ETV Bharat / sports

ಒತ್ತಡದಲ್ಲಿದ್ದಾಗ ಈ ಬೌಲರ್​ಗೆ ಚೆಂಡು ನೀಡಲು ಯಾವುದೇ ಭಯವಿಲ್ಲ: ರಾಹುಲ್

author img

By

Published : Apr 13, 2021, 7:00 PM IST

ಪಂದ್ಯ ಮುಗಿದ ನಂತರ ಮಾತನಾಡಿದ ಕೆ.ಎಲ್.ರಾಹುಲ್, ತಾವು ತಂಡಕ್ಕೆ ವಿಕೆಟ್ ಅಗತ್ಯವಿದ್ದಾಗ ಅಥವಾ ಒತ್ತಡದ ಸಂದರ್ಭದಲ್ಲಿ ಯುವ ಬೌಲರ್ ಅರ್ಷ್‌ದೀಪ್ ಸಿಂಗ್​ಗೆ ಚೆಂಡು ನೀಡಲು ಬಯಸುವುದಾಗಿ ತಿಳಿಸಿದ್ದಾರೆ.

ಕೆಎಲ್ ರಾಹುಲ್
ಕೆಎಲ್ ರಾಹುಲ್

ಮುಂಬೈ: ಕೊನೆಯ ಓವರ್​ನಲ್ಲಿ 13 ರನ್​ ಬೇಕಿದ್ದಾಗ ಯಶಸ್ವಿಯಾಗಿ ಎದುರಾಳಿಯನ್ನು ನಿಯಂತ್ರಿಸಿದ ಯುವ ಬೌಲರ್​ ಅರ್ಷ್​ದೀಪ್​ ಸಿಂಗ್​ ಬಗ್ಗೆ ನಾಯಕ ಕೆ.ಎಲ್.ರಾಹುಲ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಐಪಿಎಲ್​ನ ನಾಲ್ಕನೇ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ಪಂಜಾಬ್ ಕಿಂಗ್ಸ್ 221 ರನ್​ ಗಳಿಸಿ ಸುಲಭ ಜಯದ ನಿರೀಕ್ಷೆಯಲ್ಲಿತ್ತು. ಆದರೆ ರಾಜಸ್ಥಾನ್ ರಾಯಲ್ಸ್ ನಾಯಕ ಸಂಜು ಸಾಮ್ಸನ್ ಅವರ​ ಅದ್ಭುತ ಶತಕ ಪಂಜಾಬ್​ ನಿರೀಕ್ಷೆಯನ್ನು ಹುಸಿಗೊಳಿಸಿದ್ದಲ್ಲದೆ, ಪಂದ್ಯವನ್ನು ಕಸಿದುಕೊಳ್ಳುವ ಮುನ್ಸೂಚನೆ ನೀಡಿತ್ತು. ಕೊನೆಯ ಓವರ್​ನಲ್ಲಿ ಕೇವಲ 13 ರನ್​ಗಳ ಅಗತ್ಯವಿತ್ತು. ಸಾಮ್ಸನ್​ ಕ್ರೀಸ್​ನಲ್ಲಿದ್ದರಿಂದ ಪಂದ್ಯ ರಾಜಸ್ಥಾನ ಪಾಲಾಗಲಿದೆ ಎಂದೇ ಭಾವಿಸಲಾಗಿತ್ತು. ಆದರೆ ಅರ್ಷದೀಪ್​ ಕೇವಲ 8 ರನ್​ ಬಿಟ್ಟುಕೊಟ್ಟು ಪಂಜಾಬ್ ಕಿಂಗ್ಸ್​ಗೆ 4 ರನ್​ಗಳ ರೋಚಕ ಜಯ ತಂದುಕೊಟ್ಟರು.

Some way to start a campaign 🦁
So proud of these guys!@PunjabKingsIPL pic.twitter.com/R5s0slbvLa

— K L Rahul (@klrahul11) April 12, 2021

ಪಂದ್ಯ ಮುಗಿದ ನಂತರ ಮಾತನಾಡಿದ ಕೆ.ಎಲ್.ರಾಹುಲ್ ತಾವು ತಂಡಕ್ಕೆ ವಿಕೆಟ್ ಅಗತ್ಯವಿದ್ದಾಗ ಅಥವಾ ಒತ್ತಡದ ಸಂದರ್ಭದಲ್ಲಿ ಯುವ ಬೌಲರ್ ಅರ್ಷ್‌ದೀಪ್ ಸಿಂಗ್​ಗೆ ಚೆಂಡು ನೀಡಲು ಬಯಸುವುದಾಗಿ ತಿಳಿಸಿದ್ದಾರೆ.

"ನಿರ್ಣಾಯಕ ಓವರ್ ಮಾಡಬೇಕಾದಂತಹ ಸಂದರ್ಭದಲ್ಲಿ ನಾನು ಅರ್ಷ್‌ದೀಪ್ ಸಿಂಗ್​ಗೆ ಚೆಂಡನ್ನು ನೀಡುತ್ತೇನೆ. ಆತ ಕೂಡ ಒತ್ತಡದ ಓವರ್​ಗಳನ್ನು ಎಸೆಯಲು ಆಲೋಚಿಸುವುದಿಲ್ಲ. ಅವರೂ ಕೂಡ ಇಂತಹ ಓವರ್​ ಬೌಲಿಂಗ್ ಮಾಡಲು ಇಷ್ಟಪಡುತ್ತಾರೆ" ಎಂದು ರಾಹುಲ್ 22 ವರ್ಷದ ಬೌಲರ್​ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಇದನ್ನು ಓದಿ:ಕೊನೆಯ ಓವರ್​ನಲ್ಲಿ ಸಿಂಗಲ್​​ ರನ್​​ ನಿರಾಕರಿಸಿದ ಸಾಮ್ಸನ್​ ಪರ ನಿಂತ ಸಂಗಕ್ಕರ ಹೇಳಿದ್ದೇನು?

