ETV Bharat / sports

ರಾಹುಲ್​ ಆರಂಭಿಕ ಸ್ಥಾನದಿಂದ ಕೆಳಗಿಳಿಸಿದ್ದು ಸರಿಯಲ್ಲ: ಗಂಭೀರ್​ ಕಿಡಿ ಕಿಡಿ

author img

By

Published : Feb 5, 2020, 12:50 PM IST

ನ್ಯೂಜಿಲ್ಯಾಂಡ್​ ವಿರುದ್ಧ ಟಿ-20 ಸರಣಿಯಲ್ಲಿ ಅತ್ಯುತ್ತಮ ರನ್​ಗಳಿಸಿ ಸರಣಿ ಶ್ರೇಷ್ಠ ಗೌರವಕ್ಕೆ ಪಾತ್ರರಾಗಿರುವ ಕೆಎಲ್​ ರಾಹುಲ್​ರನ್ನು ಏಕದಿನ ಸರಣಿಯಲ್ಲಿ ಮಾತ್ರ ದಿಢೀರ್​ 5ನೇ ಕ್ರಮಾಂಕದಲ್ಲಿ ಆಡಿಸುತ್ತಿರುವುದು ಉತ್ತಮ ನಿರ್ಧಾರವಲ್ಲ ಎಂದು ಕೊಹ್ಲಿ ಹಾಗೂ ತಂಡದ ಆಡಳಿತ ಮಂಡಳಿಯ ನಿರ್ಧಾರವನ್ನು ಗಂಭೀರ್​ ಪ್ರಶ್ನಿಸಿದ್ದಾರೆ.

Gautam Gambhir
ಗೌತಮ್​ ಗಂಭೀರ್

ಹ್ಯಾಮಿಲ್ಟನ್​: ಸೀಮಿತ ಓವರ್​ಗಳಲ್ಲಿ ಅದ್ಭುತ ಫಾರ್ಮ್​ನಲ್ಲಿರುವ ರಾಹುಲ್​ ಅವರನ್ನು ಆರಂಭಿಕ ಸ್ಥಾನದಿಂದ ಕೆಳಗಿಳಿಸಿ 5ನೇ ಕ್ರಮಾಂಕದಲ್ಲಿ ಆಡಿಸಿರುವುದಕ್ಕೆ ಭಾರತ ತಂಡದ ಮಾಜಿ ಕ್ರಿಕೆಟಿಗ ಗೌತಮ್​ ಗಂಭೀರ್​ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ನ್ಯೂಜಿಲ್ಯಾಂಡ್​ ವಿರುದ್ಧ ಟಿ-20 ಸರಣಿಯಲ್ಲಿ ಅತ್ಯುತ್ತಮ ರನ್​ಗಳಿಸಿ ಸರಣಿ ಶ್ರೇಷ್ಠ ಗೌರವಕ್ಕೆ ಪಾತ್ರರಾಗಿರುವ ಕೆಎಲ್​ ರಾಹುಲ್​ ಏಕದಿನ ಸರಣಿಯಲ್ಲಿ ಮಾತ್ರ ದಿಢೀರ್​ 5ನೇ ಕ್ರಮಾಂಕದಲ್ಲಿ ಆಡಿಸುತ್ತಿರುವುದು ಉತ್ತಮ ನಿರ್ಧಾರವಲ್ಲ ಎಂದು ಕೊಹ್ಲಿ ಹಾಗೂ ತಂಡದ ಆಡಳಿತ ಮಂಡಳಿಯ ನಿರ್ಧಾರವನ್ನು ಪ್ರಶ್ನಿಸಿದ್ದಾರೆ.

