ETV Bharat / sports

ಪಂತ್​ ಅಸಾಧಾರಣ ಪ್ರತಿಭೆ, ವಿದೇಶಿ ಸರಣಿಯಲ್ಲಿ ಆತನಿಗೆ ನಮ್ಮ ಬೆಂಬಲ ಸದಾ ಇರುತ್ತೆ : ರವಿಶಾಸ್ತ್ರಿ

author img

By

Published : Jan 19, 2021, 7:06 PM IST

ಸಿಡ್ನಿ ಪಂದ್ಯದಲ್ಲೂ ಸಾಕಷ್ಟು ಸಮಯ ಬ್ಯಾಟಿಂಗ್ ಮಾಡಿ ಪಂದ್ಯವನ್ನು ಡ್ರಾ ಮಾಡಿಸಲು ನೆರವಾಗಿದ್ದರು. ಇದೀಗ ಈ ಪಂದ್ಯದಲ್ಲಿ ಜಯ ತಂದುಕೊಟ್ಟಿದ್ದಾರೆ. ಆತ ಅದ್ಭುತ ಪ್ರತಿಭೆ, ಹಾಗಾಗಿ ನಾವು ಅವನಿಗೆ ಸದಾ ಬೆಂಬಲ ನೀಡುತ್ತೇವೆ..

ರವಿಶಾಸ್ತ್ರಿ
ರವಿಶಾಸ್ತ್ರಿ

ಬ್ರಿಸ್ಬೇನ್​ : ರಿಷಭ್ ಪಂತ್ ಒಬ್ಬ ಮ್ಯಾಚ್​ ವಿನ್ನರ್. ಅದಕ್ಕಾಗಿ ಅವರ ವಿಕೆಟ್​ ಕೀಪಿಂಗ್ ಹಲವಾರು ಬಾರಿ ಟೀಕೆಗೆ ಗುರಿಯಾದ್ರೂ ವಿದೇಶಿ ಸರಣಿಗಳಲ್ಲಿ ಆತನಿಗೆ ಮೊದಲ ಆದ್ಯತೆ ನೀಡಲಾಗುತ್ತದೆ. ಬ್ರಿಸ್ಬೇನ್​ ಟೆಸ್ಟ್​ನಲ್ಲಿ ಆಸೀಸ್​ ಪ್ರಬಲ ದಾಳಿಯನ್ನು ಕೆಚ್ಚೆದೆಯಿಂದ ದಂಡಿಸಿ ಪಂದ್ಯ ಗೆಲ್ಲಿಸಿಕೊಟ್ಟಿದ್ದಾರೆಂದು ರವಿಶಾಸ್ತ್ರಿ ಯುವ ಆಟಗಾರನ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಸರಣಿ ನಿರ್ಧರಿಸುವ ನಾಲ್ಕನೇ ಟೆಸ್ಟ್​ನಲ್ಲಿ ಪ್ರಬುದ್ಧತೆಯಿಂದ ಬ್ಯಾಟಿಂಗ್‌ನಲ್ಲಿ 89 ರನ್​ಗಳಿಸುವ ಮೂಲಕ ಭಾರತಕ್ಕೆ 3 ವಿಕೆಟ್​ಗಳ ಐತಿಹಾಸಿ ಜಯ ತಂದುಕೊಟ್ಟರು. ನಾವು ಪಂತ್​ರನ್ನು ವಿದೇಶದಲ್ಲಿ ಆಡಿಸುತ್ತೇವೆ. ಯಾಕೆಂದರೆ, ಅವರು ಮ್ಯಾಚ್​ ವಿನ್ನರ್​. ಆತ ಉತ್ತಮವಾಗಿ ಕೀಪಿಂಗ್ ಮಾಡದಿದ್ದಾಗಲೆಲ್ಲಾ ಜನರು ಟೀಕಿಸುತ್ತಾರೆ.