ಮುಂಬೈ: ಕೊನೆಯ ಓವರ್​ನಲ್ಲಿ 13 ರನ್​ ಬೇಕಿದ್ದಾಗ ಯಶಸ್ವಿಯಾಗಿ ಎದುರಾಳಿಯನ್ನು ನಿಯಂತ್ರಿಸಿದ ಯುವ ಬೌಲರ್​ ಅರ್ಷ್​ದೀಪ್​ ಸಿಂಗ್​ ಬಗ್ಗೆ ನಾಯಕ ಕೆ.ಎಲ್.ರಾಹುಲ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಐಪಿಎಲ್​ನ ನಾಲ್ಕನೇ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ಪಂಜಾಬ್ ಕಿಂಗ್ಸ್ 221 ರನ್​ ಗಳಿಸಿ ಸುಲಭ ಜಯದ ನಿರೀಕ್ಷೆಯಲ್ಲಿತ್ತು. ಆದರೆ ರಾಜಸ್ಥಾನ್ ರಾಯಲ್ಸ್ ನಾಯಕ ಸಂಜು ಸಾಮ್ಸನ್ ಅವರ​ ಅದ್ಭುತ ಶತಕ ಪಂಜಾಬ್​ ನಿರೀಕ್ಷೆಯನ್ನು ಹುಸಿಗೊಳಿಸಿದ್ದಲ್ಲದೆ, ಪಂದ್ಯವನ್ನು ಕಸಿದುಕೊಳ್ಳುವ ಮುನ್ಸೂಚನೆ ನೀಡಿತ್ತು. ಕೊನೆಯ ಓವರ್​ನಲ್ಲಿ ಕೇವಲ 13 ರನ್​ಗಳ ಅಗತ್ಯವಿತ್ತು. ಸಾಮ್ಸನ್​ ಕ್ರೀಸ್​ನಲ್ಲಿದ್ದರಿಂದ ಪಂದ್ಯ ರಾಜಸ್ಥಾನ ಪಾಲಾಗಲಿದೆ ಎಂದೇ ಭಾವಿಸಲಾಗಿತ್ತು. ಆದರೆ ಅರ್ಷದೀಪ್​ ಕೇವಲ 8 ರನ್​ ಬಿಟ್ಟುಕೊಟ್ಟು ಪಂಜಾಬ್ ಕಿಂಗ್ಸ್​ಗೆ 4 ರನ್​ಗಳ ರೋಚಕ ಜಯ ತಂದುಕೊಟ್ಟರು.

ಪಂದ್ಯ ಮುಗಿದ ನಂತರ ಮಾತನಾಡಿದ ಕೆ.ಎಲ್.ರಾಹುಲ್ ತಾವು ತಂಡಕ್ಕೆ ವಿಕೆಟ್ ಅಗತ್ಯವಿದ್ದಾಗ ಅಥವಾ ಒತ್ತಡದ ಸಂದರ್ಭದಲ್ಲಿ ಯುವ ಬೌಲರ್ ಅರ್ಷ್‌ದೀಪ್ ಸಿಂಗ್​ಗೆ ಚೆಂಡು ನೀಡಲು ಬಯಸುವುದಾಗಿ ತಿಳಿಸಿದ್ದಾರೆ.

"ನಿರ್ಣಾಯಕ ಓವರ್ ಮಾಡಬೇಕಾದಂತಹ ಸಂದರ್ಭದಲ್ಲಿ ನಾನು ಅರ್ಷ್‌ದೀಪ್ ಸಿಂಗ್​ಗೆ ಚೆಂಡನ್ನು ನೀಡುತ್ತೇನೆ. ಆತ ಕೂಡ ಒತ್ತಡದ ಓವರ್​ಗಳನ್ನು ಎಸೆಯಲು ಆಲೋಚಿಸುವುದಿಲ್ಲ. ಅವರೂ ಕೂಡ ಇಂತಹ ಓವರ್​ ಬೌಲಿಂಗ್ ಮಾಡಲು ಇಷ್ಟಪಡುತ್ತಾರೆ" ಎಂದು ರಾಹುಲ್ 22 ವರ್ಷದ ಬೌಲರ್​ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಇದನ್ನು ಓದಿ:ಕೊನೆಯ ಓವರ್​ನಲ್ಲಿ ಸಿಂಗಲ್​​ ರನ್​​ ನಿರಾಕರಿಸಿದ ಸಾಮ್ಸನ್​ ಪರ ನಿಂತ ಸಂಗಕ್ಕರ ಹೇಳಿದ್ದೇನು?

ETV Bharat Logo

Copyright © 2024 Ushodaya Enterprises Pvt. Ltd., All Rights Reserved.