"ಭಾರತ ತಂಡದ ಪರ ರಾಹುಲ್​ ಜೊತೆ ಮಯಾಂಕ್​ ಇನ್ನಿಂಗ್ಸ್​ ಆರಂಭಿಸಿ ರಿಷಭ್​ ಪಂತ್ ವಿಕೆಟ್ ಕೀಪಿಂಗ್​ ಜೊತೆಗೆ ​ ಕೆಳ ಕ್ರಮಾಂಕದಲ್ಲಿ ಬ್ಯಾಟಿಂಗ್ ನಡೆಸಲು ಅವಕಾಶ ನೀಡಬೇಕಿತ್ತು. ರಾಹುಲ್​ ಸಹ ವಿಕೆಟ್​ ಕೀಪಿಂಗ್​ನಲ್ಲಿ ಮೌಲ್ಯವುಳ್ಳ ಆಟಗಾರರಾಗಿದ್ದಾರೆ. ಆದರೆ, ಅದು ಟಿ-20ಯಲ್ಲಿ ಯಶಸ್ವಿಯಾಗುತ್ತದೆ. ಆದರೆ 50 ಓವರ್​ಗಳ ಕ್ರಿಕೆಟ್​ನಲ್ಲಿ ಅವರಿಂದ ಎರಡು ಜವಾಬ್ದಾರಿಯನ್ನು ನಿರೀಕ್ಷಿಸುವುದು ಉತ್ತಮ ನಿರ್ಣಯವಾಗದು" ಎಂದು ಖಾಸಗಿ ಪತ್ರಿಕೆಯೊಂದಕ್ಕೆ ಬರೆದ ಅಂಕಣದಲ್ಲಿ ಗಂಭೀರ್​ ಅಭಿಪ್ರಾಯಪಟ್ಟಿದ್ದಾರೆ.

ಇನ್ನು ಗಾಯಗೊಂಡಿರುವ ಅನುಭವಿ ಜಾಗಕ್ಕೆ ಯುವ ಆಟಗಾರ ಪೃಥ್ವಿ ಶಾ ಅವರನ್ನು ಆಯ್ಕೆ ಮಾಡಿರುವುದು ಆಯ್ಕೆ ಸಮಿತಿಯ ಧೈರ್ಯದ ನಿರ್ಧಾರ. ಇಂತಹ ತಾತ್ಕಾಲಿಕ ನಿರ್ಧಾರ ಯಶಸ್ವಿಯಾಗಲು ಕೆಲವು ಬಾರಿ ಅದೃಷ್ಟವೂ ಬೇಕಾಗುತ್ತದೆ. ಎ ತಂಡದಲ್ಲಿ ಪೃಥ್ವಿ ನೀಡಿದ ಪ್ರದರ್ಶನದ ಮೇಲೆ ಅವರನ್ನು ಭಾರತ ತಂಡಕ್ಕೆ ಆಯ್ಕೆ ಮಾಡಲಾಗಿದೆ. ಆದರೆ, ಇಲ್ಲಿ ಪೃಥ್ವಿ ಭಾರತ ಎ ತಂಡಕ್ಕೆ ನೀಡಿದ ಪ್ರದರ್ಶನವನ್ನು ಮುಂದುವರಿಸಿದರೆ ಮಾತ್ರ ಅತಿಥೇಯರ ಸವಾಲನ್ನು ಸುಲಭವಾಗಿ ಸ್ವೀಕರಿಸಲು ಸಾಧ್ಯ ಎಂದಿದ್ದಾರೆ.

ಗಂಭೀರ್​ ಅಭಿಪ್ರಾಯವನ್ನು ಪುನರುಚ್ಛರಿಸಿರುವ ಮಾಜಿ ವೇಗಿ ಜಹೀರ್​ ಖಾನ್​ ಕೂಡ ಏಕದಿನ ಕ್ರಿಕೆಟ್​ನಲ್ಲಿ ರಾಹುಲ್ ಅವ​ರನ್ನು ಮಧ್ಯಮ ಕ್ರಮಾಂಕದಲ್ಲಿ ಬ್ಯಾಟಿಂಗ್​ ಮಾಡುವುದನ್ನು ನೋಡುವುದನ್ನು ಬಯಸುವುದಿಲ್ಲ ಎಂದಿದ್ದಾರೆ. ಅವರು ಆರಂಭಿಕನಾಗಿ ಆಡಬೇಕು, ಅಲ್ಲದೇ 50 ಓವರ್​ಗಳ ಪಂದ್ಯಗಳಲ್ಲಿ ವಿಕೆಟ್​ ಕೀಪಿಂಗ್​ ಮಾಡುವುದು ಅವರಿಗೆ ಕಷ್ಟದ ಕೆಲಸವಾಗಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ರಾಹುಲ್​ ಕಿವೀಸ್​ ವಿರುದ್ಧ 5 ಟಿ-20 ಪಂದ್ಯಗಳಿಂದ ಆರಂಭಿಕನಾಗಿ 224 ರನ್​ಗಳಿಸಿ ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದಿದ್ದರು. ಮೊದಲ ಏಕದಿ ಪಂದ್ಯದಲ್ಲಿ 64 ಎಸೆತಗಳಲ್ಲಿ 88 ರನ್​ಗಳಿಸಿ ಮಿಂಚಿದ್ದಾರೆ.

