ETV Bharat / sports

ಭಾರತ ತಂಡಕ್ಕೆ ಆಯ್ಕೆಯಾದ ಖುಷಿ.. ವಿಜಯ್ ಹಜಾರೆ ಟ್ರೋಫಿಯ ಪಂದ್ಯದಲ್ಲಿ ತೆವಾಟಿಯಾ ಅಬ್ಬರ..

ಕೋಲ್ಕತಾದಲ್ಲಿ ನಡೆದ ಪಂದ್ಯದಲ್ಲಿ ಟಾಸ್​ ಸೋತು ಮೊದಲು ಬ್ಯಾಟಿಂಗ್ ಮಾಡಿದ ಹರಿಯಾಣ ತಂಡ 50 ಓವರ್​ಗಳಲ್ಲಿ 9 ವಿಕೆಟ್​ ನಷ್ಟಕ್ಕೆ 299 ರನ್​ ಬಾರಿಸಿತ್ತು. ಆರಂಭಿಕ ಬ್ಯಾಟ್ಸ್​ಮನ್​ ಹಿಮಾಂಶು ರಾಣಾ 102 ರನ್​ ಗಳಿಸಿದರೆ, ಅರುಣ್ ಚಪ್ರಾನ 50 ಮತ್ತು ತೆವಾಟಿಯಾ 73 ರನ್​ಗಳಿಸಿದ್ದರು..

author img

By

Published : Feb 21, 2021, 5:16 PM IST

ರಾಹುಲ್ ತೆವಾಟಿಯಾ
ರಾಹುಲ್ ತೆವಾಟಿಯಾ

ನವದೆಹಲಿ : ಐಪಿಎಲ್​ನಲ್ಲಿ ರಾತ್ರೋರಾತ್ರಿ ಹೀರೋ ಆಗಿದ್ದ ಹರಿಯಾಣದ ರಾಹುಲ್ ತೆವಾಟಿಯಾ, ಟೀಂ ಇಂಡಿಯಾಗೆ ಆಯ್ಕೆಯಾದ ಸಂಭ್ರಮದಲ್ಲಿ ಇಂದು ನಡೆದ ಚಂಡೀಗಢ ವಿರುದ್ಧದ ಪಂದ್ಯದಲ್ಲಿ ಸ್ಫೋಟಕ ಅರ್ಧಶತಕ ಸಿಡಿಸಿ ಅಬ್ಬರಿಸಿದ್ದಾರೆ.

ಶನಿವಾರ ಬಿಸಿಸಿಐ ಇಂಗ್ಲೆಂಡ್​ ವಿರುದ್ಧ ಟಿ20 ಸರಣಿಗೆ ಘೋಷಿಸಿದ 19 ಸದಸ್ಯರ ತಂಡದಲ್ಲಿ ರಾಹುಲ್ ತೆವಾಟಿಯಾ ಆಲ್​ರೌಂಡರ್​ ವಿಭಾಗದಲ್ಲಿ ಅವಕಾಶ ಪಡೆದಿದ್ದರು. ಚೊಚ್ಚಲ ಬಾರಿಗೆ ದೇಶ ಪ್ರತಿನಿಧಿಸುವ ಅವಕಾಶ ಗಿಟ್ಟಿಸಿಕೊಂಡಿದ್ದ ಅವರು, ಅದೇ ಖುಷಿಯಲ್ಲಿ ವಿಜಯ ಹಜಾರೆ ಟ್ರೋಫಿಯಲ್ಲಿ ಚಂಡೀಗಢ ವಿರುದ್ಧ ಕೇವಲ 39 ಎಸೆತಗಳಲ್ಲಿ 73 ರನ್​ ಬಾರಿಸಿದ್ದಾರೆ. ಇವರ ಇನ್ನಿಂಗ್ಸ್​ನಲ್ಲಿ 6 ಭರ್ಜರಿ ಸಿಕ್ಸರ್​ ಮತ್ತು 4 ಬೌಂಡರಿ ಒಳಗೊಂಡಿದ್ದವು.

ಕೋಲ್ಕತಾದಲ್ಲಿ ನಡೆದ ಪಂದ್ಯದಲ್ಲಿ ಟಾಸ್​ ಸೋತು ಮೊದಲು ಬ್ಯಾಟಿಂಗ್ ಮಾಡಿದ ಹರಿಯಾಣ ತಂಡ 50 ಓವರ್​ಗಳಲ್ಲಿ 9 ವಿಕೆಟ್​ ನಷ್ಟಕ್ಕೆ 299 ರನ್​ ಬಾರಿಸಿತ್ತು. ಆರಂಭಿಕ ಬ್ಯಾಟ್ಸ್​ಮನ್​ ಹಿಮಾಂಶು ರಾಣಾ 102 ರನ್​ ಗಳಿಸಿದರೆ, ಅರುಣ್ ಚಪ್ರಾನ 50 ಮತ್ತು ತೆವಾಟಿಯಾ 73 ರನ್​ಗಳಿಸಿದ್ದರು.

ಇದಕ್ಕುತ್ತರವಾಗಿ ಚಂಡೀಗಢ ತಂಡ 49.3 ಓವರ್​ಗಳಲ್ಲಿ 7 ವಿಕೆಟ್ ಕಳೆದುಕೊಂಡು ಗುರಿ ತಲುಪಿತು. ನಾಯಕ ಮನನ್ ವೊಹ್ರಾ 117, ಅಂಕಿತ್ ಕೌಶಿಕ್ ಕೇವಲ 66 ಎಸೆತಗಳಲ್ಲಿ 4 ಬೌಂಡರಿ ಮತ್ತು 3 ಸಿಕ್ಸರ್​ ಸಹಿತ ಅಜೇಯ 78 ರನ್​ಗಳಿಸಿ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು.

