ETV Bharat / sports

ಸಾವಿರಾರು ಜನರ ಸಮ್ಮುಖದಲ್ಲಿ ನಟರಾಜನ್​ಗೆ​​ ಸಿಕ್ತು ಭರ್ಜರಿ ಸ್ವಾಗತ: ವಿಡಿಯೋ

ಇಂದು ಆಸ್ಟ್ರೇಲಿಯಾದಿಂದ ಚೆನ್ನೈಗೆ ಬಂದಿದ್ದ ನಟರಾಜನ್​ ಸೇಲಂಗೆ ಆಗಮಿಸುತ್ತಿದ್ದಂತೆ ಸಿನಿಮಾ ಹೀರೋಗಳಿಗೆ ಸಿಗುವಂತಹ ಭವ್ಯವಾದ ಸ್ವಾಗತ ಸಿಕ್ಕಿದೆ. ನೂರಾರು ಮಂದಿ ತಮ್ಮ ಊರಿನ ಯುವಕನನ್ನು ಸಾರೋಟಿನಲ್ಲಿ ಮೆರವಣಿಗೆ ಮಾಡಿಸಿದ್ದಾರೆ. ದಾರಿಯುದ್ದಕ್ಕೂ ಪಟಾಕಿ ಸಿಡಿಸುತ್ತಾ, ಡೋಲು ವಾದ್ಯಗಳ ಮೂಲಕ ಹಬ್ಬದ ರೀತಿಯಲ್ಲಿ ನಟರಾಜನ್​ರನ್ನು ಸ್ವಾಗತಿಸಿದ್ದಾರೆ.

author img

By

Published : Jan 21, 2021, 7:59 PM IST

Updated : Jan 24, 2021, 10:32 PM IST

ಟಿ. ನಟರಾಜನ್​
ಟಿ. ನಟರಾಜನ್​

ಸೇಲಂ: ಕೇವಲ ನೆಟ್ ಬೌಲರ್​ ಆಗಿ ಆಸೀಸ್ ಪ್ರವಾಸ ಕೈಗೊಂಡು ಮೂರು ಮಾದರಿಯ ಕ್ರಿಕೆಟ್​ಗೆ ಪದಾರ್ಪಣೆ ಮಾಡಿದ ಯಾರ್ಕರ್​ ಕಿಂಗ್​ ನಟರಾಜನ್​ರನ್ನು ಸೇಲಂ ಜನರು ಮೆರವಣಿಗೆ ಮಾಡುವ ಮೂಲಕ ಭರ್ಜರಿ ಸ್ವಾಗತ ಕೋರಿದ್ದು, ಈ ವಿಡಿಯೋ ಇಂಟರ್​ನೆಟ್​ನಲ್ಲಿ ಕಿಚ್ಚೆಬ್ಬಿಸಿದೆ.

ಭಾರತದಲ್ಲಿ ಕ್ರಿಕೆಟ್​ ಕೇವಲ ಸಾಮಾನ್ಯ ಆಟವಲ್ಲ. ಕೋಟ್ಯಂತರ ಅಭಿಮಾನಿಗಳು ಕ್ರಿಕೆಟ್​ ಜೊತೆಗೆ ಭಾವನಾತ್ಮಕ ಸಂಬಂಧ ಹೊಂದಿದ್ದಾರೆ ಎಂಬುದು ಮತ್ತೊಮ್ಮೆ ಸಾಬೀತಾಗಿದೆ. ಐಪಿಎಲ್​ನಲ್ಲಿ ಸನ್​ ರೈಸರ್ಸ್​ ಹೈದರಾಬಾದ್​ ಪರ ಆಡಿದ್ದ ಅವರು 16 ಪಂದ್ಯಗಳಲ್ಲಿ 16 ವಿಕೆಟ್​ ಪಡೆದಿದ್ದರು. ಈ ಪ್ರದರ್ಶನದಿಂದಲೇ ನೆಟ್ ​ಬೌಲರ್​ ಆಗಿ ದುಬೈನಿಂದ ನೇರವಾಗಿ ಆಸ್ಟ್ರೇಲಿಯಾ ಪ್ರವಾಸ ಕೈಗೊಂಡಿದ್ದರು. ನಂತರ ಏಕದಿನ, ಟಿ-20 ಹಾಗೂ ಟೆಸ್ಟ್​ ತಂಡದಲ್ಲೂ ಪದಾರ್ಪಣೆ ಮಾಡಿದ್ದರು. ಮೂರು ಮಾದರಿಯಲ್ಲೂ ಅತ್ಯುತ್ತಮ ಪ್ರದರ್ಶನ ತೋರುವಲ್ಲಿ ಯಶಸ್ವಿಯಾಗಿದ್ದರು.