ಹ್ಯಾಮಿಲ್ಟನ್​: ಸೀಮಿತ ಓವರ್​ಗಳಲ್ಲಿ ಅದ್ಭುತ ಫಾರ್ಮ್​ನಲ್ಲಿರುವ ರಾಹುಲ್​ ಅವರನ್ನು ಆರಂಭಿಕ ಸ್ಥಾನದಿಂದ ಕೆಳಗಿಳಿಸಿ 5ನೇ ಕ್ರಮಾಂಕದಲ್ಲಿ ಆಡಿಸಿರುವುದಕ್ಕೆ ಭಾರತ ತಂಡದ ಮಾಜಿ ಕ್ರಿಕೆಟಿಗ ಗೌತಮ್​ ಗಂಭೀರ್​ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ನ್ಯೂಜಿಲ್ಯಾಂಡ್​ ವಿರುದ್ಧ ಟಿ-20 ಸರಣಿಯಲ್ಲಿ ಅತ್ಯುತ್ತಮ ರನ್​ಗಳಿಸಿ ಸರಣಿ ಶ್ರೇಷ್ಠ ಗೌರವಕ್ಕೆ ಪಾತ್ರರಾಗಿರುವ ಕೆಎಲ್​ ರಾಹುಲ್​ ಏಕದಿನ ಸರಣಿಯಲ್ಲಿ ಮಾತ್ರ ದಿಢೀರ್​ 5ನೇ ಕ್ರಮಾಂಕದಲ್ಲಿ ಆಡಿಸುತ್ತಿರುವುದು ಉತ್ತಮ ನಿರ್ಧಾರವಲ್ಲ ಎಂದು ಕೊಹ್ಲಿ ಹಾಗೂ ತಂಡದ ಆಡಳಿತ ಮಂಡಳಿಯ ನಿರ್ಧಾರವನ್ನು ಪ್ರಶ್ನಿಸಿದ್ದಾರೆ.

"ಭಾರತ ತಂಡದ ಪರ ರಾಹುಲ್​ ಜೊತೆ ಮಯಾಂಕ್​ ಇನ್ನಿಂಗ್ಸ್​ ಆರಂಭಿಸಿ ರಿಷಭ್​ ಪಂತ್ ವಿಕೆಟ್ ಕೀಪಿಂಗ್​ ಜೊತೆಗೆ ​ ಕೆಳ ಕ್ರಮಾಂಕದಲ್ಲಿ ಬ್ಯಾಟಿಂಗ್ ನಡೆಸಲು ಅವಕಾಶ ನೀಡಬೇಕಿತ್ತು. ರಾಹುಲ್​ ಸಹ ವಿಕೆಟ್​ ಕೀಪಿಂಗ್​ನಲ್ಲಿ ಮೌಲ್ಯವುಳ್ಳ ಆಟಗಾರರಾಗಿದ್ದಾರೆ. ಆದರೆ, ಅದು ಟಿ-20ಯಲ್ಲಿ ಯಶಸ್ವಿಯಾಗುತ್ತದೆ. ಆದರೆ 50 ಓವರ್​ಗಳ ಕ್ರಿಕೆಟ್​ನಲ್ಲಿ ಅವರಿಂದ ಎರಡು ಜವಾಬ್ದಾರಿಯನ್ನು ನಿರೀಕ್ಷಿಸುವುದು ಉತ್ತಮ ನಿರ್ಣಯವಾಗದು" ಎಂದು ಖಾಸಗಿ ಪತ್ರಿಕೆಯೊಂದಕ್ಕೆ ಬರೆದ ಅಂಕಣದಲ್ಲಿ ಗಂಭೀರ್​ ಅಭಿಪ್ರಾಯಪಟ್ಟಿದ್ದಾರೆ.