ರಿಷಭ್ ಪಂತ್
ರಿಷಭ್ ಪಂತ್

ಆದರೆ, ಅವರು ಇಂತಹ ಪಂದ್ಯಗಳಲ್ಲಿ ಜಯ ಸಾಧಿಸಲು ನೆರವಾಗುತ್ತಾರೆ. ಸಿಡ್ನಿ ಪಂದ್ಯದಲ್ಲೂ ಸಾಕಷ್ಟು ಸಮಯ ಬ್ಯಾಟಿಂಗ್ ಮಾಡಿ ಪಂದ್ಯವನ್ನು ಡ್ರಾ ಮಾಡಿಸಲು ನೆರವಾಗಿದ್ದರು. ಇದೀಗ ಈ ಪಂದ್ಯದಲ್ಲಿ ಜಯ ತಂದುಕೊಟ್ಟಿದ್ದಾರೆ. ಆತ ಅದ್ಭುತ ಪ್ರತಿಭೆ, ಹಾಗಾಗಿ ನಾವು ಅವನಿಗೆ ಸದಾ ಬೆಂಬಲ ನೀಡುತ್ತೇವೆ ಎಂದು ರವಿಶಾಸ್ತ್ರಿ ಹೇಳಿದ್ದಾರೆ. ಸರಣಿಯಲ್ಲಿ ಕೇವಲ 36 ರನ್​ಗಳಿಗೆ ಆಲೌಟ್​ ಆಗಿ ಭಾರಿ ಅಪಮಾನಕ್ಕೀಡಾಗಿದ್ದ ತಂಡ ಮತ್ತೆ ಬೌನ್ಸ್​ ಬ್ಯಾಕ್​ ಆದ ರೀತಿಯನ್ನು ಶಾಸ್ತ್ರಿ ಶ್ಲಾಘಿಸಿದ್ದಾರೆ.

"ಹುಡುಗರು ತುಂಬಾ ಉತ್ತಮ ಪ್ರದರ್ಶನ ನೀಡಿದ್ದಾರೆ. ಅದರ ಬಗ್ಗೆ ಹೇಳಲು ನನ್ನಲ್ಲಿ ಪದಗಳಿಲ್ಲ. 36ಕ್ಕೆ ಆಲೌಟ್​ ಆದ ನಂತರ ಈ ಸರಣಿಯಲ್ಲಿ ಮತ್ತೆ ಈ ರೀತಿ ಹಿಂದಿರುಗುವುದರ ಹಿಂದೆ ತಂಡದ ಪಾತ್ರ ಅದ್ಭುತವಾಗಿತ್ತು" ಎಂದು ಶಾಸ್ತ್ರಿ ಹೇಳಿದ್ದಾರೆ.

ಇದನ್ನು ಓದಿ:ಈ ಗೆಲುವು ನನ್ನ ಜೀವನದಲ್ಲೇ ಅತ್ಯಂತ ಶ್ರೇಷ್ಠ ಕ್ಷಣ : ರಿಷಭ್ ಪಂತ್​

ಬ್ರಿಸ್ಬೇನ್​ : ರಿಷಭ್ ಪಂತ್ ಒಬ್ಬ ಮ್ಯಾಚ್​ ವಿನ್ನರ್. ಅದಕ್ಕಾಗಿ ಅವರ ವಿಕೆಟ್​ ಕೀಪಿಂಗ್ ಹಲವಾರು ಬಾರಿ ಟೀಕೆಗೆ ಗುರಿಯಾದ್ರೂ ವಿದೇಶಿ ಸರಣಿಗಳಲ್ಲಿ ಆತನಿಗೆ ಮೊದಲ ಆದ್ಯತೆ ನೀಡಲಾಗುತ್ತದೆ. ಬ್ರಿಸ್ಬೇನ್​ ಟೆಸ್ಟ್​ನಲ್ಲಿ ಆಸೀಸ್​ ಪ್ರಬಲ ದಾಳಿಯನ್ನು ಕೆಚ್ಚೆದೆಯಿಂದ ದಂಡಿಸಿ ಪಂದ್ಯ ಗೆಲ್ಲಿಸಿಕೊಟ್ಟಿದ್ದಾರೆಂದು ರವಿಶಾಸ್ತ್ರಿ ಯುವ ಆಟಗಾರನ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಸರಣಿ ನಿರ್ಧರಿಸುವ ನಾಲ್ಕನೇ ಟೆಸ್ಟ್​ನಲ್ಲಿ ಪ್ರಬುದ್ಧತೆಯಿಂದ ಬ್ಯಾಟಿಂಗ್‌ನಲ್ಲಿ 89 ರನ್​ಗಳಿಸುವ ಮೂಲಕ ಭಾರತಕ್ಕೆ 3 ವಿಕೆಟ್​ಗಳ ಐತಿಹಾಸಿ ಜಯ ತಂದುಕೊಟ್ಟರು. ನಾವು ಪಂತ್​ರನ್ನು ವಿದೇಶದಲ್ಲಿ ಆಡಿಸುತ್ತೇವೆ. ಯಾಕೆಂದರೆ, ಅವರು ಮ್ಯಾಚ್​ ವಿನ್ನರ್​. ಆತ ಉತ್ತಮವಾಗಿ ಕೀಪಿಂಗ್ ಮಾಡದಿದ್ದಾಗಲೆಲ್ಲಾ ಜನರು ಟೀಕಿಸುತ್ತಾರೆ.

