ಹೈದರಾಬಾದ್: ವಿಜಯ್ ಹಜಾರೆ ಟ್ರೋಫಿಯಲ್ಲಿ ಸೆಮೀಸ್ ಕನಸು ಕಾಣುತ್ತಿದ್ದ ಮನ್ದೀಪ್ ಸಿಂಗ್ ನೇತೃತ್ವದ ಪಂಜಾಬ್ ತಂಡಕ್ಕೆ ಮಳೆರಾಯ ತಡೆಯೊಡ್ಡಿದ್ದಾನೆ. ಪರಿಣಾಮ ತಂಡದ ಕ್ವಾರ್ಟರ್ಫೈನಲ್ ಕನಸಿಗೆ ನಿರಾಸೆಯಾಗಿದೆ.
"ಲೀಗ್ ಹಂತದಲ್ಲಿ ಉತ್ತಮ ಪ್ರದರ್ಶನ ತೋರಿ ನಾಕೌಟ್ ಹಂತಕ್ಕೆ ಬಂದಿದ್ದ ನಾವು ಮಳೆಯಿಂದಾಗಿ ಸೆಮಿಫೈನಲ್ ಕನಸು ಭಗ್ನವಾಗಿದೆ" ಎಂದು ಪಂಜಾಬ್ ತಂಡದ ನಾಯಕ ಮನ್ದೀಪ್ ಸಿಂಗ್ ಟ್ವಿಟರ್ನಲ್ಲಿ ಹತಾಶೆ ತೋರಿದ್ದಾರೆ.
-
Played outstanding cricket in the league stage in a very tough A/B group and qualified for the knock outs brilliantly. Now we’re out of the tournament without even playing the quarter finals due to rain. #reallydisappointed #VijayHazareTrophy #punjabteam @BCCI
— Mandeep Singh (@mandeeps12) 21 October 2019 " class="align-text-top noRightClick twitterSection" data="
">Played outstanding cricket in the league stage in a very tough A/B group and qualified for the knock outs brilliantly. Now we’re out of the tournament without even playing the quarter finals due to rain. #reallydisappointed #VijayHazareTrophy #punjabteam @BCCI
— Mandeep Singh (@mandeeps12) 21 October 2019Played outstanding cricket in the league stage in a very tough A/B group and qualified for the knock outs brilliantly. Now we’re out of the tournament without even playing the quarter finals due to rain. #reallydisappointed #VijayHazareTrophy #punjabteam @BCCI
— Mandeep Singh (@mandeeps12) 21 October 2019
ನಿಯಮದ ವಿರುದ್ಧ ಭಜ್ಜಿ ಕಿಡಿ:
ನಾಕೌಟ್ ಪಂದ್ಯಗಳು ಮಳೆಯಿಂದ ರದ್ದಾದರೆ ಬದಲಿ ಆಟದ ದಿನ ಯಾಕಿಲ್ಲ? ಬಿಸಿಸಿಐ ಇದನ್ನು ಗಂಭೀರವಾಗಿ ಪರಿಗಣಿಸಿ ನಿಯಮ ತಿದ್ದುಪಡಿ ಮಾಡಬೇಕು ಎಂದು ಟೀಂ ಇಂಡಿಯಾ ಸ್ಪಿನ್ನರ್ ಹರ್ಭಜನ್ ಸಿಂಗ್ ಟ್ವೀಟ್ ಮಾಡಿದ್ದಾರೆ.
-
Sick rule why not reserve day for these tournaments @BCCI must look into this and change it https://t.co/4qALIVsb2f
— Harbhajan Turbanator (@harbhajan_singh) 21 October 2019 " class="align-text-top noRightClick twitterSection" data="
">Sick rule why not reserve day for these tournaments @BCCI must look into this and change it https://t.co/4qALIVsb2f
— Harbhajan Turbanator (@harbhajan_singh) 21 October 2019Sick rule why not reserve day for these tournaments @BCCI must look into this and change it https://t.co/4qALIVsb2f
— Harbhajan Turbanator (@harbhajan_singh) 21 October 2019
ಹರ್ಭಜನ್ ಟ್ವೀಟ್ಗೆ ಪ್ರತಿಕ್ರಿಯೆ ನೀಡಿರುವ ಮನ್ದೀಪ್, ಕರ್ನಾಟಕ-ಪುದುಚೇರಿ ನಡುವಿನ ಮೊದಲ ಕ್ವಾರ್ಟರ್ ಫೈನಲ್ ಒಂದು ವೇಳೆ ಮಳೆಯಿಂದ ರದ್ದಾಗಿದ್ದರೆ ಕರ್ನಾಟಕ ಸೆಮೀಸ್ಗೆ ಎಂಟ್ರಿ ನೀಡುತ್ತಿರಲಿಲ್ಲ. ಲೀಗ್ ಹಂತದ ಗೆಲುವನ್ನೇ ಪರಿಗಣಿಸಿ ಪುದುಚೇರಿ ಅಗ್ರ ನಾಲ್ಕರ ಘಟ್ಟ ತಲುಪುತ್ತಿತ್ತು ಎಂದಿದ್ದಾರೆ.