ಇನ್ನು ಗಾಯಗೊಂಡಿರುವ ಅನುಭವಿ ಜಾಗಕ್ಕೆ ಯುವ ಆಟಗಾರ ಪೃಥ್ವಿ ಶಾ ಅವರನ್ನು ಆಯ್ಕೆ ಮಾಡಿರುವುದು ಆಯ್ಕೆ ಸಮಿತಿಯ ಧೈರ್ಯದ ನಿರ್ಧಾರ. ಇಂತಹ ತಾತ್ಕಾಲಿಕ ನಿರ್ಧಾರ ಯಶಸ್ವಿಯಾಗಲು ಕೆಲವು ಬಾರಿ ಅದೃಷ್ಟವೂ ಬೇಕಾಗುತ್ತದೆ. ಎ ತಂಡದಲ್ಲಿ ಪೃಥ್ವಿ ನೀಡಿದ ಪ್ರದರ್ಶನದ ಮೇಲೆ ಅವರನ್ನು ಭಾರತ ತಂಡಕ್ಕೆ ಆಯ್ಕೆ ಮಾಡಲಾಗಿದೆ. ಆದರೆ, ಇಲ್ಲಿ ಪೃಥ್ವಿ ಭಾರತ ಎ ತಂಡಕ್ಕೆ ನೀಡಿದ ಪ್ರದರ್ಶನವನ್ನು ಮುಂದುವರಿಸಿದರೆ ಮಾತ್ರ ಅತಿಥೇಯರ ಸವಾಲನ್ನು ಸುಲಭವಾಗಿ ಸ್ವೀಕರಿಸಲು ಸಾಧ್ಯ ಎಂದಿದ್ದಾರೆ.

ಗಂಭೀರ್​ ಅಭಿಪ್ರಾಯವನ್ನು ಪುನರುಚ್ಛರಿಸಿರುವ ಮಾಜಿ ವೇಗಿ ಜಹೀರ್​ ಖಾನ್​ ಕೂಡ ಏಕದಿನ ಕ್ರಿಕೆಟ್​ನಲ್ಲಿ ರಾಹುಲ್ ಅವ​ರನ್ನು ಮಧ್ಯಮ ಕ್ರಮಾಂಕದಲ್ಲಿ ಬ್ಯಾಟಿಂಗ್​ ಮಾಡುವುದನ್ನು ನೋಡುವುದನ್ನು ಬಯಸುವುದಿಲ್ಲ ಎಂದಿದ್ದಾರೆ. ಅವರು ಆರಂಭಿಕನಾಗಿ ಆಡಬೇಕು, ಅಲ್ಲದೇ 50 ಓವರ್​ಗಳ ಪಂದ್ಯಗಳಲ್ಲಿ ವಿಕೆಟ್​ ಕೀಪಿಂಗ್​ ಮಾಡುವುದು ಅವರಿಗೆ ಕಷ್ಟದ ಕೆಲಸವಾಗಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ರಾಹುಲ್​ ಕಿವೀಸ್​ ವಿರುದ್ಧ 5 ಟಿ-20 ಪಂದ್ಯಗಳಿಂದ ಆರಂಭಿಕನಾಗಿ 224 ರನ್​ಗಳಿಸಿ ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದಿದ್ದರು. ಮೊದಲ ಏಕದಿ ಪಂದ್ಯದಲ್ಲಿ 64 ಎಸೆತಗಳಲ್ಲಿ 88 ರನ್​ಗಳಿಸಿ ಮಿಂಚಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.