ರಿಷಭ್ ಪಂತ್
ರಿಷಭ್ ಪಂತ್

ಆದರೆ, ಅವರು ಇಂತಹ ಪಂದ್ಯಗಳಲ್ಲಿ ಜಯ ಸಾಧಿಸಲು ನೆರವಾಗುತ್ತಾರೆ. ಸಿಡ್ನಿ ಪಂದ್ಯದಲ್ಲೂ ಸಾಕಷ್ಟು ಸಮಯ ಬ್ಯಾಟಿಂಗ್ ಮಾಡಿ ಪಂದ್ಯವನ್ನು ಡ್ರಾ ಮಾಡಿಸಲು ನೆರವಾಗಿದ್ದರು. ಇದೀಗ ಈ ಪಂದ್ಯದಲ್ಲಿ ಜಯ ತಂದುಕೊಟ್ಟಿದ್ದಾರೆ. ಆತ ಅದ್ಭುತ ಪ್ರತಿಭೆ, ಹಾಗಾಗಿ ನಾವು ಅವನಿಗೆ ಸದಾ ಬೆಂಬಲ ನೀಡುತ್ತೇವೆ ಎಂದು ರವಿಶಾಸ್ತ್ರಿ ಹೇಳಿದ್ದಾರೆ. ಸರಣಿಯಲ್ಲಿ ಕೇವಲ 36 ರನ್​ಗಳಿಗೆ ಆಲೌಟ್​ ಆಗಿ ಭಾರಿ ಅಪಮಾನಕ್ಕೀಡಾಗಿದ್ದ ತಂಡ ಮತ್ತೆ ಬೌನ್ಸ್​ ಬ್ಯಾಕ್​ ಆದ ರೀತಿಯನ್ನು ಶಾಸ್ತ್ರಿ ಶ್ಲಾಘಿಸಿದ್ದಾರೆ.

"ಹುಡುಗರು ತುಂಬಾ ಉತ್ತಮ ಪ್ರದರ್ಶನ ನೀಡಿದ್ದಾರೆ. ಅದರ ಬಗ್ಗೆ ಹೇಳಲು ನನ್ನಲ್ಲಿ ಪದಗಳಿಲ್ಲ. 36ಕ್ಕೆ ಆಲೌಟ್​ ಆದ ನಂತರ ಈ ಸರಣಿಯಲ್ಲಿ ಮತ್ತೆ ಈ ರೀತಿ ಹಿಂದಿರುಗುವುದರ ಹಿಂದೆ ತಂಡದ ಪಾತ್ರ ಅದ್ಭುತವಾಗಿತ್ತು" ಎಂದು ಶಾಸ್ತ್ರಿ ಹೇಳಿದ್ದಾರೆ.

ಇದನ್ನು ಓದಿ:ಈ ಗೆಲುವು ನನ್ನ ಜೀವನದಲ್ಲೇ ಅತ್ಯಂತ ಶ್ರೇಷ್ಠ ಕ್ಷಣ : ರಿಷಭ್ ಪಂತ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.