ETV Bharat / sports

87 ವರ್ಷಗಳ ಇದೇ ಮೊದಲ ಬಾರಿಗೆ ರಣಜಿ ಟ್ರೋಫಿ ರದ್ದು

author img

By

Published : Jan 30, 2021, 12:14 PM IST

ಬಿಸಿಸಿಐ ಕಾರ್ಯದರ್ಶಿ ಜಯ್​ ಶಾ ಎಲ್ಲಾ ಕ್ರಿಕೆಟ್ ಆಸೋಸಿಯೇಷನ್​ಗಳಿಗೆ ಈ ಕುರಿತು ಪತ್ರ ಬರೆದಿದ್ದಾರೆ. ಕೊರೊನಾ ವೈರಸ್​ ಸಾಂಕ್ರಾಮಿಕ ಗಮನದಲ್ಲಿಟ್ಟುಕೊಂಡು ಈ ನಿರ್ಧಾರ ತೆಗೆದುಕೊಂಡಿರುವುದಾಗಿ ಅವರು ಪತ್ರದಲ್ಲಿ ತಿಳಿಸಿದ್ದು, ಎಲ್ಲ ರಾಜ್ಯ ಕ್ರಿಕೆಟ್ ಸಂಸ್ಥೆಗಳಿಗೆ ಫೀಡ್​ಬ್ಯಾಕ್​ ನೀಡಲು ಮನವಿ ಮಾಡಿದ್ದಾರೆ.

87 ವರ್ಷಗಳ ಇದೇ ಮೊದಲ ಬಾರಿಗೆ ರಣಜಿ ಟ್ರೋಫಿ ರದ್ದು
87 ವರ್ಷಗಳ ಇದೇ ಮೊದಲ ಬಾರಿಗೆ ರಣಜಿ ಟ್ರೋಫಿ ರದ್ದು

ಮುಂಬೈ: ಸಯ್ಯದ್ ಮುಷ್ತಾಕ್ ಅಲಿ ಟಿ20 ಟೂರ್ನಮೆಂಟ್​ ಅನ್ನು ಯಶಸ್ವಿಯಾಗಿ ಆಯೋಜಿಸಿರುವ ಬಿಸಿಸಿಐ , ಈ ಋತುವಿನಲ್ಲಿ 50 ಓವರ್​ಗಳ ವಿಜಯ್ ಹಜಾರೆ, ಸೀನಿಯರ್​ ವುಮೆನ್ಸ್​ ಏಕದಿನ ಪಂದ್ಯ ಮತ್ತು ಅಂಡರ್​ 19 ವಿಭಾಗಕ್ಕೆ ವೀನೂ ಮಂಕಡ್ ಟ್ರೋಫಿಯನ್ನು ಆಯೋಜನೆ ಮಾಡುಲು ಒಪ್ಪಿದೆ. ಆದರೆ, 87 ವರ್ಷಗಳ ನಂತರ ಇದೇ ಮೊದಲ ಬಾರಿಗೆ ರಣಜಿ ಟ್ರೋಫಿ ರದ್ದು ಮಾಡಲಾಗಿದೆ.

ಬಿಸಿಸಿಐ ಕಾರ್ಯದರ್ಶಿ ಜಯ್​ ಶಾ ಎಲ್ಲಾ ಕ್ರಿಕೆಟ್ ಆಸೋಸಿಯೇಷನ್​ಗಳಿಗೆ ಈ ಕುರಿತು ಪತ್ರ ಬರೆದಿದ್ದಾರೆ. ಕೊರೊನಾ ವೈರಸ್​ ಸಾಂಕ್ರಾಮಿಕ ಗಮನದಲ್ಲಿಟ್ಟುಕೊಂಡು ಈ ನಿರ್ಧಾರ ತೆಗೆದುಕೊಂಡಿರುವುದಾಗಿ ಅವರು ಪತ್ರದಲ್ಲಿ ತಿಳಿಸಿದ್ದು, ಎಲ್ಲ ರಾಜ್ಯ ಕ್ರಿಕೆಟ್ ಸಂಸ್ಥೆಗಳಿಗೆ ಫೀಡ್​ಬ್ಯಾಕ್​ ನೀಡಲು ಮನವಿ ಮಾಡಿದ್ದಾರೆ.