  • Swagat nahi karoge ?
    This is India. Here cricket is not just a game. It is so much more. Natarajan getting a grand welcome upon his arrival at his Chinnappampatti village in Salem district. What an incredible story.#Cricket pic.twitter.com/hjZ7kReCub

    — Virender Sehwag (@virendersehwag) January 21, 2021 " class="align-text-top noRightClick twitterSection" data=" ">

ಇಂದು ಆಸ್ಟ್ರೇಲಿಯಾದಿಂದ ಚೆನ್ನೈಗೆ ಬಂದಿದ್ದ ನಟರಾಜನ್​ ಸೇಲಂಗೆ ಆಗಮಿಸುತ್ತಿದ್ದಂತೆ ಸಿನಿಮಾ ಹೀರೋಗಳಿಗೆ ಸಿಗುವಂತಹ ಭವ್ಯವಾದ ಸ್ವಾಗತ ಸಿಕ್ಕಿದೆ. ನೂರಾರು ಮಂದಿ ತಮ್ಮ ಊರಿನ ಯುವಕನನ್ನು ಸಾರೋಟಿನಲ್ಲಿ ಮೆರವಣಿಗೆ ಮಾಡಿಸಿದ್ದಾರೆ. ದಾರಿಯುದ್ದಕ್ಕೂ ಪಟಾಕಿ ಸಿಡಿಸುತ್ತಾ, ಡೋಲು ವಾದ್ಯಗಳ ಮೂಲಕ ಹಬ್ಬದ ರೀತಿಯಲ್ಲಿ ನಟರಾಜನ್​ರನ್ನು ಸ್ವಾಗತಿಸಿದ್ದಾರೆ.

ನಟರಾಜನ್​ರಿಗೆ ಈ ರೀತಿ ಸ್ವಾಗತ ಕೋರಿರುವ ವಿಡಿಯೋವನ್ನು ಮಾಜಿ ಕ್ರಿಕೆಟಿಗ ಸೆಹ್ವಾಗ್​ ತಮ್ಮ ಟ್ವಿಟರ್​ನಲ್ಲಿ ಶೇರ್​ ಮಾಡಿಕೊಂಡಿದ್ದಾರೆ. ಭಾರತದಲ್ಲಿ ಕ್ರಿಕೆಟ್ ಕೇವಲ ಆಟವಲ್ಲಿ, ಅದಕ್ಕಿಂತಲೂ ಹೆಚ್ಚು. ನಟರಾಜನ್​ರನ್ನು ಸೇಲಂನ ಜಿಲ್ಲೆಯ ಚಿನ್ನಪ್ಪಂಪಟ್ಟಿ ಗ್ರಾಮದ ಜನ ಭರ್ಜರಿಯಾಗಿ ಸ್ವಾಗತಿಸಿದ್ದಾರೆ. ನಿಜಕ್ಕೂ ಇದೊಂದು ಅದ್ಭುತ ಎಂದು ಟ್ವಿಟರ್​ನಲ್ಲಿ ಬರೆದುಕೊಂಡಿದ್ದಾರೆ.

ಇದನ್ನು ಓದಿ:ಬಾರ್ಡರ್-ಗವಾಸ್ಕರ್​ ಟ್ರೋಫಿ ಗೆಲ್ಲಿಸಿಕೊಟ್ಟ ನಾಯಕ ರಹಾನೆಗೆ ಅದ್ದೂರಿ ಸ್ವಾಗತ

ಸೇಲಂ: ಕೇವಲ ನೆಟ್ ಬೌಲರ್​ ಆಗಿ ಆಸೀಸ್ ಪ್ರವಾಸ ಕೈಗೊಂಡು ಮೂರು ಮಾದರಿಯ ಕ್ರಿಕೆಟ್​ಗೆ ಪದಾರ್ಪಣೆ ಮಾಡಿದ ಯಾರ್ಕರ್​ ಕಿಂಗ್​ ನಟರಾಜನ್​ರನ್ನು ಸೇಲಂ ಜನರು ಮೆರವಣಿಗೆ ಮಾಡುವ ಮೂಲಕ ಭರ್ಜರಿ ಸ್ವಾಗತ ಕೋರಿದ್ದು, ಈ ವಿಡಿಯೋ ಇಂಟರ್​ನೆಟ್​ನಲ್ಲಿ ಕಿಚ್ಚೆಬ್ಬಿಸಿದೆ.

