾಗಿ ಹಲವು ದಿನಗಳಿಂದ ಪ್ರಯಾಣ ಬೆಳೆಸಿದ್ದಾರೆ. ಕೆಲವರು ಬಾಯಾರಿಕೆ ಹಾಗೂ ಹಸಿವಿನಿಂದ ದಣಿದಿರುತ್ತಾರೆ. ನಾವು ಕೂಡ ರಂಜಾನ್​ನಲ್ಲಿ ಉಪವಾಸ ಮಾಡುತ್ತೇವೆ. ನಮಗೆ ಆಹಾರ ಮತ್ತು ನೀರಿನ ಮಹತ್ವ ತಿಳಿದಿದೆ ಎಂದಿದ್ದಾರೆ.

Last Updated : May 23, 2020, 6:05 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.