ಈ ಸಾಂಕ್ರಾಮಿಕ ಪ್ರತಿಯೊಬ್ಬರನ್ನು ಪರೀಕ್ಷಿಸಿದೆ. ಅದರಿಂದ ತೊಂದರೆಗೊಳಗಾಗದೇ ಇರುವವರು ಯಾರೂ ಇಲ್ಲ. ಇಂತಹ ಕಷ್ಟದ ಸಂದರ್ಭದಲ್ಲಿ ನಿಮ್ಮ ಸಹಕಾರದಿಂದ ಈಗಾಗಲೇ ಪುರುಷರ ದೇಶಿಯ ಮತ್ತು ಅಂತಾರಾಷ್ಟ್ರೀಯ ಕ್ರಿಕೆಟ್​ ಅನ್ನು ಪುನಾರಂಭಿಸಲು ನಮಗೆ ​ಸಾಧ್ಯವಾಗಿದೆ.

" ನಿಮಗೆ ತಿಳಿದಿರುವಂತೆ, ನಾವು ಈಗಾಗಲೆ ಸಾಕಷ್ಟು ಸಮಯ ಕಳೆದುಕೊಂಡಿದ್ದೇವೆ ಮತ್ತು ಇದರ ಪರಿಣಾಮವಾಗಿ, ಟೂರ್ನಿಗಳನ್ನು ಸುರಕ್ಷಿತವಾಗಿ ಅಗತ್ಯವಾದ ಮುನ್ನೆಚ್ಚರಿಕೆಯಿಂದ ಕ್ರಿಕೆಟ್ ಕ್ಯಾಲೆಂಡರ್ ಯೋಜಿಸುವುದು ನಮಗೆ ಕಷ್ಟಕರವಾಗಿದೆ. ಜೊತೆಗೆ ಮಹಿಳಾ ಕ್ರಿಕೆಟ್​ಗೆ ಸ್ಥಳಾವಕಾಶ ಮಾಡಿಕೊಡುವ ಉದ್ದೇಶ ನಮಗಿದ್ದು, ಪುರುಷರ ವಿಜಯ್ ಹಜಾರೆ ಟೂರ್ನಿಯ ಜೊತೆಗೆ ಈ ಋತುವಿನಲ್ಲಿ ಮಹಿಳೆಯರ ಏಕದಿನ ಟೂರ್ನಿ ನಂತರ ಅಂಡರ್ 19 ವಿಭಾಗಕ್ಕೆ ವೀನೂ ಮಂಡಲ್​​ ಟೂರ್ನಿಯನ್ನು ಆಯೋಜಿಸಲು ತೀರ್ಮಾನಿಸಿದ್ದೇವೆ. ಹಾಗಾಗಿ ಈ ಕುರಿತು ನಿಮ್ಮ ಅಭಿಪ್ರಾಯಗಳನ್ನು ತಿಳಿಸಿ" ಎಂದು ಜಯ್ ಶಾ ತಿಳಿಸಿದ್ದಾರೆ.