ಇದನ್ನು ಓದಿ:ಕೊಹ್ಲಿ ಎದುರು ಆಡಿದ್ದೆ, ಇದೀಗ ಅವರ ಜೊತೆ ಡ್ರೆಸ್ಸಿಂಗ್ ರೂಮ್​ ಹಂಚಿಕೊಳ್ಳುವ ಅದೃಷ್ಟ ಸಿಕ್ಕಿದೆ: ತೆವಾಟಿಯಾ

ನವದೆಹಲಿ : ಐಪಿಎಲ್​ನಲ್ಲಿ ರಾತ್ರೋರಾತ್ರಿ ಹೀರೋ ಆಗಿದ್ದ ಹರಿಯಾಣದ ರಾಹುಲ್ ತೆವಾಟಿಯಾ, ಟೀಂ ಇಂಡಿಯಾಗೆ ಆಯ್ಕೆಯಾದ ಸಂಭ್ರಮದಲ್ಲಿ ಇಂದು ನಡೆದ ಚಂಡೀಗಢ ವಿರುದ್ಧದ ಪಂದ್ಯದಲ್ಲಿ ಸ್ಫೋಟಕ ಅರ್ಧಶತಕ ಸಿಡಿಸಿ ಅಬ್ಬರಿಸಿದ್ದಾರೆ.

ಶನಿವಾರ ಬಿಸಿಸಿಐ ಇಂಗ್ಲೆಂಡ್​ ವಿರುದ್ಧ ಟಿ20 ಸರಣಿಗೆ ಘೋಷಿಸಿದ 19 ಸದಸ್ಯರ ತಂಡದಲ್ಲಿ ರಾಹುಲ್ ತೆವಾಟಿಯಾ ಆಲ್​ರೌಂಡರ್​ ವಿಭಾಗದಲ್ಲಿ ಅವಕಾಶ ಪಡೆದಿದ್ದರು. ಚೊಚ್ಚಲ ಬಾರಿಗೆ ದೇಶ ಪ್ರತಿನಿಧಿಸುವ ಅವಕಾಶ ಗಿಟ್ಟಿಸಿಕೊಂಡಿದ್ದ ಅವರು, ಅದೇ ಖುಷಿಯಲ್ಲಿ ವಿಜಯ ಹಜಾರೆ ಟ್ರೋಫಿಯಲ್ಲಿ ಚಂಡೀಗಢ ವಿರುದ್ಧ ಕೇವಲ 39 ಎಸೆತಗಳಲ್ಲಿ 73 ರನ್​ ಬಾರಿಸಿದ್ದಾರೆ. ಇವರ ಇನ್ನಿಂಗ್ಸ್​ನಲ್ಲಿ 6 ಭರ್ಜರಿ ಸಿಕ್ಸರ್​ ಮತ್ತು 4 ಬೌಂಡರಿ ಒಳಗೊಂಡಿದ್ದವು.

ಕೋಲ್ಕತಾದಲ್ಲಿ ನಡೆದ ಪಂದ್ಯದಲ್ಲಿ ಟಾಸ್​ ಸೋತು ಮೊದಲು ಬ್ಯಾಟಿಂಗ್ ಮಾಡಿದ ಹರಿಯಾಣ ತಂಡ 50 ಓವರ್​ಗಳಲ್ಲಿ 9 ವಿಕೆಟ್​ ನಷ್ಟಕ್ಕೆ 299 ರನ್​ ಬಾರಿಸಿತ್ತು. ಆರಂಭಿಕ ಬ್ಯಾಟ್ಸ್​ಮನ್​ ಹಿಮಾಂಶು ರಾಣಾ 102 ರನ್​ ಗಳಿಸಿದರೆ, ಅರುಣ್ ಚಪ್ರಾನ 50 ಮತ್ತು ತೆವಾಟಿಯಾ 73 ರನ್​ಗಳಿಸಿದ್ದರು.

ಇದಕ್ಕುತ್ತರವಾಗಿ ಚಂಡೀಗಢ ತಂಡ 49.3 ಓವರ್​ಗಳಲ್ಲಿ 7 ವಿಕೆಟ್ ಕಳೆದುಕೊಂಡು ಗುರಿ ತಲುಪಿತು. ನಾಯಕ ಮನನ್ ವೊಹ್ರಾ 117, ಅಂಕಿತ್ ಕೌಶಿಕ್ ಕೇವಲ 66 ಎಸೆತಗಳಲ್ಲಿ 4 ಬೌಂಡರಿ ಮತ್ತು 3 ಸಿಕ್ಸರ್​ ಸಹಿತ ಅಜೇಯ 78 ರನ್​ಗಳಿಸಿ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು.

ಇದನ್ನು ಓದಿ:ಕೊಹ್ಲಿ ಎದುರು ಆಡಿದ್ದೆ, ಇದೀಗ ಅವರ ಜೊತೆ ಡ್ರೆಸ್ಸಿಂಗ್ ರೂಮ್​ ಹಂಚಿಕೊಳ್ಳುವ ಅದೃಷ್ಟ ಸಿಕ್ಕಿದೆ: ತೆವಾಟಿಯಾ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.