ETV Bharat / sports

ಆಸ್ಟ್ರೇಲಿಯಾ ಪ್ರವಾಸಕ್ಕೆ ಗಾಯಾಳು ವೃದ್ಧಿಮಾನ್ ಸಹಾ ಅನುಮಾನ

author img

By

Published : Nov 9, 2020, 6:52 PM IST

ಈಗಾಗಲೆ ಆಸೀಸ್​ ವಿರುದ್ಧದ ಟೆಸ್ಟ್​ ಸರಣಿಗೆ ಸಹಾ ಭಾರತ ಟೆಸ್ಟ್​ ತಂಡದಲ್ಲಿ ಅವಕಾಶ ಪಡೆದಿದ್ದಾರೆ. ಇವರ ಜೊತೆಗೆ 2ನೇ ವಿಕೆಟ್ ಕೀಪರ್ ಆಗಿ ರಿಷಭ್‌ ಪಂತ್‌ ಆಯ್ಕೆಯಾಗಿದ್ದಾರೆ. ಆದರೆ ಐಪಿಎಲ್​ ವೇಳೆ ಅವರಿಗೆ ಆಗಿರುವ ಗಾಯ ಗಂಭೀರವೇ ಅಥವಾ ಟೆಸ್ಟ್​ ಸರಣಿ ವೇಳೆಗೆ ಚೇತರಿಸಕೊಳ್ಳುವಂತದ್ದೇ ಎನ್ನುವುದು ಇನ್ನು ಖಚಿತವಾಗಿಲ್ಲ.

ವೃದ್ಧಿಮಾನ್ ಸಹಾ
ವೃದ್ಧಿಮಾನ್ ಸಹಾ

ನವದೆಹಲಿ: ಮಂಡಿರಜ್ಜು ಗಾಯಕ್ಕೆ ತುತ್ತಾಗಿರುವ ಭಾರತ ಟೆಸ್ಟ್​ ತಂಡದ ವಿಕೆಟ್‌ ಕೀಪರ್‌ ಬ್ಯಾಟ್ಸ್‌ಮನ್‌ ವೃದ್ಧಿಮಾನ್‌ ಸಹಾ ಅವರು ಆಸ್ಟ್ರೇಲಿಯಾ ವಿರುದ್ಧ ಟೆಸ್ಟ್‌ ಸರಣಿಗೆ ಲಭ್ಯವಾಗುವುದು ಅನುಮಾನ ಎನ್ನಲಾಗುತ್ತಿದೆ.

ಎಂಎಸ್ ಧೋನಿ ನಂತರ ಟೆಸ್ಟ್​ ತಂಡದ ವಿಕೆಟ್ ಕೀಪಿಂಗ್ ಜವಾಬ್ದಾರಿ ನಿರ್ವಹಿಸುತ್ತಿರುವ ಸಹಾ, ನಂತರ ಪಂತ್ ಜೊತೆಗೆ ಪ್ರತಿಸ್ಪರ್ಧಿಯಾಗಿ ಪೈಪೋಟಿ ನಡೆಸುತ್ತಿದ್ದಾರೆ. ಐಪಿಎಲ್​ನಲ್ಲೂ ಆರಂಭಿಕನಾಗಿ ಯಶಸ್ಸು ಸಾಧಿಸಿದ್ದ ಸಹಾ ಮುಂಬೈ ಇಂಡಿಯನ್ಸ್ ಪಂದ್ಯದ ವೇಳೆ ಸ್ನಾಯುಸೆಳೆತಕ್ಕೆ ಒಳಗಾಗಿದ್ದರು. ಹಾಗಾಗಿ ಆರ್​ಸಿಬಿ ಮತ್ತು ಡೆಲ್ಲಿ ವಿರುದ್ಧದ ಪ್ಲೇ ಆಫ್​ ಪಂದ್ಯಗಳಲ್ಲಿ ಕಣಕ್ಕಿಳಿದಿರಲಿಲ್ಲ.

ಈಗಾಗಲೆ ಆಸೀಸ್​ ವಿರುದ್ಧದ ಟೆಸ್ಟ್​ ಸರಣಿಗೆ ಸಹಾ ಭಾರತ ಟೆಸ್ಟ್​ ತಂಡದಲ್ಲಿ ಅವಕಾಶ ಪಡೆದಿದ್ದಾರೆ. ಇವರ ಜೊತೆಗೆ 2ನೇ ವಿಕೆಟ್ ಕೀಪರ್ ಆಗಿ ರಿಷಭ್‌ ಪಂತ್‌ ಆಯ್ಕೆಯಾಗಿದ್ದಾರೆ. ಆದರೆ ಐಪಿಎಲ್​ ವೇಳೆ ಅವರಿಗೆ ಆಗಿರುವ ಗಾಯ ಗಂಭೀರವೇ ಅಥವಾ ಟೆಸ್ಟ್​ ಸರಣಿ ವೇಳೆಗೆ ಚೇತರಿಸಕೊಳ್ಳುವಂತದ್ದೇ ಎನ್ನುವುದು ಇನ್ನು ಖಚಿತವಾಗಿಲ್ಲ.