ಇನ್ನು ಪತ್ರದಲ್ಲಿ ಇಷ್ಟು ಟೂರ್ನಿಗಳ ಬಗ್ಗೆ ಮಾಹಿತಿ ನೀಡಿರುವ ಅವರು ರಣಜಿ ಟೂರ್ನಿಯ ಬಗ್ಗೆ ಯಾವುದೆ ಮಾಹಿತಿ ನೀಡಿಲ್ಲ. ಇವು ಮುಗಿಯುತ್ತಿದ್ದಂತೆ ಐಪಿಎಲ್ ನಂತರ ಟಿ-20 ವಿಶ್ವಕಪ್​ ಇರುವುದರಿಂದ ರಣಜಿ ಟೂರ್ನಿ ಆಯೋಜನೆ ಬಗ್ಗೆ ಬಿಸಿಸಿಐ ಚಿಂತಿಸಿಲ್ಲ ಎಂಬುದು ಮೇಲ್ನೋಟಕ್ಕೆ ಸ್ಪಷ್ಟವಾಗಿದೆ. ಕಳೆದ 87 ವರ್ಷಗಳಲ್ಲಿ ಪ್ರಥಮ ದರ್ಜೆ ಟೂರ್ನಿಯಾದ ರಣಜಿ ಟ್ರೋಫಿ ಮೊದಲ ಬಾರಿಗೆ ರದ್ದಾದಂತಾಗುತ್ತದೆ.

ಮುಂಬೈ: ಸಯ್ಯದ್ ಮುಷ್ತಾಕ್ ಅಲಿ ಟಿ20 ಟೂರ್ನಮೆಂಟ್​ ಅನ್ನು ಯಶಸ್ವಿಯಾಗಿ ಆಯೋಜಿಸಿರುವ ಬಿಸಿಸಿಐ , ಈ ಋತುವಿನಲ್ಲಿ 50 ಓವರ್​ಗಳ ವಿಜಯ್ ಹಜಾರೆ, ಸೀನಿಯರ್​ ವುಮೆನ್ಸ್​ ಏಕದಿನ ಪಂದ್ಯ ಮತ್ತು ಅಂಡರ್​ 19 ವಿಭಾಗಕ್ಕೆ ವೀನೂ ಮಂಕಡ್ ಟ್ರೋಫಿಯನ್ನು ಆಯೋಜನೆ ಮಾಡುಲು ಒಪ್ಪಿದೆ. ಆದರೆ, 87 ವರ್ಷಗಳ ನಂತರ ಇದೇ ಮೊದಲ ಬಾರಿಗೆ ರಣಜಿ ಟ್ರೋಫಿ ರದ್ದು ಮಾಡಲಾಗಿದೆ.

ಬಿಸಿಸಿಐ ಕಾರ್ಯದರ್ಶಿ ಜಯ್​ ಶಾ ಎಲ್ಲಾ ಕ್ರಿಕೆಟ್ ಆಸೋಸಿಯೇಷನ್​ಗಳಿಗೆ ಈ ಕುರಿತು ಪತ್ರ ಬರೆದಿದ್ದಾರೆ. ಕೊರೊನಾ ವೈರಸ್​ ಸಾಂಕ್ರಾಮಿಕ ಗಮನದಲ್ಲಿಟ್ಟುಕೊಂಡು ಈ ನಿರ್ಧಾರ ತೆಗೆದುಕೊಂಡಿರುವುದಾಗಿ ಅವರು ಪತ್ರದಲ್ಲಿ ತಿಳಿಸಿದ್ದು, ಎಲ್ಲ ರಾಜ್ಯ ಕ್ರಿಕೆಟ್ ಸಂಸ್ಥೆಗಳಿಗೆ ಫೀಡ್​ಬ್ಯಾಕ್​ ನೀಡಲು ಮನವಿ ಮಾಡಿದ್ದಾರೆ.

ಈ ಸಾಂಕ್ರಾಮಿಕ ಪ್ರತಿಯೊಬ್ಬರನ್ನು ಪರೀಕ್ಷಿಸಿದೆ. ಅದರಿಂದ ತೊಂದರೆಗೊಳಗಾಗದೇ ಇರುವವರು ಯಾರೂ ಇಲ್ಲ. ಇಂತಹ ಕಷ್ಟದ ಸಂದರ್ಭದಲ್ಲಿ ನಿಮ್ಮ ಸಹಕಾರದಿಂದ ಈಗಾಗಲೇ ಪುರುಷರ ದೇಶಿಯ ಮತ್ತು ಅಂತಾರಾಷ್ಟ್ರೀಯ ಕ್ರಿಕೆಟ್​ ಅನ್ನು ಪುನಾರಂಭಿಸಲು ನಮಗೆ ​ಸಾಧ್ಯವಾಗಿದೆ.

