ETV Bharat / sports

13ನೇ ಆವೃತ್ತಿ ಐಪಿಎಲ್​ನಲ್ಲಿ ಭಾಗಿಯಾಗಲು ದುಬೈಗೆ ಹಾರಿದ ಸಿಎಸ್​ಕೆ, ಆರ್​ಸಿಬಿ!

author img

By

Published : Aug 21, 2020, 2:49 PM IST

Updated : Aug 21, 2020, 3:15 PM IST

ಪ್ರಸಕ್ತ ಸಾಲಿನ 13ನೇ ಆವೃತ್ತಿ ಇಂಡಿಯನ್​ ಪ್ರೀಮಿಯರ್​ ಲೀಗ್​​ನಲ್ಲಿ ಭಾಗಿಯಾಗಲು ಇಂದು ಮತ್ತೆ ಎರಡು ತಂಡಗಳು ದುಬೈಗೆ ಪ್ರಯಾಣ ಬೆಳೆಸಿದವು.

RCB & CSK team
RCB & CSK team

ಹೈದರಾಬಾದ್​: 13ನೇ ಆವೃತ್ತಿಯ ಇಂಡಿಯನ್​ ಪ್ರೀಮಿಯರ್​ ಲೀಗ್​ ಟೂರ್ನಿ ದುಬೈನಲ್ಲಿ ಸೆಪ್ಟೆಂಬರ್​ 19ರಿಂದ ಆರಂಭಗೊಳ್ಳಲಿದ್ದು, ಈಗಾಗಲೇ ಕೆಲವೊಂದು ತಂಡಗಳು ಅಲ್ಲಿಗೆ ತೆರಳಿವೆ. ಇಂದು ಮಹೇಂದ್ರ ಸಿಂಗ್​ ಧೋನಿ ನೇತೃತ್ವದ ಸಿಎಸ್​ಕೆ ಹಾಗೂ ಕೊಹ್ಲಿ ಸಾರಥ್ಯದ ಆರ್​ಸಿಬಿ ತಂಡ ಪ್ರವಾಸ ಬೆಳೆಸಿದವು.

ದುಬೈಗೆ ಹಾರಿದ ಸಿಎಸ್​ಕೆ

ಮಹೇಂದ್ರ ಸಿಂಗ್​ ಧೋನಿ, ಮಧ್ಯಮ ಕ್ರಮಾಂಕದ ಬ್ಯಾಟ್ಸ್​​ಮನ್​ ಸುರೇಶ್​ ರೈನಾ, ರವೀಂದ್ರ ಜಡೇಜಾ ಸೇರಿದಂತೆ ಅನೇಕ ಪ್ಲೇಯರ್ಸ್​​ ಪ್ರಯಾಣ ಬೆಳೆಸಿದರು. ಕಳೆದ ಆಗಸ್ಟ್​ 15ರಂದು ಧೋನಿ ಹಾಗೂ ರೈನಾ ಅಂತಾರಾಷ್ಟ್ರೀಯ ಕ್ರಿಕೆಟ್​​ ಬದುಕಿಗೆ ವಿದಾಯ ಘೋಷಣೆ ಮಾಡಿದ್ದು, ಇದೀಗ ಐಪಿಎಲ್​​ನಲ್ಲಿ ಭಾಗಿಯಾಗಲಿದ್ದಾರೆ.