ಒಂದು ವೇಳೆ ಸಹಾ ಗಾಯ ಗಂಭೀರವಾಗಿ ಹೆಚ್ಚು ವಿಶ್ರಾಂತಿ ಅಗತ್ಯ ಎನಿಸಿದರೆ, ರಿಷಭ್ ಪಂತ್ ವಿಕೆಟ್​ ಕೀಪರ್ ಕಾರ್ಯ ನಿರ್ವಹಿಸಬೇಕಾಗುತ್ತದೆ. ಬಿಸಿಸಿಐ 2ನೇ ವಿಕೆಟ್ ಕೀಪರ್​ಗಾಗಿ ಮತ್ತೊಬ್ಬರ ಕಡೆ ನೋಡಬೇಕಾಗುತ್ತದೆ.

ನವದೆಹಲಿ: ಮಂಡಿರಜ್ಜು ಗಾಯಕ್ಕೆ ತುತ್ತಾಗಿರುವ ಭಾರತ ಟೆಸ್ಟ್​ ತಂಡದ ವಿಕೆಟ್‌ ಕೀಪರ್‌ ಬ್ಯಾಟ್ಸ್‌ಮನ್‌ ವೃದ್ಧಿಮಾನ್‌ ಸಹಾ ಅವರು ಆಸ್ಟ್ರೇಲಿಯಾ ವಿರುದ್ಧ ಟೆಸ್ಟ್‌ ಸರಣಿಗೆ ಲಭ್ಯವಾಗುವುದು ಅನುಮಾನ ಎನ್ನಲಾಗುತ್ತಿದೆ.

ಎಂಎಸ್ ಧೋನಿ ನಂತರ ಟೆಸ್ಟ್​ ತಂಡದ ವಿಕೆಟ್ ಕೀಪಿಂಗ್ ಜವಾಬ್ದಾರಿ ನಿರ್ವಹಿಸುತ್ತಿರುವ ಸಹಾ, ನಂತರ ಪಂತ್ ಜೊತೆಗೆ ಪ್ರತಿಸ್ಪರ್ಧಿಯಾಗಿ ಪೈಪೋಟಿ ನಡೆಸುತ್ತಿದ್ದಾರೆ. ಐಪಿಎಲ್​ನಲ್ಲೂ ಆರಂಭಿಕನಾಗಿ ಯಶಸ್ಸು ಸಾಧಿಸಿದ್ದ ಸಹಾ ಮುಂಬೈ ಇಂಡಿಯನ್ಸ್ ಪಂದ್ಯದ ವೇಳೆ ಸ್ನಾಯುಸೆಳೆತಕ್ಕೆ ಒಳಗಾಗಿದ್ದರು. ಹಾಗಾಗಿ ಆರ್​ಸಿಬಿ ಮತ್ತು ಡೆಲ್ಲಿ ವಿರುದ್ಧದ ಪ್ಲೇ ಆಫ್​ ಪಂದ್ಯಗಳಲ್ಲಿ ಕಣಕ್ಕಿಳಿದಿರಲಿಲ್ಲ.

ಈಗಾಗಲೆ ಆಸೀಸ್​ ವಿರುದ್ಧದ ಟೆಸ್ಟ್​ ಸರಣಿಗೆ ಸಹಾ ಭಾರತ ಟೆಸ್ಟ್​ ತಂಡದಲ್ಲಿ ಅವಕಾಶ ಪಡೆದಿದ್ದಾರೆ. ಇವರ ಜೊತೆಗೆ 2ನೇ ವಿಕೆಟ್ ಕೀಪರ್ ಆಗಿ ರಿಷಭ್‌ ಪಂತ್‌ ಆಯ್ಕೆಯಾಗಿದ್ದಾರೆ. ಆದರೆ ಐಪಿಎಲ್​ ವೇಳೆ ಅವರಿಗೆ ಆಗಿರುವ ಗಾಯ ಗಂಭೀರವೇ ಅಥವಾ ಟೆಸ್ಟ್​ ಸರಣಿ ವೇಳೆಗೆ ಚೇತರಿಸಕೊಳ್ಳುವಂತದ್ದೇ ಎನ್ನುವುದು ಇನ್ನು ಖಚಿತವಾಗಿಲ್ಲ.

ಒಂದು ವೇಳೆ ಸಹಾ ಗಾಯ ಗಂಭೀರವಾಗಿ ಹೆಚ್ಚು ವಿಶ್ರಾಂತಿ ಅಗತ್ಯ ಎನಿಸಿದರೆ, ರಿಷಭ್ ಪಂತ್ ವಿಕೆಟ್​ ಕೀಪರ್ ಕಾರ್ಯ ನಿರ್ವಹಿಸಬೇಕಾಗುತ್ತದೆ. ಬಿಸಿಸಿಐ 2ನೇ ವಿಕೆಟ್ ಕೀಪರ್​ಗಾಗಿ ಮತ್ತೊಬ್ಬರ ಕಡೆ ನೋಡಬೇಕಾಗುತ್ತದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.