ETV Bharat / sports

ಕೊಹ್ಲಿ ಮನಸ್ಸು ಮಾಡಿದ್ರೆ ಈತ RCBಗೆ ಅದ್ಭುತ ಓಪನರ್ ಆಗ್ತಾನೆ​!

author img

By

Published : Oct 27, 2019, 7:24 PM IST

2019 ಐಪಿಎಲ್​ ಆವೃತ್ತಿಗೆ ನಡೆದ ಹರಾಜಿನಲ್ಲಿ ದೇವದತ್​ ಪಡಿಕ್ಕಲ್​ರನ್ನು ಆರ್​ಸಿಬಿ 20 ಲಕ್ಷ ನೀಡಿ ಖರೀದಿಸಿತ್ತು. ಆದರೆ, ಆಡುವ 11ರ ಬಳಗದಲ್ಲಿ ಅವಕಾಶ ಸಿಕ್ಕಿರಲಿಲ್ಲ. ಇನ್ನು, ಪಡಿಕ್ಕಲ್ ಆಟದಲ್ಲಿ​ ಅಂದಿಗೂ ಇಂದಿಗೂ ತುಂಬಾ ಬದಲಾಗಿದೆ. ಆಕ್ರಮಣಕಾರಿ ಆಟದ ಜತೆಗೆ ಸಮಯಕ್ಕೆ ತಕ್ಕ ಆಟವನ್ನು ಪ್ರದರ್ಶಿಸುವ ಕಲೆಯನ್ನು ಪಡಿಕ್ಕಲ್​​ ಪಡೆದಿದ್ದಾರೆ.

RCB

ಬೆಂಗಳೂರು: 2019-20ನೇ ಸಾಲಿನಲ್ಲಿ ಭರ್ಜರಿ ಬ್ಯಾಟಿಂಗ್​ ಪ್ರದರ್ಶನ ನೀಡುತ್ತಿರುವ ಕರ್ನಾಟಕ ತಂಡದ 19 ವರ್ಷದ ಯುವ ಆಟಗಾರ ದೇವದತ್​ ಪಡಿಕ್ಕಲ್​ ಭವಿಷ್ಯದಲ್ಲಿ ಅತ್ಯುತ್ತಮ ಕ್ರಿಕೆಟಿಗನಾಗುವುದರಲ್ಲಿ ಯಾವುದೇ ಸಂಶಯವಿಲ್ಲ.

2019ರ ಐಪಿಎಲ್​ ಆವೃತ್ತಿಗೆ ನಡೆದ ಹರಾಜಿನಲ್ಲಿ ದೇವದತ್​ ಪಡಿಕ್ಕಲ್​ರನ್ನು ಆರ್​ಸಿಬಿ 20 ಲಕ್ಷ ನೀಡಿ ಖರೀದಿಸಿತ್ತು. ಆದರೆ, ಆಡುವ 11ರ ಬಳಗದಲ್ಲಿ ಅವಕಾಶ ಸಿಕ್ಕಿರಲಿಲ್ಲ. ಇನ್ನು, ಪಡಿಕ್ಕಲ್ ಆಟದಲ್ಲಿ​ ಅಂದಿಗೂ ಇಂದಿಗೂ ತುಂಬಾ ಬದಲಾಗಿದೆ. ಆಕ್ರಮಣಕಾರಿ ಜೊತೆಗೆ ಸಮಯಕ್ಕೆ ತಕ್ಕ ಆಟವನ್ನೂ ಪ್ರದರ್ಶಿಸುವ ಕಲೆಯನ್ನು ಪಡಿಕ್ಕಲ್​​ ಪಡೆದಿದ್ದಾರೆ.

ಕರ್ನಾಟಕ ಪ್ರೀಮಿಯರ್​ ಲೀಗ್​ನಲ್ಲಿ ಆಡಿ 4 ಅರ್ಧಶತಕ ಸಹಿತ 310ರನ್​ಗಳಿಸಿ ಟೂರ್ನಿಯಲ್ಲಿ ಗರಿಷ್ಠ ಸ್ಕೋರರ್​ ಎನಿಸಿಕೊಂಡಿದ್ದರು. ಇನ್ನು, ಇತ್ತೇಚೆಗೆ ಮುಗಿದ ವಿಜಯ್​ ಹಜಾರೆ ಟ್ರೋಫಿಯಲ್ಲೂ ಪಡಿಕ್ಕಲ್​ ಅಬ್ಬರದ ಬ್ಯಾಟಿಂಗ್ ನಡೆಸಿ 1 ಶತಕ ಹಾಗೂ 5 ಅರ್ಧಶತಕ ಸಹಿತ 609 ರನ್​ ಗಳಿಸಿ ಟೂರ್ನಿಯಲ್ಲಿ ಗರಿಷ್ಠ ರನ್​ಗಳಿಸಿದ ಬ್ಯಾಟ್ಸ್​ಮನ್​ ಆಗಿದ್ದರು.