-
Paaji! agar asi sare match v jite jande apne group vich fer v asi Bahar c kynki Sade group vich 8 match hunde ne te C group vich 9 @harbhajan_singh even Karnataka v Bahar hojani c agar ona da match nhi hunda te puducherry ne ponch Jana c sida semis vich https://t.co/oHvrMi5kPc
— Mandeep Singh (@mandeeps12) 22 October 2019 " class="align-text-top noRightClick twitterSection" data="
">Paaji! agar asi sare match v jite jande apne group vich fer v asi Bahar c kynki Sade group vich 8 match hunde ne te C group vich 9 @harbhajan_singh even Karnataka v Bahar hojani c agar ona da match nhi hunda te puducherry ne ponch Jana c sida semis vich https://t.co/oHvrMi5kPc
— Mandeep Singh (@mandeeps12) 22 October 2019Paaji! agar asi sare match v jite jande apne group vich fer v asi Bahar c kynki Sade group vich 8 match hunde ne te C group vich 9 @harbhajan_singh even Karnataka v Bahar hojani c agar ona da match nhi hunda te puducherry ne ponch Jana c sida semis vich https://t.co/oHvrMi5kPc
— Mandeep Singh (@mandeeps12) 22 October 2019
ಪಂಜಾಬ್-ತ.ನಾಡು ಪಂದ್ಯದ ಹೈಲೈಟ್ಸ್:
ಸೋಮವಾರದ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಪಂಜಾಬ್ ಹಾಗೂ ತಮಿಳುನಾಡು ತಂಡಗಳು ಮುಖಾಮುಖಿಯಾಗಿದ್ದವು. ಮಳೆ ಬಾಧಿತ ಪಂದ್ಯದಲ್ಲಿ ಓವರ್ಗಳನ್ನು 39ಕ್ಕೆ ಇಳಿಸಲಾಗಿತ್ತು.
ದಿನೇಶ್ ಕಾರ್ತಿಕ್ ನಾಯಕತ್ವದ ತಮಿಳುನಾಡು 39 ಓವರ್ಗಳಲ್ಲಿ 174 ರನ್ ಕಲೆ ಹಾಕಿತ್ತು. ಇದಕ್ಕೆ ಪ್ರತ್ಯುತ್ತರವಾಗಿ ಪಂಜಾಬ್ ಉತ್ತಮ ಆರಂಭವನ್ನೇ ಪಡೆದಿತ್ತು. ನಿಗದಿತ ಗುರಿಯತ್ತ ಸಾಗಿದ್ದ ಮನ್ದೀಪ್ ಟೀಂ 12.2 ಓವರ್ನಲ್ಲಿ 2 ವಿಕೆಟ್ ನಷ್ಟಕ್ಕೆ 52 ರನ್ ಗಳಿಸಿತ್ತು. ಈ ವೇಳೆ ಮತ್ತೆ ಮಳೆ ಶುರುವಾಗಿದ್ದು, ಪರಿಣಾಮ ಪಂದ್ಯ ರದ್ದುಗೊಂಡಿದೆ.
ವಿಜಯ್ ಹಜಾರೆ ಟ್ರೋಫಿಯಲ್ಲಿ ನಾಕೌಟ್ ಪಂದ್ಯಗಳಿಗೆ ಬದಲಿ ದಿನ(ರಿಸರ್ವ್ ಡೇ) ಇಲ್ಲದ ಕಾರಣ ಲೀಗ್ನಲ್ಲಿ ಅತಿಹೆಚ್ಚು ಪಂದ್ಯ ಗೆದ್ದಿರುವ ತಮಿಳುನಾಡು ಸೆಮೀಸ್ಗೆ ಲಗ್ಗೆ ಇಟ್ಟಿದೆ.
ಲೀಗ್ ಹಂತದಲ್ಲಿ ತ.ನಾಡು ತಂಡ ಒಂಭತ್ತು ಪಂದ್ಯಗಳಲ್ಲಿ ಗೆಲುವು ಪಡೆದಿದೆ. ಪಂಜಾಬ್ ಲೀಗ್ ಸ್ಟೇಜ್ನಲ್ಲಿ ಐದು ಪಂದ್ಯಗಳನ್ನಷ್ಟೇ ಜಯಿಸಿತ್ತು. ಈ ಗೆಲುವಿನ ಸಂಖ್ಯೆಯನ್ನೇ ಮಾನದಂಡವಾಗಿಸಿ ತ.ನಾಡನ್ನು ಮುಂದಿನ ಹಂತಕ್ಕೆ ತೇರ್ಗಡೆಗೊಳಿಸಲಾಗಿದೆ.