ಭಾರತದಲ್ಲಿ ಕ್ರಿಕೆಟ್​ ಕೇವಲ ಸಾಮಾನ್ಯ ಆಟವಲ್ಲ. ಕೋಟ್ಯಂತರ ಅಭಿಮಾನಿಗಳು ಕ್ರಿಕೆಟ್​ ಜೊತೆಗೆ ಭಾವನಾತ್ಮಕ ಸಂಬಂಧ ಹೊಂದಿದ್ದಾರೆ ಎಂಬುದು ಮತ್ತೊಮ್ಮೆ ಸಾಬೀತಾಗಿದೆ. ಐಪಿಎಲ್​ನಲ್ಲಿ ಸನ್​ ರೈಸರ್ಸ್​ ಹೈದರಾಬಾದ್​ ಪರ ಆಡಿದ್ದ ಅವರು 16 ಪಂದ್ಯಗಳಲ್ಲಿ 16 ವಿಕೆಟ್​ ಪಡೆದಿದ್ದರು. ಈ ಪ್ರದರ್ಶನದಿಂದಲೇ ನೆಟ್ ​ಬೌಲರ್​ ಆಗಿ ದುಬೈನಿಂದ ನೇರವಾಗಿ ಆಸ್ಟ್ರೇಲಿಯಾ ಪ್ರವಾಸ ಕೈಗೊಂಡಿದ್ದರು. ನಂತರ ಏಕದಿನ, ಟಿ-20 ಹಾಗೂ ಟೆಸ್ಟ್​ ತಂಡದಲ್ಲೂ ಪದಾರ್ಪಣೆ ಮಾಡಿದ್ದರು. ಮೂರು ಮಾದರಿಯಲ್ಲೂ ಅತ್ಯುತ್ತಮ ಪ್ರದರ್ಶನ ತೋರುವಲ್ಲಿ ಯಶಸ್ವಿಯಾಗಿದ್ದರು.

  • Swagat nahi karoge ?
    This is India. Here cricket is not just a game. It is so much more. Natarajan getting a grand welcome upon his arrival at his Chinnappampatti village in Salem district. What an incredible story.#Cricket pic.twitter.com/hjZ7kReCub

    — Virender Sehwag (@virendersehwag) January 21, 2021 " class="align-text-top noRightClick twitterSection" data=" ">

ಇಂದು ಆಸ್ಟ್ರೇಲಿಯಾದಿಂದ ಚೆನ್ನೈಗೆ ಬಂದಿದ್ದ ನಟರಾಜನ್​ ಸೇಲಂಗೆ ಆಗಮಿಸುತ್ತಿದ್ದಂತೆ ಸಿನಿಮಾ ಹೀರೋಗಳಿಗೆ ಸಿಗುವಂತಹ ಭವ್ಯವಾದ ಸ್ವಾಗತ ಸಿಕ್ಕಿದೆ. ನೂರಾರು ಮಂದಿ ತಮ್ಮ ಊರಿನ ಯುವಕನನ್ನು ಸಾರೋಟಿನಲ್ಲಿ ಮೆರವಣಿಗೆ ಮಾಡಿಸಿದ್ದಾರೆ. ದಾರಿಯುದ್ದಕ್ಕೂ ಪಟಾಕಿ ಸಿಡಿಸುತ್ತಾ, ಡೋಲು ವಾದ್ಯಗಳ ಮೂಲಕ ಹಬ್ಬದ ರೀತಿಯಲ್ಲಿ ನಟರಾಜನ್​ರನ್ನು ಸ್ವಾಗತಿಸಿದ್ದಾರೆ.

ನಟರಾಜನ್​ರಿಗೆ ಈ ರೀತಿ ಸ್ವಾಗತ ಕೋರಿರುವ ವಿಡಿಯೋವನ್ನು ಮಾಜಿ ಕ್ರಿಕೆಟಿಗ ಸೆಹ್ವಾಗ್​ ತಮ್ಮ ಟ್ವಿಟರ್​ನಲ್ಲಿ ಶೇರ್​ ಮಾಡಿಕೊಂಡಿದ್ದಾರೆ. ಭಾರತದಲ್ಲಿ ಕ್ರಿಕೆಟ್ ಕೇವಲ ಆಟವಲ್ಲಿ, ಅದಕ್ಕಿಂತಲೂ ಹೆಚ್ಚು. ನಟರಾಜನ್​ರನ್ನು ಸೇಲಂನ ಜಿಲ್ಲೆಯ ಚಿನ್ನಪ್ಪಂಪಟ್ಟಿ ಗ್ರಾಮದ ಜನ ಭರ್ಜರಿಯಾಗಿ ಸ್ವಾಗತಿಸಿದ್ದಾರೆ. ನಿಜಕ್ಕೂ ಇದೊಂದು ಅದ್ಭುತ ಎಂದು ಟ್ವಿಟರ್​ನಲ್ಲಿ ಬರೆದುಕೊಂಡಿದ್ದಾರೆ.

ಇದನ್ನು ಓದಿ:ಬಾರ್ಡರ್-ಗವಾಸ್ಕರ್​ ಟ್ರೋಫಿ ಗೆಲ್ಲಿಸಿಕೊಟ್ಟ ನಾಯಕ ರಹಾನೆಗೆ ಅದ್ದೂರಿ ಸ್ವಾಗತ

Last Updated : Jan 24, 2021, 10:32 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.