ಆರ್​ಸಿಬಿ ತಂಡದಲ್ಲಿರುವ ಪಡಿಕ್ಕಲ್​ ಅವರನ್ನು ಆರ್​ಸಿಬಿ ಡಿಸೆಂಬರ್​ನಲ್ಲಿ ನಡೆಯುವ ಹರಾಜಿನಲ್ಲಿ ರೀಟೈನ್ ಮಾಡಿಕೊಂಡು, ಆರಂಭಿಕನಾಗಿ ಕಣಕ್ಕಿಳಿಸಿದರೆ ಖಂಡಿತ ಆರ್​ಸಿಬಿಗೆ ಗೇಲ್​ನಂತರ ಕಾಡುತ್ತಿರುವ ಆರಂಭಿಕನ ಸ್ಥಾನವನ್ನು 19 ವರ್ಷದ ಯುವ ಬ್ಯಾಟ್ಸ್​ಮನ್​ ತುಂಬಲಿದ್ದಾರೆ ಎನ್ನುವುದರಲ್ಲಿ ಎರಡು ಮಾತಿಲ್ಲ.

ಬೆಂಗಳೂರು: 2019-20ನೇ ಸಾಲಿನಲ್ಲಿ ಭರ್ಜರಿ ಬ್ಯಾಟಿಂಗ್​ ಪ್ರದರ್ಶನ ನೀಡುತ್ತಿರುವ ಕರ್ನಾಟಕ ತಂಡದ 19 ವರ್ಷದ ಯುವ ಆಟಗಾರ ದೇವದತ್​ ಪಡಿಕ್ಕಲ್​ ಭವಿಷ್ಯದಲ್ಲಿ ಅತ್ಯುತ್ತಮ ಕ್ರಿಕೆಟಿಗನಾಗುವುದರಲ್ಲಿ ಯಾವುದೇ ಸಂಶಯವಿಲ್ಲ.

2019ರ ಐಪಿಎಲ್​ ಆವೃತ್ತಿಗೆ ನಡೆದ ಹರಾಜಿನಲ್ಲಿ ದೇವದತ್​ ಪಡಿಕ್ಕಲ್​ರನ್ನು ಆರ್​ಸಿಬಿ 20 ಲಕ್ಷ ನೀಡಿ ಖರೀದಿಸಿತ್ತು. ಆದರೆ, ಆಡುವ 11ರ ಬಳಗದಲ್ಲಿ ಅವಕಾಶ ಸಿಕ್ಕಿರಲಿಲ್ಲ. ಇನ್ನು, ಪಡಿಕ್ಕಲ್ ಆಟದಲ್ಲಿ​ ಅಂದಿಗೂ ಇಂದಿಗೂ ತುಂಬಾ ಬದಲಾಗಿದೆ. ಆಕ್ರಮಣಕಾರಿ ಜೊತೆಗೆ ಸಮಯಕ್ಕೆ ತಕ್ಕ ಆಟವನ್ನೂ ಪ್ರದರ್ಶಿಸುವ ಕಲೆಯನ್ನು ಪಡಿಕ್ಕಲ್​​ ಪಡೆದಿದ್ದಾರೆ.

ಕರ್ನಾಟಕ ಪ್ರೀಮಿಯರ್​ ಲೀಗ್​ನಲ್ಲಿ ಆಡಿ 4 ಅರ್ಧಶತಕ ಸಹಿತ 310ರನ್​ಗಳಿಸಿ ಟೂರ್ನಿಯಲ್ಲಿ ಗರಿಷ್ಠ ಸ್ಕೋರರ್​ ಎನಿಸಿಕೊಂಡಿದ್ದರು. ಇನ್ನು, ಇತ್ತೇಚೆಗೆ ಮುಗಿದ ವಿಜಯ್​ ಹಜಾರೆ ಟ್ರೋಫಿಯಲ್ಲೂ ಪಡಿಕ್ಕಲ್​ ಅಬ್ಬರದ ಬ್ಯಾಟಿಂಗ್ ನಡೆಸಿ 1 ಶತಕ ಹಾಗೂ 5 ಅರ್ಧಶತಕ ಸಹಿತ 609 ರನ್​ ಗಳಿಸಿ ಟೂರ್ನಿಯಲ್ಲಿ ಗರಿಷ್ಠ ರನ್​ಗಳಿಸಿದ ಬ್ಯಾಟ್ಸ್​ಮನ್​ ಆಗಿದ್ದರು.

ಆರ್​ಸಿಬಿ ತಂಡದಲ್ಲಿರುವ ಪಡಿಕ್ಕಲ್​ ಅವರನ್ನು ಆರ್​ಸಿಬಿ ಡಿಸೆಂಬರ್​ನಲ್ಲಿ ನಡೆಯುವ ಹರಾಜಿನಲ್ಲಿ ರೀಟೈನ್ ಮಾಡಿಕೊಂಡು, ಆರಂಭಿಕನಾಗಿ ಕಣಕ್ಕಿಳಿಸಿದರೆ ಖಂಡಿತ ಆರ್​ಸಿಬಿಗೆ ಗೇಲ್​ನಂತರ ಕಾಡುತ್ತಿರುವ ಆರಂಭಿಕನ ಸ್ಥಾನವನ್ನು 19 ವರ್ಷದ ಯುವ ಬ್ಯಾಟ್ಸ್​ಮನ್​ ತುಂಬಲಿದ್ದಾರೆ ಎನ್ನುವುದರಲ್ಲಿ ಎರಡು ಮಾತಿಲ್ಲ.

Intro:Body:Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.