CSK team
ಸಿಎಂಸ್​ಕೆ ತಂಡದ ಪ್ಲೇಯರ್ಸ್​​

ವಿರಾಟ್​ ಕೊಹ್ಲಿ ನೇತೃತ್ವದ ರಾಯಲ್ ಚಾಲೆಂಜರ್ಸ್​ ಬೆಂಗಳೂರು ತಂಡ ಕೂಡ ಇಂದು ದುಬೈಗೆ ಪ್ರಯಾಣ ಬೆಳೆಸಿತು. ಸ್ಪಿನ್ನರ್​ ಯಜುವೇಂದ್ರ ಚಹಾಲ್​, ವಿಕೆಟ್​ ಕೀಪರ್​​ ಪಾರ್ಥಿವ್​ ಪಟೇಲ್​, ವೇಗದ ಬೌಲರ್​ ಉಮೇಶ್​ ಯಾದವ್​ ಹಾಗೂ ನವದೀಪ್ ಸೈನಿ ಸೇರಿದಂತೆ ಅನೇಕ ಪ್ಲೇಯರ್ಸ್​​ ಸಾಥ್​ ನೀಡಿದ್ದಾರೆ. ಆದರೆ ಇವರೊಂದಿಗೆ ಕ್ಯಾಪ್ಟನ್​ ವಿರಾಟ್​ ಕೊಹ್ಲಿ ಪ್ರಯಾಣ ಬೆಳೆಸಿರುವ ಯಾವುದೇ ಮಾಹಿತಿ ಲಭ್ಯವಾಗಿಲ್ಲ.

ನಿನ್ನೆ ರಾಜಸ್ಥಾನ ರಾಯಲ್ಸ್​, ಕಿಂಗ್ಸ್​ ಇಲೆವೆನ್​ ಪಂಜಾಬ್​ ಹಾಗೂ ಕೋಲ್ಕತ್ತಾ ನೈಟ್​ ರೈಡರ್ಸ್​ ತಂಡ ನಿನ್ನೆ ಪ್ರಯಾಣ ಬೆಳೆಸಿದ್ದವು. ಸೆಪ್ಟೆಂಬರ್​​ 19ರಿಂದ ಇಂಡಿಯನ್​​ ಪ್ರೀಮಿಯರ್​ ಲೀಗ್​​ ಟೂರ್ನಿ ಆರಂಭಗೊಳ್ಳಲಿದ್ದು, ಮೊದಲ ಪಂದ್ಯದಲ್ಲಿ ಸಿಎಸ್​ಕೆ ಹಾಗೂ ಮುಂಬೈ ಇಂಡಿಯನ್ಸ್​ ಮುಖಾಮುಖಿಯಾಗಲಿವೆ. ನವೆಂಬರ್​ 10ರಂದು ಫೈನಲ್​ ಪಂದ್ಯ ನಡೆಯಲಿದೆ.

CSK team
ಸಿಎಸ್​ಕೆ ಪ್ಲೇಯರ್​ ಜಡೇಜಾ

ಹೈದರಾಬಾದ್​: 13ನೇ ಆವೃತ್ತಿಯ ಇಂಡಿಯನ್​ ಪ್ರೀಮಿಯರ್​ ಲೀಗ್​ ಟೂರ್ನಿ ದುಬೈನಲ್ಲಿ ಸೆಪ್ಟೆಂಬರ್​ 19ರಿಂದ ಆರಂಭಗೊಳ್ಳಲಿದ್ದು, ಈಗಾಗಲೇ ಕೆಲವೊಂದು ತಂಡಗಳು ಅಲ್ಲಿಗೆ ತೆರಳಿವೆ. ಇಂದು ಮಹೇಂದ್ರ ಸಿಂಗ್​ ಧೋನಿ ನೇತೃತ್ವದ ಸಿಎಸ್​ಕೆ ಹಾಗೂ ಕೊಹ್ಲಿ ಸಾರಥ್ಯದ ಆರ್​ಸಿಬಿ ತಂಡ ಪ್ರವಾಸ ಬೆಳೆಸಿದವು.