" ನಿಮಗೆ ತಿಳಿದಿರುವಂತೆ, ನಾವು ಈಗಾಗಲೆ ಸಾಕಷ್ಟು ಸಮಯ ಕಳೆದುಕೊಂಡಿದ್ದೇವೆ ಮತ್ತು ಇದರ ಪರಿಣಾಮವಾಗಿ, ಟೂರ್ನಿಗಳನ್ನು ಸುರಕ್ಷಿತವಾಗಿ ಅಗತ್ಯವಾದ ಮುನ್ನೆಚ್ಚರಿಕೆಯಿಂದ ಕ್ರಿಕೆಟ್ ಕ್ಯಾಲೆಂಡರ್ ಯೋಜಿಸುವುದು ನಮಗೆ ಕಷ್ಟಕರವಾಗಿದೆ. ಜೊತೆಗೆ ಮಹಿಳಾ ಕ್ರಿಕೆಟ್​ಗೆ ಸ್ಥಳಾವಕಾಶ ಮಾಡಿಕೊಡುವ ಉದ್ದೇಶ ನಮಗಿದ್ದು, ಪುರುಷರ ವಿಜಯ್ ಹಜಾರೆ ಟೂರ್ನಿಯ ಜೊತೆಗೆ ಈ ಋತುವಿನಲ್ಲಿ ಮಹಿಳೆಯರ ಏಕದಿನ ಟೂರ್ನಿ ನಂತರ ಅಂಡರ್ 19 ವಿಭಾಗಕ್ಕೆ ವೀನೂ ಮಂಡಲ್​​ ಟೂರ್ನಿಯನ್ನು ಆಯೋಜಿಸಲು ತೀರ್ಮಾನಿಸಿದ್ದೇವೆ. ಹಾಗಾಗಿ ಈ ಕುರಿತು ನಿಮ್ಮ ಅಭಿಪ್ರಾಯಗಳನ್ನು ತಿಳಿಸಿ" ಎಂದು ಜಯ್ ಶಾ ತಿಳಿಸಿದ್ದಾರೆ.

ಇನ್ನು ಪತ್ರದಲ್ಲಿ ಇಷ್ಟು ಟೂರ್ನಿಗಳ ಬಗ್ಗೆ ಮಾಹಿತಿ ನೀಡಿರುವ ಅವರು ರಣಜಿ ಟೂರ್ನಿಯ ಬಗ್ಗೆ ಯಾವುದೆ ಮಾಹಿತಿ ನೀಡಿಲ್ಲ. ಇವು ಮುಗಿಯುತ್ತಿದ್ದಂತೆ ಐಪಿಎಲ್ ನಂತರ ಟಿ-20 ವಿಶ್ವಕಪ್​ ಇರುವುದರಿಂದ ರಣಜಿ ಟೂರ್ನಿ ಆಯೋಜನೆ ಬಗ್ಗೆ ಬಿಸಿಸಿಐ ಚಿಂತಿಸಿಲ್ಲ ಎಂಬುದು ಮೇಲ್ನೋಟಕ್ಕೆ ಸ್ಪಷ್ಟವಾಗಿದೆ. ಕಳೆದ 87 ವರ್ಷಗಳಲ್ಲಿ ಪ್ರಥಮ ದರ್ಜೆ ಟೂರ್ನಿಯಾದ ರಣಜಿ ಟ್ರೋಫಿ ಮೊದಲ ಬಾರಿಗೆ ರದ್ದಾದಂತಾಗುತ್ತದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.