ದುಬೈಗೆ ಹಾರಿದ ಸಿಎಸ್​ಕೆ

ಮಹೇಂದ್ರ ಸಿಂಗ್​ ಧೋನಿ, ಮಧ್ಯಮ ಕ್ರಮಾಂಕದ ಬ್ಯಾಟ್ಸ್​​ಮನ್​ ಸುರೇಶ್​ ರೈನಾ, ರವೀಂದ್ರ ಜಡೇಜಾ ಸೇರಿದಂತೆ ಅನೇಕ ಪ್ಲೇಯರ್ಸ್​​ ಪ್ರಯಾಣ ಬೆಳೆಸಿದರು. ಕಳೆದ ಆಗಸ್ಟ್​ 15ರಂದು ಧೋನಿ ಹಾಗೂ ರೈನಾ ಅಂತಾರಾಷ್ಟ್ರೀಯ ಕ್ರಿಕೆಟ್​​ ಬದುಕಿಗೆ ವಿದಾಯ ಘೋಷಣೆ ಮಾಡಿದ್ದು, ಇದೀಗ ಐಪಿಎಲ್​​ನಲ್ಲಿ ಭಾಗಿಯಾಗಲಿದ್ದಾರೆ.

CSK team
ಸಿಎಂಸ್​ಕೆ ತಂಡದ ಪ್ಲೇಯರ್ಸ್​​

ವಿರಾಟ್​ ಕೊಹ್ಲಿ ನೇತೃತ್ವದ ರಾಯಲ್ ಚಾಲೆಂಜರ್ಸ್​ ಬೆಂಗಳೂರು ತಂಡ ಕೂಡ ಇಂದು ದುಬೈಗೆ ಪ್ರಯಾಣ ಬೆಳೆಸಿತು. ಸ್ಪಿನ್ನರ್​ ಯಜುವೇಂದ್ರ ಚಹಾಲ್​, ವಿಕೆಟ್​ ಕೀಪರ್​​ ಪಾರ್ಥಿವ್​ ಪಟೇಲ್​, ವೇಗದ ಬೌಲರ್​ ಉಮೇಶ್​ ಯಾದವ್​ ಹಾಗೂ ನವದೀಪ್ ಸೈನಿ ಸೇರಿದಂತೆ ಅನೇಕ ಪ್ಲೇಯರ್ಸ್​​ ಸಾಥ್​ ನೀಡಿದ್ದಾರೆ. ಆದರೆ ಇವರೊಂದಿಗೆ ಕ್ಯಾಪ್ಟನ್​ ವಿರಾಟ್​ ಕೊಹ್ಲಿ ಪ್ರಯಾಣ ಬೆಳೆಸಿರುವ ಯಾವುದೇ ಮಾಹಿತಿ ಲಭ್ಯವಾಗಿಲ್ಲ.

ನಿನ್ನೆ ರಾಜಸ್ಥಾನ ರಾಯಲ್ಸ್​, ಕಿಂಗ್ಸ್​ ಇಲೆವೆನ್​ ಪಂಜಾಬ್​ ಹಾಗೂ ಕೋಲ್ಕತ್ತಾ ನೈಟ್​ ರೈಡರ್ಸ್​ ತಂಡ ನಿನ್ನೆ ಪ್ರಯಾಣ ಬೆಳೆಸಿದ್ದವು. ಸೆಪ್ಟೆಂಬರ್​​ 19ರಿಂದ ಇಂಡಿಯನ್​​ ಪ್ರೀಮಿಯರ್​ ಲೀಗ್​​ ಟೂರ್ನಿ ಆರಂಭಗೊಳ್ಳಲಿದ್ದು, ಮೊದಲ ಪಂದ್ಯದಲ್ಲಿ ಸಿಎಸ್​ಕೆ ಹಾಗೂ ಮುಂಬೈ ಇಂಡಿಯನ್ಸ್​ ಮುಖಾಮುಖಿಯಾಗಲಿವೆ. ನವೆಂಬರ್​ 10ರಂದು ಫೈನಲ್​ ಪಂದ್ಯ ನಡೆಯಲಿದೆ.

CSK team
ಸಿಎಸ್​ಕೆ ಪ್ಲೇಯರ್​ ಜಡೇಜಾ
Last Updated : Aug 21, 2020, 3:15 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.